Skip to main content

Blog number 844. ಇಂಗ್ಲೀಷ್ ವಿಶ್ವ ದಿನ ಪ್ರತಿ ವರ್ಷ ಏಪ್ರಿಲ್ 23 ರಂದು ಆಚರಿಸುತ್ತಾರೆ ಇದು ಪ್ರಖ್ಯಾತ ಇಂಗ್ಲೀಷ್ ನಾಟಕಕಾರ ಶೇಕ್ಸ್ ಪಿಯರ್ ರ ಹುಟ್ಟಿದ ಮತ್ತು ಕಾಲವಾದ ದಿನ ಮತ್ತು ನನ್ನ ಇಂಗ್ಲೀಷ್ ಮೀಡಿಯಂ ಪ್ರೌಡ ಶಾಲಾ ಅನುಭವ.

#ಶೇಕ್ಸ್ಪಿಯರ್_ಹುಟ್ಟಿದ_ಮತ್ತು_ಕಾಲವಾದ_ಏಪ್ರಿಲ್_23_ವಿಶ್ವ_ಇಂಗ್ಲೀಷ್_ದಿನ.

#ಮಕ್ಕಳು_ಇಂಗ್ಲೀಷ್_ಕಲಿಯಲಿ_ಎಂಬ_ಪೋಷಕರ_ಆಸೆ.

#ಉತ್ತಮ_ಅಂಕ_ಪಡೆದು_ಶಿವಲಿಂಗಪ್ಪ_ಶಾಲೆಗೆ_ಸೇರುವ_ಅಹ೯ತೆ_ಇದ್ದರೂ_ಅದನ್ನು_ತಪ್ಪಿಸಿದ_ಶಿಕ್ಷಕರು.

#ಅವರ_ಮಗನನ್ನ_ಮಾತ್ರ_ಅಲ್ಲಿಗೆ_ಸೇರಿಸಿದ_ಅವರ_ಮನೋಭಾವ.

#ಹಳ್ಳಿಯಿಂದ_ಬಂದವರನ್ನು_ಗಮಾರರಂತೆ_ಅವಮಾನಿಸುತ್ತಿದ್ದ_ಶಿಕ್ಷಕರು_ಪೇಟೆ_ವಿದ್ಯಾರ್ಥಿಗಳು.

#ಕನ್ನಡ_ಹೋರಾಟಗಾರರ_ಮಕ್ಕಳನ್ನು_ಕಾನ್ವೆಂಟ್_ಸೇರಿಸುವ_ಪರಿ

   ಏಳನೆ ತರಗತಿಯಲ್ಲಿ ನಾನು ಅತ್ಯಂತ ಹೆಚ್ಚು ಮಾರ್ಕ್ಸ್ ಪಡೆದಿದ್ದೆ, ಮೆರಿಟ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲೂ ಪಾಸಾಗಿದ್ದೆ ಆಗ ನಮ್ಮ ತಂದೆ ನನ್ನನ್ನು ಸಾಗರದ ಮುನ್ಸಿಪಲ್ ಹೈಸ್ಕೂಲ್ ಗೆ 8ನೇ ತರಗತಿಗೆ ಇಂಗ್ಲೀಷ್ ಮೀಡಿಯಂ ಗೆ ಸೇರಿಸಿದ್ದರು.
  ಆಗ ಸಾಗರದಲ್ಲಿ ಎಲ್ಲಾ ಕಾನ್ವೆಂಟ್ ಗಳು ಗಂಡು ಮಕ್ಕಳಿಗೆ 7 ನೇ ತರಗತಿ ತನಕ ಮಾತ್ರ ಇಂಗ್ಲೀಷ್ ಮೀಡಿಯಂ ಕ್ಲಾಸ್ ಮಾಡುತ್ತಿದ್ದರು ನಂತರ 8ನೇ ತರಗತಿಗೆ ಶಿವಲಿಂಗಪ್ಪ ಪ್ರೌಡ ಶಾಲೆಗೆ ಅಥವ ಸರ್ಕಾರದ ಮುನ್ಸಿಪಲ್ ಹೈಸ್ಕೂಲ್ ಗೆ ಸೇರಬೇಕಿತ್ತು.
  ಶಿವಲಿಂಗಪ್ಪ ಪ್ರೌಡ ಶಾಲೆಯಲ್ಲಿ ಮೆರಿಟ್ ಇದ್ದವರಿಗೆ ಮಾತ್ರ ಸೀಟು ಸಿಗುತ್ತಿತ್ತು, ನಾನು ಪಡೆದ 7ನೇ ತರಗತಿ ಅಂಕಗಳು ನನಗೆ ಅಲ್ಲಿ ಸೇರಲು ಸುಲಭ ಇತ್ತು.
  ನಮ್ಮ ಊರಿನ ಪ್ರೌಡ ಶಾಲೆಯ ಹಿಂದಿ ಪಂಡಿತರು ನಮ್ಮ ತಂದೆಗೆ ನನ್ನನ್ನು ಮುನ್ಸಿಪಲ್ ಹೈಸ್ಕೂಲಿಗೆ ಸೇರಿಸಲು ತಾಕೀತು ಮಾಡಿದ್ದರಿಂದ ಇಲ್ಲಿಗೆ ಸೇರಿಸಿದರು.
     ಆದರೆ ಆ ಪಂಡಿತರು ಅವರ ಮಗನನ್ನು ಮಾತ್ರ ಶಿವಲಿಂಗಪ್ಪ ಪ್ರೌಡ ಶಾಲೆಗೆ ಸೇರಿಸಿದ್ದು ತುಂಬಾ ದಿನದ ನಂತರ ಗೊತ್ತಾಯಿತು.
  ಸರ್ಕಾರಿ ಶಾಲೆ ಆದ್ದರಿಂದ 8 ನೇ ತರಗತಿಗೆ ನಾಲ್ಕು ಸೆಕ್ಷನ್ ಇತ್ತು ಮತ್ತು ಈ ಶಾಲೆಗೆ ದೊಡ್ಡಿ ಎಂಬ ಅನ್ವರ್ಥವೂ ಇತ್ತು.
  25 ಕಿ.ಮಿ.ದೂರದ ಹಳ್ಳಿಯಿಂದ ರೈಲಿನಲ್ಲಿ ಮದ್ಯಾಹ್ನದ ಊಟ ಇಟ್ಟುಕೊಂಡು ಹವಾಯಿ ಚಪ್ಪಲಿ, ಚಡ್ಡಿ ಅಂಗಿಯಲ್ಲಿ ಹೋಗುತ್ತಿದ್ದ ನಾವೆಲ್ಲ ಪೇಟೆಯ ಉದ್ಯೋಗವಂತರ ಪುಂಡು ಮಕ್ಕಳ ಅಪಹಾಸ್ಯಕ್ಕೆ ವಸ್ತು ಆಗಿಬಿಟ್ಟಿದ್ದೆವು.
  ಇದೇ ಸಂದರ್ಭದಲ್ಲಿ ಪಾಠ ಮಾಡಲು ಬರುವ (ಇಂಗ್ಲೀಷ್ ಮಾಧ್ಯಮ) ಶಿಕ್ಷಕರು ಈ ಪುಂಡು ಮಕ್ಕಳಿಗೆ ಪ್ರೋತ್ಸಾಹಿಸುವಂತೆ ಬೋರ್ಡ್ ಮೇಲೆ Z ಬರೆದು ಓದಲು ಹೇಳುತ್ತಿದ್ದರು ಕನ್ನಡ ಮಿಡಿಯ೦ ನಿಂದ ಬಂದ ನಮಗೆಲ್ಲ ಸರಿಯಾಗಿ ಪ್ರನೌನ್ಸ್ ಮಾಡಲು ಬರದೆ ಜಡ್ ಅಂದಾಗ ಶಿಕ್ಷಕರು ಪುಂಡರೊಡನೆ ಸೇರಿ ಗೊಳ್ಳಂತ ನಗುತ್ತಿದ್ದರು, ನಮಗೆ ಅಥ೯ವೇ ಆಗದೆ ಪೆಚ್ಚಾಗಿ ಕೀಳರಿಮೆ ಹೆಚ್ಚಾಗುತ್ತಿತ್ತು.
  ನಂತರ ನಮಗೆ ನಾವೇ ಸುದಾರಿಸಿಕೊಂಡು SSLC ನಂತರ ಡಿಪ್ಲೋಮಕ್ಕೆ ಸೇರಿದಾಗ ಹೊರ ರಾಜ್ಯದ ಮಕ್ಕಳ ಜೊತೆ ಇಂಗ್ಲೀಷ್ ಒಂದೇ ಸಂಪರ್ಕ ಭಾಷೆ ಆಗಿ ಇಂಗ್ಲೀಷ್ ನಲ್ಲಿ ಸ೦ವಹನ ಮಾಡಲು ಸುಲಭ ಆಯಿತು, ಈಗ ಅನೇಕ ದೇಶದಲ್ಲಿ ಗೆಳೆಯರೊಡನೆ ಮಾತಾಡಲು ಕಷ್ಟ ಇಲ್ಲ.
    ಕನ್ನಡ ಬಾಷೆ -ಜಲ- ನೆಲ ಗಳ ಬಗ್ಗೆ ಹೋರಾಟ ಮಾಡುವವರ ಪ್ರಬಾವದಿಂದ ನನ್ನ ಮಕ್ಕಳನ್ನು ನಮ್ಮ ಹಳ್ಳಿಯಲ್ಲೇ ಸರ್ಕಾರಿ ಕನ್ನಡ ಶಾಲೆಯಲ್ಲೇ ಓದಿಸುವ ಶಪಥ ಮಾಡಿದೆ.
  ನನ್ನ ಮಕ್ಕಳನ್ನು ಸಕಾ೯ರಿ ಅಂಗನವಾಡಿಯಿಂದ ಪದವಿ ತನಕ ಕನ್ನಡ ಮಾಧ್ಯಮದಲ್ಲಿ ಓದಿಸುತ್ತಾ ಅವರಿಗೆ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್, ಇಂಗ್ಲೀಷ್ ಮತ್ತು ಹಿಂದಿ ನ್ಯೂಸ್ ಟೀವಿಯಲ್ಲಿ ನೋಡಲು, ನಿತ್ಯ ಕನ್ನಡ ಪತ್ರಿಕೆ ಜೊತೆ ಇಂಗ್ಲೀಷ್ ಪತ್ರಿಕೆ ಓದಲು ಕಡ್ಡಾಯ ಮಾಡಿದ್ದರಿಂದ ಇವತ್ತು ಅವರೆಲ್ಲ ಹಿಂದಿ ಇಂಗ್ಲೀಷ್ ನಲ್ಲಿ ಸುರಳಿತವಾಗಿ ಮಾತಾಡಿ ವ್ಯವಹರಿಸುಂತಾಯಿತು, ಕನ್ನಡದ ಎಲ್ಲಾ ಸಾಹಿತ್ಯದ ಜೊತೆ ಇಂಗ್ಲೀಷ್ ಸಾಹಿತ್ಯವೂ ಓದುವಂತಾಯಿತು.
   ಆದರೆ ಕನ್ನಡದ ಬಗ್ಗೆ ಪುಂಖಾನುಪುಂಕ ಭಾಷಣ ಉಗುಳುತ್ತಿದ್ದ ಓರಾಟಗಾರರು ಇಂತಹ ಪ್ರಯತ್ನ ಮಾಡಲಿಲ್ಲ, ಕೇಳಿದರೆ ಮಕ್ಕಳಿಗೆ ಸರ್ಕಾರಿ ಶಾಲೆ, ಕನ್ನಡ ಶಾಲೆಯಲ್ಲಿ ಪ್ರೊಜೆಕ್ಷನ್ ಸಿಗುವುದಿಲ್ಲ ಅನ್ನುತ್ತಿದ್ದರು ಆದರೆ ನನ್ನ ಅನುಭವ ಇದು ಸುಳ್ಳು.
  ಈಗಲೂ ಇಂಗ್ಲೀಷ್ ಅಂದರೆ ಅದು ಒ0ದು ಭಾಷೆ ಅಂದುಕೊಳ್ಳದೆ ಅದೇನೋ ಅಂದುಕೊಂಡವರು ಮತ್ತು ಆ ಕಾಲದಲ್ಲಿ ಗೇಲಿ ಮಾಡುವಂತ ಕೆಟ್ಟ ಮನಸ್ಸಿನ ಶಿಕ್ಷಕರೂ ಈಗಲೂ ಇದ್ದಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ