Skip to main content

# HANDIGODU SYNDROME DIESEAS# ಹಂದಿ ಗೋಡು ನಿಗೂಡ ಕಾಯಿಲೆ#

ಹಂದಿಗೋಡು ನಿಗೂಡ ಕಾಯಿಲೆ

  ಇವತ್ತು ಔಷದಿ ಕಂಡು ಹಿಡಿಯದ ಕಾಯಿಲೆ ಯಾವುದು ಎಂದರೆ ಏಡ್ಸ್ ಅನ್ನುತ್ತಾರೆ ಆದರೆ ನಮ್ಮ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಂದಿಗೋಡು ಎಂಬಲ್ಲಿ ಮೊದಲಿಗೆ ಕಂಡು ಬಂದ ಈ ಕಾಯಿಲೆಗೆ ಈವರೆಗೆ ಔಷದಿ ಕಂಡು ಹಿಡಿದಿಲ್ಲ, ಯಾವ ಕಾರಣದಿಂದ ಬರುತ್ತೆ ಎನ್ನುವ ಸಂಶೋದನೆಯು ಆಗಿಲ್ಲ. ವೈದ್ಯಲೋಕದಲ್ಲಿ ಹಂದಿ ಗೋಡು ನಿಗೂಡ ಕಾಯಿಲೆ ಎಂಬ ಹೆಸರು ಇಟ್ಟಿದ್ದಾರೆ.
   ದೇಹದ ಸಂದುಗಳ ಮೂಳೆ ಅಡ್ಡಾ ದಿಡ್ಡಿ ಬೆಳೆಯುವುದರಿಂದ ರೋಗಿಯಾದವರು ವಕ್ರವಾಗಿ ನಡೆದಾಡಲು ಪ್ರಾರಂಭಿಸುತ್ತಾರೆ, ಕ್ರಮೇಣ ವಿಪರೀತ ನೋವಿನಿಂದ ನರಳುತ್ತಾರೆ, ನಿಲ್ಲಲು ಸಾಧ್ಯವಿಲ್ಲ, ಕುಳಿತುಕೊಳ್ಳಲು ಸಾಧ್ಯವಿಲ್ಲ, ಮಲಗಲು ಸಾಧ್ಯವಿಲ್ಲದಂತ ನರಕಯಾತನೆ.
  ಇದರಿಂದ ಕುಬ್ಜರಾಗುತ್ತಾರೆ ಇಂತಹ 300ಕ್ಕೂ ಹೆಚ್ಚು ರೋಗ ಪೀಡಿತರು ಸಾಗರ ತಾಲ್ಲೂಕಿನಲ್ಲಿದ್ದಾರೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಮತ್ತು ಎನ್ ಆರ್ ಪುರದಲ್ಲೂ ಈ ಕಾಯಿಲೆ ಪೀಡಿತರಿದ್ದಾರೆ.
   ಸಾಗರ ಪಟ್ಟಣದಿಂದ ಕೆಳದಿಗೆ ಹೋದರೆ ಅಲ್ಲಿ೦ದ ಒಂದೆರೆಡು ಕಿ.ಮಿ. ದೂರದಲ್ಲಿ ಹಂದಿಗೋಡು ಹಳ್ಳಿ ಇದೆ, ಈ ಹಳ್ಳಿಯ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಈ ಕಾಯಿಲೆ ಪೀಡಿತರಿದ್ದಾರೆ ಆದರೆ ಇವರ ಪಕ್ಕದಲ್ಲೇ ಹವ್ಯಕ ಬ್ರಾಹ್ಮಣರ ಕಾಲೋನಿ ಇದೆ ಅಲ್ಲಿ ಈ ಕಾಯಿಲೆ ಯಾರಿಗೂ ಬಂದಿಲ್ಲ.
  ಜಿನೆಟಿಕ್ ಕಾರಣದಿಂದ ಈ ಕಾಯಿಲೆ ವಂಶಪಾರಂಪರ್ಯವಾಗಿ ಬರುತ್ತೆ ಅಂತ ವೈದ್ಯರು ಹೇಳುತ್ತಾರೆ ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ ಬಂದು ಇಷ್ಟು ವಷ೯ವಾದರೂ ಇವರ ಕಾಯಿಲೆ ವಿಮೋಚನೆಗೆ ಸರಿಯಾದ ಚಾಲನೆ ಸಿಗದಿರುವುದು ನೋವಿನ ಸಂಗತಿ.
  1995 ರಲ್ಲಿ ಜಿಲ್ಲಾ ಪಂಚಾಯತನ ಮೊದಲ ಸಭೆಯಲ್ಲಿ ಹಂದಿಗೋಡು ಕಾಯಿಲೆ ಬಗ್ಗೆ ನಾನು ಮಾತಾಡಿದಾಗ ಉಪಸ್ಥಿತರಿದ್ದ ಆಗಿನ ಉಪ ಮುಖ್ಯಮಂತ್ರಿ ಜೆ.ಹೆಚ್.ಪಟೇಲರು ನನಗೆ ಈವರೆಗೆ ಈ ಕಾಯಿಲೆ ಪೀಡಿತರ ಬಗ್ಗೆ ಮಾಹಿತಿ ಇದ್ದಿಲ್ಲ ಸೂಕ್ತ ಕ್ರಮ ತೆಗೆದು ಕೊಳ್ಳುವುದಾಗಿ ಭರವಸೆ ನೀಡಿದ್ದರು, ಈ ಸಭೆಯಲ್ಲಿ ಅವತ್ತು ಯಡೂರಪ್ಪ, ಈಶ್ವರಪ್ಪ ಕೂಡ ಇದ್ದರು.
  1999ರಲ್ಲಿ ಈ ಬಗ್ಗೆ ಕೇಂದ್ರ ಸಕಾ೯ರದ ಸಹಾಯ ಪಡೆಯಲು ದೆಹಲಿಗೆ ನಿಯೋಗ ಒಂದನ್ನ ಒಯ್ದು ರಿಪ್ಪನ್ ಪೇಟೆ ಸಮೀಪದ ಬರುವೆ ಎಂಬ ಹಳ್ಳಿಯ ಶ್ರೀದರ ಎಂಬ ಹಂದಿಗೋಡು ಕಾಯಿಲೆ ಪೀಡಿತ ಯುವಕರಿoದ ಕೇಂದ್ರ ಸಚಿವರಿಗೆ ಮನವಿ ಅಪಿ೯ಸುವ ಕೆಲಸ ನಾವೆಲ್ಲ ಸಮಾನ ಮನಸ್ಕ ಮಿತ್ರರು ಮಾಡಿದ್ದೆವು.
  2007 ರಲ್ಲಿ ಆಗಿನ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದರು.

  ನಂತರ ನನಗೆ ಈ ಜನರ ಬಗ್ಗೆ ನನ್ನ ಮಿತಿಯಲ್ಲಿ ಏನೂ ಮಾಡಲಾಗಲಿಲ್ಲ ಆದ್ದರಿಂದ ಈ ಜನರ ಬಗ್ಗೆ ಸದಾ ಸಹಾಯ ಮಾಡುವ ಹಂದಿಗೋಡು ಚಂದ್ರಶೇಖರರಿಗೆ ನಿಮಗೇನು ಸಹಾಯ ಮಾಡಬಹುದು ಅಂತ ಕೇಳಿದಾಗ ಅವರು ನನಗೆ ಒಡಾಡಲು TVS ಒಂದನ್ನ ಸಕಾ೯ರ ನೀಡಿತ್ತು ಈಗ ವಾಪಾಸ್ ಪಡೆದಿದ್ದಾರೆ ಅಂದರು ನಾನು ಅವರಿಗೆ ಒಂದು TVS ಬೈಕ್ ಖರೀದಿಸಿ ನೀಡಿದ್ದು (2006)ಅವರು  ಸದಾ ಸ್ಮರಿಸುತ್ತಾರೆ ಅದನ್ನ ಇವಾಗಲು ಹoದಿಗೋಡು ಕಾಯಿಲೆ ಪೀಡಿತರ ಪರವಾಗಿ ಉಪಯೋಗಿಸುತ್ತಾರೆ ಅದು ನನಗೆ ನೆಮ್ಮದಿ, ತೃಪ್ತಿ ತಂದಿದೆ.

Comments

  1. SattaKing में कई बार हारा लेकिन आज Bikaner Super में जीतने का मज़ा ही अलग था। अब हर दिन सोच-समझकर नंबर लगाता हूँ।"

    ReplyDelete
  2. Gali, Desawar, Faridabad – jitne bhi results chahiye hote hain sab ek jagah mil jate hain Satta King pe. Time bhi bachta hai aur hassle bhi nahi hoti.

    ReplyDelete

Post a Comment

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...