Skip to main content

ಟ್ರೇಡ್ ಮಾರ್ಕ್ ಮತ್ತು ಕಾಪಿ ರೈಟ್ ಆಕ್ಟ್ ಪ್ರಕಾರ ನೊಂದಾವಣೆ ಆಗಿರುವ ಕನ್ನಡದ ಏಕೈಕ ಮತ್ತು 135 ನೇ ವರ್ಷಾಚಾರಣೆ ಆಚರಿಸುತ್ತಿರುವ ಒಂಟಿ ಕೊಪ್ಪಲ್ ಪಂಚಾಂಗ ಮಂದಿರದ ಮೈಸೂರು ಪಂಚಾಂಗ'

#ಶ್ರೀ_ಶುಭಕೃನ್ನಾಮ_ಸಂವತ್ಸರದ_ಶುಭಾಷಯಗಳು.

#ಹಿಂದೂ_ಪಂಚಾಂಗ_ಚಂದ್ರಮಾನ_ಆದರಿತ_5000_ವರ್ಷ_ಪುರಾತನವಾದದ್ದು.

#ಇಂಗ್ಲೀಷ್_ಕ್ಯಾಲೆಂಡರ್_ಸೂಯ೯ಮಾನ_ಆದರಿತ 

#ಮೈಸೂರಿನ_ಒಂಟಿಕೊಪ್ಪಲ್_ಪಂಚಾಂಗ_ಮಂದಿರದ_ಮೈಸೂರು_ಪಂಚಾಂಗಕ್ಕೆ_135ನೇ_ಹುಟ್ಟುಹಬ್ಬ.

#ಪ್ರಥಮ_ಪಂಚಾಂಗ_ಮುದ್ರಣ_1887

#ಟ್ರೇಡ್_ಮಾರ್ಕ್_ಕಾಪಿರೈಟ್_ಆಕ್ಟ್_ಪ್ರಕಾರ_ನೊಂದಾವಣಿ_ಆಗಿರುವ_ಏಕೈಕ_ಕನ್ನಡ_ಪಂಚಾಂಗ

  ಪ್ರತಿ ವರ್ಷ ನಾನು ಖರೀದಿಸುವುದು ಒಂಟಿಕೊಪ್ಪಲ್ ಪಂಚಾಂಗ ಹಾಗಂತ ನನಗೆ ಪಂಚಾಂಗದ ಪೂರ್ತಿ ಜ್ಞಾನ ಇಲ್ಲ ಈ ಪಂಚಾಂಗವೇ ಏಕೆ ಎಂದರೆ ಇದರ accuracy, ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ದೇವರ ರಥೋತ್ಸವ ದೇವಾಲಯದ ಪ್ರತಿಷ್ಟಾಪನೆ ಆಗಿದ್ದ ಕುಂದ ಚತುರ್ಥಿಯಂದೇ ನಡೆಯುವುದು ಅದು ಒಂಟಿ ಕೊಪ್ಪಲ್ ಪಂಚಾಂಗ ನಮ್ಮ ರಥೋತ್ಸವದ ಮಾಹಿತಿಯೂ ಮುದ್ರಿಸುತ್ತದೆ, ಈ ಸಂವತ್ಸರದಲ್ಲಿ ನಮ್ಮ ಶ್ರೀ ವರಸಿದ್ದಿ ವಿನಾಯಕ ದೇವರ ರಥೋತ್ಸವ 25 -ಜನವರಿ -2023ರ ಬುಧವಾರ ನಡೆಯಲಿದೆ.
  ಸಂಕಷ್ಟಹರ ಚತುರ್ಥಿ, ಏಕಾದಶಿ, ಗ್ರಹಣಗಳು ಈ ಒಂಟಿ ಕೊಪ್ಪಲ್ ನಲ್ಲಿ ನೂರಕ್ಕೆ ನೂರು ಪರ್ಪೆಕ್ಟ್ ಆದ್ದರಿಂದ ಸರ್ಕಾರದ ಕ್ಯಾಲೆಂಡರ್ ಮುದ್ರಣದಲ್ಲಿ, ಪ್ರಖ್ಯಾತ ಪತ್ರಿಕೆಗಳ ಕ್ಯಾಲೆಂಡರ್ ಮತ್ತು ದೊಡ್ಡ ಸಂಸ್ಥೆಗಳು ಈ ಪಂಚಾಂಗವನ್ನೆ ಅವಲಂಬಿಸಿದೆ.
  ಒಂಟಿ ಕೊಪ್ಪಲ್ ಪಂಚಾಂಗ ಈ ಸಂವತ್ಸರದ್ದು ಮುಖ ಪುಟ ಸೇರಿ 136 ಪುಟಗಳಿದೆ  ಬೆಲೆ 130 ರೂಪಾಯಿ, ಇವರದ್ದೆ ದನ ಲಕ್ಷ್ಮಿ ಕ್ಯಾಲೆಂಡರ್ ಕೂಡ ಇದೆ.
   ಇವರು ಬಹುಶಃ ಕನ್ನಡದ ಮೊದಲ ಟ್ರೇಡ್ ಮಾರ್ಕ್ ಮತ್ತು ಕಾಫಿರೈಟ್ ಆಕ್ಟ್ ನಲ್ಲಿ ನೊಂದಾವಣೆ ಮಾಡಿದ ಪಂಚಾಂಗ ಕರ್ತರು.
  ತಿಥಿ - ನಕ್ಷತ್ರ - ರಾಶಿ - ಯೋಗ ಮತ್ತು ಕರಣ ಎಂಬ ಪಂಚ ಅಂಗಗಳ ನಿಖರ ಮಾಹಿತಿಯೇ ಪಂಚಾಂಗ ಈ ಪಂಚ ಅಂಗಗಳು ಸರಿಯಾಗಿರುವ ದಿನ ವೇಳೆಯಲ್ಲಿ ಶುಭ ಕಾರ್ಯ ನಡೆದರೆ ಮಾತ್ರ ಫಲ ಪ್ರಾಪ್ತಿ ಎಂಬುದು ನಂಬಿಕೆ. 
   ನೇಪಾಳ, ಬಂಗಾಳ, ಅಸ್ಸಾಂ ಈಶಾನ್ಯ ಭಾರತದಲ್ಲಿ ಪಂಚಾಂಗ ಎನ್ನುವುದಿಲ್ಲ ಪಂಜಿಕಾ ಅನ್ನುತ್ತಾರೆ.
  60 ವಷ೯ಕೊಮ್ಮೆ ವೃತ್ತ ಪೂರ್ಣ ಆಗುವ 60 ಸಂವತ್ಸರಕ್ಕೂ ಬಿನ್ನ ಹೆಸರುಗಳಿದೆ, 354 ದಿನಕ್ಕೆ ಒಂದು ವರ್ಷ, 28 ದಿನದ 12 ತಿಂಗಳುಗಳ ಚಂದ್ರಮಾನ ಈ ಪಂಚಾಂಗ.
  ಇಂಗ್ಲೀಷ್ ಕ್ಯಾಲೆಂಡರ್ 365 ದಿನದ  30ರಿಂದ 31 ದಿನದ 12 ತಿಂಗಳ ಸೂರ್ಯಮಾನದ ಕ್ಯಾಲೆಂಡರ್ ಆದರೆ ಮುಸ್ಲಿಂರಲ್ಲಿ 355 ದಿನದ ವರ್ಷದ ಕ್ಯಾಲೆಂಡರ್ ಇದೆ.
   ಹಿಂದೂ ಪಂಚಾಂಗಕ್ಕೆ 5000 ವರ್ಷದ ಇತಿಹಾಸ ಇದೆ ಅನ್ನುತ್ತಾರೆ, ಪಂಚಾಂಗ ಅಂದರೆ ಆಕಾಶದ ಕನ್ನಡಿ ಎಂದು ಇದನ್ನು ನಾಸಾ ವಿಜ್ಞಾನಿಗಳು ಗ್ರಹಣಗಳ ಬಗ್ಗೆ ಸಂಶೋದನೆ ಮಾಡಿದ ಬಗ್ಗೆ ಮತ್ತು ಇದರ ಆದಾರಿತ ಮುಂದಿನ 100 ವರ್ಷದ ಪ್ರತಿ ಊರಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ನಿಖರ ಮಾಹಿತಿ ಹಿಂದೂ ಪಂಚಾಂಗ ಕರ್ತರಿಗೆ ಮಾಹಿತಿಗಾಗಿ ಪ್ರಕಟಿಸಿದ್ದಾರೆ ಅದರಿಂದ ಭಾರತೀಯ ಪುರೋಹಿತರಿಗೆ ನಿಖರ ನಿಖರ ತಿಥಿ ನಕ್ಷತ್ರ ರಾಶಿ ಯೋಗ ಕರಣಗಳ ಗುಣಾಕರ ಸುಲಭ ಮತ್ತು ನಿಖರವಾಗಿ ಪಡೆಯುತ್ತಿದ್ದಾರೆ.
  ಮುಂದಿನ 100 ವಷ೯ದ ಮಾಹಿತಿ ನೀಡುವ ವಿಶ್ವವಿಜಯ ಪಂಚಾಂಗವೂ ಇದೆ.
  ಭಾರತ ಸರ್ಕಾರ 1957 ರಲ್ಲಿ ನ್ಯಾಷನಲ್ ಪಂಚಾಂಗ ಪ್ರಕಟಿಸಿದ ಮಾಹಿತಿ ಇದೆ.
  ಎಲ್ಲಾ ಊರಿನ ಬುಕ್ ಸ್ಟಾಲ್ ನಲ್ಲಿ ಈ ಪಂಚಾಂಗ ಮಾರಟಕ್ಕೆ ಇಟ್ಟಿರುತ್ತಾರೆ.
   https://www.onlinemangalorestore.com/index.php?route=product/product&product_id=717
ಈ ಮೇಲಿನ ಲಿಂಕ್ ನಲ್ಲಿ ಆನ್ ಲೈನ್ ನಿಂದ ಈ ಪಂಚಾಂಗ ಖರೀದಿಸಬಹುದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...