#ಮಂಗನ ಕಾಟ ಪರಿಹಾರ ಸುಲಭ ಸಾಧ್ಯವಲ್ಲ#
ಯಾವುದೇ ಸಾಕುಪ್ರಾಣಿ, ಕಾಡು ಪ್ರಾಣಿ ಕಾಟವನ್ನ ತಡೆಯ ಬಹುದು ಆದರೆ ಮಂಗನ ಕಾಟವಿದೆಯಲ್ಲ ಅದು ಅನುಭವಿಸಿದವರಿಗೆ ಗೊತ್ತು, ಅವುಗಳ ದಾಳಿಯಿಂದ ತತ್ತರಿಸಿ ಹತಾಶರಾಗುತ್ತಾರೆ, ಅವುಗಳ ಕೈಗೆ ಸಿಕ್ಕಿದ್ದೆಲ್ಲ ಖಲಾಸ್!
ಮಂಗನಿಗೆ ಹಿಂಸೆ ನೀಡಿದರೆ ಶಾಪಗ್ರಸ್ತರಾಗುವ ಭಯ, ಸಿಡಿ ಮದ್ದು ಸಿಡಿಸಿದರೆ ಆ ಕ್ಷಣದಲ್ಲಿ ಪರಾರಿ ಆದರೂ ಮತ್ತೊ೦ದು ಕ್ಷಣದಲ್ಲಿ ಪ್ರತ್ಯಕ್ಷ.
ಇಂತಹ ಕಾಟ ಕೊಡುವ ಮಂಗಗಳ ಹಿಡಿಯಲು ರಿಪ್ಪನ್ ಪೇಟೆಯ ಕೃಷಿ ವಿಜ್ಞಾನಿ ಅನಂತಮೂತಿ೯ ಜವಳಿ ಒಂದು ಬೋನು ಮಾಡಿದ್ದಾರೆ ಅವರ ಪಾರಂಗೆ ನುಗ್ಗಿ ದಾಂದಲೆ ಮಾಡುವ ಮಂಗಗಳನ್ನ ಹಿಡಿದು ಆಗುಂಬೆ, ಬಾಳೆಬರೆ ಅಥವ ಹುಲಿಕಲ್ ಫಾಟಿಗಳಲ್ಲಿ ಬಿಡುತ್ತಾರೆ ಆ ಬೋನು ಮಾಡಿ ಮಂಗನ ಕಾಟದಿಂದ ಪರಿಹಾರ ಕ೦ಡುಹಿಡಿಯಲು ಆಸಕ್ತರು ಇವರನ್ನ ಬೇಟಿ ಮಾಡಿ ಮಾಹಿತಿ ಪಡೆಯಬಹುದು.
ಇವರ ವಿಳಾಸ
ಶ್ರೀ ಅನಂತ ಮೂತಿ೯ ಜವಳಿ
ಅಂಕುರ್ ನಸ೯ರಿ
ರಿಪ್ಪನ್ ಪೇಟೆ
ಹೊಸನಗರ ತಾII, ಶಿವಮೊಗ್ಗ ಜಿಲ್ಲೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment