# ವಿಶೇಷ ವ್ಯಕ್ತಿ, ಅನಿವಾಸಿ ಭಾರತೀಯ, ಕಾಸರಗೋಡಿನ ಕನ್ನಡಿಗ ಕುಮಾರ್ ಕು೦ಟಿಕಾನಮಠ #
ಇವರು ಕೇರಳದ ಕಾಸರ ಗೋಡಿನ ಕುಂಟಿಕಾನ ಮಠದ ಪ್ರಖ್ಯಾತ ಸಾಹಿತಿ , ಕನ್ನಡ ಅಧ್ಯಾಪಕರಾದ ಬಾಲಕೃಷ್ಣ ಭಟ್ಟರ ಮಗ, ಹಾಲಿ ಲಂಡನ್ ನಲ್ಲಿದ್ದಾರೆ.
ಅಲ್ಲಿಯೂ ಕನ್ನಡದ ಕಾಯ೯ಕ್ರಮಕ್ಕಾಗಿ ಸದಾ ಮುಂದು, ರಾಜ್ಯದಿಂದ ಲಂಡನ್ ಗೆ ಹೋಗುವ ಪತ್ರಕತ೯ರು, ಸಾಹಿತಿಗಳು, ರಾಜಕಾರಣಿಗಳಿಗೆ ಇವರು ಅತಿಥೆಯರು.
ಇವರ ತಂದೆ ಬರೆದ ಅನೇಕ ಸಾಹಿತ್ಯ ಕಥೆ ಕಾದ೦ಬರಿಗಳಲ್ಲಿ ಶೇಕಡ 50 %ರಷ್ಟು ಇನ್ನೂ ಪ್ರಕಟವಾಗಿಲ್ಲ, ಇತ್ತೀಚಿಗೆ ಶ್ರೀರಾಮ ಕಥಾಮOಜರಿ ಎಂಬ ಗದ್ಯ ಕಾವ್ಯದ ಪುನರ್ ಮುದ್ರಣ ಮಾಡಿ ಬಿಡುಗಡೆ ಮಾಡಿದ್ದಾರೆ.
ತಂದೆಯ ಬಗ್ಗೆ ಇವರಿಗಿರುವ ಪ್ರೀತಿ ಅಭಿಮಾನಕ್ಕೆ ನಾನು ಅಭಾರಿ, ತಂದೆಯ ಆಸೆಯ೦ತೆ ಹುಟ್ಟಿದ ಊರಿನ ದೇವಸ್ಥಾನ ಪುನರ್ ಪ್ರತಿಷ್ಟಾಪನೆ ಕಾಯ೯ ಕೂಡ ಮಾಡುತ್ತಿದ್ದಾರೆ.
ಇವರು ಒಂದು ಕಾಲದಲ್ಲಿ ರಾಮಚಂದ್ರ ಮಠಕ್ಕೆ ದೊಡ್ಡ ಭಕ್ತರೂ ದಾನಿಗಳು, ನಂತರ ಇವರ ಕುಂಟಿಕಾನ್ ಮಠವನ್ನ ಸ್ವಾಮಿಗಳು ಮತ್ತು ಅವರ ಪಟಾಲಂ ಕಾನೂನು ಬಾಹಿರವಾಗಿ ಬಲತ್ಕಾರದಿ೦ದ ವಶಪಡಿಸಿಕೊಂಡದ್ದನ್ನ ವಿರೋದಿಸಿ ಕಾಸರಗೋಡು ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿ ಗೆದ್ದು ಬಿಡಿಸಿಕೊಂಡ ಛಲಗಾರ ಇವರು, ಇವರ ಕುಟುಂಬದ ಮೇಲೆ ನಡೆದ ದೌಜ೯ನ್ಯ ಅಮಾನಿಯವಾದದ್ದು (ಈ ಬಗ್ಗೆ ವಿವರವಾದ ಟಿವಿ ಸಂದಶ೯ನದ ವಿಡಿಯೋ ನೋಡಿ).
ಇವತ್ತು ಇವರು ಪುನರ್ ಮುದ್ರಿಸಿದ ಪ್ರತಿ ಕೋರಿಯರ್ ನಲ್ಲಿ ಹೊಸ ವರುಷದ ಕೊಡುಗೆಯ೦ತೆ ಬಂತು.
ನನಗೂ ನನ್ನ ಹೆತ್ತವರ ಬಗ್ಗೆ ಅಪಾರ ಪ್ರೀತಿ, ಅವರ ಹೆಸರ ಚಿರಸ್ಥಾಯಿಗೊಳಿಸಲು ಅವರಿಬ್ಬರ ಹೆಸರಲ್ಲಿ ಕಲ್ಯಾಣ ಮಂಟಪ ಕಟ್ಟಿಸಿದ್ದು, ಇದೇ ರೀತಿ ತಮ್ಮ ತಂದೆಯ ಪ್ರೀತಿಗಾಗಿ ಪ್ರಸ್ತಕ ಪುನರ್ ಮುದ್ರಿಸಿರುವ ಶ್ರೀ ಕುಮಾರ್ ಕುಂಟಿಕಾನ್ ಮಠ ಇವರ ಬಗ್ಗೆ ಹೆಮ್ಮೆ ಅನ್ನಿಸುತ್ತೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment