ಖಾಸಾಗಿ ಮಾಲಿಕತ್ವದ ಆ ಸ್ಪತ್ರೆಗಳ Hub ಆಗಿ ಮಾಪ೯ಟ್ಟಿರುವ ಶಿವಮೊಗ್ಗದಲ್ಲಿ corporate hospitalಗಳ ಎಲ್ಲಾ ಆಚಾರ ಅನಾಚಾರಗಳ ನಡುವೆ ಆಶಾವಾದದ ಚಾರಿಟಬಲ್ ಡಯಾಲಿಸಿಸ್ ಆಸ್ಪತ್ರೆ ಪ್ರಾರಂಬಿಸಿರುವುದು ಸಂತೋಷದ ವಿಷಯ, ಇವತ್ತಿನ ದಿನದಲ್ಲಿ ಡಯಾಲಿಸಿಸ್ಗೆ ಹಣ ಹೊಂದಿಸಲಾರದ ಅನೇಕ ಬಡ ಮಧ್ಯಮ ವಗ೯ದ ರೋಗಿಗಳು ಮತ್ತು ಅವರ ಕುಟುಂಬದ ಯಾತನೆ ಅಸಾಧ್ಯವಾದ ನೋವು ಗೊತ್ತಿದ್ದವರಿಗೆ ಮಾತ್ರ ಅಥ೯ವಾದೀತು.
ಈ ಯೋಗ್ಯ ಕಾಯ೯ದ ಯೋಜನೆ ಮತ್ತು ಕಾಯ೯ಶೀಲಗೊಳಿಸಿದ ಎಲ್ಲಾ ದಾನಿ ದಯಾಳುಗಳಿಗೆ ಕೃತಜ್ಞತೆಗಳೊಂದಿಗೆ ಶುಭ ಹಾರೈಕೆಗಳು.
ಇಲ್ಲಿ ಪ್ರತಿದಿನಕ್ಕೆ 25 ರೋಗಿಗಳಿಗೆ 500 ರೂಪಾಯಿಗೆ ಡಯಾಲಿಸಿಸ್ ಚಿಕಿತ್ಸೆ ನೀಡುತ್ತಾರೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment