Skip to main content

ಕಲ್ಲಡ್ಕದ ಕೇಟಿ ಚಹಾಕ್ಕೆ 110 ವರ್ಷದ ಇತಿಹಾಸ, ರಾಷ್ಟ್ರೀಯ ಹೆದ್ದಾರಿ ಅಗಲಿಕರಣದಿಂದ ಹೊಸ ಕಟ್ಟಡದಲ್ಲಿ ಲಕ್ಷ್ಮೀ ವಿಲಾಸ್ ಪುನಾರಾರಂಭವಾಗಿದೆ, ನೀವೂ ಮನೆಯಲ್ಲಿ ಕೇಟಿ ಚಹಾ ತಯಾರಿಸುವ ಸುಲಭ ರೆಸಿಪಿ ಇಲ್ಲಿದೆ.

#ಕಲ್ಲಡ್ಕದ_ಕೆಟಿ_ಚಹಾ_ಎಂಬ_ಮ್ಯಾಜಿಕ್_ಚಹಾ

#ನೂರಾ_ಹತ್ತು_ಪುರಾತನದ್ದು

#ಈಗ_ರಾಷ್ಟ್ರೀಯ_ಹೆದ್ದಾರಿ_ಅಗಲಿಕರಣದಿಂದ_ಹೊಸ_ಕಟ್ಟಡದಲ್ಲಿ

#ಕಲ್ಲಡ್ಕದ_ಕೇಟಿ_ನೀವು_ಮನೆಯಲ್ಲೂ_ಮಾಡುವ_ಸುಲಭ_ರೆಸಿಪಿ.

   ಮಂಗಳೂರಿಂದ ಪುತ್ತೂರು, ಸುಳ್ಯ,  ಮೈಸೂರು ಮಾಗ೯ದಲ್ಲಿ ಪ್ರಯಾಣಿಸುವಾಗ ಕಲ್ಲಡ್ಕಎಂಬ ಊರು ಸಿಗುತ್ತದೆ, ಇಲ್ಲಿನ ಪೇಟೆಯ ಎಡ ಭಾಗದಲ್ಲಿ ಒಂದು ಪ್ರಸಿದ್ದವಾದ ಪುರಾತನವಾದ (110 ವರ್ಷ) ಒಂದು ಹೋಟೆಲ್ ಇದೆ.
   ಇದರ ಮಾಲಿಕರ ಮೂರನೇ ತಲೆಮಾರಿನವರು ತಮ್ಮ ಹಿರಿಯರ ಮಾಗ೯ದಶ೯ನದಲ್ಲಿಯೇ ಯಶಸ್ವಿಯಾಗಿ ಈಗಲೂ ನಡೆಸುತ್ತಿದ್ದಾರೆ.
  ಇದರ ಹೆಸರು #ಲಕ್ಷ್ಮಿ_ನಿವಾಸ_ಕೆಟಿ_ಹೋಟೆಲ್, ಇಲ್ಲಿನ ಚಹಾವೇ ವಿಶೇಷ ಗ್ಲಾಸ್ ನ ಕೆಳಭಾಗದ ಹಾಲು ಮತ್ತು ಮೇಲ್ಬಾಗದ ಚಹಾ ಡಿಕಾಕ್ಷನ್ ಒಂದೇ ಗ್ಲಾಸಿನಲ್ಲಿದ್ದರೂ ಬೇರೆ ಬೇರೆ ಆಗಿ ಇರುತ್ತದೆ, ಚಮಚದಲ್ಲಿ ಮಿಶ್ರ ಮಾಡಿ ಕುಡಿಯಬೇಕು.
  ಈ ಚಹಾ ತಯಾರಿಸುವುದು ನಿಪುಣ ಕೆಲಸಗಾರರಿಗೆ ಮಾತ್ರ ಸಾಧ್ಯ!, ಮೊದಲೆಲ್ಲ ಪೋಟೋ ತೆಗೆಯಲು ಬಿಡುತ್ತಿರಲಿಲ್ಲ 2019 ರಲ್ಲಿ  ಪುತ್ತೂರಿನಿ೦ದ ಬರುವಾಗ ಇಲ್ಲಿನ ವಿಶೇಷ  ಕೆಟಿ ಚಹ ಸೇವಿಸಲು ಇಲ್ಲಿಗೆ ಹೋಗಿದ್ದಾಗ ಪೋಟೋ ವಿಡಿಯೋ ತೆಗೆಯಲು ಅನುಮತಿ ನೀಡಿದರು.
   ಈಗ ಕಲ್ಲಡ್ಕದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಗಲಿಕರಣದಿಂದ 110 ವರ್ಷದ ಈ ಕೆ.ಟಿ. ಹೋಟೆಲ್ ಹಳೆ ಕಟ್ಟಡ ಇಲ್ಲ, ಇದೇ ಜಾಗದಲ್ಲಿ ಹೆದ್ದಾರಿಯಿಂದ ನಿರ್ದಿಷ್ಟ ದೂರದಲ್ಲಿ ನೂತನವಾದ ಕಟ್ಟಡದಲ್ಲಿ ಲಕ್ಷ್ಮೀ ನಿವಾಸ ಕಲ್ಲಡ್ಕ ಕೇಟಿ ಪುನಃ ಸಿಗುತ್ತಿದೆ.
  ಇದನ್ನು ತಯಾರಿಸುವುದು ಸುಲಭ ದಪ್ಪ ಹಾಲನ್ನು ಚೆನ್ನಾಗಿ ಸಕ್ಕರೆಯೊಂದಿಗೆ ಕುದಿಸಿಕೊಳ್ಳುವುದು, ಚಹ ಡಿಕಾಕ್ಷನ್ ದಪ್ಪವಾಗಿ ಪ್ರತ್ಯೇಕ ನೀರಲ್ಲಿ ನಿಮಗಿಷ್ಟವಾದ ಚಹಾ ಪುಡಿಯಲ್ಲಿ ತಯಾರಿಸಿಕೊಳ್ಳಬೇಕು.
   ಕುದಿದ ಹಾಲನ್ನು ಮೇಲೆ ಕೆಳಗೆ ಹೊಡೆದು ನೊರೆ ಬರಿಸಿಕೊಂಡು ಗ್ಲಾಸಿಗೆ ಹಾಕಿ ಅದರಲ್ಲಿ ಚಮಚ ಒಂದನ್ನು ಹಿಡಿದು ಟೀ ಡಿಕಾಕ್ಷನ್ ಚಮಚದ ಮೇಲೆ ಹಾಕಬೇಕು, ಹೀಗಾದಾಗ ಕೆಳಗಿನ ಹಾಲು ಬೇರೆ, ಟೀ ಡಿಕಾಕ್ಷನ್ ಬೇರೆ ಉಳಿಯುತ್ತದೆ ಹಾಲಿನ ನೊರೆ ಮೇಲೆ ಬರುತ್ತದೆ, ಬೇಕಾದರೆ ಪ್ರತ್ಯೇಕ ಹಾಲಿನ ನೊರೆ ಮಾಡಿ ಗ್ಲಾಸಿನ ಮೇಲೆ ಹಾಕಬಹುದು ಹೀಗೆ ಗಿರಾಕಿಯ ಟೇಬಲ್ ಗೆ ಬರುವ ಕಲ್ಲಡ್ಕ ಕೇಟಿ ಯನ್ನು ನಾವು ಚಮಚದಿಂದ ಕರಡಿ ಚಹಾ ಕುಡಿಯುವುದು ಪದ್ಧತಿ.
   ಈ ಮಾರ್ಗದಲ್ಲಿ ಹೋದಾಗ ಕಲ್ಲಡ್ಕದ ಲಕ್ಷ್ಮೀನಿವಾಸಕ್ಕೆ ತಪ್ಪದೇ ಹೋಗಿ  ಕೆಟಿ ವಿಶೇಷ ಚಹಾ ರುಚಿ ನೋಡಿ
  ಮಂಗಳೂರು ರೆಸಿಪಿಯವರು ತೋರಿಸಿಕೊಟ್ಟ ಲಿಂಕ್ ಇಲ್ಲಿದೆ ನೋಡಿ ಮನೆಯಲ್ಲಿ ನೀವೇ ಮಾಡಿ ನೋಡಬಹುದು.
       https://fb.watch/coUbjISeV9/

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...