# ಸಾಗರದ ಪುರಾತನ ಗಣಪತಿ ದೇವಸ್ಥಾನದ ಅಚ೯ಕರ 4 ತಲೆಮಾರುಗಳ ಇತಿಹಾಸ ಈಗ ಪುಸ್ತಕವಾಗಿ#
ಎರೆಡು ವಷ೯ದ ಹಿಂದೆ ಸಾಗರದ ಪತ್ರಕತ೯ ಮಿತ್ರ ದೀಪಕ್ ಸಾಗರ್ ಪೋನಾಯಿಸಿ ಪ್ರತಿ 12 ವಷ೯ಕ್ಕೆ ಒಮ್ಮೆ ಪಶ್ಚಿಮ ಘಟ್ಟದಲ್ಲಿ ದೂರದ ನಾಸಿಕ್ ನಿಂದ ಕರಾವಳಿಯ ಮಂಗಳೂರಿನ ಕದ್ರಿಗೆ ತಲುಪುವ "ಬಾರ ಪಂಥ್ " ಯಾತ್ರೆಯ ಬಗ್ಗೆ ನಾನು ಬರೆದ ಲೇಖನ ಯಾವುದೋ ಒಂದು ಪುಸ್ತಕದಲ್ಲಿ ಬಳಸಿಕೊಳ್ಳಬಹುದಾ? ಎಂದು ಕೇಳಿದ್ದರು, ದಾರಾಳವಾಗಿ ಬಳಸಿಕೊಳ್ಳಿ ಎಂದಿದ್ದೆ ಕಾರಣ ಸುಮಾರು 34 ವಷ೯ ಸಿದ್ದಾಪುರದ ಕಮಲಶಿಲೆ ಹತ್ತಿರದ ಹಲವಾರಿ ಮಠದ ಪಟ್ಟದ ಸ್ವಾಮಿಗಳಾಗಿದ್ದ ಸೋಮನಾಥ ಬಾಬರವರು ಈ ಬಾರ ಪಂಥ ಯಾತ್ರೆ ಬಗ್ಗೆ ಹೆಚ್ಚು ಪ್ರಚಾರ ಮತ್ತು ಪ್ರಸಾರ ಮಾಡಲು ನನಗೆ ಆದೇಶಿಸಿದ್ದರು.
ನಿನ್ನೆ ಬೆಳಿಗ್ಗೆ ಪತ್ರಕತ೯ರ ದಿನಾಚಾರಣೆಯ೦ದು ದೀಪಕ್ ಸಾಗರ್ ಮತ್ತು ಅವರ ಪತ್ನಿ ಶ್ರೀಮತಿ ಸಹನಾ ಈ ಪುಸ್ತಕ ಗೌರವ ಪ್ರತಿಯಾಗಿ ನೀಡಿದರು.
*ಶ್ರೀಮಹಾಗಣಪತಿ ದೇವಾಲಯದ ಇತಿಹಾಸ* ಎಂಬ ಈ ಪ್ರಸ್ತಕ ಸಾಗರದ ಪುರಾತನ ಮಹಾಗಣಪತಿ ದೇವಸ್ಥಾನದ ಪ್ರದಾನ ಅಚ೯ಕ ವಿದ್ವಾನ್ ಪಿ.ಎಲ್.ಗಜಾನನ ಭಟ್ ರ ಪುತ್ರಿ ಶ್ರೀಮತಿ ಸಹನಾ ಸಂಪಾದಿಸಿ ಪ್ರಕಟಿಸಿದ್ದಾರೆ.
ಸುಮಾರು ನಾಲ್ಕು ಶತಮಾನದ ಹಿಂದೆ ಕೆಳದಿ ಅರಸರಾದ ವೆಂಕಟಪ್ಪ ನಾಯಕರು (ದೀಘ೯ ಕಾಲ ರಾಜ್ಯ ಬಾರ ಮಾಡಿದ ಅರಸರು) ಈಗಿನ ಸಾಗರ ಪಟ್ಟಣದ ನಿಮಾ೯ತರು (ಸದಾಶಿವ ಸಾಗರ ಆಗಿನ ಹೆಸರು, ಅವರ ಅಜ್ಜ ರಾಜ ಸದಾಶಿವರ ಸ್ಮರಣಾಥ೯) ಗಣಪತಿ ದೇವಾಲಯ ಕೂಡ ಅವರೇ ನಿಮಿ೯ಸಿದರೆಂಬ ಪ್ರತೀತಿ ಇದೆ ಆದರೆ ಬಾರಾ ಪಂಥದ ಮೂಲ ಉತ್ತರ ಪ್ರದೇಶದ ಗೋರಕ್ ಪುರದ ಗೋರಕ್ ನಾಥ ಮಠ (ಇದರ ಮಹಾಂತರು ಯೋಗಿ ಆದಿತ್ಯನಾಥರು ಈಗ ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳು, ಅವರು ಈ ಯಾತ್ರೆಯಲ್ಲಿ ಭಾಗವಹಿಸಿದ್ದರು ಎಂಬ ಸುದ್ದಿ ಇದೆ ಆದರೆ ಯಾವಾಗ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ) ಪ್ರತಿ 12 ವಷ೯ಕ್ಕೆ ನಾಸಿಕ್ ನಿಂದ ಹೊರಡುವ ಯಾತ್ರೆ ಸಾಗರದ ಗಣಪತಿ ದೇವಾಲಯದಲ್ಲಿ 2 ರಿಂದ 3 ದಿನ ತಂಗುತ್ತದೆ, ಈ ಯಾತ್ರೆಯಲ್ಲಿ ಭಾಗವಹಿಸುವ ಅವಕಾಶ ಸನ್ಯಾಸಿ ಆಗಿ 78 ಜನ್ಮ ತಾಳಿದವರಿಗೆ ಸಿಗುತ್ತದೆ ಎಂಬ ನಂಬಿಕೆ ಅವರದ್ದು, ಮಚ್ಚೇoದ್ರನಾಥರ ಕಾಲದಿಂದ ಈ ಯಾತ್ರೆ ನಡೆಯುತ್ತಿದೆ ಎನ್ನುತ್ತಾರೆ ಹಾಗಾದರೆ ಸಾಗರದ ಗಣಪತಿ ದೇವಸ್ಥಾನ ಅತ್ಯಂತ ಪುರಾತನವಾದದ್ದಾಗಿರ ಬೇಕು ಎನ್ನುವ ತಕ೯ ಕೂಡ.
ಈ ದೇವಾಲಯದಲ್ಲಿನ ಶತಮಾನದ ಹಿಂದಿನ ಪರಿಸ್ಥಿತಿ, ಪರಿಸರ ಮತ್ತು ಆ ದಿನದಲ್ಲಿನ ಸಾಗರದ ಜನ ಜೀವನದ ಬಗ್ಗೆಯೂ ಮಾಹಿತಿ ಮತ್ತು ಚಿತ್ರಗಳು ಈ ಪ್ರಸ್ತಕದಲ್ಲಿ ದಾಖಲಿಸಿದ್ದಾರೆ.
ಅಚ೯ಕ ಕುಟುಂಬಗಳ ಶ್ರದ್ದೆ, ಭಕ್ತಿ ಮತ್ತು ಬದ್ದತೆಗಳು ಅವರ ಕಷ್ಟ ಆಗಿನ ಕಾಲದ ರೀತಿ ರಿವಾಜು ಮತ್ತು ಕಟ್ಟಲೆಗಳು, ಆ ಕಾಲದಲ್ಲಿ ತಮ್ಮ ಕುಟುಂಬಕ್ಕೆ ತಲತಲಾಂತರದಿoದ ಬಂದ ಅಚ೯ಕ ವೃತ್ತಿ ಕೈ ತಪ್ಪುವ೦ತಾದಾಗ ತುಂಬಾ ಶ್ರಮ ಪಟ್ಟು ಕಾನೂನು ಹೋರಾಟವು ಮಾಡಿ ಗೆಲ್ಲುವ ಸಹನಾರ ಮುತ್ತಜ್ಜಿ ತುಂಗಮ್ಮ ರಾಮಚಂದ್ರ ಭಟ್ಟರು ಸ್ತುತ್ಯಾತರು ಅವರ ಹೋರಾಟ ಇಲ್ಲದಿದ್ದರೆ ಈ ಪುಸ್ತಕ ಪ್ರಕಟನೆ ಕೂಡ ಆಗುತ್ತಿರಲಿಲ್ಲ.
ಗಣಪತಿ ದೇವಸ್ಥಾನ, ಅದರ ಕೆರೆ ದಂಡೆ ಪುರಾತನವಾದದ್ದು ಮತ್ತು ಇತಿಹಾಸದ ತಳಕು ಇರುವಂತದ್ದು ಅದನ್ನ ಅಚ೯ಕ ಕುಟುಂಬದ ಮಸೂರದಿಂದ ಇಣುಕು ಹಾಕುವ ಈ ಪ್ರಯತ್ನ ಪ್ರಶಂಸಾಹ೯.
ಇವತ್ತಿನ ಈ ಪುಸ್ತಕ ಮುಂದಿನ ತಲೆಮಾರಿಗೆ ಒಂದು ಉಪಯುಕ್ತ ಮಾಹಿತಿ ಗ್ರಂಥವಾಗಲಿದೆ.
ಈ ಪುಸ್ತಕದ ಪ್ರತಿಗಾಗಿ ದೀಪಕ್ ಸಾಗರನ್ನ ಸಂಪಕಿ೯ಸ ಬಹುದು ಅವರ ಸೆಲ್ ನಂಬರ್ 94481 54224.
ವಿಮಶೆ೯ ಮತ್ತು ಲೇಖನ: ಕೆ.ಅರುಣ್ ಪ್ರಸಾದ್ ಮಾಜಿ ಜಿ.ಪಂ.ಸದಸ್ಯ ಆನಂದಪುರಂ
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment