Skip to main content

ಜೀವನ ಶೈಲಿ ಬದಲಿಸಿದ ಎರಡನೆ ಶಿವರಾತ್ರಿ, ಮಿತಿ ಮೀರಿದ ದೇಹದ ತೂಕ ಇಳಿಸುವ ಪ್ರಯೋಗ ಪ್ರಾರಂಬಿಸಿ ಎರೆಡು ವರ್ಷ. (2022)

#ಮಹಾಶಿವರಾತ್ರಿ_ಶುಭ_ಹಾರೈಕೆಗಳು

#ನನಗೆ_ಶಿವರಾತ್ರಿ_ವಿಶೇಷ_ದಿನ

#ರಾತ್ರಿ_ಊಟ_ಬಿಟ್ಟು_ಇವತ್ತಿಗೆ_ಎರೆಡು_ವರ್ಷ.

    ಎರೆಡು ವರ್ಷದ ಹಿಂದೆ ನನ್ನ ವಯೋಮಾನ 56 ವರ್ಷ, ದೇಹದ ತೂಕ 135-140 kg !?, ಸುಮಾರು 2000 ಇಸ್ವಿಯಿಂದ ದೇಹದ ತೂಕ ಇಳಿಸಲು ಮಾಡಿದ ಸರ್ಕಸ್ ಮಾತ್ರ ಒ0ದೆರೆಡಲ್ಲ.
  ರವಿ ಬೆಳೆಗೆರೆಯವರು "ಬೆಂಗಳೂರಿಗೆ ಬನ್ನಿ ಬೇರಿಯಾಟ್ರಿಕ್ ಸರ್ಜರಿ ಮಾಡಿಸುತ್ತೇನೆ" ಅನ್ನುವವರೆಗೆ ನನ್ನ ಪರಿಸ್ಥಿತಿ.
  ಹತ್ತು ಹೆಜ್ಜೆ ನಡೆಯಲು ಸಾಧ್ಯವಿಲ್ಲ, ಪ್ರತಿ ಎರೆಡು ತಿಂಗಳಲ್ಲಿ ಪ್ಯಾಂಟ್ ಮತ್ತು ಶಟ್೯ ಟೈಟ್ ಆಗುತ್ತೆ ಅದರಿಂದ ಪ್ಯಾಂಟ್ ತ್ಯಜಿಸಿ ಪಂಚೆಗೆ ಬದಲಾದೆ ,ವಿಪರೀತ ಗೊರಕೆ, ನಿಯಂತ್ರಣಕ್ಕೆ ಬರದ ಡಯಾಬಿಟೀಸ್, ಬಿಪಿ, ವಿಪರೀತ ಹಸಿವು ಇದರಿಂದ ನನಗೆ ನಾನೆ ಯೋಚಿಸಿದ್ದು ಈ ಮನುಷ್ಯ ಜೀವನ ಇಷ್ಟು ಕಷ್ಟ ಯಾಕೆ? ಮತ್ತು ಈ ಜೀವನ ಬೇಕಾ? ಅಂತ.
  ಪ್ರಪಂಚದ ಎಲ್ಲಾ ತೂಕ ಇಳಿಸುವ ಉಪಾಯಗಳಿಗೂ ಹಣ ಪೀಕಿದೆ ಆದರೆ ಪರಿಣಾಮ? ಎನೂ ಇಲ್ಲ.
  ಇದಕ್ಕಾಗಿ ಅನೇಕ ಪ್ರಯೋಗದ ನಂತರ ಅಂತಿಮ ಪ್ರಯೋಗವಾಗಿ ಎರೆಡು ವರ್ಷದ ಹಿಂದೆ ಶಿವರಾತ್ರಿಯ ದಿನ ತೀಮಾ೯ನ ಮಾಡಿದೆ ನಿತ್ಯ ರಾತ್ರಿ ಊಟ ಜೀವನ ಪರ್ಯಂತ ತ್ಯಾಗ ಅಂತ ( ಅದಕ್ಕೆ ಅನೇಕರ ಪ್ರಯೋಗದ ಪಲಿತಾಂಶದಿಂದ ಪ್ರಬಾವಿತನಾಗಿ) ಮೊದ ಮೊದಲಿಗೆ ಕಷ್ಟ ಆದರೆ ದೃಡ ನಿರ್ದಾರದ ಮುಂದೆ ಏನೂ ಅಲ್ಲ, ರಾತ್ರಿ ಶುಗರ್ ಪ್ರೀ ಚೈವನ ಪ್ರಾಶ ಒಂದು ಲೋಟ ಹಾಲು ಮತ್ತು ಒ0ದು ಲೋಟ ರಾಗಿ ಗಂಜಿ, ಬೆಳಿಗ್ಗೆ 3000 ಹೆಜ್ಜೆ ವಾಕಿಂಗ್ ಸಂಜೆ 6000 ಹೆಜ್ಜೆ ವಾಕಿಂಗ್ ಈಗ ರಾತ್ರಿ ರಾಗಿ ಗಂಜಿ ಕೊಡ ತ್ಯಜಿಸಿದ್ದೇನೆ.
  ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟ, ಮೊಸರು, ತುಪ್ಪ ಮತ್ತು ಬೆಣ್ಣೆ ತ್ಯಜಿಸಲಿಲ್ಲ ಆದರೆ ದೇಹ ಅದಾಗಿಯೇ ಸೇವಿಸುವ ಪ್ರಮಾಣ ಕಡಿಮೆ ಮಾಡಿದೆ.
  ಎರಡನೆ ಶಿವರಾತ್ರಿಗೆ ನನ್ನ ತೂಕ 108 ರಿಂದ 109 ರಲ್ಲಿ ತೂಗುತ್ತಿದೆ, ಡಯಾಬಿಟೀಸ್ ನಾರ್ಮಲ್ ಆಗಿದೆ (ಆಲೇಮನೆ  ಕಬ್ಬಿನ ಹಾಲು ಮಣ್ಣಿ ತಿಂದಾಗ ಸ್ವಲ್ಪ ಜಾಸ್ತಿ), ಗೊರಕೆ ನಾಪತ್ತೆ, ಬಿಪಿ ನಾರ್ಮಲ್ ಆಗಿದೆ.
  ಹೊಕ್ಕಳ ಹತ್ತಿರ ಉಂಟಾಗಿದ ಹನಿ೯ಯಾ ಆಪರೇಷನ್ ಇಲ್ಲದೆ ಸರಿ ಆಗಿದೆ.
   ನನ್ನ ಎರೆಡು ವರ್ಷದ ಅನುಭವ ತಕ್ಷಣ ತೂಕ ಇಳಿಯಬೇಕೆಂಬ ಹಪಾಹಪಿ ಬೇಡ, ಪದೇ ಪದೇ ತೂಕ ನೋಡಬೇಡಿ, ನಿಮಗೆ ಇಷ್ಟದ ಆಹಾರ ಬಿಡಬೇಡಿ ಆದರೆ ರಾತ್ರಿ ಊಟ ಬಿಡಿ ಮತ್ತು ನಿತ್ಯ 7000 ಹೆಜ್ಜೆಯ ವಾಕಿಂಗ್ ನಿರಂತರ ಮಾಡಿ, ಯೋಗ, ಪ್ರಾಣಯಾಮ ಮತ್ತು ದ್ಯಾನ ಅಭ್ಯಾಸ ಇದ್ದರೆ ಮುಂದುವರಿಸಿ.
  ಅಮೆರಿಕನ್ ಡಯಟ್, ಆ ಪೇಯ ಈ ಪೇಯ ಎಂಬ ಮಿಲ್ಕ್ ಶೇಖ್, ಹರ್ಬಲ್ ಟೀ ಇಂತವಕ್ಕೆಲ್ಲ ಹಣ ಪೀಕ ಬೇಡಿ.
  3 ರಿಂದ 4 ವರ್ಷದಲ್ಲಿ ನಿಮ್ಮ ಆರೋಗ್ಯ ಕ್ರಮೇಣ ಸುದಾರಿಸುವ ನಮ್ಮದೇ ಸಂಸ್ಕೃತಿಯ ಈ ಪದ್ದತಿ ಅಭ್ಯಾಸ ಮಾಡಿಕೊಳ್ಳಿ ಮತ್ತು ನಿಮಗೊಂದು ಎಚ್ಚರ ತಕ್ಷಣ ತೂಕ ಇಳಿಸಿದರೆ ನಿಮ್ಮ ಆರೋಗ್ಯ ಖಂಡಿತಾ ಏರುಪೇರು ಆಗುತ್ತದೆ ಮತ್ತು ಪುನಃ ನೀವು ಈ ಮಾರ್ಗದಲ್ಲಿ ಕಳೆದ ತೂಕ ಬೋನಸ್ ನೊಂದಿಗೆ ನಿಮ್ಮ ದೇಹದಲ್ಲಿ ಶೇಖರವಾಗಿ ಎಲ್ಲದರ ಬಗ್ಗೆ ನಿರಾಸಕ್ತಿ ಉಂಟು ಮಾಡುವುದು ಖಚಿತ.
  ನನ್ನ ಅನುಭವದಲ್ಲಿ ಸುಮಾರು 32 kg ಇಳಿದಿದೆ, ಮೊದಲ ವರ್ಷ 25 kg ಇಳಿದರೆ ಎರಡನೆ ವರ್ಷ ಇಳಿದದ್ದು 7 ಕೇಜಿ ಮಾತ್ರ ಹಾಗಂತ ನಾನು ನಿರಾಶನಾಗಿಲ್ಲ ನನ್ನ ಗುರಿ ಇನ್ನೆರೆಡು ಶಿವರಾತ್ರಿ ಕಳೆಯಬೇಕು.
  ಇದನ್ನು ಇಲ್ಲಿ ಬರೆಯಲು ಕಾರಣ ಇದು ಅವಶ್ಯವಿದ್ದವರಿಗೆ ಪ್ರೇರಣೆ ಆಗಲಿ ಅಂತ.
  ಪ್ರಖ್ಯಾತ ಜಲ ತಜ್ಞ ಪರಿಸರ ಪ್ರೇಮಿ ಶಿವಾನಂದ ಕಳವೆ ರಾತ್ರಿ ಊಟ ನನ್ನ ಅನುಭವದ ಲೇಖನದಿಂದ ಪ್ರಬಾವಿತನಾಗಿ ತ್ಯಜಿಸಿದ್ದಾಗಿ ತಿಳಿಸಿದ್ದಾರೆ.
  ಅನೇಕರು ನನ್ನ ಅನುಭವ ಕೇಳಿ ಪ್ರಾರಂಬಿಸಿದ್ದಾಗಿ ತಿಳಿಸಿದ್ದಾರೆ ಅವರಿಗೆಲ್ಲ ಶಿವರಾತ್ರಿ ಶುಭ ಹಾರೈಕೆಯೊಂದಿಗೆ ನನ್ನ ಆಪ್ತ ಸಲಹೆ ನಿಮ್ಮ ದೇಹದ ತೂಕ ಇಳಿಸುವ ಆಂದೋಲನಕ್ಕೆ ಕ್ಷಿಪ್ರ ಕಾಲ ಮಿತಿ ಹಾಕಬೇಡಿ, ಒ0ದೆರೆಡು ವರ್ಷದಿಂದ ಜೀವನ ಪರ್ಯಂತ ನಿಮ್ಮ ಈ ಸಾದನೆ ಮುಂದುವರಿಯಲಿ ಆರೋಗ್ಯವಂತ ಜೀವನ ನಿಮ್ಮದಾಗಲಿ🙏🙏🙏

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...