Skip to main content

ಪಶ್ಚಿಮ ಘಟ್ಟದ ಕರ್ನಾಟಕದ ಮಲೆನಾಡಿನ ಏಕೈಕ ವಿಶಿಷ್ಟ ವೈವಿಧ್ಯಮಯ ಮಾವಿನ ಅಪ್ಪೆಮಿಡಿ ಚಟ್ಟಿಸಿದ ಉಪ್ಪಿನಕಾಯಿಗೆ ಪ್ರಾದೇಶಿಕ ಮಾನ್ಯತೆ GI tag ಕೂಡ ದೊರೆತಿದೆ.

#ಮಾವಿನ_ಅಪ್ಪೆಮಿಡಿ_ಉಪ್ಪಿನಕಾಯಿ.

#ಆಯ್ದ_ಆಪ್ಪೆಮಿಡಿ_ಆರಿಸಿ_ಒರೆಸಿ_ಹುರಿದ_ಉಪ್ಪಿನ_ಜೊತೆ_ಚೆಟ್ಟು_ಮಾಡುವುದು_ಒ0ದು_ಸಂಪ್ರದಾಯಿಕ_ಆಹಾರದ_ಕಲೆ

#ಮುಂದಿನ_ವರ್ಷ_ಬೇಕಾದವರು_ಈಗಲೇ_ಹೆಸರು_ನೊಂದಾಯಿಸಿ.

#ಭಾರತ_ಮೂಲದ_ಉಪ್ಪಿನ_ಕಾಯಿಗೆ_ನಾಲ್ಕು_ಸಾವಿರ_ವರ್ಷದ_ಇತಿಹಾಸ.

#ಮಿಡಿ_ಮಾವಿನಕಾಯಿ_ಪಶ್ಚಿಮಘಟ್ಟದ_ಮಲೆನಾಡಿನಲ್ಲಿ_ಮಾತ್ರ.

#ಇಟಲಿ_ಪ್ರವಾಸಿ_ಡೊಲ್ಲಾವಲ್ಲೆ_1624ರಲ್ಲಿ_ಇಕ್ಕೇರಿಗೆ_ಬಂದಾಗ_101_ಅಪ್ಪೆಮಿಡಿ_ಉಪ್ಪಿನಕಾಯಿ_ಬಡಿಸಿದ್ದರಂತೆ

  ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆ ಮಾವಿನ ಮಿಡಿ ಮಾರಾಟದ ಕೇಂದ್ರ ಆಗಿದೆ, ನಮ್ಮ ಊರಿಂದ ಹತ್ತು ಕಿ.ಮೀ.ದೂರದ ಈ ಊರಿಗೆ ನಮ್ಮ ಊರಿನಿಂದಲೂ ಮಾವಿನ ಮಿಡಿ ಕಿಳುವವರು ಮಾವಿನ ಮಿಡಿ ರಿಪ್ಪನ್ ಪೇಟೆಗೆ ಒಯ್ಯುತ್ತಾರೆ ಅಲ್ಲಿನ ಅನೇಕ ಅಂಗಡಿ, ಹೋಟೆಲ್ ನವರು ಇವರಿಂದ ಖರೀದಿಸಿ ಮಾರಾಟಕ್ಕೆ ಇಡುತ್ತಾರೆ ಇದರಿಂದ ಶ್ರಮಪಟ್ಟು ಮರದಿಂದ ಮಾವಿನ ಮಿಡಿ ಕಿತ್ತು ತರುವವನಿಗೆ ಮಾರಾಟದ ತಲೆ ನೋವು ಚೌಕಾಸಿ ಇರುವುದಿಲ್ಲ, ತಕ್ಷಣ ಹಣ ಸಿಗುವುದು ಅವನಿಗೆ ಮುಖ್ಯ.
  ಹಾಗಾಗಿ ಸ್ಥಳಿಯರಿಗೆ ಮಾವಿನ ಮಿಡಿ ಸಿಗುವುದೇ ಇಲ್ಲ ಆದ್ದರಿಂದ ಈ ವರ್ಷ ಈ ರೀತಿ ಮಾವಿನ ಮಿಡಿ ತೆಗೆಯುವವರನ್ನು ನೇರ ಸಂಪರ್ಕ ಮಾಡುವ ವ್ಯವಸ್ಥೆ ಮಾಡಿದ್ದೆ ಇದರಿಂದ ಸುಮಾರು ಒಂದು ಲಕ್ಷ ಮಾವಿನ ಮಿಡಿ ಆಸಕ್ತರು ಖರೀದಿಸಲು ಸಾಧ್ಯವಾಯಿತು.
  ಆದರೆ ಉದ್ಯೋಗ ವ್ಯವಹಾರ ನಿಮಿತ್ತ ದೂರದ ಊರಿನವರಿಗೆ ಇದು ಸಾಧ್ಯವಾಗಲಿಲ್ಲ.
    ಅವತ್ತು ಕಿತ್ತ ಆಯ್ದ ಮಿಡಿ ಅವತ್ತೇ ಮೃದುವಾದ ಸ್ವಚ್ಚ ಒಣ ಬಟ್ಟೆಯಲ್ಲಿ ಒರೆಸಿ, ತಕ್ಷಣ ಉಪ್ಪು ಹುರಿದು ಶುದ್ಧ ಜಾಡಿಯಲ್ಲಿ ಚಟ್ಟು ಮಾಡಲು ಹಾಕಿದರೆ ಉತ್ಕೃಷ್ಟ ಉಪ್ಪಿನಕಾಯಿ ಮಾಡಲು ಸಾಧ್ಯ.
  ಮಿಡಿ ಚಟ್ಟಾದ ನಂತರ ಪುನಃ ಅದರಲ್ಲಿ ಸೂಕ್ತ ಮಿಡಿ ಆರಿಸಿ ಅದಕ್ಕೆಸೂಕ್ತವಾದ ಅವರವರ ಆಯ್ಕೆಯ ಮಸಾಲ ಮಿಶ್ರಣವಾದರೆ ಮಲೆನಾಡ ಮಾವಿನ ಮಿಡಿ ಉಪ್ಪಿನಕಾಯಿ ಊಟದ ತಟ್ಟೆಯಲ್ಲಿ ಸ್ಥಾನ ಪಡೆಯುತ್ತದೆ.
  ಕೆಲ ದೂರದ ಗೆಳೆಯರಿಗೆ ಅವರ ಕೋರಿಕೆಯಿಂದ ಮಾವಿನ ಮಿಡಿ ಖರೀದಿಸಿ ಚಟ್ಟು ಹಾಕಿದ್ದೇನೆ ಅದನ್ನು ಒಯ್ದು ಉಪ್ಪಿನ ಕಾಯಿ ಮಾಡಿ ಕೊಳ್ಳುತ್ತಾರೆ.
  ಅನೇಕರು ಕೊನೆಯ ಹಂತದಲ್ಲಿ ಈ ಬೇಡಿಕೆ ಇಟ್ಟಿದ್ದರಿಂದ ನನಗೂ ಸಾಧ್ಯವಾಗಲಿಲ್ಲ.
   ಆದ್ದರಿಂದ ಮುಂದಿನ ವರ್ಷ ದೂರದ ಊರಿನಲ್ಲಿರುವ ಮಿಡಿ ಮಾವಿನಕಾಯಿ ಪ್ರಿಯರಿಗೆ ಬೇಕಾಗುಷ್ಟು ಮಾವಿನ ಮಿಡಿ ಚೆಟ್ಟು ಮಾಡಿ ಕೊಡಲು ನನ್ನ ಗೆಳೆಯರೋರ್ವರು ಮುಂದೆ ಬಂದಿದ್ದಾರೆ, ಇದಕ್ಕೆ ಬೇಕಾದ ಪಸ್ಟ್ ಗ್ರೇಡ್ ಮಸಾಲೆ ಪೂರೈಸಲು ಮಹಿಳಾ ಉದ್ಯಮಿ ಕೂಡ ತಯಾರಾಗಿದ್ದಾರೆ.
  ಇದರ ಮಧ್ಯ ಇಂತಹ ಚಟ್ಟು ಮಿಡಿ ಖರೀದಿಸಿದವರಿಗೆ ಮಲೆನಾಡ ರುಚಿಯ ಒಣ ಉಪ್ಪಿನಕಾಯಿ ಮಸಾಲೆ ಪುಡಿಯೂ ಸಿಗುತ್ತದೆ ಇದರಿಂದ ಅವರೇ ಅವರ ಮನೆಯಲ್ಲಿ ದಿಡೀರ್ ಮಲೆನಾಡ ರುಚಿಯ ಮಾವಿನ ಮಿಡಿ ಉಪ್ಪಿನಕಾಯಿ ಸುಲಭವಾಗಿ ತಯಾರಿಸಿ ತಿನ್ನಬಹುದು.
  ಇವತ್ತು ಮಾರುಕಟ್ಟೆಯಲ್ಲಿ ಒ0ದು ಕೇಜಿ ಉಪ್ಪಿನಕಾಯಿ ಅಂದರೆ ಅದರಲ್ಲಿ 20 ರಿಂದ 30 ಮಿಡಿ ಮಾತ್ರ ಇರುತ್ತದೆ.
  #ಮಲೆನಾಡ_ಮಾವಿನ_ಮಿಡಿ ಉಪ್ಪಿನಕಾಯಿ ಬೇಕಾದವರು, ಉಪ್ಪಿನಕಾಯಿ ಬೇಡ ಉಪ್ಪಿಗೆ ಹಾಕಿ ಚಟ್ಟು ಮಾಡಿದ ಮಾವಿನ ಮಿಡಿ ಬೇಕಾದವರು, ತಾವೇ ದಿಡೀರ್ ಉಪ್ಪಿನಕಾಯಿ ಮಾಡುವಂತ ಮಲೆನಾಡ ಮಾವಿನ ಮಿಡಿ ಉಪ್ಪಿನಕಾಯಿ ಒಣ ಮಸಾಲ ಪುಡಿ ಬೇಕಾದವರು ಈಗಲೇ ವಾಟ್ಸಪ್ ಅಥವ ಮೆಸೇಜ್ 9449253788 ಗೆ ಮಾಡಿದರೆ ಮುಂದಿನ ವರ್ಷ ಅಪ್ಪೆಮಿಡಿ ಉಪ್ಪಿನಲ್ಲಿ ಚಟ್ಟಿಸಿದ್ದು ಅಥವ ಮಸಾಲೆ ಹಾಕಿದ ಶುದ್ಧ ಉಪ್ಪಿನಕಾಯಿಯ ಭರಣಿ ಅವರ ಮನೆಗೆ ತಲುಪುತ್ತದೆ.
  ಕನ್ನಡದಲ್ಲಿ ಉಪ್ಪಿನಕಾಯಿ, ಆಂಧ್ರ ತೆಲಂಗಾಣದಲ್ಲಿ ಅವಕಾಯಿ (ಕಡಿ ಉಪ್ಪಿನಕಾಯಿ), ಹಿಂದಿಯಲ್ಲಿ ಅಚಾರ್, ಇಂಗ್ಲೀಷ್ ನಲ್ಲಿ ಪಿಕಲ್ ಭಾರತದ ಮೂಲದ್ದು ಇದು 4000 ವಷ೯ದ ಇತಿಹಾಸ ಹೊಂದಿದೆ ಅನ್ನುತ್ತಾರೆ.
  ನ್ಯೂಯಾರ್ಕನ ಪುಡ್ ಮ್ಯೂಸಿಯಂನಲ್ಲಿ 2030 BCE ಅಂದರೆ ಕ್ರಿಸ್ತ ಪೂರ್ವದಲ್ಲಿ ಭಾರತ ಮೂಲದ ಸೌತೆಕಾಯಿಂದ ಟ್ರಿಗ್ರೀಸ್ ವ್ಯಾಲಿಯಲ್ಲಿ ಉಪ್ಪಿನಕಾಯಿ ಮೊದಲು ಪ್ರಾರಂಬ ಆಯಿತೆಂಬ ಮಾಹಿತಿ ಜಾಹೀರು ಮಾಡಿದ್ದಾರೆ.
 ಅಮೇರಿಕಾದಲ್ಲಿ ಪ್ರತಿ ವ್ಯಕ್ತಿ ವಾರ್ಷಿಕ 9 ಪೌಂಡ್ ಸೌತೆ ಕಾಯಿ ಉಪ್ಪಿನಕಾಯಿ ಸೇವಿಸುತ್ತಾನೆಂಬ ಸಮೀಕ್ಷೆ ಇದೆ.
 ಇಟಲಿ ಪ್ರವಾಸಿ ಡೊಲ್ಲಾ ವೆಲ್ಲೆ 1624 ರಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕರ ಬೇಟಿಗೆ ಬಂದಾಗ 101 ರೀತಿಯ ಉಪ್ಪಿನಕಾಯಿ ಅವರ ಊಟದ ಎಡೆ ಎಲೆಯಲ್ಲಿ ಬಡಿಸಿದ್ದರೆಂಬ ಜನಪದ ಸುದ್ದಿ ಇತ್ತು.
   ಪಶ್ಚಿಮ ಘಟ್ಟದ ಕನಾ೯ಟಕದ  ಮಲೆನಾಡು ಪ್ರದೇಶದಲ್ಲಿ ಮಾತ್ರ ಗೊತ್ತಿರುವ ಬಳಕೆಯಲ್ಲಿರುವ ಅಪ್ಪೆಮಿಡಿ ಉಪ್ಪಿನಕಾಯಿ ಇದಕ್ಕಾಗೆ ತಲತಲಾಂತರದಿಂದ ಬಳಕೆಯಲ್ಲಿ ಇರುವ ಆಯ್ದ ವೈವಿಧ್ಯಮಯ ಮಾವಿನ ಅಪ್ಪೆ ಮಿಡಿಗಳು ಇದಕ್ಕೆ ಸಕಾ೯ರ ನೀಡಿರುವ ಪ್ರಾದೇಶಿಕ ಮಾನ್ಯತೆಯ G I Tag ಕೂಡ ಇದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...