Skip to main content

Blog number 842. ಕೇಂದ್ರಿಕೃತ ಪೇಟೆ ಮಾರ್ಕೆಟ್ ವ್ಯವಸ್ಥೆಯಲ್ಲಿ ಕಳೆದು ಹೋದ ಹಳ್ಳಿಯ ದಂಟು ಹರಿವೆ ತಳಿಯ ಬೀಜಗಳು, ಹುಲ್ಲು ತಿಂದಂತ ಬೇಕಾರ್ ರುಚಿಯ ಕೆಮಿಕಲ್ ತುಂಬಿರುವ ಕೊಳಚೆ ನೀರಲ್ಲಿ ಬೆಳೆಸುವ ಹರಿವೆ ಸೊಪ್ಪು ಲೋಕದ ತುಂಬಾ ವ್ಯಾಪಿಸಿದೆ.

#ಇವತ್ತು_ಕೃಷ್ಣಪ್ರಸಾದ್_ಗೋವಿಂದಯ್ಯ_ದಂಟು_ಹರಿವೆ_ಬೀಜ_ಬೇಕೆಂದು_ಪೋಸ್ಟ್_ಮಾಡಿದ್ದರು.

#ನನಗೆ_ಈಗಿನ_ತರಕಾರಿ_ಮಾರುಕಟ್ಟೆ_ಹರಿವೆ_ಕಂಡರಾಗುವುದಿಲ್ಲ.

#ಹೊನ್ನಾವರ_ಅಂಕೋಲ_ಕುಮಟಾದಲ್ಲಿ_ಬೆಳಿಗ್ಗೆ_ಸೂಯೋ೯ದಯಕ್ಕೆ_ಮೊದಲೇ_ಹಾಲಕ್ಕಿಯವರು_ಮಾರಾಟ_ಮಾಡುವ_ದಂಟು_ಹರಿವೆ.

#ನಿತ್ಯ_ಮಲೆನಾಡು_ಗಿಡ್ಡ_ದನದ_ಹಾಲುಕೊಡುವ_ಹುಲಿಮರಡಿ_ಮಂಜುಶೆಟ್ಟರು_ಹರಿವೆ_ಬೆಳೆದು_ಕೊಡುತ್ತಿದ್ದಾರೆ.

   ಒಂದು ಕಾಲದಲ್ಲಿ ಅಂದರೆ 1980-90ರ ತನಕ ಈ ದಂಟು ಹರಿವೆ ಹಸಿರು ಕೆಂಪು ಬಣ್ಣದ್ದು ಎಲ್ಲಾ ರೈತರ ಕಬ್ಬಿನ ಗದ್ದೆಯಲ್ಲಿ ಮತ್ತು ಹಳ್ಳಿಯ ಎಲ್ಲರ ಮನೆಯ ಹಿತ್ತಲಲ್ಲಿ ಬೇಸಿಗೆ ತರಕಾರಿ ಆಗಿರುತ್ತಿತ್ತು.
  ಇದನ್ನು ಹಣಕ್ಕಾಗಿ ಮಾರಾಟ ಮಾಡುತ್ತಿರಲಿಲ್ಲ ಮಾಡಿದರೂ ಖರೀದಿಸುವವರಿರಲಿಲ್ಲ ಮತ್ತೆ ಇದರ ರುಚಿ ಎಲ್ಲರಿಗೂ ಗೊತ್ತಿರಲಿಲ್ಲ.
  ಒಂದಾಳು ಎತ್ತರ ಬೆಳೆಯುತ್ತಿದ್ದ ರಟ್ಟೆ ಗಾತ್ರದ ಒಂದು ದಂಟು ಹರಿವೆ ಗಿಡದಿಂದ ಎರೆಡು ದಿನ ಸಾಂಬಾರ್ ಮಾಡಬಹುದಿತ್ತು, ಬೆಳೆದರೂ ದಂಟಿನ ಒಳಗೆ ಮೃದುವಾಗಿರುತ್ತಿದ್ದ  ದಂಟನ್ನು ಜಗಿದು ಆಸ್ವಾದಿಸುತ್ತಿದ್ದ ಕಾಲ ಈಗ ನೆನಪಾಗಿ ಬಾಯಿಯಲ್ಲಿ ನೀರು ಬರುತ್ತದೆ.
 ಬೀಜಕ್ಕಾಗಿ ಕೆಲ ಗಿಡ ಹಾಗೇ ಬಿಡುತ್ತಿದ್ದರು ನಂತರ ಅದರಲ್ಲಿ ಹೂವಾಗಿ ಬೀಜವಾದಾಗ ಒಣಸಿ ತೆಗೆದಿಡುತ್ತಿದ್ದರು.
  ದಂಟು ಹರಿವೆ ಮಳೆಗಾಲದಲ್ಲಿ ನೀರು ತುಂಬಿ ಸವಳು ಸವಳು ಆಗುವುದರಿಂದ ಬೇಸಿಗೆಯಲ್ಲಿಯೇ ದಂಟು ಹರಿವೆ ರುಚಿಕರ.
  ಈಗೆಲ್ಲ ಕೆಮಿಕಲ್ ಗೊಬ್ಬರದಿಂದ ಕೊಳಚೆ ನೀರಲ್ಲಿ ಬೆಳೆಸುವ ನೋಡಲು ಆಕರ್ಷಕವಾಗಿ ಕಾಣುವ ಹರಿವೆ ಸೊಪ್ಪು ನಿತ್ಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರುತ್ತೆ ಆದರೆ ಅದರಲ್ಲಿ ಹರಿವೆ ಸೊಪ್ಪಿನ ಘಮವೂ ಇಲ್ಲ ರುಚಿಯೂ ಇಲ್ಲ ಒಂದು ತರ ಹಸಿ ಹುಲ್ಲು ತಂದು ಬೇಸಿದಂತೆ ಅದರ ಬೇಕಾರ್ ರುಚಿ.
  ನಮ್ಮ ತಂದೆ ವಿವಿದ ತರದ ದಂಟು ಹರಿವೆ ಬೀಜದಿಂದ ಅನೇಕರಿಗೆ ದಂಟು ಹರಿವೆ ಬೆಳೆಸಿ ಕೊಡುತ್ತಿದ್ದರು.
  ಕಾಲ ಕ್ರಮೇಣ ಹಳ್ಳಿಗಳು ಹಾಲು - ಕೋಳಿ ಮಾಂಸಕ್ಕೆ ಪೇಟೆಯ ಮೇಲೆ ಅವಲಂಬಿಸಿದಂತೆ ತರಕಾರಿಗೂ ಪೇಟೆಗೆ ಅವಲಂಬಿಸಿ ಈ ದಂಟಿನ ಹರಿವೆಯ ತಳಿಯ ಬೀಜವನ್ನೆ ಕಳೆದುಕೊಂಡಿದ್ದು ಸತ್ಯ.
  ಆದರೆ ಕರಾವಳಿಯ ಜನರಿಗೆ ಪಶ್ಚಿಮ ಘಟ್ಟದಲ್ಲಿನ ಗುಡ್ಡಗಾಡಿನ ಹಾಲಕ್ಕಿ ಮಹಿಳೆಯರು ಸಂಪ್ರದಾಯಿಕ ನೂರಾರು ಮೂಲ ತಳಿಯ ತರಕಾರಿ ಬೆಳೆದು ಈಗಲೂ ಮಾರಾಟ ಮಾಡುತ್ತಾರೆ.
  ನಾನು ಸ್ವತಃ ನೋಡಿದ್ದೇನೆ ಹೊನ್ನಾವರದ ಬಂದರಿನ ಹತ್ತಿರ, ಅಂಕೋಲದ ಚಿತ್ರ ಮಂದಿರದ ಎದರು, ಕುಮಟಾದ ರೈಲು ನಿಲ್ದಾಣದ ತಿರುವಿನಲ್ಲಿ ಬೆಳಿಗ್ಗೆ 5ಕ್ಕೆ ಅವರು ದಂಟು ಹರಿವೆಯ ಹೊರೆ ಹೊತ್ತು ತರುತ್ತಾರೆ ವಿಶೇಷವಾಗಿ ಕರಾವಳಿಯ ಕೊಂಕಣಿ ಗೌಡ ಸಾರಸ್ವತರು ಇದಕ್ಕೆ ಕಾದು ನಿಂತಿರುತ್ತಾರೆ ತಕ್ಷಣದಲ್ಲಿ ದಂಟು ಹರಿವೆ ಖಲಾಸ್.
  ಇದೇ ರೀತಿ ಗೋವಾದ ಕುಣುಬಿ ಜನರು ದಂಟು ಹರಿವೆ ತರುತ್ತಾರೆ ಗೋವನ್ನರಿಗೆ ಕೂಡ ಇದು ಬಲು ಪ್ರಿಯ.
  ನನಗೆ ನಿತ್ಯ ಮಲೆನಾಡು ಗಿಡ್ಡದ ಹಾಲು ತಂದು ಕೊಡುವ ಶ್ರಮಜೀವಿ ಕೃಷಿಮಿತ್ರ ಹುಲಿಮರಡಿಯ ಮಂಜುನಾಥ ಶೆಟ್ಟರಿಗೆ ಪ್ರೋತ್ಸಾಹಿಸಿ ಈ ವಷ೯ ಹರಿವೆ ಬೆಳೆದು ತಂದು ಕೊಡುವಂತೆ ಮಾಡಿಕೊಂಡಿದ್ದೇನೆ, ದಂಟು ಹರಿವೆ ಬೀಜ ಹಾಕಿದ್ದಾರಂತೆ ಇನ್ನು ದಂಟಾಗಿಲ್ಲ ಅನ್ನುತ್ತಾರೆ.
  ಆದರೆ ಯಾವುದೇ ಕೆಮಿಕಲ್ ಗೊಬ್ಬರ-ಔಷದಿ ಬೆಳೆಸದ ಅವರು ತಂದು ಕೊಡುವ ಹರಿವೆ ಸೊಪ್ಪು ನಿಜಕ್ಕೂ ಯಮ್ಮಿ.
  ಹರಿವೆ ಸೊಪ್ಪಿನ ಸರಳವಾದ ಸುಲಭವಾದ ಪಲ್ಯ ತಯಾರಿಸಿ ಕೊಬ್ಬರಿ ಎಣ್ಣೆ ಹಾಕಿಕೊಂಡು ಮಿಡಿ ಮಾವಿನ ಉಪ್ಪಿನಕಾಯಿ ನಂಜಿಕೊಂಡು ಊಟ ಮಾಡುವುದು ನನಗೆ ಬಲು ಇಷ್ಟ.
  ಕಡಾಯಿಯಲಿ ಸ್ವಲ್ಪ ಎಣ್ಣೆ ಕಾಯಿಸಿ ಅದಕ್ಕೆ ಸಾಸಿವೆ - ಉದ್ದಿನ ಬೇಳೆ - ಇಂಗು ಹಾಕಿ ಹುರಿದು 5-6 ಒಣ ಮೆಣಸು ತುಂಡು ಮಾಡಿ ಹಾಕಿ, ಕರಿಬೇವಿನ ಎಲೆ ಸೇರಿಸಿ ಕರಿಯುವುದು ನಂತರ ಬೆಳ್ಳುಳ್ಳಿ ಮತ್ತು ನೀರುಳ್ಳಿ ಸಣ್ಣದಾಗಿ ತುಂಡರಿಸಿ ಹಾಕಿ ಬಾಡಿಸಿ ಅದಕ್ಕೆ ತೊಳೆದು ಕತ್ತರಿಸಿದ ಹರಿವೆ ಸೊಪ್ಪು ಹಾಕಿ ತಿರುಗಿಸುತ್ತಾ ಕೆಲ ನಿಮಿಷದ ನಂತರ ಕಾಯಿ ತುರಿ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಬೆರೆಸಿ ಬೇಯುವ ತನಕ ಉರಿಯಲ್ಲಿ ಇಟ್ಟು ಇಳಿಸಿದರೆ ಸೊಪ್ಪಿನ ಪಲ್ಯ ರೆಡಿ.
  ಗೆಳೆಯ ಮಂಜುನಾಥ ಶೆಟ್ಟರು ದನದ ಸಗಣಿಯ ಗೊಬ್ಬರದಲ್ಲಿ ಬೆಳೆಯುವ ಕೆಂಪು ಮತ್ತು ಹಸಿರು ಹರಿವೆ ಸೊಪ್ಪಿನ ಹೊಳಪು, ಅದರ ಘಮ ಮತ್ತು ರುಚಿ ಪೇಟೆಯ ಹರಿವೆ ಸೊಪ್ಪಿನಲ್ಲಿ ಒಂದಂಶ ಕೂಡ ಇಲ್ಲ.
  ಹರಿವೆ ಸೊಪ್ಪಿನ ಕಟ್ಟು ಮಾಡಿ ಅದಕ್ಕೆ ಬಾಳೆ ನಾರಿನಿಂದ ಕಟ್ಟಿದ್ದು ನೋಡಿದರೆ ನಿಮಗೂ ಖುಷಿ ಆದೀತು.
  ಇವತ್ತು ಮೈಸೂರಿನ ಸಹಜ ಸಮೃದ್ದ ಅಂದೋಲದ ಗೆಡ್ಡೆ ಗೆಣಸಿನ ಜನ ಜಾಗೃತಿ ಮಾಡುತ್ತಿರುವ ಕೃಷ್ಣ ಪ್ರಸಾದ್ ಗೋವಿಂದಯ್ಯರ ಪೇಸ್ ಬುಕ್ ಪೋಸ್ಟ್ ನಿಂದ ಇದನ್ನು ಬರೆಯಲು ಹುಮ್ಮಸ್ಸಾಯಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...