Skip to main content

Blog number 2103. ಕನ್ನಡದ ಮೊದಲ ಶಾಸನ ತಾಳಗುಂದ ಶಾಸನ ಇದರ ಉತ್ಕನನ ಸಂಶೋದನೆಗೆ ಕಾರಣವಾದ ನವೀನ್ ಕುಮಾರ್ ನಡೆಸಿದ 2012ರ ತಾಳಗುಂದ ಉತ್ಸವ

#ಭಾಗ_4.

#ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ_ಸಂಶೋದಕರ_ಸರಣಿಗಳು

#ಶಿರಾಳಕೊಪ್ಪದ_ಪ್ರಜಾವಾಣಿ_ವರದಿಗಾರ_ನವೀನ್_ಕುಮಾರ್

#ಇವರು_ತಾಳಗುಂದ_ಉತ್ಸವ_2012ರಲ್ಲಿ_ನಡೆಸಿದ್ದರು

#ಇದು_ಕನ್ನಡದ_ಮೊದಲ_ಶಾಸನ_ಉತ್ಕನದಲ್ಲಿ_ಸಿಗಲು_ಕಾರಣವಾಯಿತು

#ಈ_ಯುವಕನ_ಅಸಾಮಾನ್ಯ_ಕನ್ನಡ_ಸೇವೆ_ಸರ್ಕಾರ_ಗಮನಿಸಲಿ

#ಈ_ಬಾರಿಯ_ಸುವರ್ಣ_ಕನ್ನಡ_ರಾಜ್ಯೋತ್ಸವ_ಪ್ರಶಸ್ತಿ_ಇವರಿಗೆ_ನೀಡಲಿ

#ಶಿವಮೊಗ್ಗ_ಜಿಲ್ಲೆಯಲ್ಲಿ_ನಡೆಯುವ_ಸುವರ್ಣ_ರಾಜ್ಯೋತ್ಸವದ_ಜ್ಯೋತಿ

#ತಾಳಗುಂದದಲ್ಲಿ_ಬೆಳಗಲಿ.

#ಕನ್ನಡಾಭಿಮಾನಿಗಳು_ಕನ್ನಡ_ಹೋರಾಟಗಾರರು_ಈ_ಸಂದರ್ಶನ_ನೋಡಲೇಬೇಕು.

https://youtu.be/W4JCFiy56Tw?feature=shared

  ನಮ್ಮ ಹಳ್ಳಿಗಾಡಿನ ಹಿಂದುಳಿದ ವರ್ಗದ ವಿದ್ಯಾವಂತ ಯುವಕ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರ ನವೀನ್ ಕುಮಾರ್ ಅವರ ಕನ್ನಡ ಭಾಷೆ - ನೆಲ-ಜಲದ ಬಗ್ಗೆ ಮಾಡಿರುವ ಸಾದನೆ ಸಣ್ಣದಲ್ಲ.
  2012 ರಲ್ಲಿ ಅವರು ನಡೆಸಿದ ಮೊದಲ #ತಾಳಗುಂದ_ಉತ್ಸವದ ಯಶಸ್ಸು ತಾಳಗುಂದ ಉತ್ಕನನಕ್ಕೆ ಕಾರಣವಾಯಿತು ಮತ್ತು ಕನ್ನಡದ ಮೊದಲ ಶಾಸನ ಪತ್ತೆ ಆಗಲು ಕಾರಣ ಆಯಿತು.
  ಇದೇ ಸಂದರ್ಭದಲ್ಲಿ ಕನ್ನಡಿಗ ಕೇಶವ ಅವರು ಪುರಾತತ್ವ ಇಲಾಖೆ ಮುಖ್ಯಸ್ಥರಾಗಿದ್ದು ಒಂದೂ ಕಾರಣ.
  ತಾಳಗುಂದ ಉತ್ಸವ 2012ರಲ್ಲಿ ನಡೆದ ಮೊದಲ ಮತ್ತು ಕೊನೆಯ ಉತ್ಸವ ಆಯಿತು.
  ಈ ವರ್ಷ ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವದ ಆಚರಣೆ ನಡೆಯುತ್ತಿದೆ ಆದ್ದರಿಂದ ಜಿಲ್ಲೆಯ ಕನ್ನಡ ಪರ ಹೋರಾಟ ಸಂಘಟನೆಗಳು ತಾಳಗುಂದದಿಂದ ಕನ್ನಡ ಜ್ಯೋತಿ ನವೀನ್ ಕುಮಾರ್ ರಿಂದ ಪಡೆದು ಅವರವರ ಊರಿಗೆ ಒಯ್ಯುವಂತಾಗಲಿ.
  ರಾಜ್ಯ ಸರ್ಕಾರ ಸುವರ್ಣ ಕನ್ನಡ ರಾಜ್ಯೋತ್ಸವದ ಆಚರಣೆಯ ವರ್ಷದಲ್ಲಿ ಕನ್ನಡದ ಮೊದಲ ಶಾಸನ ತಾಳಗುಂದದಲ್ಲಿ ಬೆಳಕಿಗೆ ತರಲು ಕಾರಣನಾದ ಕನ್ನಡಿಗ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರ ನವೀನ್ ಕುಮಾರ್ ಗೆ #ರಾಜ್ಯೋತ್ಸವ_ಪ್ರಶಸ್ತಿ ನೀಡಿ ಗೌರವಿಸಲಿ ಎಂದು ಒತ್ತಾಯಿಸೋಣ.
  ತಾಳಗುಂದ ಉತ್ಸವ ನಡೆಸಲು ಕಾರಣ ಭಾಗ-4  ಈ ಸಂದರ್ಶನದಲ್ಲಿ ನವೀನ್ ಕುಮಾರ್ ವಿವರವಾಗಿ ತಿಳಿಸಿದ್ದಾರೆ.
   ಕನ್ನಡಾಭಿಮಾನಿಗಳು ಕನ್ನಡ ಹೋರಾಟಗಾರರು ಇದನ್ನು ನೋಡಲೇ ಬೇಕು.

Comments