Skip to main content

Blog number 842. ಕೇಂದ್ರಿಕೃತ ಪೇಟೆ ಮಾರ್ಕೆಟ್ ವ್ಯವಸ್ಥೆಯಲ್ಲಿ ಕಳೆದು ಹೋದ ಹಳ್ಳಿಯ ದಂಟು ಹರಿವೆ ತಳಿಯ ಬೀಜಗಳು, ಹುಲ್ಲು ತಿಂದಂತ ಬೇಕಾರ್ ರುಚಿಯ ಕೆಮಿಕಲ್ ತುಂಬಿರುವ ಕೊಳಚೆ ನೀರಲ್ಲಿ ಬೆಳೆಸುವ ಹರಿವೆ ಸೊಪ್ಪು ಲೋಕದ ತುಂಬಾ ವ್ಯಾಪಿಸಿದೆ.

#ಇವತ್ತು_ಕೃಷ್ಣಪ್ರಸಾದ್_ಗೋವಿಂದಯ್ಯ_ದಂಟು_ಹರಿವೆ_ಬೀಜ_ಬೇಕೆಂದು_ಪೋಸ್ಟ್_ಮಾಡಿದ್ದರು.

#ನನಗೆ_ಈಗಿನ_ತರಕಾರಿ_ಮಾರುಕಟ್ಟೆ_ಹರಿವೆ_ಕಂಡರಾಗುವುದಿಲ್ಲ.

#ಹೊನ್ನಾವರ_ಅಂಕೋಲ_ಕುಮಟಾದಲ್ಲಿ_ಬೆಳಿಗ್ಗೆ_ಸೂಯೋ೯ದಯಕ್ಕೆ_ಮೊದಲೇ_ಹಾಲಕ್ಕಿಯವರು_ಮಾರಾಟ_ಮಾಡುವ_ದಂಟು_ಹರಿವೆ.

#ನಿತ್ಯ_ಮಲೆನಾಡು_ಗಿಡ್ಡ_ದನದ_ಹಾಲುಕೊಡುವ_ಹುಲಿಮರಡಿ_ಮಂಜುಶೆಟ್ಟರು_ಹರಿವೆ_ಬೆಳೆದು_ಕೊಡುತ್ತಿದ್ದಾರೆ.

   ಒಂದು ಕಾಲದಲ್ಲಿ ಅಂದರೆ 1980-90ರ ತನಕ ಈ ದಂಟು ಹರಿವೆ ಹಸಿರು ಕೆಂಪು ಬಣ್ಣದ್ದು ಎಲ್ಲಾ ರೈತರ ಕಬ್ಬಿನ ಗದ್ದೆಯಲ್ಲಿ ಮತ್ತು ಹಳ್ಳಿಯ ಎಲ್ಲರ ಮನೆಯ ಹಿತ್ತಲಲ್ಲಿ ಬೇಸಿಗೆ ತರಕಾರಿ ಆಗಿರುತ್ತಿತ್ತು.
  ಇದನ್ನು ಹಣಕ್ಕಾಗಿ ಮಾರಾಟ ಮಾಡುತ್ತಿರಲಿಲ್ಲ ಮಾಡಿದರೂ ಖರೀದಿಸುವವರಿರಲಿಲ್ಲ ಮತ್ತೆ ಇದರ ರುಚಿ ಎಲ್ಲರಿಗೂ ಗೊತ್ತಿರಲಿಲ್ಲ.
  ಒಂದಾಳು ಎತ್ತರ ಬೆಳೆಯುತ್ತಿದ್ದ ರಟ್ಟೆ ಗಾತ್ರದ ಒಂದು ದಂಟು ಹರಿವೆ ಗಿಡದಿಂದ ಎರೆಡು ದಿನ ಸಾಂಬಾರ್ ಮಾಡಬಹುದಿತ್ತು, ಬೆಳೆದರೂ ದಂಟಿನ ಒಳಗೆ ಮೃದುವಾಗಿರುತ್ತಿದ್ದ  ದಂಟನ್ನು ಜಗಿದು ಆಸ್ವಾದಿಸುತ್ತಿದ್ದ ಕಾಲ ಈಗ ನೆನಪಾಗಿ ಬಾಯಿಯಲ್ಲಿ ನೀರು ಬರುತ್ತದೆ.
 ಬೀಜಕ್ಕಾಗಿ ಕೆಲ ಗಿಡ ಹಾಗೇ ಬಿಡುತ್ತಿದ್ದರು ನಂತರ ಅದರಲ್ಲಿ ಹೂವಾಗಿ ಬೀಜವಾದಾಗ ಒಣಸಿ ತೆಗೆದಿಡುತ್ತಿದ್ದರು.
  ದಂಟು ಹರಿವೆ ಮಳೆಗಾಲದಲ್ಲಿ ನೀರು ತುಂಬಿ ಸವಳು ಸವಳು ಆಗುವುದರಿಂದ ಬೇಸಿಗೆಯಲ್ಲಿಯೇ ದಂಟು ಹರಿವೆ ರುಚಿಕರ.
  ಈಗೆಲ್ಲ ಕೆಮಿಕಲ್ ಗೊಬ್ಬರದಿಂದ ಕೊಳಚೆ ನೀರಲ್ಲಿ ಬೆಳೆಸುವ ನೋಡಲು ಆಕರ್ಷಕವಾಗಿ ಕಾಣುವ ಹರಿವೆ ಸೊಪ್ಪು ನಿತ್ಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರುತ್ತೆ ಆದರೆ ಅದರಲ್ಲಿ ಹರಿವೆ ಸೊಪ್ಪಿನ ಘಮವೂ ಇಲ್ಲ ರುಚಿಯೂ ಇಲ್ಲ ಒಂದು ತರ ಹಸಿ ಹುಲ್ಲು ತಂದು ಬೇಸಿದಂತೆ ಅದರ ಬೇಕಾರ್ ರುಚಿ.
  ನಮ್ಮ ತಂದೆ ವಿವಿದ ತರದ ದಂಟು ಹರಿವೆ ಬೀಜದಿಂದ ಅನೇಕರಿಗೆ ದಂಟು ಹರಿವೆ ಬೆಳೆಸಿ ಕೊಡುತ್ತಿದ್ದರು.
  ಕಾಲ ಕ್ರಮೇಣ ಹಳ್ಳಿಗಳು ಹಾಲು - ಕೋಳಿ ಮಾಂಸಕ್ಕೆ ಪೇಟೆಯ ಮೇಲೆ ಅವಲಂಬಿಸಿದಂತೆ ತರಕಾರಿಗೂ ಪೇಟೆಗೆ ಅವಲಂಬಿಸಿ ಈ ದಂಟಿನ ಹರಿವೆಯ ತಳಿಯ ಬೀಜವನ್ನೆ ಕಳೆದುಕೊಂಡಿದ್ದು ಸತ್ಯ.
  ಆದರೆ ಕರಾವಳಿಯ ಜನರಿಗೆ ಪಶ್ಚಿಮ ಘಟ್ಟದಲ್ಲಿನ ಗುಡ್ಡಗಾಡಿನ ಹಾಲಕ್ಕಿ ಮಹಿಳೆಯರು ಸಂಪ್ರದಾಯಿಕ ನೂರಾರು ಮೂಲ ತಳಿಯ ತರಕಾರಿ ಬೆಳೆದು ಈಗಲೂ ಮಾರಾಟ ಮಾಡುತ್ತಾರೆ.
  ನಾನು ಸ್ವತಃ ನೋಡಿದ್ದೇನೆ ಹೊನ್ನಾವರದ ಬಂದರಿನ ಹತ್ತಿರ, ಅಂಕೋಲದ ಚಿತ್ರ ಮಂದಿರದ ಎದರು, ಕುಮಟಾದ ರೈಲು ನಿಲ್ದಾಣದ ತಿರುವಿನಲ್ಲಿ ಬೆಳಿಗ್ಗೆ 5ಕ್ಕೆ ಅವರು ದಂಟು ಹರಿವೆಯ ಹೊರೆ ಹೊತ್ತು ತರುತ್ತಾರೆ ವಿಶೇಷವಾಗಿ ಕರಾವಳಿಯ ಕೊಂಕಣಿ ಗೌಡ ಸಾರಸ್ವತರು ಇದಕ್ಕೆ ಕಾದು ನಿಂತಿರುತ್ತಾರೆ ತಕ್ಷಣದಲ್ಲಿ ದಂಟು ಹರಿವೆ ಖಲಾಸ್.
  ಇದೇ ರೀತಿ ಗೋವಾದ ಕುಣುಬಿ ಜನರು ದಂಟು ಹರಿವೆ ತರುತ್ತಾರೆ ಗೋವನ್ನರಿಗೆ ಕೂಡ ಇದು ಬಲು ಪ್ರಿಯ.
  ನನಗೆ ನಿತ್ಯ ಮಲೆನಾಡು ಗಿಡ್ಡದ ಹಾಲು ತಂದು ಕೊಡುವ ಶ್ರಮಜೀವಿ ಕೃಷಿಮಿತ್ರ ಹುಲಿಮರಡಿಯ ಮಂಜುನಾಥ ಶೆಟ್ಟರಿಗೆ ಪ್ರೋತ್ಸಾಹಿಸಿ ಈ ವಷ೯ ಹರಿವೆ ಬೆಳೆದು ತಂದು ಕೊಡುವಂತೆ ಮಾಡಿಕೊಂಡಿದ್ದೇನೆ, ದಂಟು ಹರಿವೆ ಬೀಜ ಹಾಕಿದ್ದಾರಂತೆ ಇನ್ನು ದಂಟಾಗಿಲ್ಲ ಅನ್ನುತ್ತಾರೆ.
  ಆದರೆ ಯಾವುದೇ ಕೆಮಿಕಲ್ ಗೊಬ್ಬರ-ಔಷದಿ ಬೆಳೆಸದ ಅವರು ತಂದು ಕೊಡುವ ಹರಿವೆ ಸೊಪ್ಪು ನಿಜಕ್ಕೂ ಯಮ್ಮಿ.
  ಹರಿವೆ ಸೊಪ್ಪಿನ ಸರಳವಾದ ಸುಲಭವಾದ ಪಲ್ಯ ತಯಾರಿಸಿ ಕೊಬ್ಬರಿ ಎಣ್ಣೆ ಹಾಕಿಕೊಂಡು ಮಿಡಿ ಮಾವಿನ ಉಪ್ಪಿನಕಾಯಿ ನಂಜಿಕೊಂಡು ಊಟ ಮಾಡುವುದು ನನಗೆ ಬಲು ಇಷ್ಟ.
  ಕಡಾಯಿಯಲಿ ಸ್ವಲ್ಪ ಎಣ್ಣೆ ಕಾಯಿಸಿ ಅದಕ್ಕೆ ಸಾಸಿವೆ - ಉದ್ದಿನ ಬೇಳೆ - ಇಂಗು ಹಾಕಿ ಹುರಿದು 5-6 ಒಣ ಮೆಣಸು ತುಂಡು ಮಾಡಿ ಹಾಕಿ, ಕರಿಬೇವಿನ ಎಲೆ ಸೇರಿಸಿ ಕರಿಯುವುದು ನಂತರ ಬೆಳ್ಳುಳ್ಳಿ ಮತ್ತು ನೀರುಳ್ಳಿ ಸಣ್ಣದಾಗಿ ತುಂಡರಿಸಿ ಹಾಕಿ ಬಾಡಿಸಿ ಅದಕ್ಕೆ ತೊಳೆದು ಕತ್ತರಿಸಿದ ಹರಿವೆ ಸೊಪ್ಪು ಹಾಕಿ ತಿರುಗಿಸುತ್ತಾ ಕೆಲ ನಿಮಿಷದ ನಂತರ ಕಾಯಿ ತುರಿ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಬೆರೆಸಿ ಬೇಯುವ ತನಕ ಉರಿಯಲ್ಲಿ ಇಟ್ಟು ಇಳಿಸಿದರೆ ಸೊಪ್ಪಿನ ಪಲ್ಯ ರೆಡಿ.
  ಗೆಳೆಯ ಮಂಜುನಾಥ ಶೆಟ್ಟರು ದನದ ಸಗಣಿಯ ಗೊಬ್ಬರದಲ್ಲಿ ಬೆಳೆಯುವ ಕೆಂಪು ಮತ್ತು ಹಸಿರು ಹರಿವೆ ಸೊಪ್ಪಿನ ಹೊಳಪು, ಅದರ ಘಮ ಮತ್ತು ರುಚಿ ಪೇಟೆಯ ಹರಿವೆ ಸೊಪ್ಪಿನಲ್ಲಿ ಒಂದಂಶ ಕೂಡ ಇಲ್ಲ.
  ಹರಿವೆ ಸೊಪ್ಪಿನ ಕಟ್ಟು ಮಾಡಿ ಅದಕ್ಕೆ ಬಾಳೆ ನಾರಿನಿಂದ ಕಟ್ಟಿದ್ದು ನೋಡಿದರೆ ನಿಮಗೂ ಖುಷಿ ಆದೀತು.
  ಇವತ್ತು ಮೈಸೂರಿನ ಸಹಜ ಸಮೃದ್ದ ಅಂದೋಲದ ಗೆಡ್ಡೆ ಗೆಣಸಿನ ಜನ ಜಾಗೃತಿ ಮಾಡುತ್ತಿರುವ ಕೃಷ್ಣ ಪ್ರಸಾದ್ ಗೋವಿಂದಯ್ಯರ ಪೇಸ್ ಬುಕ್ ಪೋಸ್ಟ್ ನಿಂದ ಇದನ್ನು ಬರೆಯಲು ಹುಮ್ಮಸ್ಸಾಯಿತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ