* ಆನಂದಪುರದ ಖ್ಯಾತ ಉದ್ದಿಮೆದಾರ ಟಿ.ಎನ್.ಸುಬ್ಬರಾವ್ ಗೆ ನುಡಿ ನಮನ *
ಸುಬ್ಬರಾವ್ ಸ್ವಯಂ ಉದ್ಯೋಗ ಮಾಡುವ ಗ್ರಾಮೀಣ ಪ್ರದೇಶದ ಸ್ವಯಂ ಉದ್ಯೋಗಿಗಳಿಗೆ ರೋಲ್ ಮಾಡೆಲ್ ಅಂತ ಬರೆದಿದ್ದೆ, ನಿನ್ನೆ ಅವರ ನುಡಿ ನಮನ ಕಾಯ೯ಕ್ರಮದಲ್ಲಿ ಅವರ ಶ್ರೀಮತಿಯವರ ಸಹೋದರ ಪ್ರೌಡ ಶಾಲಾ ಶಿಕ್ಷಕ, ಬರಹಗಾರರಾದ ಎನ್.ಡಿ.ಹೆಗ್ಗಡೆ ಒಂದು 40 ಪುಟದ ಸಂಕ್ಷಿಪ್ತ ಮತ್ತು ಸವಿವರವಾದ ಒಂದು ಸುಬ್ಬರಾವ್ ರ ಸ್ಮರಣಾಥ೯ "ಆನಂದದ ಕಣ್ಮಣಿ ಸುಬ್ಬರಾಯರು" ಎ೦ಬ ಪುಸ್ತಕ ಮುದ್ರಿಸಿ ಸುಬ್ಬರಾವರ ಅಭಿಮಾನಿಗಳಿಗೆ, ಮಿತ್ರರಿಗೆ ಮತ್ತು ಬಂದುಗಳಿಗೆ ವಿತರಿಸಿದ್ದಾರೆ.
ಇದರಲ್ಲಿ ಸುಬ್ಬರಾಯರ ಜೀವನ ಯಾತ್ರೆ ಮತ್ತು ಅನೇಕರಿಗೆ ಗೊತ್ತಿಲ್ಲದ ಅವರ ಸಾದನೆ ನಮೂದಿಸಿದ್ದಾರೆ.
ಶೂನ್ಯ ಬಂಡವಾಳದಿ೦ದ ಕೋಟ್ಯಾದಿಪತಿ ಆದ ಸುಬ್ಬರಾವ್ ರ ಬಗ್ಗೆ ಈ ಸ್ಮರಣ ಸಂಚಿಕೆ ಬರೆದು ಪ್ರಕಟಿಸಲು ಎನ್.ಡಿ.ಹೆಗ್ಗಡೆ ಸಹೋದರಿ (ಸುಬ್ಬರಾವ್ ರ ಪತ್ನಿ) ಮತ್ತು ಪುತ್ರ ಸಹಾಯ ಸಹಕಾರ ನೀಡಿದ್ದು ಅಭಿನಂದನೀಯ, ಶಿವಮೊಗ್ಗದ ರಾಯಲ್ ಪ್ರಿOಟಿಂಗ್ ಪ್ರೆಸ್ ನ ಮಾದವಾಚಾಯ೯ರು ಸುಂದರವಾಗಿ ಮುದ್ರಿಸಿದ್ದಾರೆ.
ನಿನ್ನೆಯ ಕಾಯ೯ಕ್ರಮಕ್ಕೆ ಎನ್.ಡಿ.ಹೆಗ್ಗಡೆ ಮತ್ತು ಸಂಸ್ಥೆಯ ಈವರೆಗಿನ ಏಳಿಗೆಗೆ ಬೆನ್ನು ಮೂಳೆಯಂತೆ ಕಾಯ೯ನಿವ೯ಹಿಸುತ್ತಿರುವ ಆನಂದಪುರದ ಕ್ರೀಡಾಪಟು ಪ್ರಾಣೆಶ್ ಬಂದು ಕರೆದಿದ್ದರು ನಾನು ಪುತ್ತೂರಿಗೆ ಹೋಗಬೇಕಾದ್ದರಿಂದ ಬಾಗವಹಿಸಲಾಗಲಿಲ್ಲ, ಸುಬ್ಬರಾವ್ ರ ಪಿಯುಸಿ ಕ್ಲಾಸ್ ಮೇಟ್ ಆದ ನನ್ನ ಸಹೋದರ ನಾಗರಾಜ್ ಭಾಗವಹಿಸಿ ತಿಳಿಸಿದ್ದೇನೆಂದರೆ ಎನ್.ಡಿ.ಹೆಗ್ಗಡೆ ಅಚ್ಚುಕಟ್ಟಾಗಿ ಕಾಯ೯ಕ್ರಮ ನಡೆಸಿದರು, ಪ್ರಾಣೆಶ್ ಅತ್ಯುತ್ತಮವಾಗಿ ನುಡಿನಮನ ಅಪಿ೯ಸಿದರಂತೆ.
ಪ್ರತಿ ತಿಂಗಳು ಮೆಸ್ಕಾಂಗೆ 30 ರಿಂದ 35 ಲಕ್ಷ ಹಣ ಪಾವತಿಸುವ, ಪ್ರತಿ ವಷ೯ GST, Income Tax ಅಂತ 5 ರಿಂದ 6 ಕೋಟಿ ಹಣ ಪಾವತಿಸುವ ಕೊಂಗನಾಸಳ್ಳಿ ಎಂಬ ಕುಗ್ರಾಮದ ಸುಬ್ಬರಾವ್ ಬೆಂಗಳೂರಿನಂತ ಶಹರ ಸೇರದೆ ಆನಂದಪುರದ೦ತ ಹೋಬಳಿ ಕೇ೦ದ್ರದಲ್ಲಿ ಯಶಸ್ವಿ ಉದ್ದಿಮೆದಾರರಾಗಿ ಸಾದನೆ ಮಾಡಿದ್ದು ದೊಡ್ಡ ಸೋಜಿಗ.
ಏನೂ ಸಾದಿಸದಂತವರಿಗೆ ಪ್ರಶಸ್ತಿ, ಸನ್ಮಾನ ಮತ್ತು ಡಾಕ್ಟರೇಟ್ ದಯಪಾಲಿಸುವ ಸಕಾ೯ರ ಮತ್ತು ಸಮಾಜಕ್ಕೆ ಸುಬ್ಬರಾವ್ ರಂತ ಸಾದಕರು ಒಂದು ಸವಾಲು ಕೂಡ, ಸುಬ್ಬರಾಯರ ನುಡಿ ನಮನ ಯಶಸ್ವಿಗೊಳಿಸಿದ ಎನ್.ಡಿ.ಹೆಗ್ಗಡೆ ಮತ್ತು ಪ್ರಾಣೆಶ್ ಅಭಿನಂದನೀಯರು.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment