# ಕಳೆದ 12 ವಷ೯ದಿOದ ಹಂದಿಗೋಡು ಕಾಯಿಲೆ ಹೊಸದಾಗಿ ವರದಿ ಆಗಿಲ್ಲ!? #
(ಹಂದಿಗೋಡು ಕಾಯಿಲೆ ಪೀಡಿತರಿಗೆ ನೆರವು ನೀಡುವ ಚಂದ್ರಶೇಖರ್ )
ಹಂದಿಗೋಡು ಕಾಯಿಲೆ ನಿಗೂಡ ಕಾಯಿಲೆ ಈವರೆಗೆ ಈ ಕಾಯಿಲೆಗೆ ಕಾರಣವೂ ಗೊತ್ತಾಗಿಲ್ಲ ಮತ್ತು ಇದಕ್ಕೆ ಔಷದಿಯೂ ಕಂಡು ಹಿಡಿದಿಲ್ಲ !?
ಈ ಕಾಯಿಲೆ ಪೀಡಿತರ ಬಗ್ಗೆ ನಿಸ್ವಾಥ೯ ಸೇವೆಯನ್ನ ಸುಮಾರು 4 ದಶಕದಿ೦ದ ನಡೆಸುತ್ತಿರುವ ಹಂದಿಗೋಡು ಚಂದ್ರಶೇಖರರಾಯರು ಸಾಗರದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಅಕ ಸ್ಮಿಕವಾಗಿ ಸಿಕ್ಕಿದರು.
ಅವರ ಸೇವೆಗಾಗಿ ಸಕಾ೯ರ ನೀಡಿದ ವಾಹನ ವಾಪಾಸ್ ಪಡೆದಾಗ ನಡೆದಾಡೆ ತಮ್ಮ ಸೇವೆ ಮುಂದುವರಿಸಿದಾಗ ನಾನು ಇವರ ಒಡಾಟಕ್ಕೆ TVS ಕೊಡಿಸಿದ್ದೆ ಅದರಲ್ಲೇ ಈಗಲೂ ನನ್ನ ತಿರುಗಾಟ ಅಂತ ಹೇಳಿದರು, ನನಗೂ ಸಾಥ೯ಕ ಅನ್ನಿಸಿತು.
ಒಂದು ಶುಭ ಸಂದೇಶವು ಅವರಿಂದ ಗೊತ್ತಾಯಿತು ಕಳೆದ 12 ವಷ೯ದಿಂದ ಹಂದಿಗೋಡು ಕಾಯಿಲೆ ಹೊಸದಾಗಿ ಯಾರಿಗೂ ಬಂದಿಲ್ಲ ಮತ್ತು ವರದಿ ಆಗಿಲ್ಲ!, ನಿಜಕ್ಕೂ ಒಂದು ಒಳ್ಳೆ ಸುದ್ದಿ ಸಿಕ್ಕಿತು.
ಅವರ ಸಂದಶ೯ನ ಇಲ್ಲಿದೆ ನೋಡಿ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment