Skip to main content

ಕೋಕಂ ಸ್ಕೌಷ್ ಗೆ ತಂಪು ಸೋಡ ಬೆರೆಸಿದರೆ ಇದು ರಿಯಲ್ ಪ್ರೂಟ್ ದೇಶಿ ಕೋಕೋ ಕೋಲ ಆಗುತ್ತದೆ, ವಿಬಿನ್ನ ರುಚಿಗೆ ಬೇಕಾದರೆ ಉಪ್ಪು, ಕಾಳು ಮೆಣಸಿನ ಪುಡಿ ಸೇರಿಸಬಹುದು ಇದು ದೇಹಕ್ಕೆ ಮತ್ತು ದಾಹಕ್ಕೆ ಪರ್ಪೆಕ್ಟ್ ಡ್ರಿಂಕ್ಸ್ ಒಮ್ಮೆ ಪ್ರಯತ್ನಿಸಿ

#ಕೋಕಂ_ಸ್ಕೌಷ್.

#ಇದರ_ಜೊತೆ_ತಣ್ಣನೆಯ_ಸೋಡ_ಬೆರೆಸಿದರೆ_ಇದರಂತ_ಕೋಕಾಕೋಲಾ_ಬೇರೆ_ಇಲ್ಲ

#ಆರೋಗ್ಯಕರವಾದ_ಪುನರ್ಪುಳಿ_ಹಣ್ಣು_ದಾಹಕ್ಕೆ_ದೇಹಕ್ಕೆ_ಪರ್ಪೆಕ್ಟ್_ಡ್ರಿಂಕ್ಸ್ .

  ಕೋಕಂ ಹೆಸರಿನ ಪುನರ್ಪುಳಿ ಹಣ್ಣು ಪಶ್ಚಿಮ ಘಟ್ಟದಲಿ ಸಿಗುವ ಬಹುಪಯೋಗಿ ಹಣ್ಣು, ಇದರಿಂದ ಹಣ್ಣಿನ ರಸ, ಹುಳಿ ಅಲ್ಲದೆ ಇದರ ಬೀಜದಿಂದ ತುಪ್ಪ ಕೂಡ ಮಾಡುತ್ತಾರೆ.
  ಇದರಿಂದ ಸಂಸ್ಕರಿಸಿ ಪೌಡರ್ ಮಾಡಿ (Garcenia) ಇದನ್ನು ಸ್ಥೂಲಕಾಯ ನಿವಾರಿಸಲು ವಿದೇಶದಲ್ಲಿ ಬಳಸುತ್ತಾರೆ, ನಮ್ಮ ದೇಶದ ಡಯಟ್ ಮ್ಯಾಕ್ಡೋವೆಲ್ ವಿಸ್ಕಿಯಲ್ಲಿ ಇದನ್ನು ಮಿಶ್ರ ಮಾಡುತ್ತಿದ್ದಾರೆ.
 ಕೋಕಂ ಸೇವನೆಯಿಂದ ಹೃದಯಕ್ಕೆ ಶಕ್ತಿ ನೀಡುತ್ತದೆ, ಚರ್ಮ ಸುಕ್ಕುಗಟ್ಟುವುದಿಲ್ಲ, ಕ್ಯಾನ್ಸರ್ ತಡೆಯುತ್ತದ, ಸಕ್ಕರೆ ಕಾಯಿಲೆ ನಿಯಂತ್ರಣ ಮಾಡುತ್ತದೆ, ಆಂಕ್ಸಿಟಿ ಮತ್ತು ಡಿಪ್ರೆಶನ್ ನಿವಾರಿಸುತ್ತದೆ.
  ಮೊನ್ನೆ ಶೃಂಗೇರಿಗೆ ಹೋಗಿದ್ದ ಮಗಳು ಅಳಿಯ ನನಗಾಗಿ ಶೃಂಗೇರಿಯ  ಭಾರತೀ ಸ್ಟ್ರೀಟ್ ನ ಸ್ಥಳಿಯ ಸಿಂಹಾಸ್‌  ಸ್ಪೈಸಸ್ & ಹರ್ಬಲ್     ತಯಾರಿಸಿದ ಅತ್ಯುತ್ತಮವಾದ ಕೋಕಂ ಸ್ಕೌಷ್ ತಂದುಕೊಟ್ಟಿದ್ದರು ಇದು ಕೃತಕ ಬಣ್ಣ ಮತ್ತು ಪ್ಲೇವರ್ ಬಳಸದ ತಾಜಾ ಹಣ್ಣಿನ ರಸ ಮತ್ತು ಸಕ್ಕರೆ ಪಾಕದ ಮಿಶ್ರಣವಾದ್ದರಿಂದ ಪ್ರಿಸರ್ವೇಟಿವ್ ಕೂಡ ಬಳಸಿಲ್ಲ.
  ಬಿರು ಬೇಸಿಗೆಗೆ ಕೋಕೋ ಕೋಲಾ ಇತ್ಯಾದಿಗೆ ಮೊರೆ ಹೋಗುವ ನಾವುಗಳು ಯಾಕೆ ನಮ್ಮ ಸ್ಪದೇಶಿ ಹಣ್ಣಿನ ರಸ ಬಳಸ ಬಾರದು (Real fruit juice).
  ನಾನು ಈ ಕೋಕಂ ಸ್ಕೌಷ್ ನಿಂದ ಅನೇಕ ರೀತಿ ಜ್ಯೂಸ್ ಮಾಡಿ ರುಚಿ ನೋಡಿದೆ ಇದರಲ್ಲಿ ಒಂದು ಗ್ಲಾಸ್ ಗೆ ಎರೆಡು ಟೀ ಚಮಚ ಕೋಕಂ ಸ್ಕೌಷ್ ಹಾಕಿ ತಂಪು ಸೋಡ ಬೆರೆಸಿ ಕುಡಿದಾಗ ವಿದೇಶಿ ಕೃತಕ ಪಾನಿಯ ಕೋಕೋ ಕೋಲಾಗಿಂತ ಸಾವಿರ ಪಟ್ಟು ರುಚಿ - ಸ್ವಾದ ಮತ್ತು ಅನುಭವ ನೀಡಿತು.
  ಇದಕ್ಕೆ ಸ್ವಲ್ಪ ಐಸ್, ಕಾಲು ಚಮಚ ಉಪ್ಪು ಅಥವ ಕಾಲು ಚಮಚ ಕಾಳು ಮೆಣಸಿನ ಪುಡಿ ಹೀಗೆ ತರಹಾವಾರಿ ನಿಮ್ಮದೇ  ಹೊಸ ರೆಸಿಪಿಯೂ ಮಾಡಿ ನೋಡಿ.
  ನಾನು 5 ಬಾಟಲ್ ಗೆ ಅವರಿಗೆ ಆರ್ಡರ್ ಮಾಡಿದ್ದೇನೆ, ಅವರ ವಿಳಾಸ ಚಿತ್ರದಲ್ಲಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...