Skip to main content

ಭಾಗ - 2 , ಸಾತ್ವಿಕ ಜೀವನ, ಸಮಾಜವಾದಿ ಚಿಂತನೆಯ, ಸವ೯ ಧರ್ಮ ಸಹಿಷ್ಣುತೆಯ ಅಜಾತ ಶತ್ರು ಪಿ.ಪುಟ್ಟಯ್ಯ ಶಾಂತವೇರಿ ಗೋಪಾಲಗೌಡರ ಜೀವನದ ನಡೆ ನುಡಿಯ ಕೊನೆಯ ತಂತು ಆಗಿದ್ದಾರೆ.

ಮುಂದುವರಿದ ಎರಡನೆ ಭಾಗ

#ಪಿ_ಪುಟ್ಟಯ್ಯ

#ಒಂದು_ಕಾಲದಲ್ಲಿ_ಇವರ_ಪ್ರಕೃತಿ_ಮುದ್ರಣಾಲಯ_ಅನುಭವ_ಮಂಟಪದಂತೆ_ಆಗಿತ್ತು.

#ಶಿವಮೊಗ್ಗ_ಜಿಲ್ಲೆಯ_ಹಿರಿಯ_ಸಮಾಜವಾದಿಗಳು.

#ಮಣಿಪಾಲ್_ಸಮೀಪದ_ಪೆರ್ಡೂರಿಂದ_ಸಾಗರಕ್ಕೆ_1946ರಲ್ಲಿ_ಬಂದವರು

#ಮಲ್ನಾಡಳ್ಳಿ_ಮುಂದಿನ_ಸ್ವಾಮಿಗಳು_ಎಂದೆ_ಜನರ_ಬಾವನೆಯಲ್ಲಿದ್ದವರು.

#ಸಾಗರ_ಪಟ್ಟಣ_1946ರಿಂದ_1960ರ_ತನಕ_ಹೇಗಿತ್ತು.

                            #ಭಾಗ_2.

     ನಾನು ಪುಟ್ಟಯ್ಯನವರನ್ನು ಮೊದಲು ನೋಡಿದ್ದು ಸಾಗರದ ನ್ಯಾಯದ ತಕ್ಕಡಿ ಸಂಪಾದಕರಾಗಿದ್ದ ತೀನಾ ಶ್ರೀನಿವಾಸರನ್ನು (ನಂತರ ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು, ಸಾಗರ ನಗರಸಭೆ ಅಧ್ಯಕ್ಷರೂ ಆಗಿದ್ದ) ಜಮೀಲ್ ಎಂಬ ಸಬ್ ಇನ್ಸ್ಪೆಕ್ಟರ್ ಹಲ್ಲೆ ಮಾಡಿದಾಗ ನಾನು,ಶಿವಾನಂದ ಕುಗ್ವೆ ಮತ್ತು ಅದರಂತೆ ವಿಶ್ವನಾಥ ಗೌಡರು ಜೊತೆ ಇವರ ಅನುಭವ ಮಂಟಪ ಅರ್ಥಾತ್ ಪ್ರಕೃತಿ ಮುದ್ರಣಾಲಯ ನೋಡಿದ್ದು, ನಂತರ ಶಿವಮೊಗ್ಗ ಹೋದಾಗೆಲ್ಲ ಮೊದಲ ಬೇಟಿ ಇಲ್ಲಿಗೆ ನಂತರ ಬೇರೆಲ್ಲ ಕೆಲಸಕ್ಕೆ.
   ನಾನು ಇವರ ಕಛೇರಿಯಲ್ಲೇ ಡಾ. ಕೋವೂರರ ಪವಾಡ ರಹಸ್ಯ, ಹೆಚ್.ಎನ್.ನರಸಿಂಹಯ್ಯರ ಆತ್ಮಚರಿತ್ರೆ, ಮನುಶಾಸ್ತ್ರದ ಕನ್ನಡ ಅನುವಾದ ಮುಂತಾದ ಅನೇಕ ಪುಸ್ತಕ ಇಲ್ಲಿಂದನೇ ಉಚಿತವಾಗಿ ಪಡೆದದ್ದು ಓದಿದ್ದು.
  ಇವರ ಜೊತೆ ಹೋಟೆಲ್ ಗೆ ಹೋದವರಾರು ಬಿಲ್ ಕೊಡುವಂತಿಲ್ಲ ಆದರೆ ಅಧ್ಯಾಕೋ ಗೊತ್ತಿಲ್ಲ ನಾನು ಕೊಟ್ಟರೆ ಸುಮ್ಮನಾಗುತ್ತಾರೆ.
  ಪ್ರತಿ ವರ್ಷ ಇವರ ಮರದ ಗುಜ್ ಹಲಸು ಕಳಿಸಿ ಕೊಡುತ್ತಾರೆ, ನನಗೆ ಉಡಲು ಅತಿ ಹೆಚ್ಚು ಪಂಚೆ ಖರೀದಿಸಿ ಕಳಿಸಿದವರು ಇವರು ಮಾತ್ರ.
  ಯಾರ ವಿರುದ್ದವಾಗಿ, ದ್ವೇಷ, ಅಸೂಯೆ, ಬೈಯ್ಗುಳ ಯಾವತ್ತೂ ಇವರ ಜಮಾನದಲ್ಲಿ ಯಾರೂ ನೋಡಿಲ್ಲ.

   ಮೊನ್ನೆ ರಾತ್ರಿ ಪೋನಿನಲ್ಲಿ ಮಾತಾಡುತ್ತಾ ....
  ಸಾಗರದ ಪ್ರಥಮ ಸಾಮಿಲ್ ಪಟೇಲ್ ಸಾಮಿಲ್ ಇದರ ಮಾಲಿಕರ ಮಗ ಎಂ ಎಸ್.ರಾಮ್ ಜೀ ಪಟೇಲ್ ಪುಟ್ಟಯ್ಯರ ಕ್ಲಾಸ್ ಮೇಟ್.
  ಸ್ಟಾತಂತ್ರ ಬಂದಾಗ ಒಮ್ಮೆ ಮತ್ತು ಮೈಸೂರು ಶ್ರೀಕಂಠದತ್ತ ಒಡೆಯರ್ ಹುಟ್ಟಿದ್ದಕ್ಕಾಗಿ ಸರ್ಕಾರ ಶಾಲೆಗಳಲ್ಲಿ ಲಾಡು ಹಂಚಿದ್ದರಂತೆ.
  ಆಸ್ಪತ್ರೆ ರಸ್ತೆ ಡಬಲ್ ರೋಡ್ ಮಾಡಿದರು, ಸಾಗರ ಹೋಟೆಲ್ ಸರ್ಕಲ್ ನಿಂದ ಗಣಪತಿ ದೇವಸ್ಥಾನದ ತನಕ ಬರಲೊಂದು ಮಾರ್ಗ ಮತ್ತು ಹೋಗಲೊಂದು ಮಾರ್ಗ ಮಾಡಿದರೂ ಟ್ರಾಪಿಕ್ ಸಮಸ್ಯೆ ಸುದಾರಿಸದಿದ್ದರಿಂದ ರಿಂಗ್ ರೋಡ್ ನ್ಯೂ ಬಿ ಹೆಚ್ ರಸ್ತೆ ನಿರ್ಮಾಣ ಆಯಿತು ಕಾಮಗಾರಿ ಪ್ರಾರಂಭ ಆಗುವಾಗ ಶಾಸಕರು ಬದರಿನಾರಾಯಣ ಅಯ್ಯಂಗಾರರು ಮತ್ತು ಮೂಕಪ್ಪನವರು ಇದ್ದರು.
  ಸಾಗರದ ಆಸ್ಪತ್ರೆ ಎದುರಿನ ಲಾಯರ್ ಅನಂತರಾಯರ ಹೆಂಚಿನ ಒಂದು ರೂಮು ಸೋಷಿಲಿಸ್ಟ್ ಪಾರ್ಟಿಯ ಮೊದಲ ಮತ್ತು ಅಂತಿಮ ಕಛೇರಿ ಆಗಿತ್ತು, ಅವಾಗ ಶಾಸಕರಾಗಿದ್ದ (1952) ಶಾಂತವೇರಿ ಗೋಪಾಲಗೌಡರು ಕೆಲವೊಮ್ಮೆ ಇಲ್ಲೇ ತಂಗುತ್ತಿದ್ದರಂತೆ.
  ಸರ್ಕಾರದ ಪ್ರವಾಸಿ ಮಂದಿರ ಆಗ ಶಾಸಕರಿಗೆ ತಂಗಲು ಕೊಡುತ್ತಿರಲಿಲ್ಲವಂತೆ.
 ಗೋಪಾಲ ಗೌಡರ ಹತ್ತಿರ ಸ್ವಂತ ವಾಹನ ಇರಲಿಲ್ಲ, ಚುನಾವಣೆ ಸಂದರ್ಭದಲ್ಲಿ ಡ್ರೈವರ್ ಶೇಖರ ಮತ್ತು ಡ್ರೈವರ್ ನರಸಿಂಹ ಎಂಬುವವರು ತರುತ್ತಿದ್ದ ಬಾಡಿಗೆ ಕಾರಿನಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದರಂತೆ, ಆಗಿನ ಕಾರುಗಳು ಹ್ಯಾಂಡಲ್ ಹೊಡೆದು ಚಾಲು ಮಾಡುವ೦ತ ಟಾರ್ಪಲ್ ಮೇಲ್ಚಾವಣೆಯ ಕಾರುಗಳಂತೆ.
  ಗೋಪಾಲಗೌಡರ ಮೊದಲ ಚುನಾವಣೆ ವೆಚ್ಚ ಐದು ಸಾವಿರ, ಎರಡನೆ ಚುನಾವಣೆಯಲ್ಲಿ ಏಳು ಸಾವಿರ ಅಂತೆ.
  ಆಗ ಗೋಪಾಲಗೌಡರಿಗೆ ಪುಟ್ಟಯ್ಯರ ಅಣ್ಣ ಶೀನಣ್ಣ ಐದು ರೂಪಾಯಿ ಚುನಾವಣಾ ದೇಣಿಗೆ ನೀಡಿದ್ದರಂತೆ ಆಗ ಅದು ದೊಡ್ಡ ದುಡ್ಡಾಗಿತ್ತು.
  ಗೋಪಾಲಗೌಡರಿಗೆ ದೊಡ್ಡ ದೇಣಿಗೆ ಹತ್ತು ರೂಪಾಯಿ ಅದು ಕೆಲ ವಕೀಲರು ನೀಡುತ್ತಿದ್ದಂತೆ.
  ಪೆಟ್ರೋಲ್ ಬಂಕ್ ಸಾಲ, ಪ್ರಿಂಟಿಂಗ್ ಸಾಲಗಳನ್ನು ಆಗ ಗೋಪಾಲಗೌಡರಿಗೆ ಬರುತ್ತಿದ್ದ ಅತ್ಯಲ್ಪ ಶಾಸಕರ ವೇತನದಲ್ಲಿ ತೀರಿಸುತ್ತಿದ್ದರಂತೆ.
  ಸಾಗರದಲ್ಲಿ ಗೋಪಾಲಗೌಡರಿಗೆ ಅತ್ಯಾಪ್ತರು ಎಸ್.ಎಸ್.ಕುಮಟಾ, ಸಾಗರ್ ಹೋಟೆಲ್ ಮಾಲಿಕರಾದ ಕಲ್ಕೂರ್, ಕಾರ್ ಡ್ರೈವರ್ ಗಳಾದ ಶೇಖರ ಮತ್ತು ನರಸಿಂಹ.
   ಆಗ ಸಾಗರದಲ್ಲಿ ಶ್ರೀಮಂತ ಕುಟುಂಬಗಳು ಕೇವಲ ಕೆಲವೇ ಕೆಲವು,ಸೊಲಬಣ್ಣ ಶೆಟ್ಟರ ಕುಟುಂಬ, ರಟ್ಟೇಹಳ್ಳಿಯವರ ಕುಟುಂಬ, ಯಾಗೈನೇ ಶೇಷಗಿರಿಯವರ ಕುಟುಂಬ, ದಳವಾಯಿ ಕುಟುಂಬ ಮತ್ತು ಸೊರಬ ರಸ್ತೆಯಲ್ಲಿ ಹಿತ್ತಾಳೆ, ತಾಮ್ರದ ವ್ಯಾಪಾರಿ ರೆಹಮಾನ್ ಸಾಹೇಬರು ಇದ್ದರು.
   ಸಾಗರದ ಸರಿ ಸುಮಾರು ಎಲ್ಲಾ ಕಟ್ಟಡ ಆಗ ನಿರ್ಮಿಸಿದವರು ಸಾಗರದ ಕ್ರಿಶ್ಚಿಯನ್ ಗಾರೆ ಮೇಸ್ತ್ರಿಗಳಂತೆ.
  ಅಹಮದ್ ಆಲಿ ಖಾನ್ ಸಾಹೇಬರು ಪ್ರಾಮಾಣಿಕರು ಶಿಸ್ತಿನ ಮನುಷರು ಎಂಬ ಪ್ರತೀತಿ ಸಾಗರ ಪಟ್ಟಣದಲ್ಲಿತ್ತು.
  ಕುರುಬರ ಲಿಂಗಪ್ಪ ಮತ್ತು ಲ್ಯಾಂಡ್ರಿ ಬೋಜಪ್ಪನವರು ಆಗ ಪೈಲ್ವಾನರು ಅವರ ಹವಾ ಜೋರಿತ್ತು.
  ಪ್ರತಿ ವರ್ಷ ದಸರಾದಲ್ಲಿ ಪ್ರವಾಸಿ ಮಂದಿರದ ಪಕ್ಕದ ಮೈದಾನದಲ್ಲಿ ಹೊರ ಜಿಲ್ಲೆಗಳಿಂದ ಪೈಲ್ವಾನರು ಕುಸ್ತಿ ಪಂದ್ಯಾವಳಿಗೆ ಬರುತ್ತಿದ್ದರು.
   ಟಿ.ಡಿ.ಕೆ. ಪಂಡಿತರ ತಂದೆ ದೇವ ಪಂಡಿತರು ಆ ಕಾಲದಲ್ಲಿ ಲಾರಿ ಮಾಲಿಕರು, ಭದ್ರಾವತಿಗೆ ಚಾರ್ ಕೋಲ್ ಮತ್ತು ಬೆಂಗಳೂರಿನ ಪ್ಲೇವುಡ್ ಪ್ಯಾಕ್ಟರಿಗೆ ಮುಳುಗಡೆ ಪ್ರದೇಶದ ಕೂಪಿನಿಂದ ಮಾವಿನ ಮರ ಸಾಗಿಸುತ್ತಿದ್ದರು, ದೇವ ಪಂಡಿತರು ತುಂಬಾ ಶಿಸ್ತಿನ ವ್ಯವಹಾರಸ್ಥರು, ಟಿಡಿಕೆ ಪಂಡಿತರು ಆರಂಭದಿಂದ ಕಾಂಗ್ರೇಸ್ ಪಕ್ಷ.
  ಆಗ ಜನಸಂಘ ಪಕ್ಷ ದೀಪದ ಗುರುತಿನಲ್ಲಿ ಚುನಾವಣೆಗೆ ಸ್ಪರ್ದಿಸುತ್ತಿತ್ತು.
  ಸಾಹಿತಿ ವಿಲಿಯಂರ ತಾಯಿ ಪುಟ್ಟಯ್ಯನವರಿಗೆ ಶಿಕ್ಷಕಿ ಆಗಿದ್ದರಂತೆ.
  ಈಗ ಪಿ.ಪುಟ್ಟಯ್ಯ ಶಿವಮೊಗ್ಗದ ಮಿಷನ್ ಕಂಪೌಂಡ್ ನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ, ಮೊದಲ್ಲಿನಿಂದಲೂ ಸಸ್ಯಹಾರಿಗಳಾದ ಇವರು ಬೆಳಿಗ್ಗೆ ಇಡ್ಲಿ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಹಾಲು ಅನ್ನ ಅಥವ ಮೊಸರು ಅನ್ನ ಮಾತ್ರ, ಸ್ವತಃ ಅಡುಗೆ ಮಾಡಿ ಸೇವಿಸುತ್ತಾರೆ.
  ಅನೇಕ ಅನಾಥ ಬೀದಿ ನಾಯಿಗಳನ್ನು ತಂದು ಸಾಕಿದ್ದಾರೆ, ಮನೆಯ ಸುತ್ತ ಕೈತೋಟ ಮಾಡಿದ್ದಾರೆ.
  ಬೆಳಿಗ್ಗೆ ವಾಕಿಂಗ್ ಮಾಡುತ್ತಾರೆ, ಇವರ ಗೆಳೆಯರು ಇವರನ್ನು ನೋಡಲು ಇವರ ಮನೆಗೆ ಬರುತ್ತಾರೆ ಹೀಗೆ ಒಬ್ಬಂಟಿ ಆಗಿ ಜೀವನ ಕಳೆಯುತ್ತಿದ್ದಾರೆ.
  ಪುಟ್ಟಯ್ಯರ ಪೋನ್ ನಂಬರ್ 94483 46806.
                                   (ಮುಕ್ತಾಯ)
ಲೇ: ಕೆ.ಅರುಣ್ ಪ್ರಸಾದ್.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ