# ಮಾಜಿ ಮಂತ್ರಿ ಹರತಾಳು ಹಾಲಪ್ಪ#
ಈಗಷ್ಟೆ ಹರತಾಳು ಹಾಲಪ್ಪನವರು ಮಾಗ೯ ಮಧ್ಯ ಮತ ಯಾಚನೆಗೆ ನನ್ನ ಕಚೇರಿಗೆ ಬಂದಿದ್ದರು ಅವರ ಜೊತೆ ವಿನಾಯಕ, ತ. ಮ.ನರಸಿಂಹ, ರಿಪ್ಪನ್ ಪೇಟೆ ಗ್ರಾ.ಪಂ ಉಪಾದ್ಯಕ್ಷರಾಗಿದ್ದ ರಾಘವೇ೦ದ್ರ, ಬಜರಂಗದಳದ ದೇವರಾಜ್, ಶಿವಮೊಗ್ಗದ ಕೆಂಚಪ್ಪನವರು, ಆಚಾಪುರ ವ್ಯವಸಾಯ ಸಂಘದ ಅಧ್ಯಕ್ಷರಾದ ಖ್ಯೆರಾ ರಾಜು ಬಂದಿದ್ದರು.
ಚುನಾವಣೆ ಹೇಗಿದೆ? ಎನ್ನುವ ಪ್ರಶ್ನೆಗೆ ನಿಮ್ಮ ಬೆಂಬಲ ಸಹಕಾರ ಬೇಕು ಅಂದರು, ಮೋದಿಯವರ ಶಿವಮೊಗ್ಗ ಬೇಟಿಯ ಸಂದಭ೯ದ ಅವರ ಬಾಷಣದ ಸಂದಭ೯ ಜಿಲ್ಲೆಯ ಪ್ರತಿ ವಿದಾನ ಸಭಾ ಕ್ಷೇತ್ರದ ಅಭ್ಯಥಿ೯ಗಳ ಪರಿಚಯ ಮತ್ತು ಅವರ ಬಗ್ಗೆ ಮತ ಯಾಚನೆ ಮಾಡಬೇಕಿತ್ತು ಮತ್ತು ಜಿಲ್ಲೆಯು ರೈತ ಮತ್ತು ದಲಿತ ಚಳವಳಿ ರಾಜ್ಯಕ್ಕೆ ನೀಡಿದ ಬಗ್ಗೆ ಅವರಿಂದ ಮಾತು ಬರಬೇಕಿತ್ತು ಅಂದೆ, ಅವರು ಹೇಳಿದ್ದು ಈ ಎಲ್ಲಾ ಮಾಹಿತಿ ಪ್ರದಾನ ಮಂತ್ರಿ ಜಿಲ್ಲೆಯಿಂದ ಪಕ್ಷದ ಕಾಯ೯ಕತ೯ರಿಂದ ಪಡೆದದ್ದಲ್ಲ ಅವರದೇ ಆದ ನೆಟ್ವಕ೯ನಿಂದ ಪಡೆದು ಮಾತಾಡುತ್ತಾರೆ ಅಂದರು.
ಸಾಗರ ವಿದಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಬೆಂಬಲ ಕೋರಿದ ಅವರಿಗೆ ಶುಭ ಹಾರೈಸಿದೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment