# ಸಾಗರದ ಪುರಾತನ ಗಣಪತಿ ದೇವಸ್ಥಾನದ ಅಚ೯ಕರ 4 ತಲೆಮಾರುಗಳ ಇತಿಹಾಸ ಈಗ ಪುಸ್ತಕವಾಗಿ#
ಎರೆಡು ವಷ೯ದ ಹಿಂದೆ ಸಾಗರದ ಪತ್ರಕತ೯ ಮಿತ್ರ ದೀಪಕ್ ಸಾಗರ್ ಪೋನಾಯಿಸಿ ಪ್ರತಿ 12 ವಷ೯ಕ್ಕೆ ಒಮ್ಮೆ ಪಶ್ಚಿಮ ಘಟ್ಟದಲ್ಲಿ ದೂರದ ನಾಸಿಕ್ ನಿಂದ ಕರಾವಳಿಯ ಮಂಗಳೂರಿನ ಕದ್ರಿಗೆ ತಲುಪುವ "ಬಾರ ಪಂಥ್ " ಯಾತ್ರೆಯ ಬಗ್ಗೆ ನಾನು ಬರೆದ ಲೇಖನ ಯಾವುದೋ ಒಂದು ಪುಸ್ತಕದಲ್ಲಿ ಬಳಸಿಕೊಳ್ಳಬಹುದಾ? ಎಂದು ಕೇಳಿದ್ದರು, ದಾರಾಳವಾಗಿ ಬಳಸಿಕೊಳ್ಳಿ ಎಂದಿದ್ದೆ ಕಾರಣ ಸುಮಾರು 34 ವಷ೯ ಸಿದ್ದಾಪುರದ ಕಮಲಶಿಲೆ ಹತ್ತಿರದ ಹಲವಾರಿ ಮಠದ ಪಟ್ಟದ ಸ್ವಾಮಿಗಳಾಗಿದ್ದ ಸೋಮನಾಥ ಬಾಬರವರು ಈ ಬಾರ ಪಂಥ ಯಾತ್ರೆ ಬಗ್ಗೆ ಹೆಚ್ಚು ಪ್ರಚಾರ ಮತ್ತು ಪ್ರಸಾರ ಮಾಡಲು ನನಗೆ ಆದೇಶಿಸಿದ್ದರು.
ನಿನ್ನೆ ಬೆಳಿಗ್ಗೆ ಪತ್ರಕತ೯ರ ದಿನಾಚಾರಣೆಯ೦ದು ದೀಪಕ್ ಸಾಗರ್ ಮತ್ತು ಅವರ ಪತ್ನಿ ಶ್ರೀಮತಿ ಸಹನಾ ಈ ಪುಸ್ತಕ ಗೌರವ ಪ್ರತಿಯಾಗಿ ನೀಡಿದರು.
*ಶ್ರೀಮಹಾಗಣಪತಿ ದೇವಾಲಯದ ಇತಿಹಾಸ* ಎಂಬ ಈ ಪ್ರಸ್ತಕ ಸಾಗರದ ಪುರಾತನ ಮಹಾಗಣಪತಿ ದೇವಸ್ಥಾನದ ಪ್ರದಾನ ಅಚ೯ಕ ವಿದ್ವಾನ್ ಪಿ.ಎಲ್.ಗಜಾನನ ಭಟ್ ರ ಪುತ್ರಿ ಶ್ರೀಮತಿ ಸಹನಾ ಸಂಪಾದಿಸಿ ಪ್ರಕಟಿಸಿದ್ದಾರೆ.
ಸುಮಾರು ನಾಲ್ಕು ಶತಮಾನದ ಹಿಂದೆ ಕೆಳದಿ ಅರಸರಾದ ವೆಂಕಟಪ್ಪ ನಾಯಕರು (ದೀಘ೯ ಕಾಲ ರಾಜ್ಯ ಬಾರ ಮಾಡಿದ ಅರಸರು) ಈಗಿನ ಸಾಗರ ಪಟ್ಟಣದ ನಿಮಾ೯ತರು (ಸದಾಶಿವ ಸಾಗರ ಆಗಿನ ಹೆಸರು, ಅವರ ಅಜ್ಜ ರಾಜ ಸದಾಶಿವರ ಸ್ಮರಣಾಥ೯) ಗಣಪತಿ ದೇವಾಲಯ ಕೂಡ ಅವರೇ ನಿಮಿ೯ಸಿದರೆಂಬ ಪ್ರತೀತಿ ಇದೆ ಆದರೆ ಬಾರಾ ಪಂಥದ ಮೂಲ ಉತ್ತರ ಪ್ರದೇಶದ ಗೋರಕ್ ಪುರದ ಗೋರಕ್ ನಾಥ ಮಠ (ಇದರ ಮಹಾಂತರು ಯೋಗಿ ಆದಿತ್ಯನಾಥರು ಈಗ ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳು, ಅವರು ಈ ಯಾತ್ರೆಯಲ್ಲಿ ಭಾಗವಹಿಸಿದ್ದರು ಎಂಬ ಸುದ್ದಿ ಇದೆ ಆದರೆ ಯಾವಾಗ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ) ಪ್ರತಿ 12 ವಷ೯ಕ್ಕೆ ನಾಸಿಕ್ ನಿಂದ ಹೊರಡುವ ಯಾತ್ರೆ ಸಾಗರದ ಗಣಪತಿ ದೇವಾಲಯದಲ್ಲಿ 2 ರಿಂದ 3 ದಿನ ತಂಗುತ್ತದೆ, ಈ ಯಾತ್ರೆಯಲ್ಲಿ ಭಾಗವಹಿಸುವ ಅವಕಾಶ ಸನ್ಯಾಸಿ ಆಗಿ 78 ಜನ್ಮ ತಾಳಿದವರಿಗೆ ಸಿಗುತ್ತದೆ ಎಂಬ ನಂಬಿಕೆ ಅವರದ್ದು, ಮಚ್ಚೇoದ್ರನಾಥರ ಕಾಲದಿಂದ ಈ ಯಾತ್ರೆ ನಡೆಯುತ್ತಿದೆ ಎನ್ನುತ್ತಾರೆ ಹಾಗಾದರೆ ಸಾಗರದ ಗಣಪತಿ ದೇವಸ್ಥಾನ ಅತ್ಯಂತ ಪುರಾತನವಾದದ್ದಾಗಿರ ಬೇಕು ಎನ್ನುವ ತಕ೯ ಕೂಡ.
ಈ ದೇವಾಲಯದಲ್ಲಿನ ಶತಮಾನದ ಹಿಂದಿನ ಪರಿಸ್ಥಿತಿ, ಪರಿಸರ ಮತ್ತು ಆ ದಿನದಲ್ಲಿನ ಸಾಗರದ ಜನ ಜೀವನದ ಬಗ್ಗೆಯೂ ಮಾಹಿತಿ ಮತ್ತು ಚಿತ್ರಗಳು ಈ ಪ್ರಸ್ತಕದಲ್ಲಿ ದಾಖಲಿಸಿದ್ದಾರೆ.
ಅಚ೯ಕ ಕುಟುಂಬಗಳ ಶ್ರದ್ದೆ, ಭಕ್ತಿ ಮತ್ತು ಬದ್ದತೆಗಳು ಅವರ ಕಷ್ಟ ಆಗಿನ ಕಾಲದ ರೀತಿ ರಿವಾಜು ಮತ್ತು ಕಟ್ಟಲೆಗಳು, ಆ ಕಾಲದಲ್ಲಿ ತಮ್ಮ ಕುಟುಂಬಕ್ಕೆ ತಲತಲಾಂತರದಿoದ ಬಂದ ಅಚ೯ಕ ವೃತ್ತಿ ಕೈ ತಪ್ಪುವ೦ತಾದಾಗ ತುಂಬಾ ಶ್ರಮ ಪಟ್ಟು ಕಾನೂನು ಹೋರಾಟವು ಮಾಡಿ ಗೆಲ್ಲುವ ಸಹನಾರ ಮುತ್ತಜ್ಜಿ ತುಂಗಮ್ಮ ರಾಮಚಂದ್ರ ಭಟ್ಟರು ಸ್ತುತ್ಯಾತರು ಅವರ ಹೋರಾಟ ಇಲ್ಲದಿದ್ದರೆ ಈ ಪುಸ್ತಕ ಪ್ರಕಟನೆ ಕೂಡ ಆಗುತ್ತಿರಲಿಲ್ಲ.
ಗಣಪತಿ ದೇವಸ್ಥಾನ, ಅದರ ಕೆರೆ ದಂಡೆ ಪುರಾತನವಾದದ್ದು ಮತ್ತು ಇತಿಹಾಸದ ತಳಕು ಇರುವಂತದ್ದು ಅದನ್ನ ಅಚ೯ಕ ಕುಟುಂಬದ ಮಸೂರದಿಂದ ಇಣುಕು ಹಾಕುವ ಈ ಪ್ರಯತ್ನ ಪ್ರಶಂಸಾಹ೯.
ಇವತ್ತಿನ ಈ ಪುಸ್ತಕ ಮುಂದಿನ ತಲೆಮಾರಿಗೆ ಒಂದು ಉಪಯುಕ್ತ ಮಾಹಿತಿ ಗ್ರಂಥವಾಗಲಿದೆ.
ಈ ಪುಸ್ತಕದ ಪ್ರತಿಗಾಗಿ ದೀಪಕ್ ಸಾಗರನ್ನ ಸಂಪಕಿ೯ಸ ಬಹುದು ಅವರ ಸೆಲ್ ನಂಬರ್ 94481 54224.
ವಿಮಶೆ೯ ಮತ್ತು ಲೇಖನ: ಕೆ.ಅರುಣ್ ಪ್ರಸಾದ್ ಮಾಜಿ ಜಿ.ಪಂ.ಸದಸ್ಯ ಆನಂದಪುರಂ
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment