# ಮಲೆನಾಡಿನ ದೌಬಾ೯ಗ್ಯ, ಬಗೆ ಹರಿಯದ ನಿಗೂಡ ಕಾಯಿಲೆಗಳು #
ಕನಿಷ್ಟ ಸೀಮೆ ಎಣ್ಣೆ ಆದರೂ ಸರಬರಾಜಾಗಲಿ.
ಯಡಿಯೂರಪ್ಪ, ಈಶ್ವರಪ್ಪರ ಆಸ್ಪತ್ರೆ, ನಂಜಪ್ಪ, ಸುಬ್ಬಯ್ಯ ಆಸ್ಪತ್ರೆಗಳು ಸಹಕರಿಸಲಿ.
1950ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕ್ಯಾಸನೂರಲ್ಲಿ ಕ೦ಡು ಬ೦ದ ಮಂಗನ ಕಾಯಿಲೆ ಮತ್ತು ಸಾಗರ ತಾಲ್ಲೂಕಿನ ಹಂದಿಗೋಡಿನಲ್ಲಿ ಕಂಡು ಬಂದ ಹಂದಿಗೋಡು ಸಿಂಡ್ರೋಮ್ ಡಿಸೀಸ್ಗಳಿಂದ ಸುಮಾರು 60 ವಷ೯ ಆದರೂ ಬಗೆಹರಿಯದ ಬವಣೆ ಆಗಿದೆ.
2019ರ ಹೊಸ ವಷ೯ದ ಮೊದಲ ವಾರದಲ್ಲಿಯೇ ಸಾಗರ ತಾಲ್ಲೂಕಿನ ಜೋಗ ಜಲಪಾತದ ಸಮೀಪದ ಅರಲಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತು ತೀಥ೯ಹಳ್ಳಿ ತಾಲ್ಲೂಕನಲ್ಲಿ ಒಟ್ಟು 7 ಜನ ಮೃತರಾಗಿದ್ದಾರೆ.
ಅನೇಕರು ಸಕಾ೯ರಿ ಮತ್ತು ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ಇದು ನಿಯಂತ್ರಣಕ್ಕೆ ಬರುತ್ತೊ ಅಥವ ವಿನಾಶಕ್ಕೆ ಹೋಗುತ್ತದೋ ಗೊತ್ತಿಲ್ಲ, ಸಕಾ೯ರ, ಜನಪ್ರತಿನಿಧಿಗಳನ್ನ ದೂರುತ್ತಾ ಕುಳಿತು ಕೊಳ್ಳದೆ ಈ ಭಾಗದ ಜನರಿಗೆ ಜನಜಾಗೃತಿ ಮಾಡುವ, ಕಾಯಿಲೆ ಹರಡದಂತೆ ನಿತ್ಯ ದೇಹಕ್ಕೆ ಹಚ್ಚಿಕೊಳ್ಳಲು ರೋಗ ನಿರೋದಕ ತೈಲ, ಚುಚ್ಚುಮದ್ದು ತಕ್ಷಣ ಸರಬರಾಜು ಆಗಬೇಕು.
ಸೀಮೆ ಎಣ್ಣಿ ಕೈ ಕಾಲಿಗೆ ಸಂಜೆ ಸವರಿಕೊಂಡರೆ ಮಂಗನ ಕಾಯಿಲೆ ಹರಡುವ ಉಣ್ಣೆಗಳಿಂದ ರಕ್ಷಿಸಿಕೊಳ್ಳಬಹುದು ಎಂದು ಅನುಭವಿಗಳು ಹೇಳುತ್ತಾರೆ, ಈ ಬಾಗದಲ್ಲಿ ಸೀಮೆ ಎಣ್ಣಿ ಸಿಗುತ್ತಿಲ್ಲ ಅಂತಿದ್ದಾರೆ ಜಿಲ್ಲಾ ಆಡಳಿತ ಗಮನ ಹರಿಸಲಿ.
ಶಿವಮೊಗ್ಗದ ನಂಜಪ್ಪ ಆಸ್ಪತ್ರೆ, ಮ್ಯಾಕ್ಸ್ ಆಸ್ಪತ್ರೆ, ಯಡೂರಪ್ಪರ ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಈಶ್ವರಪ್ಪರ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಗಳು ಈ ಬಾಗದಲ್ಲಿ ಸಕಾ೯ರದ ಜೊತೆ ಕೈ ಜೋಡಿಸಬಹುದು.
ಹಂದಿಗೋಡು ಕಾಯಿಲೆ ಪೀಡಿತರ ಸಮಸ್ಯೆ ಈವರೆಗೆ ಬಗೆ ಹರಿದಿಲ್ಲ, ಒಮ್ಮೆ ಮುಖ್ಯಮಂತ್ರಿ ಆಗಿದ್ದ ಕುಮಾರ್ ಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದರು, ಈಗ ಆವರೇ ಮುಖ್ಯಮಂತ್ರಿ ಆಗಿದ್ದಾರೆ. .ಇವತ್ತು ಮಂಗನ ಕಾಯಿಲೆಗೆ ಬಲಿಯಾದ ವಿದ್ಯಾಥಿ೯ನಿ ಶ್ವೇತಾ (5 ಜನವರಿ 2019)
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment