Skip to main content

Blog number 846. ಭಾರತ ದೇಶ ಸೀಮೆ ಎಣ್ಣೆ ಮುಕ್ತ ದೇಶವಾಗಿದೆ, ಪಡಿತರ ಸೀಮೆ ಎಣ್ಣೆ ಮುಗಿದ ಅದ್ಯಾಯ.

#ಸೀಮೆಎಣ್ಣೆ_ವಿತರಣೆ_ಯಾಕೆ_ಇಲ್ಲ

#ವಿದಾನಪರಿಷತ್_ನಲ್ಲಿ_ಸದಸ್ಯ_ಸಿದ್ಧಿ_ಸೀಮೆಎಣ್ಣೆ_ಪಡಿತರದಲ್ಲಿ_ವಿತರಿಸಲು_ಒತ್ತಾಯಿಸಿದರು

#ಕೇಂದ್ರಸರ್ಕಾರ_ಉಚಿತ_ಅಡುಗೆ_ಅನಿಲ_ಸಿಲೆಂಡರ್_ಸಂಪರ್ಕ_ನೀಡುವ_ಮೂಲಕ_ದೇಶ_ಸೀಮೆಎಣ್ಣೆ_ಮುಕ್ತಮಾಡಿದೆ.

#ಬೆಂಗಳೂರಲ್ಲಿ_ಖಾಸಾಗಿ_ಸೀಮೆಎಣ್ಣೆ_85_ರಿಂದ_100_ರೂಗೆ_ಲಭ್ಯ.

  ಕೇಂದ್ರ ಇಂದನ ಸಚಿವರಾದ ರಾಮ ನಾಯಕರು 28- ನವೆಂಬರ್ -2003 ರಲ್ಲಿ ಕೆರೋಸಿನ್ ಆಮದು ಕಡಿತಗೊಳಿಸಲು ಆದೇಶಿಸುತ್ತಾರೆ.
  ಇವರಿಗೆ ದೇಶದ ಲಾರಿ ಮಾಲಿಕರ ಒತ್ತಾಯವೂ ಕಾರಣ ಏನೆಂದರೆ ಪಡಿತರ ವ್ಯವಸ್ಥೆಯ ಸೀಮೆ ಎಣ್ಣೆ ಕಳ್ಳ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಡಿಸೇಲ್ ಗೆ ಕಲಬೆರಕೆ ಆಗುತ್ತಿದೆ ಇದರಿಂದ ಅನೇಕ ಲಾರಿ ಮಾಲಿಕರು ಕಡಿಮೆ ಬಾಡಿಗೆಯಲ್ಲಿ ಸಾಗಾಣಿಕೆ ಮಾಡುತ್ತಾರೆ ಇದರಿಂದ ಪರಿಸರಕ್ಕೂ ಹಾನಿ, ಸರ್ಕಾರದ ಸಹಾಯದನ ಕೂಡ ದುರ್ಬಳಕೆ ಎಂಬ ಮುಖ್ಯ ಕಾರಣ.
  ಭಾರತ 1.2 ಮಿಲಿಯನ್ ಬ್ಯಾರಲ್ ಸೀಮೆ ಎಣ್ಣೆ ವಾರ್ಷಿಕ ಆಮದು ಮಾಡಿ ಅದಕ್ಕೆ ಸಹಾಯಧನ ನೀಡಿ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡುತ್ತಿದ್ದ ಸೀಮೆ ಎಣ್ಣೆ ಶೇಕಡಾ 99 ದುರುಪಯೋಗ ಆಗುತ್ತಿದೆ ಎಂಬ ಸರ್ಕಾರದ ವರದಿಯೂ ಇದೆ.
 ಹಾಗಾಗಿ ಮೋದಿಯವರ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ ನೀಡಿ ಸೀಮೆ ಎಣ್ಣೆ ಮುಕ್ತ ಭಾರತ ಮಾಡಿದೆ.
  ವಿದ್ಯುತ್ ಸಂಪರ್ಕ ಇಲ್ಲದ ಗುಡ್ಡಗಾಡು ಪ್ರದೇಶದಲ್ಲಿ, ನಿರಂತರ ವಿದ್ಯುತ್ ನೀಡಲಾಗದ ಪ್ರದೇಶದಲ್ಲಿ ಜನ ದೀಪಕ್ಕಾಗಿ ಸೀಮೆ ಎಣ್ಣೆ ವಿತರಣೆ ಮಾಡಲು ಒತ್ತಾಯಿಸುತ್ತಾರೆ ಆದರೆ ಕೇಂದ್ರ ಸರ್ಕಾರ ಸಹಾಯಧನ ವ್ಯವಸ್ಥೆಯಲ್ಲಿ ಪಡಿತರ ಮೂಲಕ ಸೀಮೆ ಎಣ್ಣೆಯನ್ನು ವಿತರಿಸುವ ಪ್ರಮಯವೇ ಇಲ್ಲ.
  ಜನತೆ ಸೋಲಾರ್ ಅಥವ ಬ್ಯಾಟರಿ ಆದಾರದಲ್ಲಿ ದೀಪ ಬೆಳಗಿಸಿಕೊಳ್ಳಬೇಕಷ್ಟೆ ಅಷ್ಟಕ್ಕೂ ಸೀಮೆ ಎಣ್ಣೆ ಬೇಕೇ ಬೇಕೆಂದರೆ ಓಪನ್ ಮಾರ್ಕೆಟ್ ನಲ್ಲಿ 85 ರಿಂದ 100 ರೂ ಗೆ ಒಂದು ಲೀಟರ್ ಸೀಮೆ ಎಣ್ಣೆ ಖರೀದಿಸಬೇಕು.
  ಸೀಮೆ ಎಣ್ಣೆ 1846 ರಲ್ಲಿ ಕೆನಡಿಯನ್ ಅಬ್ರಾಹಿಂ ಪಿಂಕೋ ಜಸ್ನರ್ ಕಂಡು ಹಿಡಿಯುತ್ತಾರೆ ಆಗ ಇದನ್ನು ಎಕ್ಸ್ಲೆಂಟ್ ಲ್ಯಾಂಪ್ ಪ್ಯೂಯಲ್ ಅಂತಾನೆ ಜನಪ್ರಿಯ ಆಗುತ್ತದೆ.
  UK, ಆಫ್ರಿಕಾ, ನಾರ್ವೆ ಮತ್ತು ಚಿಲಿಯಲ್ಲಿ ಸೀಮೆ ಎಣ್ಣೆಗೆ ಪ್ಯಾರಾಫಿನ್ ಎಂದು ಹೆಸರು.
  ಲ್ಯಾಂಪ್ ಆಯಿಲ್ ಕೋಲ್ ಆಯಿಲ್ ಅಂತಲೂ ಕರೆಯುವ ಕೆರೋಸಿನ್ ನನ್ನು ಜೆಟ್ ಇಂಜಿನ್ ಮತ್ತು ರಾಕೆಟ್ ಇಂಜಿನ್ ನಲ್ಲಿ ಬಳಸುತ್ತಾರೆ.
  1851 ರಲ್ಲಿ ಸಾಮ್ಯೂಯಲ್ ಮಾರ್ಟಿನ್ ಕಿಯಲ್ ಲ್ಯಾಂಪ್ ಆಯಿಲ್ ಅಧಿಕೃತ ಮಾರಾಟದ ಅನುಮತಿ ಪಡೆದು ಮಾರಾಟ ಪ್ರಾರಂಬಿಸಿದ್ದು ವಿಶ್ವದಾದ್ಯಂತ ಬಹು ಬೇಡಿಕೆ ಪಡೆದಿತ್ತು.
   2003ರಿಂದ ಭಾರತದೇಶ ಸೀಮೆ ಎಣ್ಣೆ ಆಮದು ಕಡಿತ ಗೊಳಿಸುತ್ತಾ 2018ರಿಂದ ಸಂಪೂರ್ಣ ಆಮದು ನಿಲ್ಲಿಸಿದೆ, ಖಾಸಾಗಿ ಸಂಸ್ಥೆಗಳು ಆಮದು ಮಾಡಿ ಮಾರಾಟ ಮಾಡಬಹುದಾದರೂ ಸಕಾ೯ರದ ಸಹಾಯ ಧನ ಇಲ್ಲದಿರುವುದರಿಂದ ದುಭಾರಿ ಬೆಲೆ ಅಂದರೆ ಡಿಸೇಲ್ ಧರಕ್ಕೆ ಸಮನಾಗಿರುವುದರಿಂದ ಜನ ಸಾಮಾನ್ಯರು ಖರೀದಿಸುವುದಿಲ್ಲ ಮತ್ತು ಡಿಸೇಲ್ ಗೆ ಕಲಬೆರಕೆ ಮಾಡುವ ಕಾಳಸಂತೆ ಕೋರರಿಗೂ ಲಾಭವಿಲ್ಲ ಆದ್ದರಿಂದ ಭಾರತ ದೇಶ ಸಬ್ಸಿಡಿ ಸೀಮೆ ಎಣ್ಣೆ ಮುಕ್ತ ದೇಶವಾಗಿದೆ.
  ಅನಿವಾರ್ಯ ಸಂದರ್ಭದಲ್ಲಿ ಬೆಳಕಿಗಾಗಿ ಪರ್ಯಾಯ ದೀಪಗಳು ಪೇಟೆಯಲ್ಲಿ ಲಭ್ಯವಿದೆ, ಸಂಪ್ರದಾಯಿಕ ಸೀಮೆಎಣ್ಣೆ ದೀಪ, ಲಾಟೀನು, ಪೆಟ್ರೋಮ್ಯಾಕ್ಸ್, ಸೀಮೆ ಎಣ್ಣೆ ಸ್ಟವ್ ಗಳು ಮುಂದಿನ ದಿನದಲ್ಲಿ ವಸ್ತು ಸಂಗ್ರಹಾಲಯದಲ್ಲಿ ಮಾತ್ರ ನೋಡಲು ಸಿಗುತ್ತದೆ.
  ಸೀಮೆ ಎಣ್ಣೆ ಬ್ಲಾಕ್ ಮಾರ್ಕೆಟ್ ನಿಯಂತ್ರಣ ಮಾಡಲು ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಪ್ರಾರಂಭ ಆಗಿ ಮೋದಿಯವರ ಸಕಾ೯ರದಲ್ಲಿ ಸಂಪೂರ್ಣ ನಿಯಂತ್ರಣ ಆಗಿದೆ. (ಆಯಾ ಪಕ್ಷಗಳು ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳಬಹುದು😀)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...