# ಇವರಲ್ಲಿ ಮಲೇಷಿಯಾದ ಹೊಸ ಹಲಸಿನ ತಳಿ ಇದೆ#
ಈ ಹಲಸು 3 ವಷ೯ಕ್ಕೆ ಫಲ ನೀಡುತ್ತೆ, ದಸರಾದಿಂದ ಪ್ರಾರಂಭವಾಗಿ ಯುಗಾದಿ ಹಬ್ಬದ ತನಕ ಹಣ್ಣು ಸಿಗುತ್ತೆ .
ಸ್ಥಳೀಯ ಹಲಸು ಈ ಕಾಲದಲ್ಲಿ ಸಿಗುವುದಿಲ್ಲ ಅಂತ ಮೊನ್ನೆ ನನ್ನ ಬೇಟಿ ಮಾಡಲು ಹಲವು ವಷ೯ದ ನಂತರ ಬಂದ ರಿಪ್ಪನ್ ಪೇಟೆಯ ಅಂಕುರ್ ನಸ೯ರಿಯ ಅನಂತಮೂತಿ೯ ಜವುಳಿ ತಿಳಿಸಿದರು.
ಇವರ ಸೆಲ್ ನಂಬರ್ 9448554514.
ಈ ಬಗ್ಗೆ ಅವರು ಮಾತಾಡುವಾಗ ಅವರಿಗೆ ಗೊತ್ತಾಗದಂತೆ ರೆಕಾಡ್೯ ಮಾಡಿದ ವಿಡಿಯೋ ಇದೆ ನೋಡಿ.
ಇವರ ಹಿನ್ನೆಲೆ ದೊಡ್ಡದಿದೆ ಈ ನಸ೯ರಿ 11 ಎಕರೆ ಪಿತ್ರಾಜಿ೯ತವಾಗಿ ಇವರಿಗೆ ಬಂದ ಆಸ್ತಿ, ಈ ವರೆಗೆ ಸಕಾ೯ರದ ಸಹಾಯಧನ ಪಡೆದಿಲ್ಲ, ಉಚಿತ ವಿದ್ಯುತ್ ಪಡೆದಿಲ್ಲ, ನಸ೯ರಿ ಪ್ರಾರಂಬಿಸಿ 6 ತಿಂಗಳಲ್ಲೇ ಲಾಭ ಪಡೆಯಲು ಪ್ರಾರ೦ಬಿಸಿದ್ದಾರೆ.
ಲಂಚ ಕೊಡುವುದಿಲ್ಲ ಹಾಗು ಲಂಚ ಪಡೆಯುವುದಿಲ್ಲ ಎಂಬ ಇವರ ಶಪತದಿಂದ ಬಹುಸಂಖ್ಯಾತ ಬ್ರಷ್ಟರು 1980ರ ದಶಕದಲ್ಲಿ ಕೆ.ಇ.ಬಿ. ಎಂಬ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯಟೀವ್ ಇಂಜಿನೀಯರ್ ಆಗಿದ್ದ ಇವರಿಂದ ತೊಂದರೆ ಪಟ್ಟು ಎಲ್ಲಾ ರೀತಿಯ ಸಾಮ, ಬೇದ ಮತ್ತು ದಂಡ ಪ್ರಯೋಗ ಮಾಡಿದರೂ ಇವರನ್ನ ಬದಲಿಸಲಾಗಲಿಲ್ಲ ಕೊನೆಗೆ ಇವರೇ ಸಕಾ೯ರಿ ಕೆಲಸಕ್ಕೆ ಸಲಾಂ ಹೊಡೆದು ಈ ಸ್ವಂತ ಕೃಷಿ ಉದ್ದಿಮೆ ಸ್ಥಾಪಿಸಿದ್ದಾರೆ.
ಕೆಲಸ ಬಿಟ್ಟ ಬಗ್ಗೆ ನಿಮಗೆ ಈಗಲಾದರೂ ತಪ್ಪು ಅನಿಸಿದೆಯಾ? ಅಂದೆ, ಖಂಡಿತಾ ಇಲ್ಲ ಈ ಸ್ವಾತಂತ್ರ ಅಲ್ಲಿ ಇರುತ್ತಿರಲಿಲ್ಲ ಅಂದರು.
ನಿಮ್ಮ ಪತ್ನಿ, ಅಂದು ಬಂದುಗಳು ಅಗ ಏನು ಹೇಳಿದರು ಅಂತ ಕೇಳಿದ್ದಕ್ಕೆ ಅವರು ಹೇಳಿದ್ದು
" ನನ್ನ ಪತ್ನಿ ಸಂತೋಷ ಪಟ್ಟರು ಒತ್ತಡದ ಕೆಲಸ ಬೇಡ ಬಿಡಿ ಅಂದರು, ಕೆಲಸದಲ್ಲಿ ಮುಂದುವರಿದಿದ್ದರೆ ನಾನು ಜೀವ೦ತ ಇರಲು ಅವರೆಲ್ಲ ಬಿಡುತ್ತಿರಲಿಲ್ಲ, ಗೆಳೆಯರು ಇಂತ ಒಳ್ಳೆ ಕೆಲಸ ಬಿಡಬಾರದಿತ್ತು ಅಂದರು, ನಾನು ಅವರಿಗೆ ಹೇಳಿದ್ದು 20 ರೂಪಾಯಿ ಪೋಸ್ಟಲ್ ಆಡ೯ರ್ ಅಷ್ಟೆ ನಾನು ಖಚು೯ ಮಾಡಿದ್ದು ಅಂತ ಅಂದೆ ಅಂತ ಹೇಳಿದರು.
ಭ್ರಷ್ಟಾಚಾರದ ನನ್ನ ಅನೇಕ ಹೋರಾಟದಲ್ಲಿ ನನಗೆ ಸದಾ ನೆನಪಾಗುವುದು ಈ ಅನಂತ ಮೂತಿ೯ ಜವುಳಿ, ನಾವು 1978ರಲ್ಲಿ ಆನಂದಪುರದಿಂದ ಸಾಗರಕ್ಕೆ ಶಾಲೆಗೆ ಹೋಗುವಾಗ ರೈಲಿನಲ್ಲಿ ಈ ಜವುಳಿ ನಮಗೆ ಹಿರಿಯ ಸಹ ಪ್ರಯಾಣಿಕ ಗೆಳೆಯರಾಗಿದ್ದರು.
ಭ್ರಷ್ಟ ವ್ಯವಸ್ಥೆಯಲ್ಲಿ ಪ್ರಾಮಾಣಿಕರು ಬದುಕಲು ಕಷ್ಟ ಸಾಧ್ಯವಲ್ಲವೆ?.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment