#ದುಗ೯ಮ ಹಳ್ಳಿಯಲ್ಲಿ ಜನಿಸಿ ದೊಡ್ಡ ಉದ್ದಿಮೆದಾರರಾಗಿ ಆನಂದಪುರಂನ ಘನತೆ ಹೆಚ್ಚಿಸಿದ್ದ ಸುಬ್ರಾವ್#
ಆನಂದಪುರಂನ ಸಂತೋಷ್ ರೈಸ್ ಇಂಡಸ್ಟ್ರಿಸ್ ಬೃಹತ್ ಅಕ್ಕಿ ಅವಲಕ್ಕಿ ಗಿರಣಿ ಮತ್ತು ಸಂತೋಷ್ ಆಗ್ರೋ ಎಂಬ ಬೃಹತ್ ಕೋಲ್ಡ್ ಸ್ಟೋರೇಜ್ ಗಳ ಮಾಲಿಕರಾದ ಶ್ರೀ ಸುಬ್ಬ ರಾವ್ ಇವತ್ತು ಇಹಲೋಕ ತ್ಯಜಿಸಿದ್ದಾರೆ.
ಇವರ ಜೀವನದ ಹಾದಿ ಅತ್ಯಂತ ದುಗ೯ಮ, ಸಾಗರ ತಾಲ್ಲೂಕಿನ ಆನ೦ದಪುರಂ ಹೋಬಳಿಯ ಬಳ್ಳಿ ಬೈಲು ಗ್ರಾಮದ ಕೊಂಗನಾಸಳ್ಳಿ ಎಂಬ ಹಳ್ಳಿಯ ಮಧ್ಯಮ ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಇವರು ಆನಂದಪುರಂನಲ್ಲಿ ವಿದ್ಯಾ ಮಂತ್ರಿ ಬದರಿನಾರಾಯಣ್ ಅಯ್ಯOಗಾರ್ ಕುಟುಂಬದವರು ಪ್ರಾರಂಬಿಸಿದ ಪಿಯುಸಿ ತರಗತಿಯ ಪ್ರಥಮ ಬ್ಯಾಚ್ ನಲ್ಲಿ ಸೈನ್ಸ್ ನಲ್ಲಿ ಉತ್ತಿಣ೯ರಾದ ಏಕೈಕ ವಿದ್ಯಾಥಿ೯ ಸುಬ್ಬ ರಾವ್.
ಕೊಂಗನಾಸಳ್ಳಿಯಿ೦ದ ಆನಂದಪುರಕ್ಕೆ ರಸ್ತೆ ಇರಲಿಲ್ಲ, ದಟ್ಟ ಕಾಡು ಹಾಗಾಗಿ ಸುಬ್ಬರಾವ್ ಆನಂದಪುರದ ಅಗ್ರಹಾರದ ರಾಮ ಮಂದಿರ ಮತ್ತು ಅದರ ಸಮೀಪ ಬಾಡಿಗೆ ಕೊಠಡಿಯಲ್ಲಿ ವಿದ್ಯಾಭ್ಯಾಸ ಮಾಡಿದವರು.
ಊರಿನ ಹಿರಿಯರಾದ ಅದ್ಯಾಪಕರಾದ ಶ್ರೀ ಬೋಜರಾಜ್ ಅಯ್ಯOಗಾರ್, ಆನಂದಪುರದ ಅಭಿವೃದ್ಧಿಗೆ ಕಾರಣಕತ೯ರಾದ ಗಾಂಧಿವಾದಿ ಶಿಕ್ಷಕ ಎಸ್.ಆರ್.ಕೃಷ್ಣಪ್ಪ ಇವರಿಗೆ ಅನೇಕ ರೀತಿ ಸಹಕಾರ ನೀಡಿದವರು.
ಪಿಯುಸಿ ಓದುವಾಗ ನಮ್ಮ ಅಣ್ಣ ಕೆ.ನಾಗರಾಜ್ ಇವರ ಕ್ಲಾಸ್ ಮೇಟ್ ಹಾಗಾಗಿ ಕೆಲ ಸಂಜೆ ನಮ್ಮ ಮನೆಗೆ ಇವರು ಬರುತ್ತಿದ್ದರು.
ನಂತರ ರೈತ ಬಂದು ಗ್ರಾಮೋದ್ಯೋಗದ ಸುಬ್ಬಣ್ಣನಾಯ್ಕರ ಅಕ್ಕಿ ಗಿರಣಿಯಲ್ಲಿ ಗುಮಸ್ತರಾಗಿ ಕೆಲಸ ಪ್ರಾರಂಬಿಸಿ ನಂತರ ಅವರ ನಂಬಿಗೆಯ ಬ೦ಟರಾಗಿ ವ್ಯವಸ್ಥಾಪಕರಾಗಿ ಮುಂದೆ ಸುಬ್ಬಣ್ಣಾ ನಾಯ್ಕರು ಉದ್ಧಿಮೆಯಿಂದ ನಿವೃತ್ತಿ ಘೋಷಿಸಿದಾಗ ಆನಂದಪುರದ ಬೃಹತ್ ಅಕ್ಕಿ ಮತ್ತು ಅವಲಕ್ಕಿ ಗಿರಣಿಯನ್ನ ಸುಬ್ಬರಾವ್ ಗೆ ವಹಿಸಿ ನಂತರ ಸುಬ್ಬರಾವ್ ಗೆ ಮಾರಾಟ ಮಾಡುತ್ತಾರೆ.
ನಂತರ ಸುಬ್ಬರಾವ್ ಇಡೀ ಅಕ್ಕಿ ಗಿರಣಿಯನ್ನ ಮಾದರಿ ಅಕ್ಕಿ ಗಿರಣಿಯಾಗಿ ಬದಲಿಸುತ್ತಾರೆ, ವೈಜ್ಞಾನಿಕವಾಗಿ ಆಧುನಿಕರಣ ಮಾಡಿ ದೊಡ್ಡ ಪ್ರಮಾಣದಲ್ಲಿ ಗುಣಮಟ್ಟದ ಅಕ್ಕಿ, ಅವಲಕ್ಕಿ ಉತ್ಪಾದನೆ ಮತ್ತು ಮಾರಾಟ ಮಾಡಿ ಅಂತರ್ ರಾಜ್ಯದಲ್ಲಿ ಹೆಸರಾಂತ ಉದ್ದಿಮೆದಾರರಾಗಿ ಹೆಸರು ಮಾಡುತ್ತಾರೆ.
ಅಡಿಕೆ ಕೃಷಿಯಲ್ಲಿ ಕೂಡ ಯಶಸ್ವಿ ಆಗುತ್ತಾರೆ, ನಂತರ ಜಿಲ್ಲೆಯ ಮೊದಲ ಬೃಹತ್ ಕೋಲ್ಡ್ ಸ್ಟೋರೇಜ್ ನಿಮಿ೯ಸಿ ಈ ಭಾಗದ ಒಣ ಶುಂಠಿ ವ್ಯಾಪರಸ್ಥರಿಗೆ ಅನುಕೂಲ ಮಾಡಿದ್ದರಿಂದ ಆನಂದಪುರಂ ಶುಂಠಿ ಉದ್ಯಮದ ಹಬ್ ಆಗಲು ಕಾರಣಕತ೯ರಾದರು.
ಇತ್ತೀಚಿಗೆ ಸಣ್ಣ ವಯಸ್ಸಲ್ಲೇ ಅನಾರೋಗ್ಯದಿಂದ ಉದ್ಯಮದಿಂದ ಕ್ರಮೇಣ ನಿವೃತ್ತರಾದರು ಇದರಿಂದ ಆನಂದಪುರದಲ್ಲಿ ಮುಂದಿನ ದಿನಗಳಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸುವ ಇವರ ಅನೇಕ ಕನಸಿನ ಉದ್ದಿಮೆಗಳು ನಿಂತು ಹೋದವು.
ಆನಂದಪುರದ ಹಳ್ಳಿಯ ಕೃಷಿ ಕುಟುಂಬದ ಬಡ ಯುವಕ ಈ ಎಲ್ಲಾ ಕೈಗಾರಿಕಾ ಕ್ರಾಂತಿ ಮಾಡಿ ಮುಂದಿನ ದಿನದಲ್ಲಿ ಈ ಮಾಗ೯ದಲ್ಲಿ ಭವಿಷ್ಯ ಹುಡುಕುವ ಭಾವಿ ಉದ್ದಿಮೆದಾರರಿಗೆ ರೋಲ್ ಮಾಡೆಲ್ ಆಗಿದ್ದಾರೆ.
ದಿವಗಂತ ಸುಬ್ರಾವ್ ರ ಆತ್ಮಕ್ಕೆ ಸದ್ಗತಿ ಮತ್ತು ಸ್ವಗ೯ ಪ್ರಾಪ್ತಿಯು ಸಿಗಲಿ ಎಂದು ದೇವರಲ್ಲಿ ಪ್ರಾಥಿ೯ಸುತ್ತೇನೆ.
ಕೆ.ಅರುಣ್ ಪ್ರಸಾದ್
ಮಾಜಿ ಜಿಲ್ಲಾ ಪಂಚಾಯಿತ ಸದಸ್ಯ
ಆನಂದಪುರಂ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment