Skip to main content

Blog number 838. ಕೆ.ಟಿ.ಗಟ್ಟಿಯವರ ಕಾದಂಬರಿ ಕಾಮು೯ಗಿಲು ಗೆ ಪ್ರೇರಣೆ ಆದದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದ ಮಠದ ವ್ಯಾಪ್ತಿಯ ಅಂತರ್ದಮಿ೯ಯ ಪ್ರೇಮ ಕಥೆ, ಕೋಣಂದೂರು ವೆಂಕಪ್ಪ ಗೌಡರು ತಮ್ಮ ಅಳಿಯನನ್ನು ಹೀರೋ ಮಾಡಿ ಸಿನಿಮಾ ಮಾಡಿದರು, ನಾನು ಈ ನಿಜ ಕಥೆಯ ನಿಜ ಹೀರೋ ಅವರಿಗೆ ಬೇಟಿ ಮಾಡಿಸಿದ್ದ ಈ ಘಟನೆ !?

#ನಮ್ಮ_ಜಿಲ್ಲೆಯ_ಸಾಹಿತಿ_ಕೋಣಂದೂರು_ವೆಂಕಪ್ಪಗೌಡರು_ಸಿನಿಮಾ_ಮಾಡಿದ್ದು

#ಕೆ_ಟಿ_ಗಟ್ಟಿಯವರ_ಕಾದಂಬರಿ_ಕಾರ್ಮುಗಿಲು

#ಇದು_ಮಲೆನಾಡಿನ_ಸತ್ಯಘಟನೆ_ಆದಾರಿತ_ಕಾದಂಬರಿ

#ಸತ್ಯಘಟನೆ_ಆ_ಕಾಲದಲ್ಲಿ_ಪ್ರಜಾವಾಣಿಯಲ್ಲಿ_ಪ್ರಕಟವಾಗಿ_ಸೆನ್ಸೇಷನಲ್_ನ್ಯೂಸ್_ಆಗಿತ್ತು.

#ಈ_ಘಟನೆಯ_ನಿಜ_ಹೀರೋ_ಸಿನಿಮಾ_ನಿರ್ಮಾಪಕರಿಗೆ_ಬೇಟಿ_ಮಾಡಿಸಿದ್ದೆ.

  ಕೋಣಂದೂರು ವೆಂಕಪ್ಪ ಗೌಡರು ಸಮಾಜವಾದಿ ಸಾಹಿತಿಗಳು, ಶಾಂತವೇರಿ ಗೋಪಾಲಗೌಡರ ಆತ್ಮಚರಿತ್ರೆ "ಜೀವಂತ ಜ್ವಾಲೆ", ಕೆಂಗಲ್ ಹನುಮಂತಯ್ಯ, ದೇವರಾಜ ಅರಸರು, ಜೆ.ಹೆಚ್.ಪಟೇಲರ , ಹುಚ್ಚು ಮಾಸ್ತಿ ಗೌಡರು, ದೇಶದ ಪ್ರಧಾನ ಮಂತ್ರಿ ದೇವೇಗೌಡರ ಆತ್ಮಚರಿತ್ರೆ ಬರೆದವರು.
 ಇವರಿಂದಲೇ ನಮ್ಮ ಗುರುಗಳಾದ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ಆತ್ಮಚರಿತ್ರೆ ಕೋಣಂದೂರು ವೆ೦ಕಪ್ಪ ಗೌಡರಿಂದ ಬರೆಸಿ ಪ್ರಕಟಿಸಿದ್ದರಿಂದ ನನ್ನ ಮತ್ತು ಕೋಣಂದೂರು ವೆಂಕಪ್ಪ ಗೌಡರ ಆತ್ಮೀಯತೆ ಹೆಚ್ಚಾಯಿತು.
  ಗಣಪತಿಯಪ್ಪರ ಆತ್ಮಚರಿತ್ರೆ ಸತ್ಯ ಘಟನೆ ಹಸಿ ಹಸಿಯಾಗಿ ಗೌಡರು ಬರೆದಿದ್ದರಿಂದ ಅನೇಕ ತೊಂದರೆ, ಅಡೆತಡೆ ನಾವೆಲ್ಲ ಅನುಭವಿಸಿದೆವು.
  ಬೆಂಗಳೂರಿಂದ ಶಿವಮೊಗ್ಗಕ್ಕೆ ಅಥವ ಅವರ ಹುಟ್ಟೂರು ಕೊಣಂದೂರಿಗೆ ಬರುವಾಗ ಆನಂದಪುರಂನ ನನ್ನ ಮನೆಗೆ ಅತಿಥಿ ಆಗಿ ಬಂದು ಉಳಿಯುವ ಸಲಿಗೆ ಅವರಿಗಿತ್ತು.
  ಇವರ ಜೀವನದಲ್ಲಿ ಒಂದು ದುರ೦ತ ನಡೆಯುತ್ತದೆ ಶಾಂತವೇರಿ ಗೋಪಾಲಗೌಡರು ವಿವಾಹ ಆದಾಗ ನೂತನ ದಂಪತಿಗಳಿಗೆ ಬೆಂಗಳೂರಿನ ಇವರ ಮನೆಯಲ್ಲಿ ಔತಣ ಕೂಟ ಇಡುತ್ತಾರೆ, ಊಟದ ನಂತರ ಗೋಪಾಲಗೌಡರನ್ನು ಬಸ್ ನಿಲ್ದಾಣಕ್ಕೆ ಬಿಡಲು ಹೋದಾಗ ಮನೆಯಲ್ಲಿದ್ದ ಇವರ ಚಿಕ್ಕ ಗಂಡು ಮಗ ಬಿಸಿ ಜಾಮೂನ್ ಬಾಂಡಲಿ ಎಳೆದು ಇಡೀ ಸಕ್ಕರೆ ಪಾಕ ಮೈ ಮೇಲೆ ಸುರಿದು ಮೃತನಾದದ್ದು.
  ಶಿವಮೊಗ್ಗದ ಪ್ರತಿಷ್ಟಿತ DVS ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾಗ ವಾರ್ಷಿಕೋತ್ಸವದಲ್ಲಿ ಭಗವದ್ಗೀತ ಪಟಣ ಮಾಡಲು ಮುಸ್ಲಿಂ ವಿದ್ಯಾರ್ಥಿಗೆ ಅವಕಾಶ ಕೊಟ್ಟರೆಂದು ಇವರನ್ನ ಉಪನ್ಯಾಸಕ ಹುದ್ದೆಯಿಂದ ತೆಗೆಯುತ್ತಾರೆ.
   ಆ ಕಾಲದಲ್ಲೇ ತಮ್ಮ ವಿದ್ಯಾರ್ಥಿನಿಯನ್ನು ಪ್ರೇಮ ವಿವಾಹ ಆಗುತ್ತಾರೆ ಇವರ ವಿವಾಹಕ್ಕೆ ಸಹಾಯ ಮಾಡಿದವರು ಪಿ. ಪುಟ್ಟಯ್ಯನವರು.
  ಇವರ ಪುತ್ರಿ ಖ್ಯಾತ ಭರತನಾಟ್ಯ ಕಲಾವಿದೆ, ಅಳಿಯ ಚಲನಚಿತ್ರ ನಟ ಮನೋಜ್ ಗಾಗಿ ವೆಂಕಪ್ಪ ಗೌಡರು ಕೆ.ಟಿ.ಗಟ್ಟಿಯವರು ಬರೆದ #ಕಾಮು೯ಗಿಲು ಕಾದಂಬರಿ ಸಿನಿಮಾ ಮಾಡಲು ಇಷ್ಟಪಟ್ಟರು ಇದಕ್ಕೆ ಮುಖ್ಯ ಕಾರಣ ಇದು ನಮ್ಮ ಜಿಲ್ಲೆಯ ಅಂತರ್ಜಾತಿ ಪ್ರೇಮ ಪ್ರಕರಣ.
  ತೀರ್ಥಹಳ್ಳಿಯ #ರಾಮಚಂದ್ರಪುರ_ಮಠದ ಶಾಖಾ ಮಠದಲ್ಲಿ ಚಿತ್ರಿಕರಣದ ಮಹೂರ್ತ ಇಟ್ಟುಕೊಂಡಿದ್ದರು ಕಾಯ೯ಕ್ರಮಕ್ಕೆ ಆಹ್ವಾನಿಸಿದ್ದರು ಆದರೆ ಯಥಾ ಪ್ರಕಾರ ನಾನು ಗೈರಾಗಿದ್ದೆ.
  ಮಹೂರ್ತ ಮುಗಿಸಿ ವೆಂಕಪ್ಪ ಗೌಡರು ನಮ್ಮ ಮನೆಗೆ ಬಂದಾಗ ಅವರು ಸಾಹಿತಿಯಿಂದ ಸಿನಿಮಾ ನಿರ್ಮಾಪಕರಾಗಿ ಬದಲಾಗಿದ್ದಕ್ಕಾಗಿ ಅವತ್ತಿನ ಚಳಿಯ ಬೆಳದಿಂಗಳ ರಾತ್ರಿ ಕ್ಯಾಂಪ್ ಪೈರ್ ನೊಂದಿಗೆ ಸಂತೋಷ ಕೂಟ ವ್ಯವಸ್ಥೆ ಮಾಡಿದ್ದೆ.
  ತೀವ್ರ ಚಳಿಯ ಆ ದಿನ ಕ್ಯಾಂಪ್ ಪೈರ್ ನ ಬೆಚ್ಚಗಿನ ವಾತಾವರಣ ಗೌಡರಿಗೆ ಹಿತ ತಂದಿತ್ತು, ತಮ್ಮ ಚಲನ ಚಿತ್ರದ ಮಹೂರ್ತದ ಯಶಸ್ಸು, ಚೈನ್ ಸ್ಮೋಕಿಂಗ್ ಮತ್ತು ವಿಸ್ಕಿ ಅವರಿಗೆ ಜೋಷ್ ತಂದಿತ್ತು ಅವರು ಕಾರ್ಮುಗಿಲು ಕಾದ೦ಬರಿ ಬಗ್ಗೆ ಅದರ ವಸ್ತು, ಘಟನೆ ವಿವರಿಸುತ್ತಿದ್ದರು ನನ್ನ ಗೆಳೆಯರೆಲ್ಲ ಆಸಕ್ತಿಯಿಂದ ಆಲೈಸುತ್ತಿದ್ದರು.
  ನಾನು ಹಳೆಯ ನೆನಪು ಯೋಚಿಸುತ್ತಾ ಮೌನವಾಗಿದ್ದೆ ಆಗ ವೆಂಕಪ್ಪ ಗೌಡರು ಏನು ಯೋಚಿಸುತ್ತಿದ್ದಿಯಾ ? ಅಂತ ಪ್ರಶ್ನಿಸಿದಾಗ ಹೇಳಿದೆ.
  ಗೌಡರೆ, ನಾವೆಲ್ಲ ಪ್ರಾಥಮಿಕ ಶಿಕ್ಷಣ ಮಾಡುವ ಕಾಲದಲ್ಲಿ ನಮ್ಮ ಜಿಲ್ಲೆಯ ಹೊಸನಗರದ ಹವ್ಯಕರ ಮಠದಲ್ಲಿ ನಡೆದ ಘಟನೆ ಇದು,  ವಿದವೆಯ ಪ್ರಾಯದ ಮಗಳ ಮೇಲೆ ಮಠದ ಪ್ರಮುಖರ ದುಷ್ಟ ಕಣ್ಣು ಬಿದ್ದಾಗ ಅವರ ವಿಷವರ್ತುಲದಲ್ಲಿ ಸಿಕ್ಕಿಬಿದ್ದ ವಿದವೆ ತಾಯಿ ಮಗಳನ್ನು ಕಾಪಾಡಲು ಅವಳನ್ನು ಪ್ರೀತಿಸುವ ಮಠದ ಕುದುರೆ ಪಾಲನೆ ಮಾಡುತ್ತಿದ್ದ ಮುಸ್ಲಿ೦ ಕುಟುಂಬದ ಎರಡನೇ ಪುತ್ರನೊಂದಿಗೆ ಪರಾರಿ ಆಗಲು ಪರೋಕ್ಷವಾಗಿ ಸಹಕರಿಸುತ್ತಾಳೆ.
  ಯುವ ಪ್ರೇಮಿಗಳು ಸೈಕಲ್ ಮೇಲೆ ಹೊಸನಗರದಿಂದ ಸಾಗರಕ್ಕೆ ಬಾಡಿಗೆ ಸೈಕಲ್ ಮೇಲೆ ಹೋಗಿ ಸಾಗರದಿಂದ ರೈಲಿನಲ್ಲಿ ಮದ್ರಾಸ್ ಗೆ ಪರಾರಿ ಆಗುತ್ತಾರೆ, ಪ್ರಿಯತಮೆಗೂ ಪ್ಯಾಂಟ್ ಶರ್ಟ ಹಾಕಿದ್ದರಿಂದ ಯಾರಿಗೂ ಗೊತ್ತಾಗುವುದಿಲ್ಲ.
  ಇದರಿಂದ ರೋಸಿ ಹೋದ ಮಠದ ಗ್ಯಾಂಗ್ ಸರ್ಕಾರದ ಉನ್ನತ ಪೋಲಿಸ್ ಅಧಿಕಾರಿಗಳಿಗೆ, ಮಂತ್ರಿಗಳಿಗೆ ಒತ್ತಡ ತರುತ್ತಾರೆ, ಪ್ರಜಾವಾಣಿಯಂತ ಆ ಕಾಲದ ಪ್ರಭಾವಿ ಮಾದ್ಯಮದಲ್ಲಿ ಸಣ್ಣ ಹಳ್ಳಿಯ ಪ್ರೇಮಿಗಳ ಕಥೆಯನ್ನು ರಾಜ್ಯದ ದೊಡ್ಡ ಸಮಸ್ಯೆ ಎಂಬಂತೆ ಬಿಂಬಿಸಿ ದಾರಾವಾಹಿಯಂತೆ ಸರಣಿ ವರದಿ ಮಾಡಿಸುತ್ತಾರೆ.
  ಪೋಲಿಸರು ಮದ್ರಾಸಿನಲ್ಲಿ ಅಡಗಿದ್ದ ಪ್ರೇಮಿಗಳನ್ನ ಹಿಡಿದು ತಂದು ಈ ನೈಜ ಘಟನೆಯ ಹೀರೋನನ್ನು ಬಂದಿಸುತ್ತಾರೆ, ಪ್ರೇಮಕಥಾ ನಾಯಕಿಯನ್ನು ಬಲವಂತವಾಗಿ ಮಠದ ಕಾಮುಕ ಮುಂದಾಳುಗಳಿಗೆ ಒಪ್ಪಿಸುತ್ತಾರೆ, ಇದನ್ನೇ ಆದರಿಸಿ ಕೆ.ಟಿ.ಗಟ್ಟಿ ಕಾಮು೯ಗಿಲು ಕಾದಂಬರಿ ಬರಿಯುತ್ತಾರೆ ಪ್ರಜಾವಾಣಿ ದೀಪಾವಳಿ ಸಂಚಿಕೆಯ ಕಥಾ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಬರುತ್ತದೆ ಮತ್ತು ಪ್ರಜಾವಾಣಿ ದಿನಪತ್ರಿಕೆಯಲ್ಲಿ ದಾರಾವಾಹಿ ಆಗಿ ಪ್ರಕಟ ಆಗುತ್ತದೆ ಅಂದಾಗ ಗೌಡರು ನೀನು ಹೇಳಿದ್ದು ಸರಿ ಅನ್ನುತ್ತಾರೆ.
  ನಮ್ಮ ತಂದೆ ಮತ್ತು ಅವರ ಗೆಳೆಯರು ಇದನ್ನು ರಸವತ್ತಾಗಿ ಮಾತಾಡುತ್ತಿದ್ದದ್ದು ನಾನು ಗಮನಿಸುತ್ತಿದ್ದೆ, ಆಗ ಆನಂದಪುರಂ ನಲ್ಲಿ ಹುಚ್ಚಾಚಾರ್ ಎಂಬ ನಿವೃತ್ತ ಸೈನಿಕರು (ಬಾಂಗ್ಲಾ ಯುದ್ಧದಲ್ಲಿ ಕಾಲಿಗೆ ಗುಂಡು ಬಿದ್ದು ಕುಂಟುತ್ತಿದ್ದರು) ಪ್ರಜಾವಾಣಿ ಏಜೆಂಟರು ಅವಾಗ ಆನಂದಪುರಂಗೆ ಪ್ರಜಾವಾಣಿಯ 5 ಪ್ರತಿ ಬರುತ್ತಿತ್ತು.
  ಆಗ ಗೌಡರಿಗೆ ನಾನು ಹೇಳಿದ್ದು ಸಿನಿಮಾದ ಹೀರೋ ನಿಮ್ಮ ಅಳಿಯ ಆದರೆ ನಿಜವಾದ ಕಥಾನಾಯಕ ನಮ್ಮ ಊರಲ್ಲಿದ್ದಾನೆ ಅಂದಾಗ ಗೌಡರು ನಂಬಲಿಲ್ಲ ನನ್ನ ಶಿಷ್ಯರನ್ನು ಕಳಿಸಿ ನಿಜ ಹೀರೋನನ್ನ ಗೌಡರ ಎದರು ಹಾಜರು ಪಡಿಸಿದೆ.
  ಗೌಡರ ಎಲ್ಲಾ ಪ್ರಶ್ನೆಗೆ ಸ್ವಲ್ಪ ಚಾರ್ಜ್ ಆಗಿದ್ದ ಹೀರೋ ಉತ್ತರಿಸಿದಾಗ ಗೌಡರು ಒಪ್ಪಿಕೊಂಡರು.
  ನಮ್ಮ ಊರಿನ ಬಾಲ್ಯದಲ್ಲಿ ನಮ್ಮನ್ನೆಲ್ಲ ಎತ್ತಿ ಆಡಿಸಿದ ನಮ್ಮ ತಾಯಿಯ ಖಾಸಾ ಶಿಷ್ಯೇ ಬೀಬಕ್ಕನ ತಂಗಿ ಗಂಡನಾದ  ಹಯಾತ್ ಸಾಬರೇ ಈ ಕಥಾನಾಯಕ ಆದರೆ ಅವರಿಗೆ ಅವರ ಜೀವನ ವೃತ್ತಾಂತವೇ ಸಿನಿಮಾ ಆಗಿದ್ದು ಗೊತ್ತಾಗಲಿಲ್ಲ ಅವರು ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ.
  ಅವರ ಕಿರಿಯ ಮಗ ಮತ್ತು ನನ್ನ ಗೆಳೆಯರು ಮಾತ್ರ ಇದರಿಂದ ಆಶ್ಚಯ೯ ಪಟ್ಟರು.
  ಹೀಗೆ ಕೆ.ಟಿ.ಗಟ್ಟಿಯವರು ಬರೆದ ಕಾರ್ಮುಗಿಲು ಕಾದಂಬರಿ ಸಿನಿಮಾ ಆಯಿತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ