# ಇವರಲ್ಲಿ ಮಲೇಷಿಯಾದ ಹೊಸ ಹಲಸಿನ ತಳಿ ಇದೆ#
ಈ ಹಲಸು 3 ವಷ೯ಕ್ಕೆ ಫಲ ನೀಡುತ್ತೆ, ದಸರಾದಿಂದ ಪ್ರಾರಂಭವಾಗಿ ಯುಗಾದಿ ಹಬ್ಬದ ತನಕ ಹಣ್ಣು ಸಿಗುತ್ತೆ .
ಸ್ಥಳೀಯ ಹಲಸು ಈ ಕಾಲದಲ್ಲಿ ಸಿಗುವುದಿಲ್ಲ ಅಂತ ಮೊನ್ನೆ ನನ್ನ ಬೇಟಿ ಮಾಡಲು ಹಲವು ವಷ೯ದ ನಂತರ ಬಂದ ರಿಪ್ಪನ್ ಪೇಟೆಯ ಅಂಕುರ್ ನಸ೯ರಿಯ ಅನಂತಮೂತಿ೯ ಜವುಳಿ ತಿಳಿಸಿದರು.
ಇವರ ಸೆಲ್ ನಂಬರ್ 9448554514.
ಈ ಬಗ್ಗೆ ಅವರು ಮಾತಾಡುವಾಗ ಅವರಿಗೆ ಗೊತ್ತಾಗದಂತೆ ರೆಕಾಡ್೯ ಮಾಡಿದ ವಿಡಿಯೋ ಇದೆ ನೋಡಿ.
ಇವರ ಹಿನ್ನೆಲೆ ದೊಡ್ಡದಿದೆ ಈ ನಸ೯ರಿ 11 ಎಕರೆ ಪಿತ್ರಾಜಿ೯ತವಾಗಿ ಇವರಿಗೆ ಬಂದ ಆಸ್ತಿ, ಈ ವರೆಗೆ ಸಕಾ೯ರದ ಸಹಾಯಧನ ಪಡೆದಿಲ್ಲ, ಉಚಿತ ವಿದ್ಯುತ್ ಪಡೆದಿಲ್ಲ, ನಸ೯ರಿ ಪ್ರಾರಂಬಿಸಿ 6 ತಿಂಗಳಲ್ಲೇ ಲಾಭ ಪಡೆಯಲು ಪ್ರಾರ೦ಬಿಸಿದ್ದಾರೆ.
ಲಂಚ ಕೊಡುವುದಿಲ್ಲ ಹಾಗು ಲಂಚ ಪಡೆಯುವುದಿಲ್ಲ ಎಂಬ ಇವರ ಶಪತದಿಂದ ಬಹುಸಂಖ್ಯಾತ ಬ್ರಷ್ಟರು 1980ರ ದಶಕದಲ್ಲಿ ಕೆ.ಇ.ಬಿ. ಎಂಬ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯಟೀವ್ ಇಂಜಿನೀಯರ್ ಆಗಿದ್ದ ಇವರಿಂದ ತೊಂದರೆ ಪಟ್ಟು ಎಲ್ಲಾ ರೀತಿಯ ಸಾಮ, ಬೇದ ಮತ್ತು ದಂಡ ಪ್ರಯೋಗ ಮಾಡಿದರೂ ಇವರನ್ನ ಬದಲಿಸಲಾಗಲಿಲ್ಲ ಕೊನೆಗೆ ಇವರೇ ಸಕಾ೯ರಿ ಕೆಲಸಕ್ಕೆ ಸಲಾಂ ಹೊಡೆದು ಈ ಸ್ವಂತ ಕೃಷಿ ಉದ್ದಿಮೆ ಸ್ಥಾಪಿಸಿದ್ದಾರೆ.
ಕೆಲಸ ಬಿಟ್ಟ ಬಗ್ಗೆ ನಿಮಗೆ ಈಗಲಾದರೂ ತಪ್ಪು ಅನಿಸಿದೆಯಾ? ಅಂದೆ, ಖಂಡಿತಾ ಇಲ್ಲ ಈ ಸ್ವಾತಂತ್ರ ಅಲ್ಲಿ ಇರುತ್ತಿರಲಿಲ್ಲ ಅಂದರು.
ನಿಮ್ಮ ಪತ್ನಿ, ಅಂದು ಬಂದುಗಳು ಅಗ ಏನು ಹೇಳಿದರು ಅಂತ ಕೇಳಿದ್ದಕ್ಕೆ ಅವರು ಹೇಳಿದ್ದು
" ನನ್ನ ಪತ್ನಿ ಸಂತೋಷ ಪಟ್ಟರು ಒತ್ತಡದ ಕೆಲಸ ಬೇಡ ಬಿಡಿ ಅಂದರು, ಕೆಲಸದಲ್ಲಿ ಮುಂದುವರಿದಿದ್ದರೆ ನಾನು ಜೀವ೦ತ ಇರಲು ಅವರೆಲ್ಲ ಬಿಡುತ್ತಿರಲಿಲ್ಲ, ಗೆಳೆಯರು ಇಂತ ಒಳ್ಳೆ ಕೆಲಸ ಬಿಡಬಾರದಿತ್ತು ಅಂದರು, ನಾನು ಅವರಿಗೆ ಹೇಳಿದ್ದು 20 ರೂಪಾಯಿ ಪೋಸ್ಟಲ್ ಆಡ೯ರ್ ಅಷ್ಟೆ ನಾನು ಖಚು೯ ಮಾಡಿದ್ದು ಅಂತ ಅಂದೆ ಅಂತ ಹೇಳಿದರು.
ಭ್ರಷ್ಟಾಚಾರದ ನನ್ನ ಅನೇಕ ಹೋರಾಟದಲ್ಲಿ ನನಗೆ ಸದಾ ನೆನಪಾಗುವುದು ಈ ಅನಂತ ಮೂತಿ೯ ಜವುಳಿ, ನಾವು 1978ರಲ್ಲಿ ಆನಂದಪುರದಿಂದ ಸಾಗರಕ್ಕೆ ಶಾಲೆಗೆ ಹೋಗುವಾಗ ರೈಲಿನಲ್ಲಿ ಈ ಜವುಳಿ ನಮಗೆ ಹಿರಿಯ ಸಹ ಪ್ರಯಾಣಿಕ ಗೆಳೆಯರಾಗಿದ್ದರು.
ಭ್ರಷ್ಟ ವ್ಯವಸ್ಥೆಯಲ್ಲಿ ಪ್ರಾಮಾಣಿಕರು ಬದುಕಲು ಕಷ್ಟ ಸಾಧ್ಯವಲ್ಲವೆ?.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment