* ಮಲೆನಾಡಿನ ಸ್ವಾದಿಷ್ಟ ಆಹಾರಕ್ಕೆ ಬೆಲೆ ಕಟ್ಟಲಾಗುವುದೇ?*
ಇವತ್ತು ಬೆಳಿಗ್ಗೆ ನಮ್ಮ ಅಡುಗೆ ಮನೆಯಲ್ಲಿ ವಿಶೇಷ ಅಡುಗೆಯ ಘಮ.... ಕಾರಣ
ಕಳಲೆ ಪಲ್ಯದೊಂದಿಗೆ ತಟ್ಟೆ ಇಡ್ಲಿ,
ಕೆಸುವಿನ ಎಲೆಯ ಪತ್ರೊಡೆ, ಹುರುಳಿಕಾಳಿನ ಹುಳ್ಳಿ ಕಟ್ಟು, ಹಲಸಿನ ಹಣ್ಣು, ಜೊತೆಗೆ ಅಕ್ಕಿ ಹಪ್ಪಳ, ಮಾವಿನ ಮಿಡಿ ಉಪ್ಪಿನ ಕಾಯಿ, ಹಲಸಿನ ಸಿಹಿ ಹಪ್ಪಳ, ಸಂಡಿಗೆ ಮೆಣಸು ಹೀಗೆ ಮಲೆನಾಡಿನ ಪಶ್ಚಿಮ ಘಟ್ಟದ ಆರಿದ್ರಾ ಮಳೆಯಲ್ಲಿ ಊಟಕ್ಕೆ ಒಂದು ಸ್ವಾದಿಷ್ಟವಾದ ಪಾರಂಪರಿಕವಾದ ರುಚಿ, ಘಮಗಳು ಆವರಿಸಿತ್ತು.
ಹಣ ಕೊಟ್ಟರೂ ಸಿಗದ, ಮಲೆನಾಡಿಗರಿಗೆ ಮಾತ್ರ ಗೊತ್ತಿರುವ ಈ ಆಹಾರಗಳು ಇವತ್ತು ಮಲೆನಾಡಿಗರ ಅಡುಗೆ ಮನೆಗಳಿಂದಲೂ ನಿಗ೯ಮಿಸಿದೆ ಇವುಗಳ ಜಾಗಕ್ಕೆ ರೆಡಿಮೇಡ್ ಮಸಾಲದಿಂದ ಹಿಡಿದು ಮ್ಯಾಗಿವರೆಗೆ ಅಕ್ರಮಿಸಿದೆ.
ಅಸಲಿಗೆ ಇವುಗಳಿಗೆ ಬೆಲೆ ಕಟ್ಟಲಾಗುವುದಿಲ್ಲ! ಆದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಇವುಗಳನ್ನ ಸಂಗ್ರಹಿಸಿ ಹೆಚ್ಚು ಖಚಿ೯ಲ್ಲದೆ ರುಚಿಯಾದ ಅಡುಗೆ ತಯಾರಿಸಬಹುದು.
ಇದು ಶುಚಿ ರುಚಿ ಜೊತೆಗೆ ನೈಸಗಿ೯ಕವಾಗಿ ಸಿಗುವ ಸಾವಯವ ಆಹಾರ ಪದಾಥ೯ ಕೂಡ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment