# ಇರುವುದನ್ನ ಬಿಟ್ಟು ಇಲ್ಲದ್ದು ಹುಡುಕುವ ಮಲೆನಾಡಿಗರು ಮರೆತಿರುವ ಈ ವ್ಯಕ್ತಿಯ ಶಕ್ತಿ#
ಇವರು ಡಾII ವಿಫ್ನೇಶ್ ಮಂಚಾಲೆ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದಲ್ಲಿ ದುಡಿದವರು, ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿ ಕೃಷಿ ವಿಶ್ವವಿದ್ಯಾಲಯಕ್ಕೆ 777 ಎಕರೆ ಜಮೀನು ಯಾವುದೇ ತೊಂದರೆ ವಿರೋದವಿಲ್ಲದೆ ಪಡೆದು ವಿಶ್ವ ವಿದ್ಯಾಲಯ ಪ್ರಾರಂಭಕ್ಕೆ ಕಾರಣಕತ೯ರು.
ಇವರ ಅಣ್ಣ ಡಾII ತಿಮ್ಮಪ್ಪ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನಮ್ಮ ಸಾಗರ ತಾಲ್ಲೂಕಿಗೆ ಮತ್ತು ಶಿವಮೊಗ್ಗ ಜಿಲ್ಲೆಗೆ ಕೀತಿ೯ ತಂದವರು, ಇವರ ತಮ್ಮ ಸಾಗರದ ಲಾಲ್ ಬಹುದೂರು ಪದವಿ ಕಾಲೇಜಿನ ಗಣಿತ ಪ್ರಾಧ್ಯಾಪಕರು.
ಇವರು ನಮ್ಮ ದೇಶದ ಪ್ರಖ್ಯಾತ ಒತ್ತಡ ನಿವಾ೯ಹಣೆ(stress Management) ತರಬೇತುದಾರರು ಮತ್ತು ಅಪ್ತ ಸಲಹೆಗಾರರು ಹಾಗಂತ ಇದು ಸ್ಥಳೀಯ ಜಿಲ್ಲೆಯವರಿಗೆ ಗೊತ್ತಿಲ್ಲ ಅವರು ಹೇಳಿಕೊಳ್ಳುವುದಿಲ್ಲ.
ಇವರು ಈಗ ಹಿಮಾಚಲಪ್ರದೇಶದ ಪಲಾ೦ಪುರದ ಕೃಷಿ ವಿಶ್ವವಿದ್ಯಾಲಯದಲ್ಲಿನ ಪ್ರೋಪಸರ್ ಗಳಿಗೆ ಮತ್ತು ವಿದ್ಯಾಥಿ೯ಗಳಿಗೆ ಒತ್ತಡ ನಿವ೯ಹಣೆ ಮತ್ತು ಆಪ್ತ ಸಲಹೆಗಾಗಿ ತರಬೇತಿಗಾಗಿ ಇವರನ್ನ ಅಲ್ಲಿಗೆ ಕರೆಸಿದ್ದಾರೆ ನಂತರ ಶಿಮ್ಲಾ ಕೃಷಿ ವಿಶ್ವವಿದ್ಯಾಲಯದಲ್ಲಿ ಕೂಡ.
ರಾಷ್ಟ್ರ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ಅಹ೯ತೆ ಇರುವ ಥೆರಪಿಸ್ಟ ಮತ್ತು ಟ್ರಯಿನರ್ ಆಗಿರುವ ಇವರು ಇಂತಹ 400ಕ್ಕೂ ಹೆಚ್ಚು ಸಂಸ್ಥೆಗಳಿಗೆ ತರಬೇತಿ ನೀಡಿದ್ದಾರೆಂದು ಹಿಮಾಚಲದ ಕೃಷಿ ವಿದ್ಯಾಲಯದ ಗೆಳೆಯರೊಬ್ಬರು ಪೋನ್ ಮುಖಾಂತರ ತಿಳಿಸಿದಾಗ ನನಗೆ ಹೆಮ್ಮೆ ಅನ್ನಿಸಿತು ಡಾII ವಿಘ್ನೇಶರು ನಮ್ಮ ತಾಲ್ಲೂಕಿನವರು ನಮ್ಮ ಹಿರಿಯ ಗೆಳೆಯರಾದರೂ ಈವರೆಗೂ ಈ ಬಗ್ಗೆ ಹೇಳಿಕೊಂಡಿರದ ವಿಚಾರ ತಿಳಿದು.
ಎಲೆ ಮರೆಯ ಕಾಯಿಯಂತೆ ಪ್ರಚಾರ ಪ್ರಶಸ್ತಿಯಿಂದ ದೂರವಿರುವ ಇವರಂತ ಯೋಗ್ಯರು ನಮ್ಮ ನಡುವೆ ಇರುವುದು ಆಶ್ಚಯ೯ವೇ ಸರಿ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Congratulations to Dr Vignesh. We are proud of him.
ReplyDeleteGreat, we are proud of him
ReplyDeleteGreat Sir congratulations
ReplyDeleteCongratulations uncle
ReplyDelete