*ಸೋಷಿಯಲ್ ಮೀಡಿಯಾದ ನಂಟು*
ಮೊನ್ನೆ ಉಪ್ಪಿನಂಗಡಿಯ ಕಿರಣ್ ಮನ್ನಾಜೆ ಎಂಬ FB ಗೆಳೆಯರು ಪುತ್ತೂರಿನ ಶಂಕರ ಭಟ್ಟರ 2ವಷ೯ದ ಹಿಂದಿನ ಹುಟ್ಟುಹಬ್ಬದ೦ದು ರಿಪ್ಪನ್ ಪೇಟೆಯ ಮಲ್ಲಿಕಾ ವೆಜ್ ಲ್ಲಿ ಬೋಜನ ಮಾಡಿದ ನೆನಪಿನ ಪೋಟೋ ಅಂತ ಹಾಕಿದ್ದರು ಆದರೆ ಅದು ಆನಂದಪುರದ ನಮ್ಮ ಮಲ್ಲಿಕಾ ವೆಜ್ ಎಂದು ಉತ್ತರಿಸಿದ್ದೆ.
ಅದಕ್ಕೆ ಅವರು ಈ ಮಾಗ೯ದಲ್ಲಿ ಹೋಗುವಾಗ ಯಾವತ್ತೂ ಇದೇ ರೆಸ್ಟೋರೆಂಟನಲ್ಲಿ ಉಟೋಪಚಾರ ಮಾಡುತ್ತೇವೆ ಇದು ತಮ್ಮದೆಂದು ತಿಳಿದು ಸಂತೋಷ ಆಯಿತು ಅಂತ ಉತ್ತರ ನೀಡಿದ್ದರು.
ಇನ್ನೊಮ್ಮೆ ಈ ಕಡೆ ಬಂದಾಗ ಬೇಟಿ ಮಾಡಲು ವಿನಂತಿಸಿದ್ದೆ, ಇವತ್ತು ಅಕಸ್ಮಿಕವಾಗಿ ಮದ್ಯಾಹನ ಊಟಕ್ಕೆ ನಮ್ಮ ಮಲ್ಲಿಕಾ ವೆಜ್ ಗೆ ತಲುಪಿದ್ದರು , ಪರಸ್ಪರ ಪರಿಚಯಿಸಿಕೊಂಡೆವು ಮೊನ್ನೆಯ ಶಂಕರ ಭಟ್ಟರ ಹುಟ್ಟುಹಬ್ಬಕ್ಕೆ ತಡವಾಗಿ ಶುಭಾಷಯ ತಿಳಿಸಿದೆ ಈ ಎಲ್ಲಾ ನೆನಪಿಗಾಗಿ ನನ್ನ ಆತಿಥ್ಯ ಸ್ವೀಕರಿಸಲು ಒತ್ತಾಯಿಸಿ ಒಪ್ಪಿಸಿದೆ, ಈಗ ಸ್ವಣ೯ವಲ್ಲಿ ಮಠ ತಲುಪಿದವರು ಆತಿಥ್ಯಕ್ಕೆ ಪ್ರತಿ ವಂದನೆ ತಿಳಿಸಿದ್ದಾರೆ.
ಟೇಸ್ಟಿಂಗ್ ಪೌಡರ್, ಅಜಿನೋಮೊಟೊ, ಕೃತಕ ಬಣ್ಣ, ಬಳಸಿದ ಎಣ್ಣೆ, ನಕಲಿ ಚಹಾ ಪುಡಿಗಳನ್ನ ಕಟ್ಟುನಿಟ್ಟಾಗಿ ನಿಷೇದ ಮಾಡಿರುವ ನಮ್ಮ MALLIKA VEG ಗೆ ದೂರ ದೂರದಿಂದಲೂ ಹುಡುಕಿ ಬರುತ್ತಾರೆ.
ಇವತ್ತಿನ ಅತಿಥಿಗಳನ್ನ ಮುಖತ: ಬೇಟಿ ಮಾಡಿಸಿದಕ್ಕಾಗಿ Facebookಗೆ ಅಭಾರಿ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment