# ಸಾಗರದ ಜನತೆಗೆ ಕೋಯಾ ಸಾಹೇಬರು ಸದಾ ಕಾಲ ಚಿರಪರಿಚಿತರು#
ಕೋಯಾ ಸಾಹೇಬರು ದೂರದ ಕೇರಳದಿಂದ ಬಂದು ದಾವಣಗೆರೆಯಲ್ಲಿ ನೆಲೆಸಿ ಅಲ್ಲೇ ಯಶಸ್ವಿ ಉದ್ದಿಮೆದಾರರಾಗಿ ಒಮ್ಮೆ ಮುಸ್ಲಿಂ ಲೀಗ್ ಪಕ್ಷದಿಂದ ವಿಧಾನ ಸಭೆಗೆ ಸ್ಪದಿ೯ಸಿದ್ದರು.
ನಂತರ ಸಾಗರ ಅವರ ಕಾಯ೯ ಕ್ಷೇತ್ರವಾಯಿತು, ಇಲ್ಲಿ ಉದು೯ ಶಾಲೆ ಪ್ರಾರಂಭಿಸಲು ಇವರು ಪ್ರೇರಣೆಯಾದರು, ಸಾಗರದ ರಾಜಕಾರಣದಲ್ಲಿ ಪ್ರಮುಕರಾಗಿ ಪುರಸಭೆಗೆ ಕೆಲವು ಬಾರಿ ಆಯ್ಕೆಯೂ ಆದರು.
ಮಲೆಯಾಳಿ ಸಮಾಜದ ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸಿದರು, ವ್ಯವಹಾರದ ಜೊತೆ ಸಮಾಜ ಸೇವೆಯಲ್ಲಿ ಸಾಗರದಲ್ಲಿ ಪ್ರಖ್ಯಾತರಾದ ಕೊಯಾ ಸಾಹೇಬರು ಸಾಗರ ಪಟ್ಟಣದ ಸಮೀಪ ರಬ್ಬರ್ ಪ್ಲಾಂಟೇಶನ್ ಮಾಡಿದ ಪ್ರಥಮ ವ್ಯಕ್ತಿ ಅನ್ನಿಸಿಕೊಂಡರು.
ಸದಾ ಚಟುವಟಿಕೆಯಿಂದ ಪಾದರಸದಂತೆ ಮಾತು ಕೃತಿಗಳಲ್ಲಿ ತೋರಿಸಿಕೊಳ್ಳುತ್ತಿದ್ದ ಕೋಯ ಸಾಹೇಬರು ಬಡವರ ಕಷ್ಟಕ್ಕೆ ಮೊದಲು ಬರುತ್ತಿದ್ದರು.
ಈಗ ಕೊಯಾ ಸಾಹೇಬರಿಲ್ಲ ಅವರ ನೆನಪು ಸದಾ ಇದೆ, ಸಾಗರದ ಜನತೆ ಇವರನ್ನ ಸದಾ ನೆನಪಿಸಿಕೊಳ್ಳುತ್ತದೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment