#ಚಿತ್ರದುಗ೯ದ ಸಾಹಸಿ ಕೋತಿ ರಾಜು #
ಬರಿಗೈಯಲ್ಲಿ ಕೋತಿಯ೦ತೆ ಬಂಡೆ ಏರಿಳಿಯುವ ಈ ಸಾಹಸಿ ಹೆಸರಲ್ಲಿ ಮೂರು ಗಿನ್ನೆಸ್ ದಾಖಲೆ ಇದೆ.
ಬೆಟ್ಟ, ಗುಡ್ಡ ಮತ್ತು ಜಲಪಾತಗಳಲ್ಲಿ ಸಿಕ್ಕಿಬಿದ್ದವರನ್ನ ರಕ್ಷಿಸುವ ಸಾಹಸದ ಕೆಲಸ ಮಾಡುತ್ತಾರೆ.
ವಿಶ್ವವಿಖ್ಯಾತ ಜೋಗ ಜಲಪಾತವನ್ನ ಬರೀ ಕೈಯಲ್ಲಿ ಹತ್ತಿ ಇಳಿದ ಏಕೈಕ ಸಾಹಸಿ ಇವರು.
ಕಳೆದ ವಷ೯ ಜೋಗ ಜಲಪಾತದಲ್ಲಿ ಆತ್ಮಹತ್ಯ ಮಾಡಿಕೊಂಡವರೊಬ್ಬರ ಶವ ಎತ್ತಲು ಹೋಗಿ ಒಂದು ರಾತ್ರಿ ಇವರು ಜಲಪಾತದ ಮಧ್ಯ ಸಿಕ್ಕಿ ಬಿದ್ದು ದೊಡ್ಡ ಆತ೦ಕಕ್ಕೆ ಕಾರಣ ಆಗಿತ್ತು.
ಪ್ರತಿ ಬಾನುವಾರ ಚಿತ್ರದುಗ೯ದ ಕಲ್ಲಿನ ಕೋಟೆಯಲ್ಲಿ ಪ್ರವಾಸಿಗಳಿಗೆ ಪ್ರದಶ೯ನ ನೀಡುತ್ತಾರೆ.
KOTHI RAJU A FAMOUSE ROCK CLIMBER HAVING 3 GINNES RECORDS,THIS RESCUE BOY EVERY SUNDAY DEMONSTRATE ROCK CLIMBING IN CHITRADURGA PORTE FOR TOURISTS.
His contact cell number
9980420995
Kotiraj
https://m.facebook.com/story.php?story_fbid=2268642489836577&id=100000725455473
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment