Skip to main content

Blog number 2134. ಜೇನು ತುಪ್ಪದ ಜಾಡಿಯಲ್ಲಿ ಸಂಸ್ಕರಿಸಿದ ಹಣ್ಣುಗಳು ವರ್ಷಗಟ್ಟಲೆ ತಮ್ಮ ತಾಜಾತನ ಕಾಪಾಡಿಕೊಳ್ಳುವ ಗುಣ ಹೊಂದಿದೆ ಇದು ಪ್ರಾಚೀನ ಕಾಲದಲ್ಲಿ ಆಚರಣೆ ಇದ್ದಿದ್ದ ಹಣ್ಣಿನ ಸಂಸ್ಕರಣೆ ಮತ್ತು ನೈಸರ್ಗಿಕ ಶೆಲ್ಫ್ ಲೈಪ್ ಹೆಚ್ಚಿಸುವ ದೇಶಿ ಆಹಾರ ತಂತ್ರಜ್ಞಾನ,

#ಜೇನು_ತುಪ್ಪದ_ವಿಶೇಷ_ಗುಣಗಳು.

#ಈ_ವರ್ಷದ_ಮಾವಿನಹಣ್ಣು_ಜಾಡಿಯಲ್ಲಿ_ಜೇನುತುಪ್ಪದಲ್ಲಿ_ಅದ್ದಿಟ್ಟರೆ

#ಮುಂದಿನ_ವರ್ಷದಲ್ಲಿ_ತೆಗೆದು_ತಿಂದರೆ_ಅದೇ_ತಾಜಾತನ_ಇರುತ್ತದಂತೆ.

#ಈ_ವರ್ಷ_ನಾನು_ಇದನ್ನು_ಪ್ರಯೋಗ_ಮಾಡಿ_ನೋಡಲಿದ್ದೇನೆ.

https://youtube.com/shorts/r7wvbQDxlgs?feature=shared


   ಪೈನಾಪಲ್ / ಅನಾನಸ್ ಉತ್ತರ ಕನ್ನಡ ಜಿಲ್ಲೆಯ ಮುಖ್ಯ ಬೆಳೆ ಆದರೆ ಕೇಂದ್ರ ಸರ್ಕಾರ #ಶಿವಮೊಗ್ಗ ಜಿಲ್ಲೆಯನ್ನು #ಪೈನಾಪಲ್ ಮುಖ್ಯ ಬೆಳೆ ಎಂದು ಘೋಷಿಸಿದೆ ಇದರಿಂದ ಪೈನಾಪಲ್ ಬೆಳೆ ಮೌಲ್ಯವರ್ದನೆ ಎಷ್ಟಾಗಿದೆ ಗೊತ್ತಿಲ್ಲ.
  ಜೇನುತುಪ್ಪ ನೈಸರ್ಗಿಕ ಪ್ರಿಸರ್ವೇಟಿವ್ ಅದರಲ್ಲಿ ಯಾವುದೇ ಹಣ್ಣು ಹಾಕಿಟ್ಟರೆ ಆ ಹಣ್ಣು ವರ್ಷಾನುಗಟ್ಟಲೆ ತಾಜಾತನ ಉಳಿಸಿಕೊಳ್ಳುತ್ತದಂತೆ.
  ಹಿಂದಿನ ಕಾಲದಲ್ಲಿ ಅಪರೂಪದ ಹಣ್ಣುಗಳನ್ನು ಜೇನು ತುಪ್ಪದ ಜಾರುಗಳಲ್ಲಿ ಹಾಕಿಟ್ಟು ಬೇಕಾದಾಗ ಬಳಸುವ ಸಂಪ್ರದಾಯ ಇತ್ತು ಎನ್ನುತ್ತಾರೆ.
  ರಾಜರ ಆಸ್ಥಾನಗಳಲ್ಲಿ ಈ ಪದ್ದತಿ ಕಡ್ಡಾಯವಾಗಿ ರಾಜರ ಅಂತಃಪುರದ ಬಾಣಸಿಗರು ಪಾಲಿಸುತ್ತಿದ್ದರೆಂದು ಓದಿದ ನೆನಪು.
     ಬಾಲ್ಯದಲ್ಲಿ ಮಾವ ಹೇಳುತ್ತಿದ್ದ ಕಥೆಗಳಲ್ಲಿ ಕರಡಿ ಹಲಸಿನ ಹಣ್ಣಿನ ತೊಳೆ ಬಿಡಿಸಿ ಒಯ್ದು ರಹಸ್ಯವಾದ ಮರದ ಪೊಟರೆಯಲ್ಲಿ ಜೇನುಗೂಡಿನಿಂದ ಕಿತ್ತು ತಂದ ಜೇನುತುಪ್ಪದಲ್ಲಿ ಅದ್ದಿಡುತ್ತದೆ ಹಲಸಿನ ಹಣ್ಣಿನ ಕಾಲ ಮುಗಿದ ಮೇಲೆ ಕರಡಿ ತಾನೂ ತನ್ನ ಮರಿಗಳಿಗೆ ಒಂದೊಂದು  ಜೇನುತುಪ್ಪದ ಹಲಸಿನ ಹಣ್ಣು ತಿನ್ನಿಸುತ್ತದೆ ಎನ್ನುವ ಕಥೆ ನಮಗೆ ಅಪ್ಯಾಯಮಾನವಾಗಿರುತ್ತಿತ್ತು.
  ಮಾವ.. ಮಾವಾ.. ಕರಡಿಗೆ ಜೇನು ಕಚ್ಚುವುದಿಲ್ಲವಾ ಅಂದರೆ ಮಾವ ಅದರ ದೇಹ ಉದ್ದ ಕೂದಲ ಕಂಬಳಿ ಇದ್ದಂತೆ, ಕಂಬಳಿ ಹೊದ್ದುಕೊಂಡರೆ ಜೇನು ಕಚ್ಚುತ್ತಾ? ಅಂತ ಮರು ಪ್ರಶ್ನೆ ಮಾಡುತ್ತಿದ್ದರು.
   ಮರುಬೆಳಿಗ್ಗೆ ನಗರದ ದೇವಗಂಗೆಯ ದೊಡ್ಡಮ್ಮನ ಮನೆಯ ಎತ್ತರದ ಜಗಲಿಯಲ್ಲಿ ಮಾವ ಹಲಸಿನ ಹಣ್ಣು ಕೊಯ್ಯುವಾಗ ನಾನು ಜೇನುತುಪ್ಪದ ಬೇಡಿಕೆ ಇಡುತ್ತಿದ್ದೆ ಆಗ ದೊಡ್ಡಮ್ಮ ನಗುತ್ತಾ ಜೇನುತುಪ್ಪ ಹಾಕಿದ ಸಣ್ಣ ಹಿತ್ತಾಳೆ ಬೋಗುಣಿಯಲ್ಲಿ ಹಲಸಿನ ಹಣ್ಣು ಸಣ್ಣದಾಗಿ ಕತ್ತರಿಸಿ ಚಮಚ ಹಾಕಿ ಕೊಡುತ್ತಿದ್ದರು ಅವರೂ ಕೂಡ ರಾತ್ರಿ ಮಾವ (ಅವರ ಅಣ್ಣ) ಹೇಳಿದ ಕಥೆ ಕೇಳಿರುತ್ತಿದ್ದರು.
  ನಾನಂತು ರಾತ್ರಿ ಕೇಳಿದ ಕಥೆಯ ಕರಡಿ ಆಗಿ ಜೇನಿನ ಪರಿಮಳ - ಸಿಹಿ ಮತ್ತು ಹಲಸಿನ ಪರಿಮಳ - ಸಿಹಿಯ ಹೊಸರುಚಿಯ ಸವಿಯುತ್ತಿದ್ದೆ.
  ಅಕಾಲದಲ್ಲೂ ನಮಗೆ ಅಪ್ಯಾಯಮಾನವಾದ ಹಣ್ಣು ಜೇನು ತುಪ್ಪದಲ್ಲಿ ಇಟ್ಟಿದ್ದನ್ನ ಸೇವಿಸುವ ನೈಸರ್ಗಿಕ ತಂತ್ರಜ್ಞಾನ ಮರೆಯುತ್ತಿದ್ದೇವೆ ಮಾತ್ರವಲ್ಲ ಮರೆತೇ ಬಿಟ್ಟಿದ್ದೇವೆ.
 ಆದ್ದರಿಂದ ಈ ವರ್ಷ ಮಾವಿನ ಹಣ್ಣು, ಹಲಸಿನ ಹಣ್ಣು ಮತ್ತು ಪೈನಾಪಲ್ ಹಣ್ಣುಗಳನ್ನು ಜೇನು ತುಪ್ಪದ ಜಾಡಿಗಳಲ್ಲಿ ಇಟ್ಟು ನೋಡುವ ಪ್ರಯೋಗ ಮಾಡಲಿಕ್ಕಾಗಿ ಸುಮಾರು 30 ಕಿಲೊ  ಜೇನುತುಪ್ಪ ತೆಗೆದಿರಿಸಿದ್ದೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...