ಶರಾವತಿ ಉಳಿಸುವ ಭರದಲ್ಲಿ ಬೆಂಗಳೂರು ವಿರೋದಿಸುವ ಅನೇಕ ಹೇಳಿಕೆಗಳು ನಮ್ಮ ರಾಜದಾನಿ ಬೆಂಗಳೂರಿಗರಿಗೆ ಒಂದು ರೀತಿಯ ಭ್ರಮ ನಿರಸನ, ಮಲೆನಾಡಿಗರು ಬೆಂಗಳೂರನ್ನ ಈ ರೀತಿ ವಿರೋದಿಸುವುದು ಸರಿಯೇ ಅಂತ ಇಲ್ಲಿ೦ದ ಉದ್ಯೋಗ ಅರಸಿ ಅಲ್ಲಿ ನೆಲೆ ಕಂಡ ಅನೇಕರು ಪ್ರತಿಕ್ರಿಯಿಸಿದ್ದಾರೆ, ಅದು ಸರಿ ಕೂಡ ಇಡೀ ರಾಜ್ಯದ ಜನ ರಾಜದಾನಿಗೆ ಅವಕಾಶ ಅರಸಿ ಬರುವಾಗ ಅವರನ್ನೆಲ್ಲ ಉಳಿಸಲಿಕ್ಕಾಗಿ ಬೆಂಗಳೂರು ಕೂಡ ತನ್ನ ಸ್ವoತಿಕೆ ಮತ್ತು ಸಂಪನ್ಮೂಲಗಳನ್ನ ಕಳೆದುಕೊಂಡಿದೆ ಈಗ ಅಲ್ಲಿ ನೀರು ಕೇಳುವವರು ಯಾರು? ಅವರೆಲ್ಲ ನಮ್ಮ ಊರವರೆ ಅಕ್ಕಪಕ್ಕದವರೇ, ಹಾಗಂತ ಅವರೇನು ಶರಾವತಿಯಿಂದಲೇ ನೀರು ತನ್ನಿ ಅಂತ ಹೇಳಿಲ್ಲ, ಕೇಳಿಲ್ಲ!, ಅವರೂ ಕೂಡ ಶರಾವತಿ ಉಳಿಸಲು ಕೈ ಜೋಡಿಸುವವರೇ.
ಶರಾವತಿ ನೀರು ಸಾಗರಕ್ಕೆ ತರುವಾಗ ನಾವಾರು ವಿರೋದಿಸಲಿಲ್ಲ ಇದರಿಂದ ಮಲೆನಾಡಿಗರು ಸ್ವಾಥಿ೯ಗಳಲ್ಲವೇ ಎಂಬ ಬಾವನೆ ಕೂಡ ಬೆಂಗಳೂರು ನಿವಾಸಿಗಳಲ್ಲಿ ಉ೦ಟಾಗಿದೆ.
ಶರಾವತಿ ನದಿ ಉಳಿಯಬೇಕು ಉಳಿಸಬೇಕು ಎಂಬ ಕಾಳಜಿ ಮತ್ತು ಅವಸರದಲ್ಲಿ ಬೆಂಗಳೂರಿಗರನ್ನ ಅವಮಾನಿಸುವಂತ ಕೆಲ ಮಾತುಗಳು ಬಂದಿರುವುದು ಅನೇಕ ತಪ್ಪು ಕಲ್ಪನೆಗೆ ಕಾರಣ ಆಗಿರಬಹುದು ಇದು ಈಗ ಬೆಂಗಳೂರಿಗರು ವಸ೯ಸ್ ಮಲೆನಾಡಿಗರೆಂಬ ಛಾಯ ಯುದ್ದ ಪ್ರಾರಂಭ ಆಗಿದೆ ಇದರಿಂದ ಅವರ ಸವಾಲುಗಳು ಬಹು ಜನರು ಸರಿ ಎಂದು ತಲೆ ತೂಗುವಂತೆ ಪ್ರಯೋಗಿಸುತ್ತಿದ್ದಾರೆ, ಶರಾವತಿ ನದಿ ನೀರು ವಿದ್ಯುತ್ ಉತ್ಪಾದಿಸುವ ಮೊದಲೇ ಸಾಗರಕ್ಕೆ ಹೇಗೆ ಒಯ್ಯಲು ಬಿಟ್ಟರು? ಈಗ ವಿದ್ಯುತ್ ಉತ್ಪಾದಿಸಿದ ನಂತರ ಸಮುದ್ರಕ್ಕೆ ಸೇರುವ 310 TMC ಯಲ್ಲಿ 10 TMC ಬೆಂಗಳೂರಿಗೆ ಯಾಕೆ ಒಯ್ಯ ಬಾರದು, ಸಮುದ್ರದ ನೀರಿಗೂ ವಿರೋದವೇ? ಎಂಬ ತಕ೯ ಪ್ರಾರಂಭ ಆಗಿದೆ.
ಇದನ್ನ ಉಪ ಮುಖ್ಯಮಂತ್ರಿ (ಕಾ೦ಗ್ರೆಸ್) ಬಹಿರಂಗ ಹೇಳಿಕೆ ಕೊಟ್ಟಿದ್ದು ಆ ಪಕ್ಷಕ್ಕೆ ಮಲೆನಾಡಿನಲ್ಲಿ ದೊಡ್ಡ ಹೊಡೆತವೇ ಉಂಟಾಗುವುದರಲ್ಲಿ ಅನುಮಾನ ಇಲ್ಲ ಅಷ್ಟಕ್ಕೂ ಈ ಯೋಜನೆ ಜಾರಿ ಆದೀತಾ? ಗೊತ್ತಿಲ್ಲ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment