Skip to main content

Blog number 839.ಕಳೆ ಅಂತ ಬಾವಿಸಿದ್ದ ವಡೇಲಿಯಾ ಟ್ರಿಲೋಬಾಟ ಪ್ರಕೃತಿ ತಾನಾಗಿ ಬೆಳೆಸಿದ ಹೊಸ ತಳಿ, ಇದರ ಉಪಯೋಗದ ಬಗ್ಗೆ ರೈತ ಸಮುದಾಯದಲ್ಲಿ ಆರೋಗ್ಯಕರ ಚಚೆ೯ ಪ್ರಾರಂಭ ಆಗಿದೆ

#ವಡೇಲಿಯಾ_ಟ್ರಿಲೋಬಾಟ

#ಪ್ರಕೃತಿ_ತಾನಾಗಿ_ಬೆಳೆಸಿದ_ಹೊಸ_ತಳಿ

#ಕಳೆನಾ_ಅಥವ_ಉಪಯುಕ್ತ_ಬೆಳೆನಾ 

#ಅಡಿಕೆ_ಬೇರುಹುಳಕ್ಕೆ_ಇದು_ಔಷದಿಯಾ

#ಕೋಳಿಗಳಿಗೆ_ಬಲು_ಪ್ರೀತಿ_ಇದು.

  ನಮ್ಮ ವಿಕ್ಟೋರಿಯಾ ಕಾಟೇಜ್ ನ ಗಾರ್ಡನ್ ನಲ್ಲಿ ತೆಂಗಿನ ಮರಗಳಿಗೆ ಸ್ಥಳಿಯ ಜಂಬಿಟ್ಟಿಗೆ ಕಲ್ಲಿನಿಂದ ವೃತ್ತಾಕಾರದ ಕಲ್ಲಿನ ಕಟ್ಟಿ ಕಟ್ಟಿ ಅದರಲ್ಲಿ ಮರಳು ತುಂಬಿದ್ದೇನೆ (ಮಣ್ಣಿದ್ದರ ತೆಂಗಿನ ಮರದ ಬೇರು ಬಿಡುತ್ತದೆಂದು.
  ಈ ಕಟ್ಟೆಯ ಸುತ್ತಾ ಈ ವಡೇಲಿಯಾ ಟ್ರಿಲೋಬಾಟ (wadelia trilobata) ಎಂಬ ಬೊಟಾನಿಕಲ್ ಹೆಸರಿನ, ಚಿಕ್ ಪೀ ಅಂತೆಲ್ಲ ಕರೆಯುವ ಇದನ್ನು ನಮ್ಮ ಆತ್ಮೀಯ ಕೆಲಸಗಾರ ಮಿತ್ರ #ಕಣ್ಣೂರಿನ_ನಾಗರಾಜ್ ನಾಟಿ ಮಾಡಿದ್ದರು.
   ಇದು ಹುಲುಸಾಗಿ ಬೆಳೆದು ಹಳದಿ ಹೂ ಬಿಟ್ಟಿದೆ ಮತ್ತು ಈ ತೆಂಗಿನ ಮರದ ಕಟ್ಟೆಗೆ ಸುಂದರವಾದ ಲುಕ್ ಕೊಟ್ಟಿದೆ.
  ಇತ್ತೀಚಿಗೆ ಇದನ್ನು ನೋಡಿದ ಪ್ರಸಿದ್ಧ ಜಲ ತಜ್ಞ, ಕಾಡಿನ ವಿಜ್ಞಾನಿ ಶಿವಾನಂದ ಕಲವೆ ಇದು ಬೆಳೆಯುವ ಹರಡುವ ಕ್ಷಿಪ್ರತೆಯ ಬಗ್ಗೆ ತಿಳಿಸಿದಾಗಲೇ ಗೊತ್ತಾಗಿದ್ದು.
  ಇದರ ಬೀಜ ಪ್ರಸಾರ ಮತ್ತು ವೇಗವಾಗಿ ಹರಡುವುದರಿಂದ ಇದೊಂದು ನಿವಾರಿಸಲು ಕಷ್ಟಸಾಧ್ಯವಾದ ಹೊಸ ರೀತಿಯ ಕಳೆ ಎಂದೇ ಬಾವಿಸಲಾಗಿದೆ ಇದರ ಸುಂದರ ನೋಟ ಇದನ್ನು ಕಿತ್ತು ತೆಗೆಯಲಾಗಲಿಲ್ಲ.
  ಮೊನ್ನೆ FB ಯಲ್ಲಿ #ಕಿಲಾರ_ಸತೀಷ್_ಹೆಗ್ಗಡೆ ಇದರ ಬಗ್ಗೆ ಉಲ್ಲೇಖಿಸಿದಾಗ ಅನೇಕರು ಅವರವರ ಅನುಭವ, ತಜ್ಞರು ಇದರ ಬಗ್ಗೆಯ ಹೆಚ್ಚಿನ ಮಾಹಿತಿ ಹಂಚಿಕೊಂಡಿದ್ದಾರೆ.
 #ತೇಜ್_ಕುಮಾರ್ ಇದು ನಾಶಮಾಡಲಾಗದ ಕಳೆ ಅಂದಿದ್ದಾರೆ.
  #ತರುಣ್_ಥಾಮಸ್ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ, ಇದು ಭ್ರಂಗರಾಜ ಮತ್ತು ವನಮಗಳಿ ಸಸ್ಯದ ಪಾಲಿನೇಷನ್ ಆದ ಸಸ್ಯ, ಪ್ರಕೃತಿ ತಾನಾಗಿ ಬೆಳಿಸಿದ ಹೊಸ ತಳಿ.
  ಇದರ ಮೂಲ ಮೆಕ್ಸಿಕೊ ಮತ್ತು ಬ್ರಿಜಿಲ್ ನ ತೇವ ಪ್ರದೇಶದಿಂದ ಬಾರತಕ್ಕೆ ಕಾಲಿಟ್ಟಿದೆ ಅಂತೆ, ಭಾರತದ ICMR,ICAMR,OROMA MISSION ಇದರ ಬಗ್ಗೆ ರೀಸಚ್೯ ನಡೆಸುತ್ತಿದೆ ಅಂತೆ.
  ಗಾಯಗಳಿಗೆ, ಕೂದಲ ಬೆಳವಣಿಗೆಗೆ, ನೋವು ನಿವಾರಣೆಗೆ, ಕೀಟ ನಾಶಕವಾಗಿ ಮತ್ತು ತೇವಾಂಶ ಸಂವರ್ದಕ ಅಂತ ತರುಣ್ ಥಾಮಸ್ ಪ್ರತಿಕ್ರಿಯೆ ನೀಡಿರುವುದು ಆಶಾದಾಯಕವಾಗಿದೆ.
  ಈ ಸಂವಾದದಲ್ಲಿ ಕೆಲವರ ಅಭಿಪ್ರಾಯ ಇದು ಕೋಳಿಗಳಿಗೆ ಇಷ್ಟದ ಸಸ್ಯ, ಅವು ಇಷ್ಟಪಟ್ಟು ತಿನ್ನುವುದರಿಂದ ಇದಕ್ಕೆ ಇನ್ನೊಂದು ಹೆಸರು ಚಿಕನ್ ಪೀ ಅಂತಿದೆ ಅಂದಿದ್ದಾರೆ.
  ಮಣ್ಣು ಸವಕಳಿ ಪರಿಣಾಮಕಾರಿಯಾಗಿ ತಡೆಯುತ್ತದೆ ಅಂತ ಕೆಲವರು ಬರೆದಿದ್ದಾರೆ.
  ಚಿಕ್ಕ ಮಗಳೂರಿನ ಅಡಿಕೆ ಬೆಳೆಗಾರರು ಒಬ್ಬರು ಈ ಸಸ್ಯ ಅವರ ಅಡಿಕೆ ತೋಟದಲ್ಲಿನ ಬೇರು ಹುಳ ನಿಯಂತ್ರಣ ಮಾಡಿದೆ ಎ೦ದು ಅವರ ಅನುಭವ ಬರೆದಿದ್ದಾರೆ.
  ಆದ್ದರಿಂದ ಇದನ್ನು ಆತಂಕಕಾರಿ ಕಳೆ ಎಂದು ಪರಿಗಣಿಸಲು ಸಾಧ್ಯವಿಲ್ಲ, ಮುಂದಿನ ಸಂಶೋದನೆ ಮತ್ತು ರೈತರ ಅನುಭವಗಳು ಈ ಸಸ್ಯದ ಬಳಕೆ ಬಗ್ಗೆ ಹೊಸ ಮಾಹಿತಿ ಮತ್ತು ತಿಳುವಳಿಕೆಗೆ ಕಾರಣವಾಗಲಿದೆ ಎಂಬ ಕಾರಣದಿಂದ ಇದನ್ನು ಬುಡ ಸಮೇತ ತೆಗೆಯಬೇಕೆಂಬ ತೀರ್ಮಾನದಿಂದ ಹಿಂದೆ ಸರಿದೆ, ಈಗ ನಮ್ಮ ತೆಂಗಿನ ಮರದ ಕಟ್ಟೆಯಲ್ಲಿ ಶಾಶ್ವತ ಸ್ಥಾನ ಪಡೆದಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...