Skip to main content

#ಹತ್ತುಗಾಎಂಬಡೊಮೆಸ್ಟಿಕ್ ಬೂತ ಸತ್ಯನಾ?#

ಹತ್ತುಗಾ ಎ೦ಬ ಡೊಮೆಸ್ಟಿಕ್ ಬೂತ!!!

# ಕೆಲವು ಮನೆಯಲ್ಲಿನ ನಿದಿ೯ಷ್ಟ  ಜಾಗದಲ್ಲಿ ಮಲಗಿದವರಿಗೆ ಮಧ್ಯರಾತ್ರಿ ಕುತ್ತಿಗೆ ಹಿಚುಕುವ ಅನುಭವವೇ ಹತ್ತುಗ ಎಂಬ ಮರದ ಭೂತದ ಕೆಲಸ ಎಂಬ ನಂಬಿಗೆ ಈಗಲೂ ಇದೆ.#


   
   " ರಾತ್ರಿ ನಿದ್ದೆ ಬರಲಿಲ್ಲ ಯಾರೋ ಉಸಿರುಟ್ಟಿಸಿದಂತೆ ಆಯಿತು''
   " ಹತ್ತುಗದ ಕಾಲಗತಿಯಲ್ಲಿ ನಿದ್ದೆ ಆಗಲಿಲ್ಲ"
  "ಅವರ ಮನೆ ಅಟ್ಟದಲ್ಲಿನ ಮರದಲ್ಲಿ ಹತ್ತುಗ ಇದೆ ಅಂತ ಎಲ್ಲರಿಗೂ ಗೊತ್ತು "
  ಹೀಗೆ ಮಲೆನಾಡಿನಲ್ಲಿ ಎಲ್ಲರಿಗೂ ಈ ಹತ್ತುಗ ಎಂಬ ರಾತ್ರಿ ನಿದ್ದೆ ಮಾಡೋರಿಗೆ ಕುತ್ತಿಗೆ ಹಿಚುಕುವ ಈ ಡೊಮೆಸ್ಟಿಕ ಭೂತದ ಬಗ್ಗೆ ಗೊತ್ತು ಆದರೆ ಭಯ ಇಲ್ಲ ಏಕೆಂದರೆ ಇದು ಜೀವ ತೆಗೆಯುವ ಭೂತ ಅಲ್ಲ ಅಂತ.
   ಹಳೆ ಮನೆಗಳಲ್ಲಿ ಕೆಲವು ಕೋಣೆಗಳಲ್ಲಿ ಈಗಲೂ ಯಾರೂ ಮಲಗುವುದಿಲ್ಲ, ಮಲಗಿದರೆ ಯಾರೋ ಬಂದು ಕುತ್ತಿಗೆ ಹಿಚುಕಿ ಉಸಿರುಗಟ್ಟಿಸುತ್ತಾರೆ ಅಂತಾರೆ.
ಈಗೆಲ್ಲ ಮಲೆನಾಡಿನಲ್ಲಿ ಮರ ಹೋಗಿ ಕಾಂಕ್ರಿಟ್ ಬಿಲ್ಡಿಂಗ್ ಬ೦ದಿದೆ ಹಾಗಾಗಿ ಹತ್ತುಗ ಕೂಡ ನಾಪತ್ತೆ ಆಗಿದೆ.
  ಇದಕ್ಕೆ ಹತ್ತುಗ ಅ೦ತ ಹೆಸರು ಹೇಗೆ ಬಂತು ಅಂದರೆ ಇದು ಮನೆಯ ಮರದ ಜಂತಿಯಲ್ಲಿ ಇರುತ್ತೆ ಯಾರಾದರು ಈ ಜಂತಿ ಕೆಳಗೆ ಮಲಗಿದರೆ ಅವರ ಮೇಲೆ ಹತ್ತಿ ಕುತ್ತಿಗೆ ಹಿಚುಕುತ್ತೆ ಅದಕ್ಕೆ ಹತ್ತುಗ ಅಂತ ಹೆಸರಾಗಿದೆ.
  ಇದರ ಆಕೃತಿ ನೋಡಿದವರಿಲ್ಲ, ಮಲೆನಾಡಿನ ಮೇಲ್ವಗ೯, ಕೆಳ ವಗ೯ದಲ್ಲೂ ಈ ನಂಬಿಕೆ ಇದೆ.
  ನನಗೂ ಈ ಅನುಭವ ಆಗಿದೆ ಆದರೆ ಇದು ಹತ್ತುಗದ ಅಂತ ಅನುಮಾನ ಯಾಕೆಂದರೆ ವೈದ್ಯವಿಜ್ಞಾನದಲ್ಲಿ ಹೇಳುವ ಬ್ರೆತ್ ಲೆಸ್ ನೆಸ್ ಗೆ ಅನೇಕ ಕಾರಣ ಇದೆ, ಈ ಸಂದಭ೯ದಲ್ಲಿ ಒಂದು ರೀತಿಯ ಸ್ನಾಯು ಬಿಗಿತ ಉಂಟಾಗಿರುತ್ತೆ ಯಾರಾದರೂ ಪಕ್ಕದಲ್ಲಿ ಮಲಗಿರುವವರು ಇವರ ಕನವರಿಕೆ ಕೇಳಿ ಅಲುಗಾಡಿಸಿದರೆ ಸರಿ ಆಗುತ್ತೆ ಅಥವ ಸ್ನಾಯು ಬಿಗಿತ ಹೊಂದಿದವರೇ ಸ್ವಲ್ಪ ಅಲುಗಾಡಿದರೂ ಸಾಕು ಉಸಿರಾಟ ಸರಾಗವಾಗುತ್ತೆ ಅಂತಾರೆ ಆದರೆ ಈ ಸಂದಭ೯ದ ಸಮಯ ಅವರಿಗೆ ಒಂದು ರೀತಿ ಕನಸಾಗಿ ಯಾರೋ ಬಂದು ಕುತ್ತಿಗೆ ಅದುಮಿದಂತಾಗಿ ಅವರಿಂದ ತಪ್ಪಿಸಿಕೊಳ್ಳಲು ಹೋರಾಟ ಮಾಡಿದಂತೆ ಆಗುವ ಅನುಭವ ಮರುದಿನ ಹತ್ತುಗದ ಕಾರಣ ಆಗಿರ ಬಹುದಾ?
  ಈ ಬಗ್ಗೆ ನಾನು ಅನೇಕರ ಅನುಭವ ಕೇಳಿದ್ದೇನೆ ಅವರೆಲ್ಲ ನೂರಕ್ಕೆ ನೂರು ಹತ್ತುಗದ ಅಸ್ತಿತ್ವ ಸತ್ಯ ಅನ್ನುತ್ತಾರೆ, ಸುಳ್ಳು ಅನ್ನುವ ವಾಸ್ತವವಾದಿಗಳಿಗೆ ಇದನ್ನ ಪರೀಕ್ಷೆ ಮಾಡೋನಾ ಅಂದರೆ ಅಲ್ಲಿ ಬಂದು ಮಲಗಲು ದೈಯ೯ವಿಲ್ಲ.
  ಹೀಗಾಗಿ ಹತ್ತುಗ ಎಂಬ ಕಡಿಮೆ ತೊಂದರೆ ಕೊಡುವ ಮರದ ಜOತಿಯ ಡೊಮೆಸ್ಟಿಕ್ ಭೂತ ಮನೆಯ ಸಾಕುಪ್ರಾಣಿಗಳಾದ ನಾಯಿ, ಬೆಕ್ಕಿನಂತೆ ಮನೆಯಲ್ಲಿ ಒಂದು ನಂಬಿಕೆ ಆಗಿ ಉಳಿದು ಬಿಟ್ಟಿದೆ, ಇದಕ್ಕೆ ಊಟ ತಿಂಡಿ ಕೊಡ ಬೇಕಾಗಿಲ್ಲ ಆದರೆ ಅಪರೂಪಕ್ಕೆ ಬರುವ ನೆಂಟರಿಂದ ಇದರ ಅಸ್ತಿತ್ವ ಆಗಾಗೆ ಪ್ರತ್ಯಕ್ಷವಾಗುತ್ತೆ.
  ಅನೇಕ ಮರದ ಕೆಲಸದ ಆಚಾರರನ್ನ ಕೇಳಿದರೆ ಅವರೂ ಇದು ಒಪ್ಪುತ್ತಾರೆ, ಕೆಲವು ಜಾತಿ ಮರಗಳಲ್ಲಿ ಇದು ಇರುತ್ತೆ, ಅಮವಾಸ್ಯೆ ದಿನ ಈ ರೀತಿ ತೊಂದರೆ ಅನ್ನುತ್ತಾರೆ.
  ಹತ್ತುಗ ಇದಿಯೋ ಇಲ್ಲವೊ ಮಧ್ಯರಾತ್ರಿ ಅಥವ ಅಮವಾಸ್ಯೆಯ ಕತ್ತಲಲ್ಲಿ ಗಾಡ ನಿದ್ದೆಯಲ್ಲಿ ಕಾಡುವ ಉಸಿರಾಟದ ತೊಂದರೆ ಮಾತ್ರ ಇದ್ದಿದ್ದೆ ಅಂದರೆ ಇದಕ್ಕೆ ಸವಾಲು ಹಾಕುತ್ತಾ ಹತ್ತುಗ ಇರುವುದು ಸತ್ಯ ಅನ್ನುತ್ತಾರೆ ಮಲೆನಾಡಿಗರು

https://www.facebook.com/693504594115135/posts/1381639898634931/

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...