Skip to main content

ಸೊರಬದಲ್ಲಿ ಬಂಗಾರಪ್ಪ ಮತ್ತು ಸಾಗರದಲ್ಲಿ ಕಾಗೋಡು ಗೆಲ್ಲಲಿ ಎಂಬ ಆಹಮದ್ ಅಲೀ ಖಾನ್ ಸಾಹೇಬರ ಚುನಾವಣಾ ತಂತ್ರಗಾರಿಕೆ ತಡೆದ ಮತ ವಿಭಜನೆ

#ಚುನಾವಣೆಯಲ್ಲಿ_ಕೆಲವು_ವಿಚಾರ_ತೆಗೆದುಕೊಳ್ಳುವ_ತಿರುವು.

#ಸಾಗರ_ವಿದಾನಸಭಾ_ಕ್ಷೇತ್ರದಲ್ಲಿ_ಬಂಗಾರಪ್ಪ_ಸೋಲಿಸಲು_ಕಾಗೋಡು_ಗೆಲ್ಲಲು_ಕಾರಣವಾದ_ವಿಚಾರ

#ಬಂಗಾರಪ್ಪರ_ಮತ_ವಿಭಜನೆ_ವಿಪಲವಾದ_ಖಾನ್_ಸಾಹೇಬರ_ತಂತ್ರ.

ನಿನ್ನೆ ನಾಡಿನ ಖ್ಯಾತ ಅಂಕಣಗಾರರು ಪತ್ರಕರ್ತರೂ ಆದ ನಮ್ಮ ಸಾಗರದವರೆ ಆದ #ಆರ್_ಟಿ_ವಿಠಲಮೂರ್ತಿ ಬರೆದ  ಬಾಗಲಕೋಟೆಯಲ್ಲಿ ರಾಮಕೃಷ್ಣ ಹೆಗಡೆ ಸಿದ್ದುನ್ಯಾಮಗೌಡರ ಎದರು ಸೋಲಲು ಕಾರಣವಾದ "ನಮ್ಮ ನೀರು ಕುಡಿಯದವರಿಗೆ ನಮ್ಮ ಓಟು ಯಾಕೆ " ಎಂಬ ಡಯಲಾಗು ಕಾರಣವಾದದ್ದು ಬರೆದಿದ್ದರು ಇದು ನಡೆದ ಸಂದರ್ಭ ಪ್ರಚಾರ ಸಭೆಯಲ್ಲಿ ಗಂಟಲು ನೋವಿಂದ ಬಳಲುತ್ತಿದ್ದ ಹೆಗಡೆ ಯವರು ನೀರಿಗಾಗಿ ಕೈ ಸನ್ನೆ ಮಾಡಿದಾಗ ಸ್ಥಳಿಯ ಕಾರ್ಯಕರ್ತ ತಂದ ತಣ್ಣನೆ ನೀರು ನಿರಾಕರಿಸಿ ತನ್ನ ಆಪ್ತನಿಂದ ಬಿಸಿ ನೀರು ಪಡೆದು ಕುಡಿದದ್ದು ಇಷ್ಟೆಲ್ಲ ಅವಾಂತರಕ್ಕೆ ಕಾರಣ ಆಯಿತು ಅಂತ ಇದನ್ನು ಓದಿದಾಗ ಸಾಗರ ವಿದಾನ ಸಭಾ ಕ್ಷೇತ್ರದಲ್ಲಿ ಕಾಗೋಡು ಮತ್ತು ಬಂಗಾರಪ್ಪ ಪರಸ್ಪರ ಸ್ಪರ್ದಿಸಿದಾಗ ಖಾನ್ ಸಾಹೇಬರ ಚಾಣಕ್ಯದಿಂದ ಮತ ವಿಭಜನೆಯ ಬಂಗಾರಪ್ಪರ ಯೋಜನೆ ಕಾರ್ಯಗತ ಆಗದೆ ಕಾಗೋಡು ಗೆದ್ದ ಸಂದರ್ಭ ನೆನಪಾಗಿ ಇಲ್ಲಿ ಬರೆಯುವಂತಾಯಿತು.
  #ಕಾಗೋಡು_ಬಂಗಾರಪ್ಪರ_ನೇರ_ಸ್ಪರ್ಧೆ
  ಒಮ್ಮೆ ಬಂಗಾರಪ್ಪ ಸೊರಬ ಮತ್ತು ಸಾಗರ ಎರೆಡೂ ಕ್ಷೇತ್ರದಿಂದ ಸ್ಪರ್ಧೆ ಮಾಡಿದಾಗ ಸಾಗರ ವಿದಾನ ಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕಾಗೋಡು ಸೋಲುತ್ತಾರೆಂಬ ಭಯ ಉಂಟಾಗಿತ್ತು.
   ಬ್ರಾಹ್ಮಣ, ಲಿಂಗಾಯಿತ ಮುಖಂಡರು ಕಾಗೋಡರನ್ನು ಸೋಲಿಸಬೇಕೆಂದರೆ ಬಂಗಾರಪ್ಪನವರು ಸಾಗರದಲ್ಲಿ ಸ್ಪರ್ದಿಸಬೇಕು ಮೇಲ್ವರ್ಗದ ಮತಗಳು ಕ್ರೋಡಿಕರಣ ಆಗಿದೆ ಇನ್ನು ದೀವರ ಮತ ವಿಭಜನೆ ಆದರೆ ಕಾಗೋಡು ಸೋಲು ಗ್ಯಾರಂಟಿ ಎಂದು ಬಂಗಾರಪ್ಪರನ್ನು ಒಪ್ಪಿಸುತ್ತಾರೆ.
  ಸೊರಬ ಮತ್ತು ಸಾಗರ ಎರೆಡೂ ಕ್ಷೇತ್ರದಲ್ಲಿ ಸ್ಪರ್ದಿಸಿದ ಬಂಗಾರಪ್ಪ ಇಡೀ ರಾಜ್ಯದಾದ್ಯಂತ ಮಿಂಚಿನ ಚುನಾವಣಾ ಪ್ರಚಾರ ಕೈಗೊಂಡಿದ್ದರಾದ್ದರಿಂದ ಸೊರಬದಲ್ಲಿ ಪ್ರಚಾರಕ್ಕೆ ಹೋಗಲೇ ಇಲ್ಲ ಅಲ್ಲಿ ಅವರ ನೀಲಿ ಕಣ್ಣಿನ ಹುಡುಗ ಶಿವಾನಂದಪ್ಪ ಸಂಪೂರ್ಣ ಜವಾಬ್ದಾರಿ ವಹಿಸಿ ಗೆಲ್ಲಿಸಿದ್ದರು ಆದರೆ ಸಾಗರದಲ್ಲಿ ಅವರ ಅಭಿಮಾನಿಗಳ ಒತ್ತಾಯಕ್ಕಾಗಿ ಗಾಂಧೀ ಮೈದಾನದಲ್ಲಿ ಒಂದು ಕಿಕ್ಕಿರಿದ ಬೃಹತ್ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯಲ್ಲಿ 23 ನಿಮಿಷ ಭಾಷಣ ಮಾಡಿದ್ದರು.
   ಬಂಗಾರಪ್ಪ ಮತ್ತು ಕಾಗೋಡರ ಸ್ಟಜಾತಿ ದೀವರು ಇತ್ತಲಾಗೆ ಕಾಗೋಡು ಬೇಕು ಅತ್ತಲಾಗೆ ಬಂಗಾರಪ್ಪರ ಬಿಡುವಂತಿಲ್ಲ ಅಂತ ಸಂದಿಗ್ದದಲ್ಲಿದ್ದರು, ಬ್ರಾಹ್ಮಣ ಮತ್ತು ಲಿಂಗಾಯಿತರ ಜುಗಲ್ ಬಂದಿ ಕಾಗೋಡರ ಸೋಲಿಸಲು ಪಣ ತೊಟ್ಟಿದ್ದರಿಂದ ಮತ್ತು ಈ ಎರೆಡು ಮೇಲ್ವರ್ಗದ ಪ್ರಭಾವದಲ್ಲಿರುವ ಇತರೆ ಹಿಂದುಳಿದ ಮತ್ತು ದಲಿತ ಓಟುಗಳು ಬಂಗಾರಪ್ಪರಿಗೆ ಖಚಿತ ಎಂಬ ಗ್ರೌಂಡ್ ರಿಪೋರ್ಟ್ ಆಗಿತ್ತು.
   ಅವರ ಮತಗಳು ವಿಭಜನೆ 100 ಕ್ಕೆ 100 ಶತಸಿದ್ಧ ಎಂಬ ಮಾತುಗಳು ಪೇಟೆ ಪ್ರದೇಶದಲ್ಲಿ ಚಲಾವಣೆ ಇದ್ದಿದ್ದರಿಂದ ಕಾಗೋಡರ ಸೋಲು ಖಚಿತ ಎಂಬ ಗಾಳಿಸುದ್ದಿ ಜೋರಾಗಿತ್ತು.
  ಈ ಸಂದರ್ಭದಲ್ಲೇ ಕಾಂಗ್ರೇಸ್ ರಾಜಕಾರಣದ ಚಾಣಕ್ಯರೇ ಆಗಿದ್ದ  ಸಾಗರದ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾಗಿದ್ದ ಆಹಮದ್ ಅಲೀ ಖಾನ್ ಸಾಹೇಬರು ಒ೦ದು ತಂತ್ರ ಮಾಡಿದರು. ಅದು ಚುನಾವಣಾ ಪಲಿತಾಂಶದ ಮೇಲೆ ಇಷ್ಟು ಪರಿಣಾಮ ಬೀರುತ್ತೆ ಅಂತ ನಾವು ನಂಬಿರಲಿಲ್ಲ.
  ಖಾನ್ ಸಾಹೇಬರು ಆಪ್ತ ಮುಖಂಡರನ್ನು ಮಾತ್ರ ರಹಸ್ಯವಾಗಿ ಅವರ ಮನೇನಲ್ಲಿ ಕರೆದಿದ್ದರು ಅಲ್ಲಿ ಈ ಡಯಲಾಗ್ಗೆ ಹೆಚ್ಚು ಒತ್ತು ನೀಡಬೇಕಾಗಿ, ಯಾವ ಕಾರಣಕ್ಕೂ ಬಂಗಾರಪ್ಪರನ್ನು ತೆಗಳುವ ಮಾತು ನಿಮ್ಮ ಬಾಯಲ್ಲಿ ಬರಬಾರದು ಎಂಬ ಕಟ್ಟಪ್ಪಣೆ ಮಾಡಿದ್ದರು.
  ಕಾಗೋಡು ಸ್ವತಃ ಇದನ್ನು ಹೇಳಲು ಸಾಧ್ಯವಿಲ್ಲ ನಾವು ನಾವೇ ಸೇರಿ ಇದನ್ನು ಜನರ ತಲೆಯಲ್ಲಿ ಹುಳ ಬಿಡಬೇಕು ಅಂತ ಅವರದ್ದೆ ಆದ ವೈಕರಿಯಲ್ಲಿ ವಿವರಿಸಿದ್ದರು.
   ಆಗಿನ ಪ್ರಚಾರ ಕಾಯ೯ದ ಮುಂಚೂಣಿಯಲ್ಲಿದ್ದ ಬೀಮನೇರಿ, ತೀನಾ ಮತ್ತು ನಾವೆಲ್ಲ ಈ ಡಯಲಾಗ್ ಶುರು ಮಾಡಿದೆವು ಅದೇನೆಂದರೆ "ಸೊರಬದಲ್ಲಿ ಬಂಗಾರಪ್ಪ ಗೆದ್ದೇ ಗೆಲ್ಲುತ್ತಾರೆ ಸಾಗರದಲ್ಲಿ ಕಾಗೋಡು ಗೆಲ್ಲಲಿ ನಿಮ್ಮ ಜಾತಿಯ ಇಬ್ಬರನ್ನು ಗೆಲ್ಲಿಸುವ ಅವಕಾಶ " ಅಂತೆಲ್ಲ ಬಂಗಾರಪ್ಪರ ತೆಗಳದ ಈ ಡಯಲಾಗ್ ಪರಿಣಾಮಕಾರಿ ಆಗಿತ್ತು ಮತ್ತು ಕಾಗೋಡು ಗೆದ್ದರು.
  ಆಹಮದ್ ಅಲೀ ಖಾನರ ಚಾಣಕ್ಯತನಕ್ಕೆ ಇದು ಒಂದು ಉದಾಹರಣೆ
   23 ನಿಮಿಷ ಕ್ಷೇತ್ರದಲ್ಲಿ ಭಾಷಣ ಮಾಡಿದೆ 23 ಸಾವಿರ ಮತ ಬಂತು ಕಾಲಾವಕಾಶ ಇದ್ದಿದ್ದರೆ ಸೋಲಿಸಿ ಬಿಡುತ್ತಿದ್ದೆ ಎಂಬ ಸಮಾದಾನದ ಮಾತು ಬಂಗಾರಪ್ಪ ಸಾಗರದಲ್ಲಿ ಸೋತ ನಂತರ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಆಡಿದರು.
   ನಂತರ ಮುಖ್ಯಮಂತ್ರಿ ಸ್ಥಾನ ಬಿಟ್ಟ ನಂತರ ಶಿವಮೊಗ್ಗ ಲೋಕಸಬೆಗೆ ಪಕ್ಷೇತರರಾಗಿ ಸ್ಪರ್ದಿಸಿ ಗೆದ್ದ ನಂತರ ನಾವೆಲ್ಲ ಅವರ ಜೊತೆ ಸೇರಿ ಅಭಿನಂದನಾ ಸಭೆಗಾಗಿ ತುಮರಿ ಭಾಗಕ್ಕೆ ಹೋಗುವಾಗ ಬಂಗಾರಪ್ಪರ ಕಾರಿನಲ್ಲಿ ನಾನು ಮತ್ತು ಆ ಭಾಗದ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಜಿ.ಕೃಷ್ಣಮೂರ್ತಿ ಇದ್ದೆವು ಆಗ ಈ ವಿಚಾರ ಬಂಗಾರಪ್ಪನವರ ಹತ್ತಿರ ಕಾರಿನಲ್ಲಿ ಉಲ್ಲೇಖಿಸಿದಾಗ ಅವರು ಹೇಳಿದ್ದು ಹೌದು ಇದರಿಂದ ದೀವರ ಜಾತಿ ಮತ ಒಡೆಯಲಿಲ್ಲ, ಮತ ವಿಭಜನೆ ಆಗುತ್ತೆ ಅಂತಲೇ ಇತರ ಜಾತಿ ಮತ 23 ಸಾವಿರ ಬಂದಿದ್ದು ಅಂದಿದ್ದರು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...