Skip to main content

ಶಿವಮೊಗ್ಗದ ನೆಹರೂ ರಸ್ತೆಯ ಎರಡನೇ ಕ್ರಾಸಿನಲ್ಲಿ ಶೋಭಾ ಸ್ಟೋರ್ ಪಕ್ಕದ ಕಿರಿದಾದ ಓಣಿಯಲ್ಲಿದೆ MH ಕಾಫೀ ಶಾಪ್ ಇಲ್ಲಿನ ಉತ್ಕೃಷ್ಟ ಪಿಲ್ಟ್ ರ್ ಕಾಫೀ ಮತ್ತು ಟೀಗಾಗಿ ಜನ ಹುಡುಕಿಕೊಂಡು ಬರುತ್ತಾರೆ.

#ಶಿವಮೊಗ್ಗ_ಪೇಟೆಯಲ್ಲೇ_ಉತ್ಕೃಷ್ಟ_ಕಾಫಿ_ಟೇ_ಸಿಗುವ_ಏಕೈಕ_ಸ್ಥಳ.

#ನೆಹರೂ_ರಸ್ತೆಯ_ಎರಡನೆ_ತಿರುವಿನ_ಶೋಬಾ_ಸ್ಟೋರ್_ಪಕ್ಕದ_ಓಣಿಯಲ್ಲಿದೆ.

#ಸಜ್ಜನ_ಮಾಲಿಕ_ಭಾಷರವರ_MH_ಕಾಫಿ_ಶಾಪ್.

  2012ರಲ್ಲಿ ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ಪ್ರಾರಂಬಿಸುವ ಮುಂಚೆ ಅನೇಕ ಪ್ಲೇಯರ್ ಗಳ ನಾಟಕ ಮತ್ತು ಮೋಸ ಅನುಭವಿಸಿ ಸ್ವಂತ ಪ್ರಾರಂಬಿಸುವ ಅನಿವಾರ್ಯ ಪ್ರಸಂಗ ಉಂಟಾದಾಗ ನಾನು ನಮ್ಮ ರಾಜ್ಯ ಮಾತ್ರವಲ್ಲ ಗೋವಾ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಹೋಟೆಲ್ ಗಳಲ್ಲಿ ಅನುಭವ ಪಡೆದಿದ್ದೆ.
  ಶಿವಮೊಗ್ಗದ #ಮಿನಾಕ್ಷಿ_ಭವನದ ಉದ್ದ ಗ್ಲಾಸಿನ ಟೀ ಕಾಫಿಯ ಆಕಷ೯ಣೆ ಯಾವತ್ತೂ ನನಗೆ ಆದ್ದರಿಂದ ಆ ಗ್ಲಾಸ್ ಸೆಲೆಕ್ಟ್ ಮಾಡಿಕೊಂಡೆ ಆದರೆ ಟೀ ಮತ್ತು ಕಾಪಿ ವಿಚಾರದಲ್ಲಿ ಆಯ್ಕೆ ಅಂತಿಮ ಆಗಲೇ ಇಲ್ಲ.
  ಶಿವಮೊಗ್ಗದ #ಶ್ಯಾಮ್_ಟ್ರೇಡರ್ಸ್ನ ಮಾಲಿಕರು ಅವರ ಅನುಭವದ ಕಾಫಿ ಪಿಲ್ಟರ್ ಶಿಪಾರಸ್ಸು ಮಾಡಿದ್ದೆಲ್ಲ ಖರೀದಿಸಿದೆ ಆದರೆ ನನ್ನ ನಿರೀಕ್ಷೆ ಈಡೇರಲೇ ಇಲ್ಲ.
  ಇದೇ ಸಂದರ್ಭದಲ್ಲಿ ನೆಹರೂ ರಸ್ತೆಯ #ಶೋಬಾ_ಸ್ಟೋರ್ ಗೆ ಹೋದವನು (2012ರಲ್ಲಿ) ಪಕ್ಕದ ಕಿರಿದಾದ ಓಣಿಯಲ್ಲಿ #ಶೃಂಗೇಶರ_ಜನಹೋರಾಟ ದಿನಪತ್ರಿಕೆ ಕಛೇರಿಗೆ ಹೋದಾಗ ಅವರು ಬನ್ನಿ ಕಾಫಿ ಕುಡಿಯೋಣ ಪಕ್ಕದಲ್ಲೇ ಒಳ್ಳೇ ಕ್ಯಾಂಟೀನ್ ಇದೆ ಅಂದರು.
 ಅವತ್ತು ಅಲ್ಲಿ ಕಾಫಿ ಕುಡಿದವನು ಇವತ್ತೂ ಹತ್ತು ವರ್ಷದಲ್ಲಿ ಶಿವಮೊಗ್ಗಕ್ಕೆ ಹೋದಾಗ ಇಲ್ಲೇ ಕಾಫಿ-ಟೀ ಕುಡಿಯುವುದು.
  ಸಜ್ಜನ ಮಾಲಿಕ ಮಿತಭಾಷಿ #ಬಾಷಾರ  #MH_ಕಾಪೀ_ಶಾಪ್ ಅಷ್ಟು ಪ್ರಸಿದ್ಧಿ ಪಡೆಯಲು ಕಾರಣ ಇಲ್ಲಿನ ಉತ್ಕೃಷ್ಟ ಪಿಲ್ಟರ್ ಕಾಫಿ ಮತ್ತು ಟೀ.
  ನನ್ನ ಆನಂದಪುರಂನ #ಮಲ್ಲಿಕಾ_ವೆಜ್ ನಲ್ಲಿ ತಯಾರಾಗುವ ಪಿಲ್ಟ್ ರ್ ಕಾಫಿ ಮತ್ತು ಟೀ ಬಾಷಾರ ರೆಸಿಪಿ ಮತ್ತು ಅವರು ಶಿಪಾರಸ್ಸು ಮಾಡಿದ #ಕೋಥಾಸ್ ಕಾಪಿ ಪುಡಿ ಮತ್ತು ಅದರ ಡಿಕಾಕ್ಷನ್ ತಯಾರಿಸಲು ತಮಿಳುನಾಡಿನ #ಜೆಮಿನಿ ( ಅಟೋಮಿಟಿಕ್) ಕಾಫಿ ಪಿಲ್ಟರ್ ಖರೀದಿಸಿದೆ ಆಗ ಕೋಥಾಸ್ ಕಾಫಿ ಪುಡಿ ಶಿವಮೊಗ್ಗದ ಡೀಲರ್ #ಮಾಲತೇಶ್_ಶೆಟ್ಟರು (ಈಗಲೂ ಅವರೆ). ಈಗ ದುರ್ಗಿಗುಡಿಯ #ಗಂಗಾ_ಮೆಡಿಕಲ್ಸ್ ಪಕ್ಕದಲ್ಲಿ ಕಂಪನಿಯ ಅಧಿಕೃತ ಔಟ್ ಲೆಟ್ ಪ್ರಾರಂಭ ಆಗಿದೆ.
  ಹೀಗೆ MH ಕಾಫಿ ಶಾಪ್ ನ ಬಾಷಾ ನನ್ನ ನೂತನ ಹೋಟೆಲ್ ಉದ್ಯಮಕ್ಕೆ ಹತ್ತು ವರ್ಷದ ಹಿಂದೆ ಸಲಹೆ ನೀಡಿ ಸಹಾಯ ಮಾಡಿದ್ದು ನಾನು ಮರೆಯುವುದಿಲ್ಲ.
  ಇವರ ಕ್ಯಾಂಟೀನ್ ಕಾಫಿ ರುಚಿ ಗೊತ್ತಿರುವವರೆಲ್ಲ ಯಾರಿಗೂ ಕಾಣದ ಸಣ್ಣ ಓಣಿಯ ಮೂಲೆಯಲ್ಲಿ ಕಾಫಿಗಾಗಿ ಹುಡುಕಿಕೊಂಡು ಹೋಗುತ್ತಾರೆಂದರೆ ಅಲ್ಲಿ ಪಿಲ್ಟರ್ ಕಾಫಿಯ ಘಮ-ರುಚಿಯ ವಿಶೇಷವೇ ಇದೆ, ಬಾಷಾರ MH ಕಾಫೀ ಶಾಪ್ ಶಿವಮೊಗ್ಗದಲ್ಲಿ ಗೊತ್ತಿಲ್ಲದವರಿಲ್ಲ.
 ಒಮ್ಮೆ ಶಿವಮೊಗ್ಗ ಹೋದವರು ಇಲ್ಲಿ ಬೇಟಿ ನೀಡಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...