* ಡಾಕ್ಟರ್ ಪ್ರೀತಂ ಎಂಬ ಮಾನವೀಯತೆ ಇರುವ ವೈದ್ಯರು *
ಹಲೋ.. ಡಾಕ್ಟರ್ ಒಂದು ಪೇಶoಟ್ ಕಳಿಸ್ತಾ ಇದೀನಿ ಲಿವರ್ ಸಮಸ್ಯೆ ಅಂದೆ, ಕಳಿಸಿ ಚೆಕ್ ಮಾಡುತ್ತೇನೆ ಅಂದರು, ಎಷ್ಟು ಹಣ ಬೇಕಾಗಬಹುದು ಅಂದೆ 400 ಪರೀಕ್ಷೆಗೆ ಒಂದು 600 ಔಷದಿಗೆ ಒಟ್ಟು 1000 ಕಳಿಸಿ ಅಂದರು.
ಹೀಗೆ ನಾನು ಆಗಾಗ ನನ್ನ ಹತ್ತಿರ ಬರುವ ಅತ್ಯಂತ ಬಡವರನ್ನ ಇವರ ಹತ್ತಿರ ಇವರು ಸಿಗದಿದ್ದರೆ ಮೆಗಾನ್ ಆಸ್ಪತ್ರೆಯಲ್ಲಿ ನ ವೈದ್ಯ ದಂಪತಿ ನಾಗರಾಜ್ ಮತ್ತು ಶ್ರೀಮತಿ ರಾಜ ಲಕ್ಷ್ಮಿ ಹತ್ತಿರ ಕಳಿಸುತ್ತೇನೆ.
ಸಂಜೆ ರೋಗಿ ಮಗನೊಂದಿಗೆ ಬಂದ ತಾಯಿ ಮೊಗದಲ್ಲಿ ಬೆಳಿಗ್ಗೆ ಇದ್ದ ಆತಂಕ ಕಳೆದು ನೆಮ್ಮದೀಯ ಜೀವನೋತ್ಸವ ಇತ್ತು, ವೈದ್ಯರು ಅವರ ಚಿಕಿತ್ಸೆಯ ಹಣವೂ ಪಡೆಯದೆ ಪರೀಕ್ಷೆ ಮಾಡಿ ಒಂದು ತಿಂಗಳ ಔಷಧಿ ಕಳಿಸಿದ್ದಾರೆ.
ಶಿವಮೊಗ್ಗದ ಅನೇಕ ವೈದ್ಯರ ಪರಿಚಯ ಇದೆ ಆದರೆ ಅವರಾರು ಈ ಕೂಲಿ ಕಾಮಿ೯ಕರ, ಸಣ್ಣ ಜಾತಿಗಳ ಜನರ ಚಿಕಿತ್ಸೆಗೆ ಕಳಿಸಿದರೆ ಆಸಕ್ತಿ ತೋರಿಸುವುದಿಲ್ಲ, ಶ್ರೀಮಂತ ರೋಗಿಗಳೆ ಅವರ ಟಾಗೆ೯ಟ್ ಅದು ತಪ್ಪು ಅಲ್ಲ ಯಾಕೆಂದರೆ ಕಾಪೊ೯ರೇಟ್ ಆಸ್ಪತ್ರೆಗಳ ಅಘೋಷಿತ ನಿಯಮ ಕೂಡ.
ಡಾ.ಪ್ರೀತಂ ಜಿಲ್ಲೆಯ ಪ್ರಖ್ಯಾತ ಮದುಮೇಹ ಕಾಯಿಲೆಯ ಪರಿಣಿತ ವೈದ್ಯರು, ಹಾಲಿ ದುಗಿ೯ಗುಡಿಯ ರಾಜ್ ಕುಮಾರ್ ಡಯೋಗ್ನೀಸ್ ಸೆಂಟರ್ ಇವರೆ ವಹಿಸಿಕೊಂಡಿದ್ದಾರೆ, ಇವರ ತಂದೆ ಡಾ. ಈಶ್ವರಪ್ಪನವರು ಸೊರಬ ಮೂಲದವರು, ಇವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರ ಆಪ್ತರು, ಇವರು ಬಳ್ಳಾರಿಯಲ್ಲಿ ಸಕಾ೯ರಿ ವೈದ್ಯರಾಗಿ ಪ್ರಸಿದ್ದರಾಗಿದ್ದರಿಂದ ರಾಮಕೃಷ್ಣ ಹೆಗ್ಗಡೆ ಇವರಿಗೆ ವಿಧಾನಸಭಾ ಚುನಾವಣೆಗೆ ಟಿಕೇಟ್ ಕೊಡಲು ಮುಂದಾಗಿದ್ದರು ಆದರೆ ಇವರು ಆಸಕ್ತಿ ತೋರಿಸಲಿಲ್ಲ, ಸ್ಪದಿ೯ಸಿದ್ದರೆ ಶಾಸಕರಾಗಿ ಮಂತ್ರಿ ಆಗಿ ಅತ್ಯುತ್ತಮ ರಾಜಕಾರಣಿ ಆಗುತ್ತಿದ್ದರು.
ಇವರ ಇನ್ನೊಬ್ಬ ಸಹೋದರ ಕೂಡ ಶಿವಮೊಗ್ಗದ ಪ್ರಖ್ಯಾತ ದಂತ ವೈದ್ಯರು.
ಡಾ.ಪ್ರೀತಂ ಕ್ರಿಕೆಟ್ ಆಟಗಾರರು, ರಣಜಿ ಕ್ರಿಕೆಟ್ ಅಂಪೈರಿಂಗ್ ಪರೀಕ್ಷೆಯಲ್ಲಿ ಉತ್ತೀಣ೯ರು, ಕಾರ್ ರೇಸ್ ಪ್ರವೀಣರು, ಎನ್ ಪೀಲ್ಡ್ ಬುಲೆಟ್ ಬೈಕ್ ನ ಕ್ಲಬ್ ಸದಸ್ಯರಾಗಿ ಬೈಕಿಂಗ್, ವಿದೇಶ ಪ್ರಯಾಣ, ಮೊನ್ನೆ KTM ಬೈಕ್ ಖರೀದಿಸಿ ಪ್ರತಿದಿನ ಬೆಳಿಗ್ಗೆ 300 KM ಡ್ರೈವಿಂಗ್ ಮಾಡಿ ಹೊಸ ಬೈಕ್ ಪಳಗಿಸಲು ಶಿವಮೊಗ್ಗದಿಂದ ಸಿಸಿ೯ ತನಕ ಹೋಗಿ ಬರುವಾಗ ನಮ್ಮ ಮಲ್ಲಿಕಾ ಹೋಟೆಲ್ ನಲ್ಲಿ ಕಾಫಿ ಬ್ರೇಕ್ ಮಾಡುತ್ತಿದ್ದರು.
ಇವರ ಹತ್ತಿರ ಬೈಕ್, ಕಾರ್ ಗಳ ಕಲೆ ಕ್ಷನ್ ಇದೆ, ಇವರ ಜೀವನ ಶೈಲಿಯಂತೆ ಮನೆಯೂ ಇದೆ, ಮೇಲ್ ಮಾಳಿಗೆಯಲ್ಲಿ ಸುಂದರವಾದ ಹೊಂಬಾರ್ ಮತ್ತು ಅದಕ್ಕೆ ಹೊಂದಿ ಕೊಂಡ ಮಿನಿ ಕಿಚನ್ ಇದೆ.
ಒಮ್ಮೊಮ್ಮೆ ಡಾ.ಪ್ರೀತಂ ವೈದ್ಯರೋ.. ಕ್ರೀಡಾಪಟುಗಳ ಅ೦ತ ನನಗೆ ಗೊಂದಲ ಆಗುವಷ್ಟು ಅವರು ಬಹುಮುಖ ಕ್ರಿಯಾಶಾಲಿ ವ್ಯಕ್ತಿತ್ವದವರು ಆಗಿದ್ದಾರೆ.
ಶಿವಮೊಗ್ಗದಲ್ಲಿ ಇಂತಹ ಮಾನವೀಯ ಗುಣಗಳಿರುವ, ಬಡವರನ್ನ ಶೋಷಿಸದ, wrong diagnose ಮಾಡದ, ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡದ ಕ್ರೀಡಾ ಮನೋಭಾವದ ಡಾ.ಪ್ರೀತಂ ಹೆಸರಿನ೦ತೆ ನನಗೆ ಪ್ರೀತಿ ಪಾತ್ರರಾಗಿ ಕಾಣುತ್ತಾರೆ ಅವರ ಸೆಲ್ ನಂಬರ್
+91 94491 38546.
ರಾಜ್ ಕುಮಾರ್ ಡಯೋಗ್ನಿಸಿಸ್
ದುಗಿ೯ಗುಡಿ ಶಿವಮೊಗ್ಗ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment