# ನನ್ನ ಹೋಬಳಿಯ ಬರಹಗಾರ, ಪತ್ರಕತ೯ ಶಶಿ ಸಂಪಳ್ಳಿ #
ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಆನಂದಪುರಂ ಹೋಬಳಿಯ ಹಿರೇಬಿಲಗುಂಜಿ ಗ್ರಾಮ ಪoಚಾಯತ್ ನ ಕೋಟೆಕೊಪ್ಪದ ಸಂಪಳ್ಳಿಯವರು, ಇವರ ತ೦ದೆ ತುಂಬಾ ಸಾದು ಸ್ವಭಾವದವರು.
ಇವರ ಊರು ಸಂಪಳ್ಳಿ ಮೈಸೂರು ರಾಜರು ಆನಂದಪುರದ ಭೂ ಮಾಲಿಕರಾದ ಶ್ರೀ ರಾಮಕೃಷ್ಣ ಅಯ್ಯ೦ಗಾರರಿಗೆ (ಮಂತ್ರಿ ಆಗಿದ್ದ ಬದರೀ ನಾರಾಯಣ ಅಯ್ಯOಗಾರರ ತಂದೆ) ಶ್ರುಂಗೇರಿ ಮಠಕ್ಕೆ ಪ್ರತಿ ವಷ೯ 2 ಟನ್ ಶ್ರೀಗಂದ ಸರಬರಾಜು ಮಾಡುವ ಕರಾರಿನಂತೆ ನೀಡಿದ 2000 ಎಕರೆ ದಟ್ಟ ಅರಣ್ಯ ಪ್ರದೇಶದಲ್ಲಿದೆ.
ಇವರ ಬಾಲ್ಯದ ವಿದ್ಯಾಭ್ಯಾಸದ ಚನ್ ಶೆಟ್ಟಿ ಕೊಪ್ಪ, ಹೊಸೂರು, ಗೌತಮ ಪುರ ಎಲ್ಲಾ ನನ್ನ ಒಡನಾಟದ ಊರುಗಳು.
ನಾನು ಇವರ ಮಲೆ ಘಟ್ಟ ಪ್ರಸ್ತಕ ಕಥಾ ಸಂಕಲನ ಅಂತ ಮಾಡಿದ್ದೆ ಇವತ್ತು ಓದಿದ ಮೇಲೆ ಗೊತ್ತ್ತಾಯಿತು ಪಶ್ಚಿಮ ಘಟ್ಟದ ಇಂಡಿಕರಣ, ಬಗರ್ ಹುಕುಂ, ಶಿಕಾರಿ, ಶುಂಠಿ ಹತ್ತಿ ಬೆಳೆಯ ಪರಿಣಾಮ, ಮಲೆನಾಡು ಗಿಡ್ಡಗಳ ಕೃತಕ ಗಭ೯ದಾರಣೆ, ಗಾಡ್ಗಿಳರ, ಕಸ್ತೂರಿ ರಂಗನ್ರ ವರದಿಗಳ ಮೇಲಿನ ಪುಸ್ತಕ ಅಂತ.
ಈ ಪುಸ್ತಕ ಜಿಲ್ಲೆಯ ರಾಜಕೀಯ ಪಕ್ಷಗಳ ಉಮೇದುದಾರರು, ಪಕ್ಷಗಳ ಪದಾಧಿಕಾರಿಗಳು ಓದಿದರೆ ಒಳಿತು ಆದರೆ ಪ್ರಸಕ್ತ ಜಿಲ್ಲೆಯ ರಾಜಕಾರಣಿಗಳಲ್ಲಿ ಇಂತಹ ಮಾಹಿತಿ ತಿಳಿಯುವ ವ್ಯವದಾನ ಕಡಿಮೆ.
ಏನೇ ಆಗಲಿ ಸಾಗರ ತಾಲ್ಲೂಕಿನ ಆನಂದಪುರO ಹೋಬಳಿಯ ಶಶಿ ಸಂಪಳ್ಳಿಯ ವೈಚಾರಿಕ ನಡೆ, ನುಡಿ ಮತ್ತು ಕೃತಿ ನನಗೆ ಸದಾ ಸಂತೋಷದ ವಿಷಯವಾಗಿದೆ.
ಮುಂದಿನ ದಿನದಲ್ಲಿ ಇವರಿಂದ ಇನ್ನೂ ಹೆಚ್ಚಿನ ಉಪಯುಕ್ತ ಬರಹಗಳ ಪುಸ್ತಕ ಬರಲಿ ಎಂದು ಹಾರೈಸುತ್ತೇನೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment