Skip to main content

ಗೇರು ಹಣ್ಣಿನ ಸ್ಟಾದ ಉತ್ಕೃಷ್ಟ ಇದಕ್ಕೆ ಮೂಳೆ ಸವಿತ ತಡೆಯುವ ಶಕ್ತಿ ಇದೆ ವಿಟಮಿನ್ ರಿಚ್ ಇರುವ ಗೇರು ಹಣ್ಣು ಹೆಚ್ಚು ಹೆಚ್ಚು ತಿನ್ನಬಹುದು

#ಮರೆಯಲಾರದ_ಗೇರುಹಣ್ಣು

#ಗೇರುಹಣ್ಣು_ಎಷ್ಟಾದರು_ತಿನ್ನಿ_ಸ್ಟಾದಿಷ್ಟ_ಆರೋಗ್ಯವರ್ಧಕ
#ಮೂಳೆ_ಸವಕಳಿ_ತಡೆಯುವ_ಶಕ್ತಿ_ಗೇರುಹಣ್ಣಿಗಿದೆ.

#ಗೇರುಹಣ್ಣಿನಿಂದ_ಸಂಪ್ರದಾಯಿಕ_ಪೆನ್ನಿ_ಎಂಬ_ಮದ್ಯ_ಗೋವಾದಲ್ಲಿ_ಪ್ರಸಿದ್ಧಿ

#ಹದಿನಾರನೇ_ಶತಮಾನದಲ್ಲಿ_ಪೋರ್ಚುಗೀಸರು_ಗೋವಾ_ಕರಾವಳಿ_ಭಾಗದಲ್ಲಿ_ಭೂಸವಕಳಿ_ತಡೆಯಲು_ತಂದ_ಗೇರು,

  ಬಾಲ್ಯದಲ್ಲಿ ಗೇರುಮರಗಳನ್ನು ಹುಡುಕಿಕೊಂಡು ಹೋಗಿ ವಿವಿಧ ಬಣ್ಣದ ಗಾತ್ರದ ರುಚಿಯ ಗೇರು ಹಣ್ಣು ತಿನ್ನುತ್ತಿದ್ದ ನೆನಪು ಮರೆಯಲು ಸಾಧ್ಯವೇ ಇಲ್ಲ.
  ಆಗೆಲ್ಲ ಗೇರು ಬೀಜ ಸಂಸ್ಕರಣೆ ಮಾರಾಟ ಈಗಿನ ರೀತಿ ಹೈಟೆಕ್ ಆಗಿರಲಿಲ್ಲ ಆದ್ದರಿಂದ ಗೇರು ಬೀಜಕ್ಕೆ ಅಂತಹ ಬೆಲೆ ಇರಲಿಲ್ಲ.
  ಆಗೆಲ್ಲ ಗೇರು ಮರದ ಮಾಲಿಕರು ಮಕ್ಕಳಿಗೆ ತಿನ್ನುವಷ್ಟು ಗೇರು ಹಣ್ಣು ಕಿತ್ತು ತಿನ್ನಿ ಆದರೆ ಗೇರು ಬೀಜ ಮಾತ್ರ ಒಯ್ಯುವಂತಿಲ್ಲ ಎಂಬ ಕರಾರು ಇತ್ತು ಮಕ್ಕಳಿಗೂ ಗೇರು ಬೀಜ ಯಾಕೆ ಬೇಕು? ತಿನ್ನಲು ಗೇರು ಹಣ್ಣು ಸಾಕು ಅನ್ನುವ ಸಂತೃಪ್ತಿ.
 ಗೇರು ಹಣ್ಣು ತಿನ್ನುವುದರಲ್ಲಿ ಕ್ರಮ ಇದೆ, ಗೇರು ಹಣ್ಣು ತೊಳೆದು ಅದರ ಮೇಲೆ ಉಪ್ಪು ಸಿಂಪಡಿಸಿ ಒಂದು ಗಂಟೆ ಬಿಡಬೇಕು ನಂತರ ಗೇರು ಹಣ್ಣಿನ ಮೇಲ್ಬಾಗ ಕತ್ತರಿಸಿ ತೆಗೆದು ಕೆಳಭಾಗ ತಿಂದರೆ ಮಾತ್ರ ಗೇರು ಹಣ್ಣು ಸ್ವಾದಿಷ್ಟ, ಗೇರು ಹಣ್ಣಿನ ಮೇಲ್ಬಾಗ ಗೇರಿನ ಸೊನೆಯ ಅಂಶದ ಕಟು ರುಚಿ ಇದು ಗೇರು ಹಣ್ಣಿನ ರುಚಿಯನ್ನು ಹಾಳು ಮಾಡುತ್ತದೆ.
    ಈಗೆಲ್ಲ ವೆಂಗರಲಾ ಎಂಬ ಹೊಸ ತಳಿ ಹೆಚ್ಚು ಗೇರು ಬೀಜ ಇಳುವರಿ ನೀಡುತ್ತದೆ ಅನ್ನುತ್ತಾರೆ ಮತ್ತು ಗೇರು ಬೀಜದ ಬೆಲೆ ಕೂಡ ಹೆಚ್ಚು ಆದ್ದರಿಂದ ಗೇರು ಕೃಷಿ ಗಾತ್ರ ಮಲೆನಾಡಿನಲ್ಲಿ ಹೆಚ್ಚಾಗುತ್ತಿದೆ.
   ನಾವು ಸುಮಾರು 5 ಎಕರೆ ದೇಶಿ ತಳಿಯ ಗೇರು ನಾಟಿ ಮಾಡಿ ಸುಮಾರು 20 ವರ್ಷ ಊರ ಮಕ್ಕಳಿಗೆ ಭರಪೂರ ಗೇರು ಹಣ್ಣಿನ ಸಮಾರಾಧನೆ ಮತ್ತು ಗೇರು ಬೀಜ ಅವರೇ ಕಿತ್ತು ಮಾರಿಕೊಂಡರು ಗೇರು ತೋಟದ ಮಾಲಿಕರಾದ ನಮಗೆ ವರ್ಷಕ್ಕೆ 5 ಎಕರೆಯಿಂದ 10 ಸಾವಿರವೂ ಆದಾಯ ಇಲ್ಲದಾಗ ಗೇರು ತೋಟ ತೆಗೆದು ರಬ್ಬರ್ ಹಾಕಬೇಕಾಯಿತು ಇದಕ್ಕೆ ಕಾರಣ ಒಂದು ಕಾಲದಲ್ಲಿ ಊರ ಹೊರಗಿದ್ದ ನಮ್ಮ ಗೇರು ತೋಟ ಊರು ಅಭಿವೃದ್ಧಿ ಆಗುತ್ತಾ ನಮ್ಮ ಗೇರು ತೋಟ ಊರ ಮಧ್ಯ ಬಂದಿದ್ದು.
  ಗೋವಾದಲ್ಲಿ ಗೇರು ಹಣ್ಣು ಪರ್ಮೆಂಟೀಷನ್ ಮಾಡಿ ಭಟ್ಟಿ ಇಳಿಸಿ ಉರಾಕ್ ಎಂಬ ಮೊದಲ ಹಂತದ ಮಧ್ಯ ತಯಾರಿಸುತ್ತಾರೆ ನಂತರ ಈ ಉರಾಕ್ ಪುನಃ ಭಟ್ಟಿ ಇಳಿಸಿ ಅಂತಿಮವಾಗಿ ಬರುವ ಪೆನ್ನಿಗೆ ತುಂಬಾ ಬೇಡಿಕೆ ಇದೆ.
  ಅಮೇರಿಕಾ ಮೂಲದ ಗೇರು 16ನೇ ಶತಮಾನದಲಿ ಪೋರ್ಚುಗೀಸರು ಗೋವಾ ಕರಾವಳಿಯಲ್ಲಿ ಮಣ್ಣಿನ ಸವಕಳಿ ತಡೆಯಲು ತಂದು ನಾಟಿ ಮಾಡಿದ ಈ ಗೇರು ದೇಶದಲ್ಲಿ ಹೆಚ್ಚು ಉದ್ಯೋಗ, ರಪ್ತುಗಳಿಗೆ ಕಾರಣ ಆಗಿದೆ.
  ಇವತ್ತು ಗೇರು ಹಣ್ಣು ತಿಂದಿದ್ದೇ ತಿಂದಿದ್ದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...