Skip to main content

Blog number 2102. ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಪದೋನ್ನತಿ ಹೊಂದಿದ ಮಂಜುಳಮ್ಮನ ವಿದ್ಯಾಬ್ಯಾಸ ಕೇವಲ ಎರಡನೆ ತರಗತಿ.

#ಇವತ್ತು_ಕಾರ್ಲ್_ಮಾರ್ಕ್ಸ್_ಹುಟ್ಟಿದ_ದಿನ

#ಮ್ಯಾಕ್ಸಿಂ_ಗಾರ್ಕಿ_ಬರೆದ_ಪುಸ್ತಕ_ತಾಯಿ_ನನಗೆ_ಪ್ರಭಾವ_ಬೀರಿದ_ಪುಸ್ತಕ

#ನಮ್ಮ_ಸಂಸ್ಥೆಯಲ್ಲಿ_14_ವರ್ಷ_ಸೇವೆ_ಸಲ್ಲಿಸಿದ

#ಮಹಿಳಾ_ಕಾರ್ಮಿಕಳಿಗೆ_ಅಸಿಸ್ಟಂಟ್_ಮ್ಯಾನೇಜರ್_ಪ್ರಮೋಷನ್

#ನಮ್ಮ_ಸಂಸ್ಥೆಯಲ್ಲಿ_ಅರ್ಹತೆಗೆ_ಹೆಚ್ಚಿನ_ಪ್ರಾಶಸ್ತ್ಯ

  ಇವತ್ತು ವಿಶ್ವ ವಿಖ್ಯಾತ ಅರ್ಥಶಾಸ್ತ್ರಜ್ಞ ಕಾರ್ಲ್ ಮಾರ್ಕ್ಸ್ ಹುಟ್ಟಿದ ದಿನ,ನನಗೆ ಕಾರ್ಲ್ಸ್ ಮಾರ್ಕ್ಸ್ ಹೆಚ್ಚು ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಅದನ್ನು ಓದುವಾಗ ಸಣ್ಣ ವಯಸ್ಸಲ್ಲಿ ಅಂತಹ ಪ್ರೌಡಿಮೆ ಇರಲಿಲ್ಲ ಆದರೂ ನನಗೆ ಅರ್ಥವಾಗಿದ್ದು  ಸಾಮಾಜಿಕ ವಿಜ್ಞಾನಕ್ಕೆ ಅವರು ನೀಡಿದ ದೊಡ್ಡ ಕೊಡುಗೆ "ಸಾಮಾಜಿಕ ಸಂಘಟನೆ ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ".
   18 ನೆ ವಯಸ್ಸಲ್ಲಿ ಶಿವಮೊಗ್ಗದ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ #ಬಿ_ಕೃಷ್ಣಪ್ಪರ ಒಡನಾಡಿ #ಪ್ರೋ_ರಾಚಪ್ಪ ಪರಿಚಯಿಸಿದ ಕೋಲಾರದ #ಕಾಮ್ರೇಡ್_ನಾರಾಯಣ_ಸ್ವಾಮಿ ನನಗೆ ಅನೇಕ ವಿಚಾರಗಳಿಗೆ ಪ್ರೇರಣೆ ಆದರು ಅವರು ನನಗೆ ನೀಡಿದ ಪುಸ್ತಕ ಮಾಕ್ಸಿಂಗಾರ್ಕಿ ಬರೆದ #ತಾಯಿ (ಕನ್ನಡಕ್ಕೆ ಭಾಷಾಂತರವಾಗಿದ್ದ) ಪುಸ್ತಕ.
  1906 ರಲ್ಲಿ  ಗಾರ್ಕಿ ಅಮೇರಿಕಾ ಪ್ರವಾಸದಲ್ಲಿ ಬರೆದ ಪುಸ್ತಕ (ರಷ್ಯಾ ಕ್ರಾಂತಿ 1905 ರಲ್ಲಿ ವಿಫಲವಾದ ಸಂದರ್ಭದಲ್ಲಿ) ರಷ್ಯಾದ ಕಾರ್ಖಾನೆಗಳಲ್ಲಿ ಬರಿಕೈಯಲ್ಲಿ ಕೆಲಸ ಮಾಡುವ ಬಡತನ ಹಸಿವಿನ ವಿರುದ್ಧ ಹೋರಾಡುವ ಮಹಿಳೆಯ ಜೀವನ ಚರಿತ್ರೆ ಆಗಿದೆ.
  ಈ ಪುಸ್ತಕ ನನ್ನ ಮೇಲೆ ಬೀರಿದ ಪರಿಣಾಮ ಆಗಾದವಾದದ್ದು ಇದರಿಂದ ನಾನು ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಕನಿಷ್ಟ ಮೂಲಬೂತ ಸೌಲಭ್ಯಗಳಾದ ಪಿಲ್ಟರ್ ನೀರು - ಊಟ ಉಪಹಾರ - ದೂರದಿಂದ ಬರುವವರಿಗೆ ವಾಹನ ಸೌಲಭ್ಯ ಅಥವ ಬಸ್ ಛಾರ್ಜ್ - ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ - ಅವರ ಖಾಸಾಗಿ ವಸ್ತು ಇತ್ಯಾದಿ ಇಡಲು ಪ್ರತ್ಯೇಕ ಲಾಕರ್ - ಸಮವಸ್ತ್ರ-ಚಪ್ಪಲಿ-ಒವರ್ ಟೈಂ ಭತ್ಯೆ ಇತ್ಯಾದಿ ನಿರಂತರವಾಗಿ ಅವರಿಗೆ ಸಿಗುವಂತೆ ಮಾಡಿದ್ದೇನೆ ಆದರೂ ನನಗೆ ಇದು ತೃಪ್ತಿ ತಂದಿಲ್ಲ ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯ ಓದಗಿಸುವ ಬಯಕೆ ಇದೆ.
 ಇವತ್ತು ನಮ್ಮ ಸಂಸ್ಥೆಯಲ್ಲಿ 14 ವರ್ಷಗಳಿಂದ ಕೆಲಸ ಮಾಡುತ್ತಿರುವ ಶ್ರೀಮತಿ ಮಂಜುಳಾ ಗಣಪತಿಗೆ ಇವತ್ತು ಅಸಿಸ್ಟೆಂಟ್ ಮ್ಯಾನೆಜರ್ ಹುದ್ದೆಗೆ ಪ್ರಮೋಷನ್ ನೀಡಿದ್ದೇವೆ ಅದಕ್ಕಾಗಿ ಅವರಿಗೆ ಸಹ ಸಿಬ್ಬಂದಿಗಳು ಸನ್ಮಾನಿಸಿದರು.
  ಇಲ್ಲೊಂದು ವಿಶೇಷ ಮಂಜುಳಮ್ಮ ಎರಡನೆ ಕ್ಲಾಸಿಗಿಂತ ಜಾಸ್ತಿ ಓದಿಲ್ಲ ಆದರೆ ಜಾಸ್ತಿ ಓದಿದವರಿಗಿಂತ ಹೆಚ್ಚಿನ ಜವಾಬ್ದಾರಿ ಸಮಯ ಪಾಲನೆ ಅವರದ್ದು.
  ನನ್ನ ಸಣ್ಣ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ದಲ್ಲಿ ಈ #ಮಂಜುಳಮ್ಮ ನಿಜ ಪಾತ್ರದಾರಿ ಕೂಡ ಈ ಪುಸ್ತಕದ ಮುನ್ನುಡಿ ಬರೆದ ಖ್ಯಾತ ಬರಹಗಾರ #ಅರವಿಂದ_ಚೊಕ್ಕಾಡಿ  ಅವರು ಮಂಜುಳಮ್ಮ ಸಾಕ್ಷಾತ್ ಗ್ರಾಮ ಭಾರತದ ದಶ೯ನ ಎಂದು ಬರೆದಿದ್ದಾರೆ.
  ಮಂಜುಳಮ್ಮ ತನ್ನ ಕಷ್ಟದ ದುಡಿಮೆಯಲ್ಲಿ ಮಗಳನ್ನ ಇಂಜಿನಿಯರ್ ಓದಿಸುತ್ತಿದ್ದಾಳೆ ಹಾಗೂ ಮೌಲ್ಡಿಂಗ್ ಮನೆ ಕೂಡ ನಿರ್ಮಿಸಿದ್ದಾಳೆ ಅವಳಿಗೆ ವಿದ್ಯಾಭ್ಯಾಸ ದೊರೆತಿದ್ದರೆ ದೊಡ್ಡ ಉದ್ಯೋಗಸ್ಥಳಾಗುತ್ತಿದ್ದಳು ಎಂಬುದರಲ್ಲಿ ಅನುಮಾನ ಇಲ್ಲ, ನಮ್ಮ ಸಂಸ್ಥೆಯಲ್ಲಿ ಮಂಜುಳಮ್ಮನಿಗೆ ಎಲ್ಲಾ ಸಿಬ್ಬಂದಿಗಳೂ ಗೌರವಿಸುತ್ತಾರೆ.
   ದುಡಿಯುವವನಿಗೆ ಸಂಬಳ ಕೊಡುವವನೆ ಮಾಲಿಕ ಆದರೆ  ಸಂಬಳ ಕೊಡುವ ಮಟ್ಟಕ್ಕೆ ಅವನನ್ನು ಬೆಳೆಸಿದವನೆ ಕಾರ್ಮಿಕ ಎಂಬುದು ವಾಸ್ತವ.
   ನಮ್ಮ ಸಂಸ್ಥೆಯಲ್ಲಿ ಕೆಲಸಗಾರರಿಗೆ ನಾವು ನೀಡುವ ತರಬೇತಿ ಅವರನ್ನ ನಿಪುಣರಾಗಿಸುತ್ತದೆ ಆದ್ದರಿಂದ ಅವರ ವಿದ್ಯಾಭ್ಯಾಸಕ್ಕಿಂತ ಅವರ ಪ್ರಾಮಾಣಿಕತೆಯ ದುಡಿಮೆಗೆ ಮತ್ತು ಸಮಯ ಪಾಲನೆಗೆ ಹೆಚ್ಚು ಆದ್ಯತೆ, ಇಂತಹ ಅರ್ಹತೆ ಇರುವವರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತೇವೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ