# ದೇವರ ವಿಗ್ರಹಗಳ ಅಲಂಕಾರ ಪ್ರವೀಣರು#
ಶ್ರೀ ಭಾಗ೯ವ ಭಟ್ಟರೆಂದರೆ ನಮ್ಮ ರಾಜ್ಯದ ಎಲ್ಲಾ ದೇವಾಲಯದವರಿಗೂ ಗೊತ್ತಾಗುವುದು ಬೆಣ್ಣೆ ಅಲOಕಾರದ ಬಾಗ೯ವ ಭಟ್ಟರOತನೆ.
ನಮ್ಮ ರಾಜ್ಯ ಮಾತ್ರ ಅಲ್ಲಿ ದೂರದ ಅಮೇರಿಕಾದಲ್ಲೂ ದೇವಾಲಯಲ್ಲಿನ ವಿಗ್ರಹಕ್ಕೆ ಬೆಣ್ಣಿ ಅಲಂಕಾರ ಮಾಡಲು ಬಾಗ೯ವ ಭಟ್ಟರು ಹೋಗಿ ಬಂದಿದ್ದಾರೆ.
ಇವರ ಈ ಕಲೆಗಾಗಿ ಕನಾ೯ಟಕ ರಾಜ್ಯ ಸಕಾ೯ರ ಇವರಿಗೆ ರಾಜ್ಯ ಪ್ರಶಸ್ತಿಯೂ ನೀಡಿದೆ.
ನಮ್ಮ ದೇವಾಲಯದಲ್ಲಿ ಇವರಿಂದ ಬೆಣ್ಣೆ ಅಲಂಕಾರ ಮಾಡಿಸುತ್ತಿರುತ್ತೇವೆ, ಈ ವಷ೯ 13ನೇ ವಷ೯ದ ರಥ ಉತ್ಸವ, ಬಾಗ೯ವ ಭಟ್ಟರು ವಿಶೇಷವಾಗಿ ಮುತ್ತಿನ ಅಲ೦ಕಾರ ಮಾಡುತ್ತೇನೆ ಎಂದಿದ್ದಾರೆ.
ಪೆಬ್ರವರಿ 9ರ ಶನಿವಾರ ಸಂಜೆ ರಂಗ ಪೂಜೆ ಮತ್ತು ಮುತ್ತಿನ ಅಲoಕಾರದ ಶ್ರೀ ವರಸಿದ್ಧಿವಿನಾಯಕ ಸ್ವಾಮಿ ನೋಡಬಹುದು.
ಕಲೆ, ಭಕ್ತಿ ಮತ್ತು ಕೋಪ ಮೂರು ಸಮನಾಗಿರುವ ಭಾಗ೯ವ ಭಟ್ಟರಿಗೂ ನನಗೂ 10 ವಷ೯ದ ಗೆಳೆತನದ ಬಾಂದವ್ಯ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment