ನಾನು ಈ ಮಠದ ಬಗ್ಗೆ ಬಹಳ ಕೇಳಿದ್ದರೂ ಹೋಗಿರಲಿಲ್ಲ, ಒಮ್ಮೆ ಒಬ್ಬ ಇಂಜಿನಿಯರ್ ಪರಿಚಯ ಆಗಿತ್ತು ಅವರು ಈ ಮಠಕ್ಕೆ ಯಾವಾಗಲೂ ಹಣ ಕಳಿಸುತ್ತಿದ್ದರು ಯಾಕೆಂದು ವಿಚಾರಿಸಿದಾಗ ಅವರ ವಿದ್ಯಾಭ್ಯಾಸ ಇಲ್ಲೆ ಆಗಿದ್ದು ಎಂದು ತಿಳಿಯಿತು, ಒಂದು ಬಾರಿ ರಾಯಚೂರಿ೦ದ ಬೆಂಗಳೂರಿಗೆ ಬರುವ ರೈಲಿನಲ್ಲಿ ಒಂದೆರೆಡು ವಿದ್ಯಾಥಿ೯ಗಳು ಸಿಕ್ಕಿದ್ದರು ಅವರೂ ಅಲ್ಲಿ ಉಚಿತವಾಗಿ ವಿದ್ಯಾಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದರು ಮತ್ತು ಅವರ ಪೋಷಕರು ವಷ೯ಕೊಮ್ಮೆ ತಮ್ಮ ಹೊಲದಲ್ಲಿ ಬೆಳೆದ ಕಾಳುಕಡಿ ಮಠಕ್ಕೆ ನೀಡುವುದು ಬಿಟ್ಟು ಬೇರೆ ಏನೂ ಇಲ್ಲ ಅಂದಿದ್ದರು.
20O2ರಲ್ಲಿ ಈ ಮಠಕ್ಕೆ ಭೇಟಿ ಮಾಡಿ ಅಡುಗೆ ಮನೆ ವೀಕ್ಷಣೆ ಮಾಡಿದ್ದೆ, ಸಾಮೂಹಿಕ ಪ್ರಾಥ೯ನೆ ನೋಡಿದ್ದೆ, ಅಲ್ಲಿನ ಕೆಲ ವಿದ್ಯಾಥಿ೯ಗಳನ್ನ ವಿಚಾರಿಸಿದಾಗ ಅವರೆಲ್ಲ ವಿದ್ಯೆಗಾಗಿ ದೂರದ ಊರಿ೦ದ ಬ೦ದ ಬಡ ಕುಟುಂಬದವರಾಗಿದ್ದರು ಮತ್ತು ಅವರು ಹಾಲು ಕುರುಬರು ಅಂದಿದ್ದರು (ಜಾತಿ ಕೇಳಬಾರದು ಆದರೆ ನನಗೆ ಇಲ್ಲಿ ಲಿಂಗಾಯಿತರಿಗೆ ಮಾತ್ರ ಅವಕಾಶ ಎನ್ನುವ ತಪ್ಪು ಕಲ್ಪನೆ ಇತ್ತು ಮೊದಲು)
ಸ್ವಾಮಿಗಳ ಚರಿತ್ರೆಯ ಓದಿದಾಗ ಅವರು ಕೂಡ ಜಾತಿ ಮೀರಿದವರೆಂದು ಗೊತ್ತಾಯಿತು.
ನಿಜಕ್ಕೂ ಈ ಮಠ ಬಿನ್ನವಾಗಿದೆ ಇತ್ತೀಚೆಗೆ ರಾಜ ಕಾರಿಣಿಗಳು ಇಲ್ಲಿಗೆ ಹೆಚ್ಚು ಠಳಾಯಿಸುತ್ತಾರೆ ಮತ್ತು ಯಡೂರಪ್ಪಾ ಜೈಲಿಗೆ ಹೋದಾಗ ಈ ಸ್ವಾಮಿಗಳನ್ನ ಮಂತ್ರಿ ಸೋಮಣ್ಣ ಜೈಲಿಗೆ ಕರೆದೊಯ್ದಿದ್ದು ಮಾತ್ರ ನನಗೆ ಅಭಾಸ ಅನ್ನಿಸಿತು ಬಹುಶಃ ಅವರ ವಯೋಸಹಜ ತೊಂದರೆಯೂ ಇರಬಹುದು, ಏನೇ ಆಗಲಿ ಇದೊಂದು ಅಕ್ಷರ ಬ್ರಹ್ಮ ಮಂದಿರವೇ ಸರಿ ಆದರೆ ಇವರ ನಂತರ ಈ ವ್ಯವಸ್ಥೆ ಉಳಿಯುವುದು ಅನುಮಾನ ಬಕ ಪಕ್ಷಿಗಳು ಕಾದಿರುವ ಅನುಭವ ಆಯಿತು.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment