Skip to main content

ಪಶ್ಚಿಮ ಘಟ್ಟದ ಕರ್ನಾಟಕದ ಮಲೆನಾಡಿನ ಏಕೈಕ ವಿಶಿಷ್ಟ ವೈವಿಧ್ಯಮಯ ಮಾವಿನ ಅಪ್ಪೆಮಿಡಿ ಚಟ್ಟಿಸಿದ ಉಪ್ಪಿನಕಾಯಿಗೆ ಪ್ರಾದೇಶಿಕ ಮಾನ್ಯತೆ GI tag ಕೂಡ ದೊರೆತಿದೆ.

#ಮಾವಿನ_ಅಪ್ಪೆಮಿಡಿ_ಉಪ್ಪಿನಕಾಯಿ.

#ಆಯ್ದ_ಆಪ್ಪೆಮಿಡಿ_ಆರಿಸಿ_ಒರೆಸಿ_ಹುರಿದ_ಉಪ್ಪಿನ_ಜೊತೆ_ಚೆಟ್ಟು_ಮಾಡುವುದು_ಒ0ದು_ಸಂಪ್ರದಾಯಿಕ_ಆಹಾರದ_ಕಲೆ

#ಮುಂದಿನ_ವರ್ಷ_ಬೇಕಾದವರು_ಈಗಲೇ_ಹೆಸರು_ನೊಂದಾಯಿಸಿ.

#ಭಾರತ_ಮೂಲದ_ಉಪ್ಪಿನ_ಕಾಯಿಗೆ_ನಾಲ್ಕು_ಸಾವಿರ_ವರ್ಷದ_ಇತಿಹಾಸ.

#ಮಿಡಿ_ಮಾವಿನಕಾಯಿ_ಪಶ್ಚಿಮಘಟ್ಟದ_ಮಲೆನಾಡಿನಲ್ಲಿ_ಮಾತ್ರ.

#ಇಟಲಿ_ಪ್ರವಾಸಿ_ಡೊಲ್ಲಾವಲ್ಲೆ_1624ರಲ್ಲಿ_ಇಕ್ಕೇರಿಗೆ_ಬಂದಾಗ_101_ಅಪ್ಪೆಮಿಡಿ_ಉಪ್ಪಿನಕಾಯಿ_ಬಡಿಸಿದ್ದರಂತೆ

  ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆ ಮಾವಿನ ಮಿಡಿ ಮಾರಾಟದ ಕೇಂದ್ರ ಆಗಿದೆ, ನಮ್ಮ ಊರಿಂದ ಹತ್ತು ಕಿ.ಮೀ.ದೂರದ ಈ ಊರಿಗೆ ನಮ್ಮ ಊರಿನಿಂದಲೂ ಮಾವಿನ ಮಿಡಿ ಕಿಳುವವರು ಮಾವಿನ ಮಿಡಿ ರಿಪ್ಪನ್ ಪೇಟೆಗೆ ಒಯ್ಯುತ್ತಾರೆ ಅಲ್ಲಿನ ಅನೇಕ ಅಂಗಡಿ, ಹೋಟೆಲ್ ನವರು ಇವರಿಂದ ಖರೀದಿಸಿ ಮಾರಾಟಕ್ಕೆ ಇಡುತ್ತಾರೆ ಇದರಿಂದ ಶ್ರಮಪಟ್ಟು ಮರದಿಂದ ಮಾವಿನ ಮಿಡಿ ಕಿತ್ತು ತರುವವನಿಗೆ ಮಾರಾಟದ ತಲೆ ನೋವು ಚೌಕಾಸಿ ಇರುವುದಿಲ್ಲ, ತಕ್ಷಣ ಹಣ ಸಿಗುವುದು ಅವನಿಗೆ ಮುಖ್ಯ.
  ಹಾಗಾಗಿ ಸ್ಥಳಿಯರಿಗೆ ಮಾವಿನ ಮಿಡಿ ಸಿಗುವುದೇ ಇಲ್ಲ ಆದ್ದರಿಂದ ಈ ವರ್ಷ ಈ ರೀತಿ ಮಾವಿನ ಮಿಡಿ ತೆಗೆಯುವವರನ್ನು ನೇರ ಸಂಪರ್ಕ ಮಾಡುವ ವ್ಯವಸ್ಥೆ ಮಾಡಿದ್ದೆ ಇದರಿಂದ ಸುಮಾರು ಒಂದು ಲಕ್ಷ ಮಾವಿನ ಮಿಡಿ ಆಸಕ್ತರು ಖರೀದಿಸಲು ಸಾಧ್ಯವಾಯಿತು.
  ಆದರೆ ಉದ್ಯೋಗ ವ್ಯವಹಾರ ನಿಮಿತ್ತ ದೂರದ ಊರಿನವರಿಗೆ ಇದು ಸಾಧ್ಯವಾಗಲಿಲ್ಲ.
    ಅವತ್ತು ಕಿತ್ತ ಆಯ್ದ ಮಿಡಿ ಅವತ್ತೇ ಮೃದುವಾದ ಸ್ವಚ್ಚ ಒಣ ಬಟ್ಟೆಯಲ್ಲಿ ಒರೆಸಿ, ತಕ್ಷಣ ಉಪ್ಪು ಹುರಿದು ಶುದ್ಧ ಜಾಡಿಯಲ್ಲಿ ಚಟ್ಟು ಮಾಡಲು ಹಾಕಿದರೆ ಉತ್ಕೃಷ್ಟ ಉಪ್ಪಿನಕಾಯಿ ಮಾಡಲು ಸಾಧ್ಯ.
  ಮಿಡಿ ಚಟ್ಟಾದ ನಂತರ ಪುನಃ ಅದರಲ್ಲಿ ಸೂಕ್ತ ಮಿಡಿ ಆರಿಸಿ ಅದಕ್ಕೆಸೂಕ್ತವಾದ ಅವರವರ ಆಯ್ಕೆಯ ಮಸಾಲ ಮಿಶ್ರಣವಾದರೆ ಮಲೆನಾಡ ಮಾವಿನ ಮಿಡಿ ಉಪ್ಪಿನಕಾಯಿ ಊಟದ ತಟ್ಟೆಯಲ್ಲಿ ಸ್ಥಾನ ಪಡೆಯುತ್ತದೆ.
  ಕೆಲ ದೂರದ ಗೆಳೆಯರಿಗೆ ಅವರ ಕೋರಿಕೆಯಿಂದ ಮಾವಿನ ಮಿಡಿ ಖರೀದಿಸಿ ಚಟ್ಟು ಹಾಕಿದ್ದೇನೆ ಅದನ್ನು ಒಯ್ದು ಉಪ್ಪಿನ ಕಾಯಿ ಮಾಡಿ ಕೊಳ್ಳುತ್ತಾರೆ.
  ಅನೇಕರು ಕೊನೆಯ ಹಂತದಲ್ಲಿ ಈ ಬೇಡಿಕೆ ಇಟ್ಟಿದ್ದರಿಂದ ನನಗೂ ಸಾಧ್ಯವಾಗಲಿಲ್ಲ.
   ಆದ್ದರಿಂದ ಮುಂದಿನ ವರ್ಷ ದೂರದ ಊರಿನಲ್ಲಿರುವ ಮಿಡಿ ಮಾವಿನಕಾಯಿ ಪ್ರಿಯರಿಗೆ ಬೇಕಾಗುಷ್ಟು ಮಾವಿನ ಮಿಡಿ ಚೆಟ್ಟು ಮಾಡಿ ಕೊಡಲು ನನ್ನ ಗೆಳೆಯರೋರ್ವರು ಮುಂದೆ ಬಂದಿದ್ದಾರೆ, ಇದಕ್ಕೆ ಬೇಕಾದ ಪಸ್ಟ್ ಗ್ರೇಡ್ ಮಸಾಲೆ ಪೂರೈಸಲು ಮಹಿಳಾ ಉದ್ಯಮಿ ಕೂಡ ತಯಾರಾಗಿದ್ದಾರೆ.
  ಇದರ ಮಧ್ಯ ಇಂತಹ ಚಟ್ಟು ಮಿಡಿ ಖರೀದಿಸಿದವರಿಗೆ ಮಲೆನಾಡ ರುಚಿಯ ಒಣ ಉಪ್ಪಿನಕಾಯಿ ಮಸಾಲೆ ಪುಡಿಯೂ ಸಿಗುತ್ತದೆ ಇದರಿಂದ ಅವರೇ ಅವರ ಮನೆಯಲ್ಲಿ ದಿಡೀರ್ ಮಲೆನಾಡ ರುಚಿಯ ಮಾವಿನ ಮಿಡಿ ಉಪ್ಪಿನಕಾಯಿ ಸುಲಭವಾಗಿ ತಯಾರಿಸಿ ತಿನ್ನಬಹುದು.
  ಇವತ್ತು ಮಾರುಕಟ್ಟೆಯಲ್ಲಿ ಒ0ದು ಕೇಜಿ ಉಪ್ಪಿನಕಾಯಿ ಅಂದರೆ ಅದರಲ್ಲಿ 20 ರಿಂದ 30 ಮಿಡಿ ಮಾತ್ರ ಇರುತ್ತದೆ.
  #ಮಲೆನಾಡ_ಮಾವಿನ_ಮಿಡಿ ಉಪ್ಪಿನಕಾಯಿ ಬೇಕಾದವರು, ಉಪ್ಪಿನಕಾಯಿ ಬೇಡ ಉಪ್ಪಿಗೆ ಹಾಕಿ ಚಟ್ಟು ಮಾಡಿದ ಮಾವಿನ ಮಿಡಿ ಬೇಕಾದವರು, ತಾವೇ ದಿಡೀರ್ ಉಪ್ಪಿನಕಾಯಿ ಮಾಡುವಂತ ಮಲೆನಾಡ ಮಾವಿನ ಮಿಡಿ ಉಪ್ಪಿನಕಾಯಿ ಒಣ ಮಸಾಲ ಪುಡಿ ಬೇಕಾದವರು ಈಗಲೇ ವಾಟ್ಸಪ್ ಅಥವ ಮೆಸೇಜ್ 9449253788 ಗೆ ಮಾಡಿದರೆ ಮುಂದಿನ ವರ್ಷ ಅಪ್ಪೆಮಿಡಿ ಉಪ್ಪಿನಲ್ಲಿ ಚಟ್ಟಿಸಿದ್ದು ಅಥವ ಮಸಾಲೆ ಹಾಕಿದ ಶುದ್ಧ ಉಪ್ಪಿನಕಾಯಿಯ ಭರಣಿ ಅವರ ಮನೆಗೆ ತಲುಪುತ್ತದೆ.
  ಕನ್ನಡದಲ್ಲಿ ಉಪ್ಪಿನಕಾಯಿ, ಆಂಧ್ರ ತೆಲಂಗಾಣದಲ್ಲಿ ಅವಕಾಯಿ (ಕಡಿ ಉಪ್ಪಿನಕಾಯಿ), ಹಿಂದಿಯಲ್ಲಿ ಅಚಾರ್, ಇಂಗ್ಲೀಷ್ ನಲ್ಲಿ ಪಿಕಲ್ ಭಾರತದ ಮೂಲದ್ದು ಇದು 4000 ವಷ೯ದ ಇತಿಹಾಸ ಹೊಂದಿದೆ ಅನ್ನುತ್ತಾರೆ.
  ನ್ಯೂಯಾರ್ಕನ ಪುಡ್ ಮ್ಯೂಸಿಯಂನಲ್ಲಿ 2030 BCE ಅಂದರೆ ಕ್ರಿಸ್ತ ಪೂರ್ವದಲ್ಲಿ ಭಾರತ ಮೂಲದ ಸೌತೆಕಾಯಿಂದ ಟ್ರಿಗ್ರೀಸ್ ವ್ಯಾಲಿಯಲ್ಲಿ ಉಪ್ಪಿನಕಾಯಿ ಮೊದಲು ಪ್ರಾರಂಬ ಆಯಿತೆಂಬ ಮಾಹಿತಿ ಜಾಹೀರು ಮಾಡಿದ್ದಾರೆ.
 ಅಮೇರಿಕಾದಲ್ಲಿ ಪ್ರತಿ ವ್ಯಕ್ತಿ ವಾರ್ಷಿಕ 9 ಪೌಂಡ್ ಸೌತೆ ಕಾಯಿ ಉಪ್ಪಿನಕಾಯಿ ಸೇವಿಸುತ್ತಾನೆಂಬ ಸಮೀಕ್ಷೆ ಇದೆ.
 ಇಟಲಿ ಪ್ರವಾಸಿ ಡೊಲ್ಲಾ ವೆಲ್ಲೆ 1624 ರಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕರ ಬೇಟಿಗೆ ಬಂದಾಗ 101 ರೀತಿಯ ಉಪ್ಪಿನಕಾಯಿ ಅವರ ಊಟದ ಎಡೆ ಎಲೆಯಲ್ಲಿ ಬಡಿಸಿದ್ದರೆಂಬ ಜನಪದ ಸುದ್ದಿ ಇತ್ತು.
   ಪಶ್ಚಿಮ ಘಟ್ಟದ ಕನಾ೯ಟಕದ  ಮಲೆನಾಡು ಪ್ರದೇಶದಲ್ಲಿ ಮಾತ್ರ ಗೊತ್ತಿರುವ ಬಳಕೆಯಲ್ಲಿರುವ ಅಪ್ಪೆಮಿಡಿ ಉಪ್ಪಿನಕಾಯಿ ಇದಕ್ಕಾಗೆ ತಲತಲಾಂತರದಿಂದ ಬಳಕೆಯಲ್ಲಿ ಇರುವ ಆಯ್ದ ವೈವಿಧ್ಯಮಯ ಮಾವಿನ ಅಪ್ಪೆ ಮಿಡಿಗಳು ಇದಕ್ಕೆ ಸಕಾ೯ರ ನೀಡಿರುವ ಪ್ರಾದೇಶಿಕ ಮಾನ್ಯತೆಯ G I Tag ಕೂಡ ಇದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ