Skip to main content

Blog number 846. ಭಾರತ ದೇಶ ಸೀಮೆ ಎಣ್ಣೆ ಮುಕ್ತ ದೇಶವಾಗಿದೆ, ಪಡಿತರ ಸೀಮೆ ಎಣ್ಣೆ ಮುಗಿದ ಅದ್ಯಾಯ.

#ಸೀಮೆಎಣ್ಣೆ_ವಿತರಣೆ_ಯಾಕೆ_ಇಲ್ಲ

#ವಿದಾನಪರಿಷತ್_ನಲ್ಲಿ_ಸದಸ್ಯ_ಸಿದ್ಧಿ_ಸೀಮೆಎಣ್ಣೆ_ಪಡಿತರದಲ್ಲಿ_ವಿತರಿಸಲು_ಒತ್ತಾಯಿಸಿದರು

#ಕೇಂದ್ರಸರ್ಕಾರ_ಉಚಿತ_ಅಡುಗೆ_ಅನಿಲ_ಸಿಲೆಂಡರ್_ಸಂಪರ್ಕ_ನೀಡುವ_ಮೂಲಕ_ದೇಶ_ಸೀಮೆಎಣ್ಣೆ_ಮುಕ್ತಮಾಡಿದೆ.

#ಬೆಂಗಳೂರಲ್ಲಿ_ಖಾಸಾಗಿ_ಸೀಮೆಎಣ್ಣೆ_85_ರಿಂದ_100_ರೂಗೆ_ಲಭ್ಯ.

  ಕೇಂದ್ರ ಇಂದನ ಸಚಿವರಾದ ರಾಮ ನಾಯಕರು 28- ನವೆಂಬರ್ -2003 ರಲ್ಲಿ ಕೆರೋಸಿನ್ ಆಮದು ಕಡಿತಗೊಳಿಸಲು ಆದೇಶಿಸುತ್ತಾರೆ.
  ಇವರಿಗೆ ದೇಶದ ಲಾರಿ ಮಾಲಿಕರ ಒತ್ತಾಯವೂ ಕಾರಣ ಏನೆಂದರೆ ಪಡಿತರ ವ್ಯವಸ್ಥೆಯ ಸೀಮೆ ಎಣ್ಣೆ ಕಳ್ಳ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಡಿಸೇಲ್ ಗೆ ಕಲಬೆರಕೆ ಆಗುತ್ತಿದೆ ಇದರಿಂದ ಅನೇಕ ಲಾರಿ ಮಾಲಿಕರು ಕಡಿಮೆ ಬಾಡಿಗೆಯಲ್ಲಿ ಸಾಗಾಣಿಕೆ ಮಾಡುತ್ತಾರೆ ಇದರಿಂದ ಪರಿಸರಕ್ಕೂ ಹಾನಿ, ಸರ್ಕಾರದ ಸಹಾಯದನ ಕೂಡ ದುರ್ಬಳಕೆ ಎಂಬ ಮುಖ್ಯ ಕಾರಣ.
  ಭಾರತ 1.2 ಮಿಲಿಯನ್ ಬ್ಯಾರಲ್ ಸೀಮೆ ಎಣ್ಣೆ ವಾರ್ಷಿಕ ಆಮದು ಮಾಡಿ ಅದಕ್ಕೆ ಸಹಾಯಧನ ನೀಡಿ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡುತ್ತಿದ್ದ ಸೀಮೆ ಎಣ್ಣೆ ಶೇಕಡಾ 99 ದುರುಪಯೋಗ ಆಗುತ್ತಿದೆ ಎಂಬ ಸರ್ಕಾರದ ವರದಿಯೂ ಇದೆ.
 ಹಾಗಾಗಿ ಮೋದಿಯವರ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ ನೀಡಿ ಸೀಮೆ ಎಣ್ಣೆ ಮುಕ್ತ ಭಾರತ ಮಾಡಿದೆ.
  ವಿದ್ಯುತ್ ಸಂಪರ್ಕ ಇಲ್ಲದ ಗುಡ್ಡಗಾಡು ಪ್ರದೇಶದಲ್ಲಿ, ನಿರಂತರ ವಿದ್ಯುತ್ ನೀಡಲಾಗದ ಪ್ರದೇಶದಲ್ಲಿ ಜನ ದೀಪಕ್ಕಾಗಿ ಸೀಮೆ ಎಣ್ಣೆ ವಿತರಣೆ ಮಾಡಲು ಒತ್ತಾಯಿಸುತ್ತಾರೆ ಆದರೆ ಕೇಂದ್ರ ಸರ್ಕಾರ ಸಹಾಯಧನ ವ್ಯವಸ್ಥೆಯಲ್ಲಿ ಪಡಿತರ ಮೂಲಕ ಸೀಮೆ ಎಣ್ಣೆಯನ್ನು ವಿತರಿಸುವ ಪ್ರಮಯವೇ ಇಲ್ಲ.
  ಜನತೆ ಸೋಲಾರ್ ಅಥವ ಬ್ಯಾಟರಿ ಆದಾರದಲ್ಲಿ ದೀಪ ಬೆಳಗಿಸಿಕೊಳ್ಳಬೇಕಷ್ಟೆ ಅಷ್ಟಕ್ಕೂ ಸೀಮೆ ಎಣ್ಣೆ ಬೇಕೇ ಬೇಕೆಂದರೆ ಓಪನ್ ಮಾರ್ಕೆಟ್ ನಲ್ಲಿ 85 ರಿಂದ 100 ರೂ ಗೆ ಒಂದು ಲೀಟರ್ ಸೀಮೆ ಎಣ್ಣೆ ಖರೀದಿಸಬೇಕು.
  ಸೀಮೆ ಎಣ್ಣೆ 1846 ರಲ್ಲಿ ಕೆನಡಿಯನ್ ಅಬ್ರಾಹಿಂ ಪಿಂಕೋ ಜಸ್ನರ್ ಕಂಡು ಹಿಡಿಯುತ್ತಾರೆ ಆಗ ಇದನ್ನು ಎಕ್ಸ್ಲೆಂಟ್ ಲ್ಯಾಂಪ್ ಪ್ಯೂಯಲ್ ಅಂತಾನೆ ಜನಪ್ರಿಯ ಆಗುತ್ತದೆ.
  UK, ಆಫ್ರಿಕಾ, ನಾರ್ವೆ ಮತ್ತು ಚಿಲಿಯಲ್ಲಿ ಸೀಮೆ ಎಣ್ಣೆಗೆ ಪ್ಯಾರಾಫಿನ್ ಎಂದು ಹೆಸರು.
  ಲ್ಯಾಂಪ್ ಆಯಿಲ್ ಕೋಲ್ ಆಯಿಲ್ ಅಂತಲೂ ಕರೆಯುವ ಕೆರೋಸಿನ್ ನನ್ನು ಜೆಟ್ ಇಂಜಿನ್ ಮತ್ತು ರಾಕೆಟ್ ಇಂಜಿನ್ ನಲ್ಲಿ ಬಳಸುತ್ತಾರೆ.
  1851 ರಲ್ಲಿ ಸಾಮ್ಯೂಯಲ್ ಮಾರ್ಟಿನ್ ಕಿಯಲ್ ಲ್ಯಾಂಪ್ ಆಯಿಲ್ ಅಧಿಕೃತ ಮಾರಾಟದ ಅನುಮತಿ ಪಡೆದು ಮಾರಾಟ ಪ್ರಾರಂಬಿಸಿದ್ದು ವಿಶ್ವದಾದ್ಯಂತ ಬಹು ಬೇಡಿಕೆ ಪಡೆದಿತ್ತು.
   2003ರಿಂದ ಭಾರತದೇಶ ಸೀಮೆ ಎಣ್ಣೆ ಆಮದು ಕಡಿತ ಗೊಳಿಸುತ್ತಾ 2018ರಿಂದ ಸಂಪೂರ್ಣ ಆಮದು ನಿಲ್ಲಿಸಿದೆ, ಖಾಸಾಗಿ ಸಂಸ್ಥೆಗಳು ಆಮದು ಮಾಡಿ ಮಾರಾಟ ಮಾಡಬಹುದಾದರೂ ಸಕಾ೯ರದ ಸಹಾಯ ಧನ ಇಲ್ಲದಿರುವುದರಿಂದ ದುಭಾರಿ ಬೆಲೆ ಅಂದರೆ ಡಿಸೇಲ್ ಧರಕ್ಕೆ ಸಮನಾಗಿರುವುದರಿಂದ ಜನ ಸಾಮಾನ್ಯರು ಖರೀದಿಸುವುದಿಲ್ಲ ಮತ್ತು ಡಿಸೇಲ್ ಗೆ ಕಲಬೆರಕೆ ಮಾಡುವ ಕಾಳಸಂತೆ ಕೋರರಿಗೂ ಲಾಭವಿಲ್ಲ ಆದ್ದರಿಂದ ಭಾರತ ದೇಶ ಸಬ್ಸಿಡಿ ಸೀಮೆ ಎಣ್ಣೆ ಮುಕ್ತ ದೇಶವಾಗಿದೆ.
  ಅನಿವಾರ್ಯ ಸಂದರ್ಭದಲ್ಲಿ ಬೆಳಕಿಗಾಗಿ ಪರ್ಯಾಯ ದೀಪಗಳು ಪೇಟೆಯಲ್ಲಿ ಲಭ್ಯವಿದೆ, ಸಂಪ್ರದಾಯಿಕ ಸೀಮೆಎಣ್ಣೆ ದೀಪ, ಲಾಟೀನು, ಪೆಟ್ರೋಮ್ಯಾಕ್ಸ್, ಸೀಮೆ ಎಣ್ಣೆ ಸ್ಟವ್ ಗಳು ಮುಂದಿನ ದಿನದಲ್ಲಿ ವಸ್ತು ಸಂಗ್ರಹಾಲಯದಲ್ಲಿ ಮಾತ್ರ ನೋಡಲು ಸಿಗುತ್ತದೆ.
  ಸೀಮೆ ಎಣ್ಣೆ ಬ್ಲಾಕ್ ಮಾರ್ಕೆಟ್ ನಿಯಂತ್ರಣ ಮಾಡಲು ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಪ್ರಾರಂಭ ಆಗಿ ಮೋದಿಯವರ ಸಕಾ೯ರದಲ್ಲಿ ಸಂಪೂರ್ಣ ನಿಯಂತ್ರಣ ಆಗಿದೆ. (ಆಯಾ ಪಕ್ಷಗಳು ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳಬಹುದು😀)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ