Skip to main content

ಶಿವಮೊಗ್ಗದ ನೆಹರೂ ರಸ್ತೆಯ ಎರಡನೇ ಕ್ರಾಸಿನಲ್ಲಿ ಶೋಭಾ ಸ್ಟೋರ್ ಪಕ್ಕದ ಕಿರಿದಾದ ಓಣಿಯಲ್ಲಿದೆ MH ಕಾಫೀ ಶಾಪ್ ಇಲ್ಲಿನ ಉತ್ಕೃಷ್ಟ ಪಿಲ್ಟ್ ರ್ ಕಾಫೀ ಮತ್ತು ಟೀಗಾಗಿ ಜನ ಹುಡುಕಿಕೊಂಡು ಬರುತ್ತಾರೆ.

#ಶಿವಮೊಗ್ಗ_ಪೇಟೆಯಲ್ಲೇ_ಉತ್ಕೃಷ್ಟ_ಕಾಫಿ_ಟೇ_ಸಿಗುವ_ಏಕೈಕ_ಸ್ಥಳ.

#ನೆಹರೂ_ರಸ್ತೆಯ_ಎರಡನೆ_ತಿರುವಿನ_ಶೋಬಾ_ಸ್ಟೋರ್_ಪಕ್ಕದ_ಓಣಿಯಲ್ಲಿದೆ.

#ಸಜ್ಜನ_ಮಾಲಿಕ_ಭಾಷರವರ_MH_ಕಾಫಿ_ಶಾಪ್.

  2012ರಲ್ಲಿ ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ಪ್ರಾರಂಬಿಸುವ ಮುಂಚೆ ಅನೇಕ ಪ್ಲೇಯರ್ ಗಳ ನಾಟಕ ಮತ್ತು ಮೋಸ ಅನುಭವಿಸಿ ಸ್ವಂತ ಪ್ರಾರಂಬಿಸುವ ಅನಿವಾರ್ಯ ಪ್ರಸಂಗ ಉಂಟಾದಾಗ ನಾನು ನಮ್ಮ ರಾಜ್ಯ ಮಾತ್ರವಲ್ಲ ಗೋವಾ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಹೋಟೆಲ್ ಗಳಲ್ಲಿ ಅನುಭವ ಪಡೆದಿದ್ದೆ.
  ಶಿವಮೊಗ್ಗದ #ಮಿನಾಕ್ಷಿ_ಭವನದ ಉದ್ದ ಗ್ಲಾಸಿನ ಟೀ ಕಾಫಿಯ ಆಕಷ೯ಣೆ ಯಾವತ್ತೂ ನನಗೆ ಆದ್ದರಿಂದ ಆ ಗ್ಲಾಸ್ ಸೆಲೆಕ್ಟ್ ಮಾಡಿಕೊಂಡೆ ಆದರೆ ಟೀ ಮತ್ತು ಕಾಪಿ ವಿಚಾರದಲ್ಲಿ ಆಯ್ಕೆ ಅಂತಿಮ ಆಗಲೇ ಇಲ್ಲ.
  ಶಿವಮೊಗ್ಗದ #ಶ್ಯಾಮ್_ಟ್ರೇಡರ್ಸ್ನ ಮಾಲಿಕರು ಅವರ ಅನುಭವದ ಕಾಫಿ ಪಿಲ್ಟರ್ ಶಿಪಾರಸ್ಸು ಮಾಡಿದ್ದೆಲ್ಲ ಖರೀದಿಸಿದೆ ಆದರೆ ನನ್ನ ನಿರೀಕ್ಷೆ ಈಡೇರಲೇ ಇಲ್ಲ.
  ಇದೇ ಸಂದರ್ಭದಲ್ಲಿ ನೆಹರೂ ರಸ್ತೆಯ #ಶೋಬಾ_ಸ್ಟೋರ್ ಗೆ ಹೋದವನು (2012ರಲ್ಲಿ) ಪಕ್ಕದ ಕಿರಿದಾದ ಓಣಿಯಲ್ಲಿ #ಶೃಂಗೇಶರ_ಜನಹೋರಾಟ ದಿನಪತ್ರಿಕೆ ಕಛೇರಿಗೆ ಹೋದಾಗ ಅವರು ಬನ್ನಿ ಕಾಫಿ ಕುಡಿಯೋಣ ಪಕ್ಕದಲ್ಲೇ ಒಳ್ಳೇ ಕ್ಯಾಂಟೀನ್ ಇದೆ ಅಂದರು.
 ಅವತ್ತು ಅಲ್ಲಿ ಕಾಫಿ ಕುಡಿದವನು ಇವತ್ತೂ ಹತ್ತು ವರ್ಷದಲ್ಲಿ ಶಿವಮೊಗ್ಗಕ್ಕೆ ಹೋದಾಗ ಇಲ್ಲೇ ಕಾಫಿ-ಟೀ ಕುಡಿಯುವುದು.
  ಸಜ್ಜನ ಮಾಲಿಕ ಮಿತಭಾಷಿ #ಬಾಷಾರ  #MH_ಕಾಪೀ_ಶಾಪ್ ಅಷ್ಟು ಪ್ರಸಿದ್ಧಿ ಪಡೆಯಲು ಕಾರಣ ಇಲ್ಲಿನ ಉತ್ಕೃಷ್ಟ ಪಿಲ್ಟರ್ ಕಾಫಿ ಮತ್ತು ಟೀ.
  ನನ್ನ ಆನಂದಪುರಂನ #ಮಲ್ಲಿಕಾ_ವೆಜ್ ನಲ್ಲಿ ತಯಾರಾಗುವ ಪಿಲ್ಟ್ ರ್ ಕಾಫಿ ಮತ್ತು ಟೀ ಬಾಷಾರ ರೆಸಿಪಿ ಮತ್ತು ಅವರು ಶಿಪಾರಸ್ಸು ಮಾಡಿದ #ಕೋಥಾಸ್ ಕಾಪಿ ಪುಡಿ ಮತ್ತು ಅದರ ಡಿಕಾಕ್ಷನ್ ತಯಾರಿಸಲು ತಮಿಳುನಾಡಿನ #ಜೆಮಿನಿ ( ಅಟೋಮಿಟಿಕ್) ಕಾಫಿ ಪಿಲ್ಟರ್ ಖರೀದಿಸಿದೆ ಆಗ ಕೋಥಾಸ್ ಕಾಫಿ ಪುಡಿ ಶಿವಮೊಗ್ಗದ ಡೀಲರ್ #ಮಾಲತೇಶ್_ಶೆಟ್ಟರು (ಈಗಲೂ ಅವರೆ). ಈಗ ದುರ್ಗಿಗುಡಿಯ #ಗಂಗಾ_ಮೆಡಿಕಲ್ಸ್ ಪಕ್ಕದಲ್ಲಿ ಕಂಪನಿಯ ಅಧಿಕೃತ ಔಟ್ ಲೆಟ್ ಪ್ರಾರಂಭ ಆಗಿದೆ.
  ಹೀಗೆ MH ಕಾಫಿ ಶಾಪ್ ನ ಬಾಷಾ ನನ್ನ ನೂತನ ಹೋಟೆಲ್ ಉದ್ಯಮಕ್ಕೆ ಹತ್ತು ವರ್ಷದ ಹಿಂದೆ ಸಲಹೆ ನೀಡಿ ಸಹಾಯ ಮಾಡಿದ್ದು ನಾನು ಮರೆಯುವುದಿಲ್ಲ.
  ಇವರ ಕ್ಯಾಂಟೀನ್ ಕಾಫಿ ರುಚಿ ಗೊತ್ತಿರುವವರೆಲ್ಲ ಯಾರಿಗೂ ಕಾಣದ ಸಣ್ಣ ಓಣಿಯ ಮೂಲೆಯಲ್ಲಿ ಕಾಫಿಗಾಗಿ ಹುಡುಕಿಕೊಂಡು ಹೋಗುತ್ತಾರೆಂದರೆ ಅಲ್ಲಿ ಪಿಲ್ಟರ್ ಕಾಫಿಯ ಘಮ-ರುಚಿಯ ವಿಶೇಷವೇ ಇದೆ, ಬಾಷಾರ MH ಕಾಫೀ ಶಾಪ್ ಶಿವಮೊಗ್ಗದಲ್ಲಿ ಗೊತ್ತಿಲ್ಲದವರಿಲ್ಲ.
 ಒಮ್ಮೆ ಶಿವಮೊಗ್ಗ ಹೋದವರು ಇಲ್ಲಿ ಬೇಟಿ ನೀಡಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...