Skip to main content

ಅತ್ಯಂತ ಕಡಿಮೆ ಖರ್ಚಿನಲ್ಲಿ ಸ್ವದೇಶಿ ತಂತ್ರಜ್ಞಾನದಲ್ಲಿ ಬಿರು ಬೇಸಿಗೆಯಲ್ಲೂ ಮನೆ ತಂಪಾಗಿಡಲು ಸಾಧ್ಯವಿದೆ ಇದು ನನ್ನ ಸ್ವಂತ ಅನುಭವ


#ಬೇಸಿಗೆಯ_ಮಟಾಮಟಾ_ಮದ್ಯಾಹ್ನ_ಸುಲಭವಾಗಿ_ದೇಶಿ_ಹವಾನಿಯಂತ್ರಣ.

#ಸುಲಭ_ವಿಧಾನ_ಹೇಳಿಕೊಟ್ಟ_ಗುಜರಾತಿನ_ಹರೀಸ್_ಬಾಯಿ.

#ಇವತ್ತು_ನಮ್ಮ_ಮಲ್ಲಿಕಾ_ವೆಜ್_ಕೂಲ್_ಕೂಲ್ .

  ನಾಲ್ಕು ವರ್ಷದ ಹಿಂದೆ ನಮ್ಮ ಹೊಸ ಲಾಡ್ಜ್ ಕಟ್ಟಲು ನಮ್ಮ ತಾತ್ಕಾಲಿಕ  ಕಛೇರಿ ಹೆಂಚಿನ ಮಾಡಿನ ಮತ್ತು ಸುತ್ತಲೂ ಎಸಿಪಿ ಶೀಟಿನ ಗೋಡೆಯಲ್ಲಿ ನಿರ್ಮಿಸಿಕೊಂಡಿದ್ದೆ, ಬೇಸಿಗೆಯಲ್ಲಿ ಪ್ಯಾನ್ - ಏರ್ ಕೂಲರ್ ಹಾಕಿದರೂ ದಗೆ ಸಹಿಸಲು ಸಾಧ್ಯವಿರಲಿಲ್ಲ.
  ಈ ಸಂದರ್ಭದಲ್ಲಿ ಗುಜರಾತಿನ ನವಸಾರಿಯ ಕೋ ಆಪರೇಟಿವ್ ಶುಗರ್ ಪ್ಯಾಕ್ಟರಿಯ ಹರೀಸ್ ಬಾಯ್ ನಮ್ಮ ಲಾಡ್ಜ್ ನಲ್ಲಿ ಉಳಿದಿದ್ದವರು ಒ0ದು ಅತ್ಯಂತ ಕಡಿಮೆ ವೆಚ್ಚದ ಮತ್ತು ಸುಲಭ ಉಪಾಯ ಹೇಳಿದರು.
  ಸಣ್ಣ ಸ್ಪ್ರಿಂಕ್ಲರ್ ನನ್ನ ಹೆಂಚಿನ ಆಫೀಸ್ ಕ್ಯಾಬೀನ್ ನ ಮೇಲೆ ಅಳವಡಿಸಿ ಅದಕ್ಕೊಂದು ವಾಲ್ವ್ ಹಾಕಿ ಬೇಕಾದಾಗ ನೀರು ಬಿಡಿ ನಿಮ್ಮ ಕಛೇರಿ ಕೂಲ್ ಆಗುತ್ತೆ ಅಂದರು.
  ನನಗೂ ಇಂತಹ ಹೊಸ ಪ್ರಯೋಗ ಆಗಿಂದಾಗಲೇ ಮಾಡುವ ಹುಕಿ ಆದ್ದರಿಂದ ತಕ್ಷಣ ನಮ್ಮ ಕೆಲಸಗಾರರಿಗೆ ಹೇಳಿ ಈ ವ್ಯವಸ್ಥೆ ಮಾಡಿ ನೀರು ಸ್ಟ್ರಿಂಕ್ಲರ್ ನಿಂದ ಹಾರಿಸಿಬಿಟ್ಟು ಹತ್ತು ನಿಮಿಷದಲ್ಲಿಯೇ ಬೇಸಿಗೆಯ ಬಿಸಿಲಿಗೆ ಬಿಸಿ ಇಡ್ಲಿ ಪಾತ್ರೆ ಆಗಿದ್ದ ಆಪೀಸು ಕ್ಯಾಬೀನು ಏರ್ ಕಂಡೀಷನ್ ಆಗಿ ಆಹ್ಲಾದಕರ ಅನ್ನಿಸಿಬಿಟ್ಟಿತು.
  ಈ ಐಡಿಯಾ ನೀಡಿದ ಗುಜರಾತಿನ ಹರೀಸ್ ಬಾಯ್ ಗೆ ಕೃತಜ್ಞತೆ ಅರ್ಪಿಸಿ ಮರುದಿನ ನಮ್ಮ ಮಲ್ಲಿಕಾ ವೆಜ್ ರೆಸ್ಟೋರಾಂಟ್ ನ ಎದುರಿನ ಶೀಟು ಹಾಕಿದ ತೆರೆದ ಪ್ರದೇಶದ ಮಾಡಿಗೂ ಸ್ಪ್ರಿ೦ಕಲರ್ ಅಳವಡಿಸಿದೆವು ಇದಕ್ಕೆ ನಾನು ಖರ್ಚು ಮಾಡಿದ್ದು ಕೇವಲ ಒಂದೂವರೆ ಸಾವಿರ ಇದರಿಂದ ಇಡೀ ವ್ಯವಸ್ಥೆ ತಣ್ಣಗಾಗಿತ್ತು.
  ಕಳೆದ ಎರೆಡು ವರ್ಷ ಲಾಕ್ ಡೌನ್ ಕಾರಣದಿಂದ ಇದು ಪ್ರಾರಂಬಿಸಿರಲಿಲ್ಲ ಮತ್ರು ಹೊಸ ಲಾಡ್ಜ್ ಕಛೇರಿ ಹೊಸ ಕಟ್ಟಡದಲ್ಲಿ AC ಅಳವಡಿಸಿದ್ದರಿಂದ ನಮಗೆ ಬೇಸಿಗೆ ಬಿಸಿ ಅನುಭವ ಕಡಿಮೆ ಆಗಿತ್ತು.
  ಈ ವರ್ಷದ ಮಾರ್ಚ್ ನಲ್ಲಿ ಅತ್ಯಂತ ಹೆಚ್ಚು ಶೆಖೆ ಮತ್ತು ಹೆಚ್ಚು ಉಷ್ಣಾಂಶ ದಾಖಲಾದ್ದರಿಂದ ಇವತ್ತು ನಮ್ಮ ಮಲ್ಲಿಕಾ ವೆಜ್ ರೆಸ್ಟೋರಾಂಟ್ ಗೆ ಪುನಃ ಗುಜರಾತಿನ ಹರೀಸ್ ಬಾಯಿ ಟೆಕ್ನಿಕ್ ನ ದೇಸಿ ಹವಾನಿಯಂತ್ರಣದ ತಗಡಿನ ಮಾಡಿನ ಮೇಲೆ ಸಾಲಾಗಿ ಸಣ್ಣ ಸ್ಟ್ರಿಂಕ್ಲರ್ ಅಳವಡಿಸಿ ಇವತ್ತು ಮಧ್ಯಾಹ್ನ ಇಡೀ ರೆಸ್ಟೋರಂಟ್ ನ ಎದುರು ಭಾಗದ ತೆರೆದ ಹಾಲ್ ತಣ್ಣಗೆ ಮಾಡಿದೆವು.
  ಇದನ್ನು ಒ0ದು ಅಂತಸ್ತಿನ RCC ಮನೆಗೆ, ಹೆಂಚಿನ ಮನೆಗೂ ಅಳವಡಿಸಿದರೆ ಬೇಸಿಗೆ ತಂಪಾಗಿ ಕಳೆಯಬಹುದು, ಇದು ಸಾವಿರಾರು ವರ್ಷದ ಹಿಂದಿನ ರಾಜರ ಬೇಸಿಗೆಯ ಅರಮನೆಗಳ ಶೀಸಾ ಮಹಲ್ ಗಳ ಸ್ವದೇಶಿ ತಂತ್ರಜ್ಞಾನವೇ ಆಗಿದೆ. ಇದಕ್ಕೆ ಪೈಪ್, ವಾಲ್ವ್, ಸ್ಪ್ರಿಂಕಲರ್ ಮತ್ತು ಅಳವಡಿಸಿದವರ ಸಂಬಳ ಸೇರಿ ನನಗಾದ ಖರ್ಚು ಕೇವಲ ಎರೆಡು ಸಾವಿರ ಮತ್ತು ಇದರಿಂದ ಹವಾ ನಿಯಂತ್ರಣವಾದ ಸ್ಥಳದ ವಿಸ್ತಾರ 60 ಅಡಿ ಉದ್ದ ಮತ್ತು 15 ಅಗಲದ ಪ್ರದೇಶ.
  ಇವತ್ತು ಗುಜರಾತಿನ ಹರೀಸ್ ಬಾಯ್ ಇನ್ನೊಮ್ಮೆ ನೆನಪಾದರು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...