Skip to main content

ಭಾಗ - 2 , ಸಾತ್ವಿಕ ಜೀವನ, ಸಮಾಜವಾದಿ ಚಿಂತನೆಯ, ಸವ೯ ಧರ್ಮ ಸಹಿಷ್ಣುತೆಯ ಅಜಾತ ಶತ್ರು ಪಿ.ಪುಟ್ಟಯ್ಯ ಶಾಂತವೇರಿ ಗೋಪಾಲಗೌಡರ ಜೀವನದ ನಡೆ ನುಡಿಯ ಕೊನೆಯ ತಂತು ಆಗಿದ್ದಾರೆ.

ಮುಂದುವರಿದ ಎರಡನೆ ಭಾಗ

#ಪಿ_ಪುಟ್ಟಯ್ಯ

#ಒಂದು_ಕಾಲದಲ್ಲಿ_ಇವರ_ಪ್ರಕೃತಿ_ಮುದ್ರಣಾಲಯ_ಅನುಭವ_ಮಂಟಪದಂತೆ_ಆಗಿತ್ತು.

#ಶಿವಮೊಗ್ಗ_ಜಿಲ್ಲೆಯ_ಹಿರಿಯ_ಸಮಾಜವಾದಿಗಳು.

#ಮಣಿಪಾಲ್_ಸಮೀಪದ_ಪೆರ್ಡೂರಿಂದ_ಸಾಗರಕ್ಕೆ_1946ರಲ್ಲಿ_ಬಂದವರು

#ಮಲ್ನಾಡಳ್ಳಿ_ಮುಂದಿನ_ಸ್ವಾಮಿಗಳು_ಎಂದೆ_ಜನರ_ಬಾವನೆಯಲ್ಲಿದ್ದವರು.

#ಸಾಗರ_ಪಟ್ಟಣ_1946ರಿಂದ_1960ರ_ತನಕ_ಹೇಗಿತ್ತು.

                            #ಭಾಗ_2.

     ನಾನು ಪುಟ್ಟಯ್ಯನವರನ್ನು ಮೊದಲು ನೋಡಿದ್ದು ಸಾಗರದ ನ್ಯಾಯದ ತಕ್ಕಡಿ ಸಂಪಾದಕರಾಗಿದ್ದ ತೀನಾ ಶ್ರೀನಿವಾಸರನ್ನು (ನಂತರ ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು, ಸಾಗರ ನಗರಸಭೆ ಅಧ್ಯಕ್ಷರೂ ಆಗಿದ್ದ) ಜಮೀಲ್ ಎಂಬ ಸಬ್ ಇನ್ಸ್ಪೆಕ್ಟರ್ ಹಲ್ಲೆ ಮಾಡಿದಾಗ ನಾನು,ಶಿವಾನಂದ ಕುಗ್ವೆ ಮತ್ತು ಅದರಂತೆ ವಿಶ್ವನಾಥ ಗೌಡರು ಜೊತೆ ಇವರ ಅನುಭವ ಮಂಟಪ ಅರ್ಥಾತ್ ಪ್ರಕೃತಿ ಮುದ್ರಣಾಲಯ ನೋಡಿದ್ದು, ನಂತರ ಶಿವಮೊಗ್ಗ ಹೋದಾಗೆಲ್ಲ ಮೊದಲ ಬೇಟಿ ಇಲ್ಲಿಗೆ ನಂತರ ಬೇರೆಲ್ಲ ಕೆಲಸಕ್ಕೆ.
   ನಾನು ಇವರ ಕಛೇರಿಯಲ್ಲೇ ಡಾ. ಕೋವೂರರ ಪವಾಡ ರಹಸ್ಯ, ಹೆಚ್.ಎನ್.ನರಸಿಂಹಯ್ಯರ ಆತ್ಮಚರಿತ್ರೆ, ಮನುಶಾಸ್ತ್ರದ ಕನ್ನಡ ಅನುವಾದ ಮುಂತಾದ ಅನೇಕ ಪುಸ್ತಕ ಇಲ್ಲಿಂದನೇ ಉಚಿತವಾಗಿ ಪಡೆದದ್ದು ಓದಿದ್ದು.
  ಇವರ ಜೊತೆ ಹೋಟೆಲ್ ಗೆ ಹೋದವರಾರು ಬಿಲ್ ಕೊಡುವಂತಿಲ್ಲ ಆದರೆ ಅಧ್ಯಾಕೋ ಗೊತ್ತಿಲ್ಲ ನಾನು ಕೊಟ್ಟರೆ ಸುಮ್ಮನಾಗುತ್ತಾರೆ.
  ಪ್ರತಿ ವರ್ಷ ಇವರ ಮರದ ಗುಜ್ ಹಲಸು ಕಳಿಸಿ ಕೊಡುತ್ತಾರೆ, ನನಗೆ ಉಡಲು ಅತಿ ಹೆಚ್ಚು ಪಂಚೆ ಖರೀದಿಸಿ ಕಳಿಸಿದವರು ಇವರು ಮಾತ್ರ.
  ಯಾರ ವಿರುದ್ದವಾಗಿ, ದ್ವೇಷ, ಅಸೂಯೆ, ಬೈಯ್ಗುಳ ಯಾವತ್ತೂ ಇವರ ಜಮಾನದಲ್ಲಿ ಯಾರೂ ನೋಡಿಲ್ಲ.

   ಮೊನ್ನೆ ರಾತ್ರಿ ಪೋನಿನಲ್ಲಿ ಮಾತಾಡುತ್ತಾ ....
  ಸಾಗರದ ಪ್ರಥಮ ಸಾಮಿಲ್ ಪಟೇಲ್ ಸಾಮಿಲ್ ಇದರ ಮಾಲಿಕರ ಮಗ ಎಂ ಎಸ್.ರಾಮ್ ಜೀ ಪಟೇಲ್ ಪುಟ್ಟಯ್ಯರ ಕ್ಲಾಸ್ ಮೇಟ್.
  ಸ್ಟಾತಂತ್ರ ಬಂದಾಗ ಒಮ್ಮೆ ಮತ್ತು ಮೈಸೂರು ಶ್ರೀಕಂಠದತ್ತ ಒಡೆಯರ್ ಹುಟ್ಟಿದ್ದಕ್ಕಾಗಿ ಸರ್ಕಾರ ಶಾಲೆಗಳಲ್ಲಿ ಲಾಡು ಹಂಚಿದ್ದರಂತೆ.
  ಆಸ್ಪತ್ರೆ ರಸ್ತೆ ಡಬಲ್ ರೋಡ್ ಮಾಡಿದರು, ಸಾಗರ ಹೋಟೆಲ್ ಸರ್ಕಲ್ ನಿಂದ ಗಣಪತಿ ದೇವಸ್ಥಾನದ ತನಕ ಬರಲೊಂದು ಮಾರ್ಗ ಮತ್ತು ಹೋಗಲೊಂದು ಮಾರ್ಗ ಮಾಡಿದರೂ ಟ್ರಾಪಿಕ್ ಸಮಸ್ಯೆ ಸುದಾರಿಸದಿದ್ದರಿಂದ ರಿಂಗ್ ರೋಡ್ ನ್ಯೂ ಬಿ ಹೆಚ್ ರಸ್ತೆ ನಿರ್ಮಾಣ ಆಯಿತು ಕಾಮಗಾರಿ ಪ್ರಾರಂಭ ಆಗುವಾಗ ಶಾಸಕರು ಬದರಿನಾರಾಯಣ ಅಯ್ಯಂಗಾರರು ಮತ್ತು ಮೂಕಪ್ಪನವರು ಇದ್ದರು.
  ಸಾಗರದ ಆಸ್ಪತ್ರೆ ಎದುರಿನ ಲಾಯರ್ ಅನಂತರಾಯರ ಹೆಂಚಿನ ಒಂದು ರೂಮು ಸೋಷಿಲಿಸ್ಟ್ ಪಾರ್ಟಿಯ ಮೊದಲ ಮತ್ತು ಅಂತಿಮ ಕಛೇರಿ ಆಗಿತ್ತು, ಅವಾಗ ಶಾಸಕರಾಗಿದ್ದ (1952) ಶಾಂತವೇರಿ ಗೋಪಾಲಗೌಡರು ಕೆಲವೊಮ್ಮೆ ಇಲ್ಲೇ ತಂಗುತ್ತಿದ್ದರಂತೆ.
  ಸರ್ಕಾರದ ಪ್ರವಾಸಿ ಮಂದಿರ ಆಗ ಶಾಸಕರಿಗೆ ತಂಗಲು ಕೊಡುತ್ತಿರಲಿಲ್ಲವಂತೆ.
 ಗೋಪಾಲ ಗೌಡರ ಹತ್ತಿರ ಸ್ವಂತ ವಾಹನ ಇರಲಿಲ್ಲ, ಚುನಾವಣೆ ಸಂದರ್ಭದಲ್ಲಿ ಡ್ರೈವರ್ ಶೇಖರ ಮತ್ತು ಡ್ರೈವರ್ ನರಸಿಂಹ ಎಂಬುವವರು ತರುತ್ತಿದ್ದ ಬಾಡಿಗೆ ಕಾರಿನಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದರಂತೆ, ಆಗಿನ ಕಾರುಗಳು ಹ್ಯಾಂಡಲ್ ಹೊಡೆದು ಚಾಲು ಮಾಡುವ೦ತ ಟಾರ್ಪಲ್ ಮೇಲ್ಚಾವಣೆಯ ಕಾರುಗಳಂತೆ.
  ಗೋಪಾಲಗೌಡರ ಮೊದಲ ಚುನಾವಣೆ ವೆಚ್ಚ ಐದು ಸಾವಿರ, ಎರಡನೆ ಚುನಾವಣೆಯಲ್ಲಿ ಏಳು ಸಾವಿರ ಅಂತೆ.
  ಆಗ ಗೋಪಾಲಗೌಡರಿಗೆ ಪುಟ್ಟಯ್ಯರ ಅಣ್ಣ ಶೀನಣ್ಣ ಐದು ರೂಪಾಯಿ ಚುನಾವಣಾ ದೇಣಿಗೆ ನೀಡಿದ್ದರಂತೆ ಆಗ ಅದು ದೊಡ್ಡ ದುಡ್ಡಾಗಿತ್ತು.
  ಗೋಪಾಲಗೌಡರಿಗೆ ದೊಡ್ಡ ದೇಣಿಗೆ ಹತ್ತು ರೂಪಾಯಿ ಅದು ಕೆಲ ವಕೀಲರು ನೀಡುತ್ತಿದ್ದಂತೆ.
  ಪೆಟ್ರೋಲ್ ಬಂಕ್ ಸಾಲ, ಪ್ರಿಂಟಿಂಗ್ ಸಾಲಗಳನ್ನು ಆಗ ಗೋಪಾಲಗೌಡರಿಗೆ ಬರುತ್ತಿದ್ದ ಅತ್ಯಲ್ಪ ಶಾಸಕರ ವೇತನದಲ್ಲಿ ತೀರಿಸುತ್ತಿದ್ದರಂತೆ.
  ಸಾಗರದಲ್ಲಿ ಗೋಪಾಲಗೌಡರಿಗೆ ಅತ್ಯಾಪ್ತರು ಎಸ್.ಎಸ್.ಕುಮಟಾ, ಸಾಗರ್ ಹೋಟೆಲ್ ಮಾಲಿಕರಾದ ಕಲ್ಕೂರ್, ಕಾರ್ ಡ್ರೈವರ್ ಗಳಾದ ಶೇಖರ ಮತ್ತು ನರಸಿಂಹ.
   ಆಗ ಸಾಗರದಲ್ಲಿ ಶ್ರೀಮಂತ ಕುಟುಂಬಗಳು ಕೇವಲ ಕೆಲವೇ ಕೆಲವು,ಸೊಲಬಣ್ಣ ಶೆಟ್ಟರ ಕುಟುಂಬ, ರಟ್ಟೇಹಳ್ಳಿಯವರ ಕುಟುಂಬ, ಯಾಗೈನೇ ಶೇಷಗಿರಿಯವರ ಕುಟುಂಬ, ದಳವಾಯಿ ಕುಟುಂಬ ಮತ್ತು ಸೊರಬ ರಸ್ತೆಯಲ್ಲಿ ಹಿತ್ತಾಳೆ, ತಾಮ್ರದ ವ್ಯಾಪಾರಿ ರೆಹಮಾನ್ ಸಾಹೇಬರು ಇದ್ದರು.
   ಸಾಗರದ ಸರಿ ಸುಮಾರು ಎಲ್ಲಾ ಕಟ್ಟಡ ಆಗ ನಿರ್ಮಿಸಿದವರು ಸಾಗರದ ಕ್ರಿಶ್ಚಿಯನ್ ಗಾರೆ ಮೇಸ್ತ್ರಿಗಳಂತೆ.
  ಅಹಮದ್ ಆಲಿ ಖಾನ್ ಸಾಹೇಬರು ಪ್ರಾಮಾಣಿಕರು ಶಿಸ್ತಿನ ಮನುಷರು ಎಂಬ ಪ್ರತೀತಿ ಸಾಗರ ಪಟ್ಟಣದಲ್ಲಿತ್ತು.
  ಕುರುಬರ ಲಿಂಗಪ್ಪ ಮತ್ತು ಲ್ಯಾಂಡ್ರಿ ಬೋಜಪ್ಪನವರು ಆಗ ಪೈಲ್ವಾನರು ಅವರ ಹವಾ ಜೋರಿತ್ತು.
  ಪ್ರತಿ ವರ್ಷ ದಸರಾದಲ್ಲಿ ಪ್ರವಾಸಿ ಮಂದಿರದ ಪಕ್ಕದ ಮೈದಾನದಲ್ಲಿ ಹೊರ ಜಿಲ್ಲೆಗಳಿಂದ ಪೈಲ್ವಾನರು ಕುಸ್ತಿ ಪಂದ್ಯಾವಳಿಗೆ ಬರುತ್ತಿದ್ದರು.
   ಟಿ.ಡಿ.ಕೆ. ಪಂಡಿತರ ತಂದೆ ದೇವ ಪಂಡಿತರು ಆ ಕಾಲದಲ್ಲಿ ಲಾರಿ ಮಾಲಿಕರು, ಭದ್ರಾವತಿಗೆ ಚಾರ್ ಕೋಲ್ ಮತ್ತು ಬೆಂಗಳೂರಿನ ಪ್ಲೇವುಡ್ ಪ್ಯಾಕ್ಟರಿಗೆ ಮುಳುಗಡೆ ಪ್ರದೇಶದ ಕೂಪಿನಿಂದ ಮಾವಿನ ಮರ ಸಾಗಿಸುತ್ತಿದ್ದರು, ದೇವ ಪಂಡಿತರು ತುಂಬಾ ಶಿಸ್ತಿನ ವ್ಯವಹಾರಸ್ಥರು, ಟಿಡಿಕೆ ಪಂಡಿತರು ಆರಂಭದಿಂದ ಕಾಂಗ್ರೇಸ್ ಪಕ್ಷ.
  ಆಗ ಜನಸಂಘ ಪಕ್ಷ ದೀಪದ ಗುರುತಿನಲ್ಲಿ ಚುನಾವಣೆಗೆ ಸ್ಪರ್ದಿಸುತ್ತಿತ್ತು.
  ಸಾಹಿತಿ ವಿಲಿಯಂರ ತಾಯಿ ಪುಟ್ಟಯ್ಯನವರಿಗೆ ಶಿಕ್ಷಕಿ ಆಗಿದ್ದರಂತೆ.
  ಈಗ ಪಿ.ಪುಟ್ಟಯ್ಯ ಶಿವಮೊಗ್ಗದ ಮಿಷನ್ ಕಂಪೌಂಡ್ ನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ, ಮೊದಲ್ಲಿನಿಂದಲೂ ಸಸ್ಯಹಾರಿಗಳಾದ ಇವರು ಬೆಳಿಗ್ಗೆ ಇಡ್ಲಿ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಹಾಲು ಅನ್ನ ಅಥವ ಮೊಸರು ಅನ್ನ ಮಾತ್ರ, ಸ್ವತಃ ಅಡುಗೆ ಮಾಡಿ ಸೇವಿಸುತ್ತಾರೆ.
  ಅನೇಕ ಅನಾಥ ಬೀದಿ ನಾಯಿಗಳನ್ನು ತಂದು ಸಾಕಿದ್ದಾರೆ, ಮನೆಯ ಸುತ್ತ ಕೈತೋಟ ಮಾಡಿದ್ದಾರೆ.
  ಬೆಳಿಗ್ಗೆ ವಾಕಿಂಗ್ ಮಾಡುತ್ತಾರೆ, ಇವರ ಗೆಳೆಯರು ಇವರನ್ನು ನೋಡಲು ಇವರ ಮನೆಗೆ ಬರುತ್ತಾರೆ ಹೀಗೆ ಒಬ್ಬಂಟಿ ಆಗಿ ಜೀವನ ಕಳೆಯುತ್ತಿದ್ದಾರೆ.
  ಪುಟ್ಟಯ್ಯರ ಪೋನ್ ನಂಬರ್ 94483 46806.
                                   (ಮುಕ್ತಾಯ)
ಲೇ: ಕೆ.ಅರುಣ್ ಪ್ರಸಾದ್.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...