Skip to main content

ಶಿಕಾರಿಪುರದ ದೀಮಂತ ನಾಯಕ, ವಿದಾನ ಪರಿಷತ್ ಸಭಾಪತಿಯೂ ಆಗಿದ್ದ ಕೆ.ವಿ.ನರಸಪ್ಪರ ಪುತ್ರ ಆನಂದ ಪುರಂನ ಪಶುವೈದ್ಯಾದಿಕಾರಿ ಸಜ್ಜನ ಡಾಕ್ಟರ್ ಮೋಹನ್ ನಿವೃತ್ತರಾಗುತ್ತಿರುವ ಸಂದರ್ಭದಲ್ಲಿ ಗೌರವಯುತ ಬೀಳ್ಕೊಡಿಗೆಯ ಈ ನೆನಪುಗಳು.

#ಶಿಕಾರಿಪುರದ_ಕೆ_ವಿ_ನರಸಪ್ಪ_ವಿದಾನ_ಪರಿಷತ್_ಸಭಾಪತಿ_ಆಗಿದ್ದರು.

#ರಾಜಕಾರಣದಲ್ಲಿ_ಅವರ_ಸಾದನೆ_ಅಪ್ರತಿಮ.

#ಬದರಿನಾರಾಯಣ_ಆಯ್ಯಂಗಾರರ_ಸಮಕಾಲಿನವರು.

#ಇವರ_ಪುತ್ರ_ಡಾಕ್ಟರ್_ಮೋಹನ್_ಆನಂದಪುರಂ_ಪಶುವೈದ್ಯಾದಿಕಾರಿಗಳಾಗಿ_ಈ_ತಿಂಗಳು_ನಿವೃತ್ತರಾಗುತ್ತಿದ್ದಾರೆ.

#ಶಿಕಾರಿಪುರದಲ್ಲಿ_ಕೆ_ವಿ_ನರಸಪ್ಪ_ಸ್ಮಾರಕ_ಬಯಲು_ರಂಗಮಂದಿರ_ಇದೆ.

   ಸುಮಾರು 12 ವರ್ಷದಿಂದ ನಮ್ಮ ಆನಂದಪುರಂನ ಪಶು ವೈದ್ಯ ಶಾಲೆಗೆ ವೈದ್ಯರಾಗಿ ಬಂದ ನಂತರ ಸದರಿ ಇಲಾಖೆಯಲ್ಲಿ ಉಪ ನಿಧೇ೯ಶಕರಾಗಿ ಸೇವೆ ಸಲ್ಲಿಸುತ್ತಿರುವ ಡಾಕ್ಟರ್ ಮೋಹನ್ ಈ ತಿಂಗಳ ಕೊನೆಯಲ್ಲಿ ನಿವೃತ್ತರಾಗುತ್ತಿದ್ದಾರೆ.
  ಮಿತ ಬಾಷಿ, ಹೆಚ್ಚು ಓದುವ ಹವ್ಯಾಸದ ಇವರು ಇಲ್ಲಿಗೆ ಬರುವ ಮೊದಲು ಕೆಳದಿ ಭಾಗದಲ್ಲಿ ಹೈನುಗಾರಿಕೆಯನ್ನ ಉತ್ತೇಜಿಸುವ ಕೆಲಸ ಮಾಡಿ ಆಭಾಗದಲ್ಲಿ ಜನಾನುರಾಗಿಗಳಾಗಿದ್ದರು.
  ಆನಂದಪುರಂನ ಪಶು ವೈದ್ಯ ಶಾಲೆ ನಿರ್ಮಿಸಿ ಊರಿಗೆ ದಾನ ಮಾಡಿದವರು ಆನಂದಪುರಂನ ಜಮೀನ್ದಾರರೂ, ಕೊಡುಗೈ ದಾನಿಗಳಾದ ರಾಮಕೃಷ್ಣ ಅಯ್ಯಂಗಾರರು ಅವರ ಪುತ್ರರಾದ ಜಗನ್ನಾಥ ಅಯ್ಯಂಗಾರರು ಅಕಾಲಿಕ ಮೃತ್ಯು ಹೊಂದಿದಾಗ ಅವರ ಸ್ಮರಣಾರ್ಥ ಜಗನ್ನಾಥ ಅಯ್ಯಂಗಾರ್ ಪಶು ವೈದ್ಯ ಶಾಲೆ ಸ್ಪಂತ ಜಾಗದಲ್ಲಿ ನಿರ್ಮಿಸಿ ಊರಿಗೆ ಅರ್ಪಿಸುತ್ತಾರೆ ಇವರ ಪುತ್ರ ವೆಂಕಟಚಲ ಅಯ್ಯಂಗಾರ್ ದೀರ್ಘ ಕಾಲ ಆನಂದಪುರಂ ವಿಲೇಜ್ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರೆ, ಇನ್ನೊಬ್ಬ ಪುತ್ರ ಬದರಿನಾರಾಯಣ ಅಯ್ಯಂಗಾರ್ ಶಾಸಕರು, ವಿದ್ಯಾಮಂತ್ರಿ ಮತ್ತು ಸಂಸದರಾಗುತ್ತಾರೆ.
  ಆನಂದಪುರಂನ ಕನಕಮ್ಮಾಳ್ ಸರ್ಕಾರಿ ಆಸ್ಪತ್ರೆ ಕೂಡ ರಾಮಕೃಷ್ಣ ಅಯ್ಯಂಗಾರರ ಪತ್ನಿ ಹೆಸರಲ್ಲಿ ಕಟ್ಟಿಸಿದ ಆಸ್ಪತ್ರೆ.
  ಜಗನ್ನಾಥ ಅಯ್ಯಂಗಾರ್ ಪಶು ಆಸ್ಪತ್ರೆಯಲ್ಲಿ ದೀರ್ಘ ಅವದಿ ಸೇವೆ ಸಲ್ಲಿಸಿರುವ ಡಾಕ್ಟರ್ ಮೋಹನ್ ತಂದೆ ಶಿಕಾರಿಪುರದ ಕೆ.ವಿ.ನರಸಪ್ಪನವರು ಬದರಿನಾಯಣ ಅಯ್ಯಂಗಾರರ ಸಮಕಾಲಿನವರು ಮತ್ತು ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಕಾಂಗ್ರೇಸ್ ನ ಪ್ರಮುಖರು.
  ಶಿಕಾರಿಪುರದಲ್ಲಿ ಕೆ.ವಿ.ನರಸಪ್ಪ ಮೆಮೋರಿಯಲ್ ಬಯಲು ರಂಗಮಂದಿರ ಇದೆ, ಕೆ.ವಿ.ನರಸಪ್ಪನವರು 1920 ರಲ್ಲಿ ಜನಿಸಿದವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ.ಪದವಿ ಪಡೆದು, ಬೆಳಗಾವಿಯ ಆರ್.ಎಲ್. ಕಾಲೇಜಿನಲ್ಲಿ ಕಾನೂನು (LLB) ವ್ಯಾಸಂಗ ಮಾಡುತ್ತಾರೆ.
  1956 ರಿಂದ 1968 ರ ವರೆಗೆ ಶಿವಮೊಗ್ಗ ಜಿಲ್ಲೆಯ ಲೋಕಲ್ ಆಥರಿಟೀಸ್ ಕಾನ್ಸ್ಟ್ಯೂನ್ಸಿಯಿಂದ ವಿಧಾನ ಪರಿಷತ್ ಸದಸ್ಯರಾಗುತ್ತಾರೆ.
  1960ರಿಂದ 1962 ರ ಅವಧಿಯಲ್ಲಿ ವಿಧಾನ ಪರಿಷತ್ ಸಭಾಪತಿಗಳಾಗಿ ಕಾರ್ಯನಿರ್ವಹಿಸುತ್ತಾರೆ.
  ಶಿಕಾರಿಪುರ ತಾಲ್ಲೂಕ್ ಕಾಂಗ್ರೇಸ್ ಅಧ್ಯಕ್ಷರಾಗಿರುತ್ತಾರೆ, 6 ವರ್ಷ ಶಿಕಾರಿಪುರ ಟವನ್ ಮುನ್ಸಿಪಲ್ ಅಧ್ಯಕ್ಷರಾಗಿರುತ್ತಾರೆ, 10 ವರ್ಷ ಟವನ್ ಮುನ್ಸಿಪಲ್ ಸದ ಪುರಾಗಿರುತ್ತಾರೆ, ಮೈಸೂರು ರಾಜ್ಯ ಪೈನಾನ್ಸ್ ಕಾರ್ಪೋರೇಷನ್ ನಿರ್ದೇಶಕರಾಗಿ, ಕೆ.ಪಿ.ಸಿ.ಸಿ. ಸದಸ್ಯರಾಗಿ, ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಕಾರ್ಯಕಾರಿ ಆಗಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ಶಿಕಾರಿಪುರ ಮಾರ್ಕೆಟಿಂಗ್ ಸೊಸೈಟಿಗೆ 10 ವರ್ಷ ಅಧ್ಯಕ್ಷರಾಗಿ, ಶಿಕಾರಿಪುರ ತಾಲ್ಲೂಕ್ ಲ್ಯಾಂಡ್ ಮಾರ್ಟ್ಗೇಜ್ ಬ್ಯಾಂಕ್ ಅಧ್ಯಕ್ಷರಾಗಿ, ಶಿಕಾರಿಪುರ ಅಗ್ರಿಕಲ್ಚರ್ ಲ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ, ಅಂಜನಾಪುರ ಬೆಟರ್ ಪಾರ್ಮಿಂಗ್ ಸೊಸೈಟಿ ಅಧ್ಯಕ್ಷರಾಗಿ, ಮೈಸೂರು ಕೋ ಆಪರೇಟಿವ್ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ... ಹೀಗೆ ಒಬ್ಬ ಜನನಾಯಕರು ಇದ್ದರೆಂದರೆ ಈಗಿನ ಕಾಲಕ್ಕೆ ಸೋಜಿಗ ಪಡುವಂತ ಧೀಮಂತ ನಾಯಕರಾಗಿದ್ದರು ಕೆ.ವಿ.ನರಸಪ್ಪನವರು.
  1967ರ ಅವಧಿಗೆ ಶಿಕಾರಿಪುರ ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆದವರು ಸಂಯುಕ್ತ ಸೋಷಲಿಸ್ಟ್ ಪಾಟಿ೯ ಜಿ.ಬಸವಣ್ಯಪ್ಪನವರು. ಇವರ ವಿರುದ್ದ ಕೆ.ವೆಂಕಟಪ್ಪರನ್ನು ಕರೆತಂದು 1972 ಮತ್ತು 1978ರ ಎರೆಡು ಅವಧಿಗೆ ಶಾಸಕರನ್ನಾಗಿಸಲು ಕೆ.ವಿ.ನರಸಪ್ಪರ ಪ್ರಯತ್ನ ಕೂಡ.
  ಇವರ ಇನ್ನೋರ್ವ ಪುತ್ರ ಅರುಣ್ ಶಿವಮೊಗ್ಗ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರೂ ಆಗಿದ್ದರು.
   ಇಂತಹ ನಾಯಕತ್ವದ, ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ದೊಡ್ಡ ಸಾಧನೆ ಮಾಡಿದ ಕೆ.ವಿ.ನರಸಪ್ಪರ ಕೊನೆಯ ಪುತ್ರ ಡಾಕ್ಟರ್ ಮೋಹನ್ ಕೂಡ ಅಷ್ಟೇ ಸಜ್ಜನರು.
  ಆನಂದಪುರಂಗೆ ಪಶುವೈದ್ಯಾಧಿಕಾರಿ ಆಗಿ 12 ವರ್ಷದ ಸೇವೆಯಲ್ಲಿ ನಮ್ಮ ಎಂಟು ನಾಯಿಗಳಿಗೆ ಶಶ್ರೂಷೆ ಮಾಡಿದ್ದಾರೆ, ನಿನ್ನೆ ಈಗಿರುವ ನಾಲ್ಕು ನಾಯಿಗಳಿಗೆ ರೇಬೀಸ್ ಮತ್ತ ಮೆಗಾ ವ್ಯಾಕ್ಸ್ - 6. ಎಂಬ ಆರು ಕಾಯಿಲೆಗಳ ನಿಯಂತ್ರಿಸುವ ವ್ಯಾಕ್ಸಿನ್ ಕೊಡಲು ಬಂದಾಗ ಅವರ ನಿವೃತ್ತಿ ವಿಷಯ ಹೇಳಿದಾಗ ಮನಸ್ಸು ಬಾರವಾಗಿ ಅನಿವಾರ್ಯ ವಿದಾಯವನ್ನು ನನ್ನ ಕಥಾ ಸಂಕಲನ ನೀಡುವ ಮೂಲಕ ಮಾಡಿದೆ.
  ಈ ಸಂದರ್ಭದಲ್ಲೆ ಇವರ ತಂದೆಯ ಸ್ಮರಣೆ ಮಾಡುವ ಮೂಲಕ ಈ ವಿದಾಯ ಸ್ಮರಣೀಯವಾಗಿ ಮಾಡ ಬೇಕೆನ್ನಿಸಿತು.
  ಮುಂದಿನ ದಿನದಲ್ಲಿ ಶಿಕಾರಿಪುರದ ಕೆ.ವಿ.ನರಸಪ್ಪರ ನೆನಪಿಸುವ ಕಾರ್ಯಕ್ರಮಗಳು ಸಂಬಂದ ಪಟ್ಟವರು ಆಯೋಜಿಸಲಿ ಮತ್ತು ಆಸಕ್ತ ಪತ್ರಕರ್ತರು ಈ ಬಗ್ಗೆ ಹೆಚ್ಚಿನ ಮಾಹಿತಿ ಬರೆಯಲಿ ಎಂದು ಆಶಿಸುತ್ತೇನೆ.
  ಈ ತಿಂಗಳ ಕೊನೆಯಲ್ಲಿ ನಿವೃತ್ತರಾಗುತ್ತಿರುವ ದೀಮಂತ ಜನ ನಾಯಕರಾದ ಶಿಕಾರಿಪುರದ ಕೆ.ವಿ.ನರರಸಪ್ಪರ ಕಿರಿಯ ಪುತ್ರ ನಮ್ಮ ಊರಿನ ಪಶುವೈದ್ಯಾದಿಕಾರಿ ಆಗಿ 12 ವರ್ಷ ದೀರ್ಘ ಸೇವೆ ಸಲ್ಲಿಸಿದ ಡಾಕ್ಟರ್ ಮೋಹನ್ ರಿಗೆ ಅವರ ನಿವೃತ್ತಿಗೆ ಈ ಮೂಲಕ ಶುಭ ವಿದಾಯ ಹೇಳುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ