* ಕೇರಳಿಗೆ ಕೆ.ಮೊಹಿದೀನ್ ಕಾಕ ಕನ್ನಡದ ಎಲ್ಲಾ ಪತ್ರಿಕೆ ಪ್ರತಿ ನಿತ್ಯ ಓದಿಯೇ ಮುಂದಿನ ಕೆಲಸ ಮಾಡುವವರು ನಿನ್ನೆ ಇಹಲೋಕ ತ್ಯಜಿಸಿದರು*
ಆನಂದಪುರಂಗೆ ಮೊದಲು ಬಂದ ಮಲೆಯಾಳದ ವಲಸಿಗರಲ್ಲಿ ಮೊಹಿದೀನ್ ಕಾಕ ಕನ್ನಡ ಕಲಿತು ಎಲ್ಲಾ ಪತ್ರಿಕೆ ಓದಿ ಮುಂದಿನ ಕೆಲಸ ಪ್ರಾರಂಬಿಸುವ ನಿತ್ಯ ಕಾಯಕ ಹೊಂದಿದ್ದರು.
ಶುಂಠಿ ವ್ಯಾಪಾರಿ ರಾಮಟ್ಟ, ಪ೦ಚಾಯಿತಿ ಸದಸ್ಯರಾದ ಕರುಣಾಕರನ್, ಮಿಲ್ಟ್ರಿ ಹೋಟೆಲ್ ನಾಯರ್, ನಾಟಾ ಕೊಯ್ಯುವ ಲೋಹಿತಾಶ್ವಾ, ಲಾರಿ ಮಾಲಿಕರಾದ ಅಚ್ಚುತಾಚಾರ್, ಗಾರೆ ಕೆಲಸದ ಗೋಪಿ ಮೇಸ್ತ್ರಿ ಇವರೆಲ್ಲ ಅವರ ಬಾಷೆ, ಆಚರಣೆ ಮತ್ತು ಅವರ ಆಹಾರ ಪದ್ಧತಿಯಿಂದ ನಾವು ಚಿಕ್ಕವರಿದ್ದಾಗ ಬಿನ್ನರಾಗಿ ಕಾಣುತ್ತಿದ್ದರು, ಇವರೆಲ್ಲರ ಮಲೆಯಾಳಿ ಎಕ್ಸೆ೦ಟ್ ನ ಕನ್ನಡ ಬೇರೆ ಅಥ೯ ನೀಡಿ ನಗು ಸುರಿಸುತ್ತಿತ್ತು.
ಮೊಯಿದಿನ್ ಕಾಕ ಆನಂದಪುರಂ ಬಸ್ ಸ್ಟ್ಯಾ೦ಡ್ ಹತ್ತಿರ ಅನೇಕ ವಷ೯ ಎಳನೀರು ಅಂಗಡಿ ನಡೆಸಿದರು ಆಗ ಎದುರಿನ ಸಕಾ೯ರಿ ಕನಕಮ್ಮಳ ಆಸ್ಪತ್ರೆಯಲ್ಲಿ ಒಳ್ಳೆಯ ಸೇವಾ ಮನೋಭಾವದ ವೈದ್ಯರು ಇರುತ್ತಿದ್ದರು ಇಡೀ ಆಸ್ಪತ್ರೆ ರೋಗಿಗಳಿಂದ ತುಂಬಿರುತ್ತಿತ್ತು, ರೋಗಿಗಳನ್ನ ನೋಡಲು ಬರುವ ಅಂದು ಬಂದುಗಳು ಕೈಯಲ್ಲಿ ಎಳನೀರು ಒಯ್ಯುವ ಪದ್ದತಿ ಇತ್ತು ಹಾಗಾಗಿ ಕಾಕನ ಎಳನೀರು ವ್ಯಾಪಾರ ಜೋರಿತ್ತು.
ಮಕ್ಕಳನ್ನ ಕನ್ನಡ ಮಾಧ್ಯಮದಲ್ಲೇ ಓದಿಸಿದರು ಅವರೂ ಅತ್ಯುತ್ತಮವಾಗಿ ಓದಿದರು, ಮಗ ಮೊಹಮದ್ ನನ್ನ ಕ್ಲಾಸ್ ಮೇಟ್ ಅವರು ಸಾಗರದ ಪ್ರಖ್ಯಾತ ಉದ್ದಿಮೆದಾರ, ರಾಜಕಾರಣಿ ಆಗಿದ್ದ ಕೋಯಾ ಸಾಹೇಬರ ಅಳಿಯ ಈಗ ಕ್ಯಾಲಿಕಟ್ ನಲ್ಲಿದ್ದಾರೆ ಒಳ್ಳೆಯ ಬರಹಗಾರ ಕೂಡ.
ಮಗಳು ಮರಿಯಮ್ ನನ್ನ ಊರಾದ ಯಡೇಹಳ್ಳಿಯ ಸಕಾ೯ರಿ ಶಾಲೆಯ ಮುಖ್ಯಪಾದ್ಯಾನಿ, ಕಾಕ ಎಲ್ಲಾ ವ್ಯವಹಾರದಿ೦ದ ನಿವೃತ್ತರಾಗಿ ನಿತ್ಯ ನಮಾಜು, ಎಲ್ಲಾ ಪತ್ರಿಕೆಗಳ ಓದು, ಚಹಾ ಸಿಗರೇಟು ಸೇದುತ್ತಾ ಸೈಕಲ್ ನಲ್ಲೆ ತಿರುಗುತ್ತಿದ್ದರು.
ಕಮ್ಯುನಿಸ್ಟ್ ಸಿದ್ದಾoತ ಒಪ್ಪಿದ್ದ ಕಾಕ ಜಾತ್ಯಾತೀತ ಜನತಾದಳದ ಅಭಿಮಾನಿ ಮತ್ತು ಪ್ರಾಮಾಣಿಕ ಕಾಯ೯ಕತ೯ರಾಗಿದ್ದರು.ಪ್ರತಿ ಚುನಾವಣೆಯಲ್ಲಿ ಪ್ರತಿ ಮನೆಗೆ ಜಾತ್ಯಾತಿತ ಜನತಾದಳದ ಕರ ಪತ್ರ ತಲುಪಿಸುವ ಕೆಲಸ ಇವರದ್ದು ಈ ಸೇವೆಗೆ ಪಕ್ಷದ ಹಣ ಕೊಟ್ಟರೆ ನಯವಾಗಿ ನಿರಾಕರಿಸುತ್ತಿದ್ದರು.
ಇವರ ಜೀವನದ ಕಥೆ ಒಮ್ಮೆ ಕೇಳಿದ್ದೆ, ಅವರು ಹೇಳಿದ ಪ್ರಕಾರ ಸಣ್ಣ ವಯಸ್ಸಲ್ಲಿ ತಂದೆ ತಾಯಿ ಕಳೆದುಕೊಳ್ಳುತ್ತಾರೆ, ಇವರ ಸಹೋದರ ಮತ್ತು ಸಹೋದರಿ ಕಷ್ಟದ ಜೀವನ ನಡೆಸಿದ್ದಾಗಿ ಹೇಳಿದ್ದರು.
ಎಲ್ಲ ದಮ೯ದವರೊಂದಿಗೆ ಸಹಜೀವನ ಸಹಬಾಳುವೆ ನಡೆಸಿ ಕನ್ನಡಿಗರೆ ಕನ್ನಡ ಪತ್ರಿಕೆ ಓದದ ಈ ದಿನದಲ್ಲಿ ನಿತ್ಯ ಆನಂದಪುರಂ ಗೆ ಬರುವ ಎಲ್ಲಾ ಪತ್ರಿಕೆ ಓದಿ ವಿಮಶೆ೯ ಮಾಡುತ್ತಿದ್ದ ಕಾಕ ಒಂದು ನೆನಪು ಮಾತ್ರ.
ಇವರ ಆತ್ಮಕ್ಕೆ ಶಾಂತಿ ಸದ್ಗತಿ ದೇವರು ದಯಪಾಲಿಸಲಿ ಎಂದು ದೇವರಲ್ಲಿ ಪ್ರಾಥಿ೯ಸುತ್ತೇನೆ.
ಕೆ.ಅರುಣ್ ಪ್ರಸಾದ್
ಮಾಜಿ ಜಿ.ಪಂ. ಸದಸ್ಯ
ಆನಂದಪುರಂ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment