Skip to main content

# ಅನಂತ ಮೂತಿ೯ ಜವುಳಿ ಅಂಕುರ್ ನಸ೯ರಿ ರಿಪ್ಪನಪೇಟೆ#

# ಇವರಲ್ಲಿ ಮಲೇಷಿಯಾದ ಹೊಸ ಹಲಸಿನ ತಳಿ ಇದೆ#
ಈ ಹಲಸು 3 ವಷ೯ಕ್ಕೆ ಫಲ ನೀಡುತ್ತೆ, ದಸರಾದಿಂದ ಪ್ರಾರಂಭವಾಗಿ ಯುಗಾದಿ ಹಬ್ಬದ ತನಕ ಹಣ್ಣು ಸಿಗುತ್ತೆ .
  ಸ್ಥಳೀಯ ಹಲಸು ಈ ಕಾಲದಲ್ಲಿ ಸಿಗುವುದಿಲ್ಲ ಅಂತ ಮೊನ್ನೆ ನನ್ನ ಬೇಟಿ ಮಾಡಲು ಹಲವು ವಷ೯ದ ನಂತರ ಬಂದ ರಿಪ್ಪನ್ ಪೇಟೆಯ ಅಂಕುರ್ ನಸ೯ರಿಯ ಅನಂತಮೂತಿ೯ ಜವುಳಿ ತಿಳಿಸಿದರು.
ಇವರ ಸೆಲ್ ನಂಬರ್ 9448554514.
ಈ ಬಗ್ಗೆ ಅವರು ಮಾತಾಡುವಾಗ ಅವರಿಗೆ ಗೊತ್ತಾಗದಂತೆ ರೆಕಾಡ್೯ ಮಾಡಿದ ವಿಡಿಯೋ ಇದೆ ನೋಡಿ.
  ಇವರ ಹಿನ್ನೆಲೆ ದೊಡ್ಡದಿದೆ ಈ ನಸ೯ರಿ 11 ಎಕರೆ ಪಿತ್ರಾಜಿ೯ತವಾಗಿ ಇವರಿಗೆ ಬಂದ ಆಸ್ತಿ, ಈ ವರೆಗೆ ಸಕಾ೯ರದ ಸಹಾಯಧನ ಪಡೆದಿಲ್ಲ, ಉಚಿತ ವಿದ್ಯುತ್ ಪಡೆದಿಲ್ಲ, ನಸ೯ರಿ ಪ್ರಾರಂಬಿಸಿ 6 ತಿಂಗಳಲ್ಲೇ ಲಾಭ ಪಡೆಯಲು ಪ್ರಾರ೦ಬಿಸಿದ್ದಾರೆ.
  ಲಂಚ ಕೊಡುವುದಿಲ್ಲ ಹಾಗು ಲಂಚ ಪಡೆಯುವುದಿಲ್ಲ ಎಂಬ ಇವರ ಶಪತದಿಂದ ಬಹುಸಂಖ್ಯಾತ ಬ್ರಷ್ಟರು 1980ರ ದಶಕದಲ್ಲಿ ಕೆ.ಇ.ಬಿ. ಎಂಬ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯಟೀವ್ ಇಂಜಿನೀಯರ್ ಆಗಿದ್ದ ಇವರಿಂದ ತೊಂದರೆ ಪಟ್ಟು ಎಲ್ಲಾ ರೀತಿಯ ಸಾಮ, ಬೇದ ಮತ್ತು ದಂಡ ಪ್ರಯೋಗ ಮಾಡಿದರೂ ಇವರನ್ನ ಬದಲಿಸಲಾಗಲಿಲ್ಲ ಕೊನೆಗೆ ಇವರೇ ಸಕಾ೯ರಿ ಕೆಲಸಕ್ಕೆ ಸಲಾಂ ಹೊಡೆದು ಈ ಸ್ವಂತ ಕೃಷಿ ಉದ್ದಿಮೆ ಸ್ಥಾಪಿಸಿದ್ದಾರೆ.
  ಕೆಲಸ ಬಿಟ್ಟ ಬಗ್ಗೆ ನಿಮಗೆ ಈಗಲಾದರೂ ತಪ್ಪು ಅನಿಸಿದೆಯಾ? ಅಂದೆ, ಖಂಡಿತಾ ಇಲ್ಲ ಈ ಸ್ವಾತಂತ್ರ ಅಲ್ಲಿ ಇರುತ್ತಿರಲಿಲ್ಲ ಅಂದರು.
  ನಿಮ್ಮ ಪತ್ನಿ, ಅಂದು ಬಂದುಗಳು ಅಗ ಏನು ಹೇಳಿದರು ಅಂತ ಕೇಳಿದ್ದಕ್ಕೆ ಅವರು ಹೇಳಿದ್ದು
" ನನ್ನ ಪತ್ನಿ ಸಂತೋಷ ಪಟ್ಟರು ಒತ್ತಡದ ಕೆಲಸ ಬೇಡ ಬಿಡಿ ಅಂದರು, ಕೆಲಸದಲ್ಲಿ ಮುಂದುವರಿದಿದ್ದರೆ ನಾನು ಜೀವ೦ತ ಇರಲು ಅವರೆಲ್ಲ ಬಿಡುತ್ತಿರಲಿಲ್ಲ, ಗೆಳೆಯರು ಇಂತ ಒಳ್ಳೆ ಕೆಲಸ ಬಿಡಬಾರದಿತ್ತು ಅಂದರು, ನಾನು ಅವರಿಗೆ ಹೇಳಿದ್ದು 20 ರೂಪಾಯಿ ಪೋಸ್ಟಲ್ ಆಡ೯ರ್ ಅಷ್ಟೆ ನಾನು ಖಚು೯ ಮಾಡಿದ್ದು ಅಂತ ಅಂದೆ ಅಂತ ಹೇಳಿದರು.
  ಭ್ರಷ್ಟಾಚಾರದ ನನ್ನ ಅನೇಕ ಹೋರಾಟದಲ್ಲಿ ನನಗೆ ಸದಾ ನೆನಪಾಗುವುದು ಈ ಅನಂತ ಮೂತಿ೯ ಜವುಳಿ, ನಾವು 1978ರಲ್ಲಿ ಆನಂದಪುರದಿಂದ ಸಾಗರಕ್ಕೆ ಶಾಲೆಗೆ ಹೋಗುವಾಗ ರೈಲಿನಲ್ಲಿ ಈ ಜವುಳಿ ನಮಗೆ ಹಿರಿಯ ಸಹ ಪ್ರಯಾಣಿಕ ಗೆಳೆಯರಾಗಿದ್ದರು.
ಭ್ರಷ್ಟ ವ್ಯವಸ್ಥೆಯಲ್ಲಿ ಪ್ರಾಮಾಣಿಕರು ಬದುಕಲು ಕಷ್ಟ ಸಾಧ್ಯವಲ್ಲವೆ?.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...