#ಮಲೆನಾಡಿನ_ಅಪ್ಪೆ_ಮಾವಿನ_ಮಿಡಿ_ಭಾಗ_2
#ಮಾಜಿ_ಉಪಮುಖ್ಯಮಂತ್ರಿ_ಈಶ್ವರಪ್ಪನವರಿಗೂ
#ಮಾವಿನ_ಮಿಡಿ_ಇಷ್ಟ
#ಮಾವಿನ_ಮಿಡಿ_ಎಂದರೆ_ಮಲೆನಾಡಿಗರಿಗೆ_ಪಂಚಪ್ರಾಣ
#ಕಳೆದ_2023ರಲ್ಲಿ_ಮಾವಿನಮಿಡಿಗೆ_ಬರ_ಬಂದಿತ್ತು_ವಿಪರೀತ_ಇಬ್ಬನಿ
#ಕಳೆದ_ವರ್ಷ_2024_ವಿಪರೀತ_ಬಿಸಿಲು_ಪ್ರಖ್ಯಾತ_ಬ್ರಾಂಡ್_ಅರಸಾಳು_ಅಪ್ಪೆಮಿಡಿ_ಕಡಿಮೆ.
#ಈ_ವರ್ಷ_ಮಾವಿನ_ಹೂವು_ಭಜ೯ರಿ_ಆದರೆ_ಇಬ್ಬನಿ_ಮಳೆಯಿಂದ_ಅಪ್ಪೆ_ಮಿಡಿ_ಹೇಗೋ?
#Tendermango #Mangopickle #Eshwarappa #Deputychiefminister #Arasalu #Appemidi
ಪಶ್ಚಿಮಘಟ್ಟದ ಮಲೆನಾಡು ಪರಿಸರ ನನ್ನ ಹುಟ್ಟೂರು ಆದ್ದರಿಂದ ನನಗೆ ಈ ಪ್ರದೇಶದಲ್ಲಿ ಕಾಲಕಾಲಕ್ಕೆ ಬರುವ ಕಣ್ಣು ಕಾಯಿ ಸವಿಯದಿದ್ದರೆ ಮನಸ್ಸು ಒಪ್ಪುವುದಿಲ್ಲ.
ಅದಕ್ಕಾಗಿ ಹೇಗಾದರೂ ಮಾಡಿ ಯಾರಿಂದಲಾದರೂ ಅವುಗಳನ್ನು ತರಿಸಿ ತಿನ್ನೋ ಬಯಕೆ ನನ್ನದು.
ಮಾವಿನ ಮರದಲ್ಲಿ ಹೂವು ಕಾಯಿ ಕಚ್ಚಿದಾಗ ಎಳೆಯದಾದ ಮಾವಿನ ಮಿಡಿಗಳನ್ನು ಕೆಜಿಗಟ್ಟಲೆ ತಿನ್ನುವುದು, ಸ್ವಲ್ಪ ಹುಳಿ ಬಂದಾಗ ಊಟದ ಜೊತೆ ಅನ್ನದ ಪ್ರಮಾಣ ಮೀರಿ ಮಾವಿನ ಮಿಡಿ ತಿನ್ನುವುದು, ಮಾವಿನ ಮಿಡಿ ಕಾಯಿ ಆಗಿ ಹುಳಿ ರೂಪ ಪಡೆದಾಗ ಉಪ್ಪು ಮೆಣಸಿನ ಪುಡಿಯೊಂದಿಗೆ ತಿನ್ನಲಿಕ್ಕೆ ಆಗ ಊರಂಚಿನ ಮಾವಿನ ಮರಗಳನ್ನು ಎಡತಾಕುತ್ತಿದ್ದೆವು.
ಮಾವು ಹಣ್ಣು ಆದಾಗ ವಿಧವಿಧವಾದ ಹಣ್ಣಿನ ರಸ ಸ್ವಾದನೆಗಾಗಿ ಸಿರ್ಸಿ - ಕುಮುಟಾ -ಅಂಕೋಲಾ -ಕಾರವಾರದ ತನಕ ಹುಡುಕಿ ಹೋಗುವ ಪರಿಪಾಠವೂ ಇತ್ತು.
ವರ್ಷ ಪೂರ್ತಿಉಪ್ಪಿನಕಾಯಿ ನನಗೆ ಬೇಕೇ ಬೇಕು ಅದು ಒಂದು ರೀತಿ ಅಲ್ಲ ಕನಿಷ್ಠ 15 ರಿಂದ 20 ರೀತಿ ಉಪ್ಪಿನಕಾಯಿ ನನಗೆ ಇಷ್ಟ.
ನಾನೊಬ್ಬನೇ ಅಲ್ಲ ನನ್ನಂತಹ ಉಪ್ಪಿನಕಾಯಿ ಪ್ರಿಯರು ಅನೇಕರು ನನ್ನ ಸಂಪರ್ಕದಲ್ಲಿದ್ದಾರೆ ಅವರಿಗೆಲ್ಲ ನಾನು ವಿಧವಿಧ ಉಪ್ಪಿನಕಾಯಿಯನ್ನು ಕಳಿಸಿಕೊಡುತ್ತೇನೆ.
2022ನೇ ಇಸವಿಯಲ್ಲಿ ಮಾವಿನ ಮಿಡಿ ಸಿಕ್ಕಿದಷ್ಟು ನಂತರದ ವರ್ಷ 2023 ರಲ್ಲಿ ಇಬ್ಬನಿ ಕಾರಣದಿಂದ ಮಿಡಿಗಳು ಸಿಗಲಿಲ್ಲ.
2024ರ ಫೆಬ್ರವರಿ ಕೊನೆಯಿಂದ ಮಾರ್ಚ್ ಕೊನೆಯವರೆಗೆ ಮಾವಿನ ಮಿಡಿಗಳು ಮಾರುಕಟ್ಟೆಗೆ ಬಂದೇ ಇಲ್ಲ... ಕಾರಣ 2024ರ ವರ್ಷದ ವಿಪರೀತ ಬಿಸಿಲು,ಸೆಕೆ ಮಾವಿನ ಹೂವುಗಳನ್ನು ಮುರುಟಿಸುತ್ತಿರುವುದು ಸತ್ಯ.
2024 ರಲ್ಲಿ ನನ್ನ ತಿನ್ನುವ ಬಯಕೆಗಾಗಿ ಅರಸಾಳಿನಿಂದ ಸ್ವಲ್ಪ ಇನ್ನೂ ಚಿಗುರದ ಇನ್ನೂ ಬೆಳೆಯದ ಅರೆ ಜೀರಿಗೆ ಸುವಾಸನೆಯ ಮಾವಿನ ಮಿಡಿ ನನ್ನ ಆಫೀಸಿನ ಟೇಬಲ್ ಮೇಲಕ್ಕೆ ಬಂತು.
ಅಷ್ಟರಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ #ಕ_ಎಸ್_ಈಶ್ವರಪ್ಪನವರು ನನ್ನ ಆಫೀಸಿಗೆ ಆಗಮಿಸಿದ್ದರು.
ನನ್ನ ಟೇಬಲ್ ಮೇಲಿದ್ದ ಮಾವಿನ ಮಿಡಿ ನೋಡಿ ಈಶ್ವರಪ್ಪನವರು "ನಾನು ಈ ವರ್ಷ ಮಾವಿನ ಮಿಡಿಯೇ ನೋಡಿಲ್ಲ" ಎಂದು ಮಿಡಿ ಯ ರುಚಿ ನೋಡಿದರು.
ಈ ರೀತಿ ಮಲೆನಾಡಿಗರಿಗೆ ಮಾವಿನ ಮಿಡಿಯ ಪರಿಚಯ, ಅದರ ಉಪ್ಪಿನಕಾಯಿಗಳು ಗೊತ್ತಿರುವಷ್ಟು ಬೇರೆ ಪ್ರದೇಶಗಳಲ್ಲಿ ಗೊತ್ತಿಲ್ಲ.
ಬೇರೆ ಪ್ರದೇಶದಲ್ಲಿನ ಉಪ್ಪಿನಕಾಯಿ ಭಿನ್ನ ರುಚಿ ಮತ್ತು ಅದರ ರೆಸಿಪಿಯೇ ಬೇರೆ.
ಹೆಚ್ಚಿನ ಪ್ರದೇಶದಲ್ಲಿನ ಜನ ಕಡಿ ಉಪ್ಪಿನಕಾಯಿ ಹೆಚ್ಚು ಇಷ್ಟಪಡುತ್ತಾರೆ.
ಆದರೆ ಶಿವಮೊಗ್ಗ- ಚಿಕ್ಕಮಗಳೂರು-ಮಂಗಳೂರು-ಉಡುಪಿ ಮತ್ತು ಉತ್ತರ ಕನ್ನಡದ ಜಿಲ್ಲೆಯ ಜನರಿಗೆ ಮಾತ್ರ ಈ ಮಾವಿನ ಅಪ್ಪೆಮಿಡಿ ಉಪ್ಪಿನ ಕಾಯಿ ಅಂದರೆ ಪಂಚ ಪ್ರಾಣ.
Comments
Post a Comment