Skip to main content

ನನ್ನ ಬಾಲ್ಯದ ಚೆಸ್ ಮಾಸ್ಟರ್ ಪೆಲಿಸಣ್ಣನಿಗೆ ಈಗ 70 ವರ್ಷ

#ನನಗೆ_ಚೆಸ್_ಕಲಿಸಿದ_ಗುರು_ಇವತ್ತು_ಸಿಕ್ಕರು.

#ಇವರ_ಹೆಸರು_ಪೆಲಿಕ್ಸ್_ಡಿಸೋಜ 

#ನಾವೆಲ್ಲ_ಪ್ರೀತಿಯಿಂದ_ಇವರನ್ನು_ಕರೆಯುವುದು_ಪೆಲಿಸಣ್ಣ_ಊರವರ_ಬಾಯಲ್ಲಿ_ಪೆಲಿಸ.

 ಇವರ ತಂದೆ ಪೇದ್ರಣ್ಣ ಕರಾವಳಿಯ ಬೈಂದೂರಿನಿಂದ ಪತ್ನಿ ಸಂತಾನ ಬಾಯಮ್ಮರ ಜೊತೆ ಸುಮಾರು1930ರ ಆಸುಪಾಸಿನಲ್ಲಿ ಆನಂದಪುರಂನಲ್ಲಿ ಸಿಗುತ್ತಿದ್ದ ಜಂಬಿಟ್ಟಿಗೆ ಕಲ್ಲು ಕೀಳಲು ಬಂದ ಕುಟುಂಬ.
  ಆಗ ಚರ್ಚ್ ಕೂಡ ಆಗಿರಲಿಲ್ಲ, ಕೊಂಕಣಿ ಬಾಷೆಯ ಕೆಲ ಕ್ರಿಶ್ಚಿಯನ್ ಕುಟುಂಬಗಳು ಹೀಗೆ ಇಲ್ಲಿಗೆ ವಲಸೆ ಬಂದು ನಿಂತರು.
  ಪೇದ್ರಣ್ಣ ಜಂಬಿಟ್ಟಿಗೆ ಕಡಿದು ಮಾರಾಟ ಮಾಡಿ ಜೀವನಕ್ಕೆ ಸಂಪಾದನೆ ಮಾಡಿದರೆ ಇವರ ಪತ್ನಿ ಸಂತಾನ ಬಾಯಮ್ಮ ಆನಂದಪುರಂನಲ್ಲಿ ಈಗಿನ ಪ್ರಭು ಡಾಕ್ಟರ್ ಶಾಪಿನ ಎದುರಿನ ದೋಸೆ ಕಾಮತ್ ಹೋಟೆಲ್ ಪಕ್ಕ, ಸಿರಿಲಣ್ಣರ ಸೈಕಲ್ ಶಾಪ್ ಎದರು ತರಕಾರಿಗಳನ್ನು ಬುಟ್ಟಿಯಲ್ಲಿಟ್ಟು ಮಾರಾಟ ಮಾಡಿ ಕೊಂಡಿದ್ದರು ಇದು ಆನಂದಪುರಂನ ಮೊದಲ ತರಕಾರಿ ಅಂಗಡಿ ಕೂಡ ಜೊತೆಯಲ್ಲಿ ಸುತ್ತಮುತ್ತಲ ಹಳ್ಳಿಗಳ  ರೈತ ಕುಟುಂಬಕ್ಕೆ ಕುಮಟಾದಿಂದ ಬುಧವಾರ ವೀಳ್ಯದ ಎಲೆ ತರಿಸಿ ವರ್ತನೆ ಎಲೆ ಮಾರಾಟ ಮಾಡುತ್ತಿದ್ದರು ಅಂದರೆ ವರ್ಷಪೂರ್ತಿ ವಾರಕ್ಕೆ ಒಂದೋ ಎರಡೋ ಕಟ್ಟು ವೀಳ್ಯದ ಎಲೆ ನಿರಂತರ ಪೂರೈಸಿ ಸುಗ್ಗಿಯಲ್ಲಿ ಈ ವೀಳ್ಯದ ಎಲೆಯ ಮೌಲ್ಯದ ಭತ್ತ ಪಡೆಯುವುದು ಆ ಕಾಲದ ಕ್ರಮ.
  ಪೇದ್ರಣ್ಣ ಮತ್ತು ಸಂತಾನ ಬಾಯಮ್ಮರಿಗೆ ನಾಲ್ಕು ಗಂಡು ಮಕ್ಕಳು. ಸವೇರ (ಸಲಾದರ್ ಡಿಸೋಜ) ಪಾರೇಸ್ಟ್ ರ್ ಆಗಿ ನಿವೃತ್ತರಾಗಿದ್ದಾರೆ, ಎರಡನೆಯವರೆ ಪೆಲಿಸ, ಮೂರನೆ ಡೆನ್ನಿಸಾ (ಡೇನಿಯಲ್ ಡಿಸೋಜ) ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ,ನಾಲ್ಕನೆ ವಿಲ್ಲಾ (ವಿಲ್ಪ್ರೆಡ್) ಖಾಸಾಗಿ ಕೆಲಸ ಮಾಡಿಕೊಂಡಿದ್ದಾರೆ.
  ನಮ್ಮ ಬಾಲ್ಯದಲ್ಲಿ ಈ ಪೆಲಿಸ ಎಲ್ಲರನ್ನು ರಂಜಿಸುವ ಅತ್ಯಾಪ್ತ ಮತ್ತು ಇಡೀ ಊರಿಗೆ ಸಮಸ್ಯೆ ತರುತ್ತಿದ್ದ ಕಿಲಾಡಿ ಆ ಕಾಲದಲ್ಲಿ ಬಾಡಿಗೆ ಸೈಕಲ್ ನಲ್ಲಿ ಪಕ್ಕದ ತಾಲ್ಲೂಕಿನ ಬಟ್ಟೆಮಲ್ಲಪ್ಪ ಎಂಬ ಊರಲ್ಲಿ ಇಸ್ಪೀಟ್ ಆಡಲು ಹೋಗಿ ಹಣ ಕಳೆದು ಕೊಂಡು ಬಾಡಿಗೆ ಸೈಕಲ್ ಅಡಮಾನ ಮಾಡಿ ಕೆಲ ತಿಂಗಳು ನಾಪತ್ತೆ ಆದಾಗ ಈ ಸೈಕಲ್ ಪತ್ತೆ ಮಾಡಿ ತರುವಲ್ಲಿ ಎರೆಡೂ ಊರಿಗೇ ಜಗಳ ಹೊಡೆದಾಟ ಆಗಿತ್ತು.
 ದೂರದ ಎನ್.ಆರ್.ಪುರದ ಸುರೇಂದ್ರ ರೇ೦ಜರ್ ಇವರಿಗೆಲ್ಲ ಉದ್ಯೋಗ ಕೊಟ್ಟಿದ್ದರು ಅವರ ಆಪ್ತನಾಗಿ ಅವರಿಗೆ ಅಡಿಗೆ ಇತ್ಯಾದಿ ಮಾಡುತ್ತ ಪೆಲಿಸ ಆಪ್ತನಾಗಿದ್ದ.
  ಅವರಿಗೆ ಚೆಸ್ ಆಟದಲ್ಲಿ ಪೆಲಿಸನೇ ಒಳ್ಳೇ ಕಂಪನಿ ಏಕೆಂದರೆ ಚೆಸ್ ನಲ್ಲಿ ಪೆಲಿಸನಿಗೆ ಸೋಲಿಸಿದವರಿಲ್ಲ.
  1975-76 ರಲ್ಲಿ ನಮಗೆಲ್ಲ ಚೆಸ್ ಕಲಿಯುವ ಹುಮ್ಮಸ್ಸು ನಮ್ಮ ತಂದೆ ಶಿವಮೊಗ್ಗದಿಂದ ಚೆಸ್ ಬೋರ್ಡ್ ಮತ್ತು ಪಾನ್ ನಮಗಾಗಿ ಖರೀದಿಸಿ ಈ ಪೆಲಿಸನಿಗೆ ಚೆಸ್ ಕಲಿಸುವ ಗುರುವಾಗಿ ನೇಮಿಸಿದರು ಜೊತೆಗೆ ಅವರೂ ಕಲಿತರು ನಂತರ ಕೆಲ ವರ್ಷ ನಾವೆಲ್ಲ ಚೆಸ್ ಆಟಗಾರರಾಗಿ ಅನೇಕ ಹೊಸ ಚೆಸ್ ಬೋರ್ಡ್ ಖರೀದಿಸಿದರೂ ಈ ಚೆಸ್ ಗುರು ಪೆಲಿಸನನ್ನ ಸೋಲಿಸಲು ಪ್ರಯಾಸ ಪಡುತ್ತಿದ್ದೆವು.
  ರೇಂಜರ್ ಸುರೇಂದ್ರರರ ಜೊತೆ ಇದ್ದಿದ್ದರೆ ಅರಣ್ಯ ಇಲಾಖೆಯಲ್ಲಿ ಖಾಯಂ ಉದ್ಯೋಗಿ ಆಗುವ ಅವಕಾಶ ಬಿಟ್ಟು ಪೆಲಿಸ ಪಕ್ಕದ ಸಿದ್ಧಾಪುರದಲ್ಲಿ ಪ್ರೇಮ ಪ್ರಕರಣದಲ್ಲಿ ಸಿಲುಕಿ ವಿವಾಹ ಆಗಿ ಜೀವನಕ್ಕೆ ಗಾರೆ ಮೇಸ್ತ್ರಿ ಆದದ್ದು, ಕುಡಿತ ಜಾಸ್ತಿ ಮಾಡಿಕೊಂಡಿದ್ದು ನಮಗೆಲ್ಲ ಬೇಸರ ಆದರೂ ಪೆಲಿಸನ ಒಡನಾಟದಲ್ಲಿ ಹಾಸ್ಯಮಯವಾಗಿ ಪರಿವರ್ತನೆ ಆಗುತ್ತಿದ್ದ ಸನ್ನಿವೇಶದಿಂದ ನಮಗೆಲ್ಲ ಪೆಲಿಸ ಅತ್ಯಾಪ್ತ.
  ಅತ್ಯಂತ ರುಚಿಕಟ್ಟಾದ ಅಡುಗೆ ಪ್ರವೀಣ ಕೂಡ ಹೌದು, ನಮ್ಮ ತಾಯಿ ಬಾಲ್ಯದಲ್ಲೇ ತೀರಿಕೊಂಡಿದ್ದರಿಂದ ನಾವೇ ಅಡುಗೆ ಮಾಡಿಕೊಳ್ಳಬೇಕಾದ್ದರಿಂದ ಅನೇಕ ಅಡುಗೆ ಕಲೆ ಕೂಡ ಪೆಲಿಸನಿಂದ ಕಲಿತಿದ್ದೆ.
 ಏನೇ ಮಾಡಿದರೂ ಪೋಟೋ ತೆಗೆಯಲು ಸಿಗುತ್ತಿರಲಿಲ್ಲ ಇವತ್ತು ನಮ್ಮ ಚೆಸ್ ಮಾಸ್ಟರ್ ಸಿಕ್ಕಿದ್ದಾರೆ ನೋಡಿ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ