* ಡಾಕ್ಟರ್ ಪ್ರೀತಂ ಎಂಬ ಮಾನವೀಯತೆ ಇರುವ ವೈದ್ಯರು *
ಹಲೋ.. ಡಾಕ್ಟರ್ ಒಂದು ಪೇಶoಟ್ ಕಳಿಸ್ತಾ ಇದೀನಿ ಲಿವರ್ ಸಮಸ್ಯೆ ಅಂದೆ, ಕಳಿಸಿ ಚೆಕ್ ಮಾಡುತ್ತೇನೆ ಅಂದರು, ಎಷ್ಟು ಹಣ ಬೇಕಾಗಬಹುದು ಅಂದೆ 400 ಪರೀಕ್ಷೆಗೆ ಒಂದು 600 ಔಷದಿಗೆ ಒಟ್ಟು 1000 ಕಳಿಸಿ ಅಂದರು.
ಹೀಗೆ ನಾನು ಆಗಾಗ ನನ್ನ ಹತ್ತಿರ ಬರುವ ಅತ್ಯಂತ ಬಡವರನ್ನ ಇವರ ಹತ್ತಿರ ಇವರು ಸಿಗದಿದ್ದರೆ ಮೆಗಾನ್ ಆಸ್ಪತ್ರೆಯಲ್ಲಿ ನ ವೈದ್ಯ ದಂಪತಿ ನಾಗರಾಜ್ ಮತ್ತು ಶ್ರೀಮತಿ ರಾಜ ಲಕ್ಷ್ಮಿ ಹತ್ತಿರ ಕಳಿಸುತ್ತೇನೆ.
ಸಂಜೆ ರೋಗಿ ಮಗನೊಂದಿಗೆ ಬಂದ ತಾಯಿ ಮೊಗದಲ್ಲಿ ಬೆಳಿಗ್ಗೆ ಇದ್ದ ಆತಂಕ ಕಳೆದು ನೆಮ್ಮದೀಯ ಜೀವನೋತ್ಸವ ಇತ್ತು, ವೈದ್ಯರು ಅವರ ಚಿಕಿತ್ಸೆಯ ಹಣವೂ ಪಡೆಯದೆ ಪರೀಕ್ಷೆ ಮಾಡಿ ಒಂದು ತಿಂಗಳ ಔಷಧಿ ಕಳಿಸಿದ್ದಾರೆ.
ಶಿವಮೊಗ್ಗದ ಅನೇಕ ವೈದ್ಯರ ಪರಿಚಯ ಇದೆ ಆದರೆ ಅವರಾರು ಈ ಕೂಲಿ ಕಾಮಿ೯ಕರ, ಸಣ್ಣ ಜಾತಿಗಳ ಜನರ ಚಿಕಿತ್ಸೆಗೆ ಕಳಿಸಿದರೆ ಆಸಕ್ತಿ ತೋರಿಸುವುದಿಲ್ಲ, ಶ್ರೀಮಂತ ರೋಗಿಗಳೆ ಅವರ ಟಾಗೆ೯ಟ್ ಅದು ತಪ್ಪು ಅಲ್ಲ ಯಾಕೆಂದರೆ ಕಾಪೊ೯ರೇಟ್ ಆಸ್ಪತ್ರೆಗಳ ಅಘೋಷಿತ ನಿಯಮ ಕೂಡ.
ಡಾ.ಪ್ರೀತಂ ಜಿಲ್ಲೆಯ ಪ್ರಖ್ಯಾತ ಮದುಮೇಹ ಕಾಯಿಲೆಯ ಪರಿಣಿತ ವೈದ್ಯರು, ಹಾಲಿ ದುಗಿ೯ಗುಡಿಯ ರಾಜ್ ಕುಮಾರ್ ಡಯೋಗ್ನೀಸ್ ಸೆಂಟರ್ ಇವರೆ ವಹಿಸಿಕೊಂಡಿದ್ದಾರೆ, ಇವರ ತಂದೆ ಡಾ. ಈಶ್ವರಪ್ಪನವರು ಸೊರಬ ಮೂಲದವರು, ಇವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರ ಆಪ್ತರು, ಇವರು ಬಳ್ಳಾರಿಯಲ್ಲಿ ಸಕಾ೯ರಿ ವೈದ್ಯರಾಗಿ ಪ್ರಸಿದ್ದರಾಗಿದ್ದರಿಂದ ರಾಮಕೃಷ್ಣ ಹೆಗ್ಗಡೆ ಇವರಿಗೆ ವಿಧಾನಸಭಾ ಚುನಾವಣೆಗೆ ಟಿಕೇಟ್ ಕೊಡಲು ಮುಂದಾಗಿದ್ದರು ಆದರೆ ಇವರು ಆಸಕ್ತಿ ತೋರಿಸಲಿಲ್ಲ, ಸ್ಪದಿ೯ಸಿದ್ದರೆ ಶಾಸಕರಾಗಿ ಮಂತ್ರಿ ಆಗಿ ಅತ್ಯುತ್ತಮ ರಾಜಕಾರಣಿ ಆಗುತ್ತಿದ್ದರು.
ಇವರ ಇನ್ನೊಬ್ಬ ಸಹೋದರ ಕೂಡ ಶಿವಮೊಗ್ಗದ ಪ್ರಖ್ಯಾತ ದಂತ ವೈದ್ಯರು.
ಡಾ.ಪ್ರೀತಂ ಕ್ರಿಕೆಟ್ ಆಟಗಾರರು, ರಣಜಿ ಕ್ರಿಕೆಟ್ ಅಂಪೈರಿಂಗ್ ಪರೀಕ್ಷೆಯಲ್ಲಿ ಉತ್ತೀಣ೯ರು, ಕಾರ್ ರೇಸ್ ಪ್ರವೀಣರು, ಎನ್ ಪೀಲ್ಡ್ ಬುಲೆಟ್ ಬೈಕ್ ನ ಕ್ಲಬ್ ಸದಸ್ಯರಾಗಿ ಬೈಕಿಂಗ್, ವಿದೇಶ ಪ್ರಯಾಣ, ಮೊನ್ನೆ KTM ಬೈಕ್ ಖರೀದಿಸಿ ಪ್ರತಿದಿನ ಬೆಳಿಗ್ಗೆ 300 KM ಡ್ರೈವಿಂಗ್ ಮಾಡಿ ಹೊಸ ಬೈಕ್ ಪಳಗಿಸಲು ಶಿವಮೊಗ್ಗದಿಂದ ಸಿಸಿ೯ ತನಕ ಹೋಗಿ ಬರುವಾಗ ನಮ್ಮ ಮಲ್ಲಿಕಾ ಹೋಟೆಲ್ ನಲ್ಲಿ ಕಾಫಿ ಬ್ರೇಕ್ ಮಾಡುತ್ತಿದ್ದರು.
ಇವರ ಹತ್ತಿರ ಬೈಕ್, ಕಾರ್ ಗಳ ಕಲೆ ಕ್ಷನ್ ಇದೆ, ಇವರ ಜೀವನ ಶೈಲಿಯಂತೆ ಮನೆಯೂ ಇದೆ, ಮೇಲ್ ಮಾಳಿಗೆಯಲ್ಲಿ ಸುಂದರವಾದ ಹೊಂಬಾರ್ ಮತ್ತು ಅದಕ್ಕೆ ಹೊಂದಿ ಕೊಂಡ ಮಿನಿ ಕಿಚನ್ ಇದೆ.
ಒಮ್ಮೊಮ್ಮೆ ಡಾ.ಪ್ರೀತಂ ವೈದ್ಯರೋ.. ಕ್ರೀಡಾಪಟುಗಳ ಅ೦ತ ನನಗೆ ಗೊಂದಲ ಆಗುವಷ್ಟು ಅವರು ಬಹುಮುಖ ಕ್ರಿಯಾಶಾಲಿ ವ್ಯಕ್ತಿತ್ವದವರು ಆಗಿದ್ದಾರೆ.
ಶಿವಮೊಗ್ಗದಲ್ಲಿ ಇಂತಹ ಮಾನವೀಯ ಗುಣಗಳಿರುವ, ಬಡವರನ್ನ ಶೋಷಿಸದ, wrong diagnose ಮಾಡದ, ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡದ ಕ್ರೀಡಾ ಮನೋಭಾವದ ಡಾ.ಪ್ರೀತಂ ಹೆಸರಿನ೦ತೆ ನನಗೆ ಪ್ರೀತಿ ಪಾತ್ರರಾಗಿ ಕಾಣುತ್ತಾರೆ ಅವರ ಸೆಲ್ ನಂಬರ್
+91 94491 38546.
ರಾಜ್ ಕುಮಾರ್ ಡಯೋಗ್ನಿಸಿಸ್
ದುಗಿ೯ಗುಡಿ ಶಿವಮೊಗ್ಗ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment