#ಕುಗ್ವೆ_ವಸಂತ್_ದಂಪತಿಗಳಿಗೆ
#ನಲವತ್ತೈದನೇ_ವಿವಾಹ_ವಾರ್ಷಿಕೋತ್ಸವದ
#ಶುಭ_ಹಾರೈಕೆಗಳು
#ಎಂಬತ್ತರ_ದಶಕದಲ್ಲಿ_ಹವ್ಯಕ_ಬ್ರಾಹ್ಮಣ_ಯುವಕ
#ಮತ್ತು_ದೀವರ_ಕನ್ಯೆ_ಮದುವೆ_ವಿಶೇಷ_ಘಟನೆ_ಆಗಿತ್ತು.
#ಹೋರಾಟದ_ಹಾಡುಗಳ_ಹಾಡುವ_ವಸಂತ್_ಶ್ರಮಜೀವಿ
#ಕುಗ್ವೆ #Kugve #Sagar #Havyaka #Brahmin #Divaru #Dalithasangarshasamithi
#DSS #BKrishnappa
ಕುಗ್ವೆ ವಸಂತ್ ಕವಿ ಸಿದ್ದಲಿಂಗಯ್ಯನವರ ಹೋರಾಟದ ಹಾಡು ಹಾಡಲು ನಿಂತರೆ ನೆರೆದವರು ಬಾವಪರವಶರಾಗದೆ ಇರಲು ಸಾಧ್ಯವೇ ಇಲ್ಲ ಅಂತಹ ದ್ವನಿ ಅವರದ್ದು.
80 ರ ದಶಕದಲ್ಲಿ #ರುದ್ರಪ್ಪ, #ತೀನಾ_ಶ್ರೀನಿವಾಸ್.#ಶಿವಾನಂದಕುಗ್ವೆ, #ಎಸ್ಎಸ್_ನಾಗರಾಜ, #ರಿಕ್ಷಾಮೋಹನ್, #ಪೆಡ್ರಿಕ್,#ಮಂಡಗಳಲೆನಾರಾಯಣ್, #ಅದರಂತೆವಿಶ್ವನಾಥ್ ಮತ್ತು ಅನೇಕ ಉತ್ಸಾಹಿ ಯುವಕರು ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಲು ಮುಂದಾಗಿದ್ದರು.
ಆಗ #ಬಿ_ಕೃಷ್ಣಪ್ಪರ #ದಲಿತ_ಸಂಘರ್ಷ_ಸಮಿತಿ ಇವರೆಲ್ಲರಿಗೂ ಜಂಪಿಂಗ್ ಬೋರ್ಡ್ ಆಯಿತು ಇವರೆಲ್ಲರ ಜೊತೆ ನನ್ನಂತವರೂ ಸೇರಿಕೊಂಡೆವು.
ಸಾಗರದ AC ಕಛೇರಿ ಎದರು #ಬಗರ್_ಹುಕುಂ ಹಕ್ಕುಪತ್ರ ಒತ್ತಾಯಿಸಿ 1984ರಲ್ಲಿ 43 ದಿನಗಳ ನಿರಂತರ ದರಣಿ ಸತ್ಯಾಗ್ರಹ ಮತ್ತು ಆನಂದಪುರಂ ನಲ್ಲಿ ನಡೆದ #ರೈತ_ಬಂದು_ಗ್ರಾಮೋದ್ಯೋಗದ ಕಾರ್ಮಿಕರ ಹೋರಾಟಗಳು ಮುಖ್ಯವಾಗಿತ್ತು.
ಆ ಕಾಲದಲ್ಲೇ ಹೋರಾಟಗಳ ಆಯಾಸದ ಮಧ್ಯೆ ಶಕ್ತಿ ನೀಡುತ್ತಿದ್ದದ್ದು ಕುಗ್ವೆ ವಸಂತರು ಹಾಡುತ್ತಿದ್ದ #ಕವಿಸಿದ್ದಲಿಂಗಯ್ಯನವರ ಹೋರಾಟದ ಹಾಡುಗಳು.
ಎಲ್ಲಿಗೆ ಬಂತು ಯಾರಿಗೆ ಬಂತು 47ರ ಸ್ವಾತಂತ್ರ್ಯದ ಹಾಡಿಗೆ ನಾವೆಲ್ಲ ಕೋರಸ್ ಹಾಡುಗಾರರು.
#ಹವ್ಯಕಬ್ರಾಹ್ಮಣರ ಈ ಪ್ರತಿಭಾವಂತ ಯುವಕ ಕುಗ್ವೆಯ #ದೀವರ ಕನ್ಯೆಯ ಪ್ರೇಮ ವಿವಾಹ 80 ದಶಕದಲ್ಲಿ ದೊಡ್ಡ ಸಂಚಲನ ಉಂಟು ಮಾಡಿದ ಅಂತರ್ಜಾತಿ ವಿವಾಹ ಆಗಿತ್ತು.
ವಸಂತ್ ಪುತ್ರ ಸುಭಾಶ್ಚಂದ್ರ ಭಾರತೀಯ ಸೇನೆಯಲ್ಲಿ ಸೇವೆ ಮಾಡಿ ಬಂದಿದ್ದಾರೆ, ಸೈನ್ಯದಲ್ಲಿದ್ದಾಗ ದೀರ್ಘಕಾಲದ ಹಿಮಪಾತದಲ್ಲಿನ ದುರಂತದಲ್ಲಿ ಇವರು ಬದುಕಿ ಬಂದ ಸಾಹಸಿ, ಇವರ ಜೊತೆಯವರು ಜೀವತ್ಯಾಗ ಮಾಡಿದ ದುರಂತ ಅದು.
ಸಾಮಾಜಿಕ ನ್ಯಾಯಕ್ಕಾಗಿ,ಶ್ರಮಿಕರ ಹಕ್ಕಿಗಾಗಿ ಈ ವಯಸ್ಸಿನಲ್ಲೂ, ಇವತ್ತಿಗೂ ಕುಗ್ವೆ ವಸಂತರು ಕ್ರಿಯಾಶೀಲರಾಗಿರುವುದು ವಿಶೇಷ.
ಅನುಮಾನವೇ ಇಲ್ಲ, ಜೀವದ ಕೊನೆ ಉಸಿರಿನ ತನಕ ಅವರು ಹಾಡುತ್ತಾರೆ, ನಾನು ಅವರ ವಿಶೇಷ ದ್ವನಿಗೆ 1983ರಿಂದ ಅವರ ಅಭಿಮಾನಿ.
ಅವರಿಗೆ ಮತ್ತು ಅವರ ಕುಟುಂಬಕ್ಕೆ ದೇವರು ಆಯುರಾರೋಗ್ಯ ಆಯಸ್ಸು ಐಶ್ವರ್ಯ ದಯಪಾಲಿಸಲಿ ಎಂದು ಹಾರೈಸುತ್ತೇನೆ.
Comments
Post a Comment