Skip to main content

ಕೇಶವಪುರದ ದಸ್ತಗೀರ್ ಸಾಬರು, ಹಲ್ಲೇ ಕಟ್ಟೊ ಸಾಬರು ಎಂಬ ಅನ್ವರ್ಥನಾಮದ ನನ್ನ ಅತ್ಯಾಪ್ತ ಗೆಳೆಯರು 2011ರ ನನ್ನ ಎತ್ತಿನಗಾಡಿ ಯಾತ್ರೆ ಯಶಸ್ವಿಗೆ ಕಾರಣಕರ್ತರು.

#ಕೇಶವಪುರದ_ದಸ್ತಗೀರು_ಸಾಬರು

#ಇವರನ್ನು_ಎತ್ತಿನ_ಹಲ್ಲೇ_ಕಟ್ಟೋ_ಸಾಬರೆಂತಲೆ_ಜನ_ಕರೆಯುವುದು.

#ಈಬಾಗದ_ಜನರ_ವಿಶ್ವಾಸ_ಪ್ರೀತಿಗಳಿಸಿದ_ಸಾಹೇಬರು

#ನನ್ನ_2011ರ_ಎತ್ತಿನಗಾಡಿ_ಯಾತ್ರೆಗೆ_ಇವರ_ಸಹಾಯ_ಮರೆಯಲುಂಟೆ?

  2014 ರಿಂದ ಸಾರ್ವಜನಿಕ ಜೀವನದಿಂದ ವಿಮುಕ್ತನಾದ ಮೇಲೆ ಆವರೆಗಿನ ಅನೇಕ ರಾಜಕಾರಣದ ಗೆಳೆಯರ ಸಂಪರ್ಕವೇ ಇಲ್ಲವಾಗಿದೆ.
  ಕೇಶವಪುರದ ಮೂಲ ಹೆಸರು ದರೋಡೆಕಾನು ಈ ಹೆಸರು ಬರಲು ಹೊಸನಗರ ಮತ್ತು ಬಟ್ಟೆಮಲ್ಲಪ್ಪದ ರಸ್ತೆ ದಟ್ಟ ಕಾಡಿನ ಮಧ್ಯದಲ್ಲಿ ಶರಾವತಿಗೆ ಸೇರುವ ದೊಡ್ಡ ಹಳ್ಳ ಇಲ್ಲಿದೆ, ಎರೆಡೂ ಭಾಗದಲ್ಲಿ ತುಂಬಾ ಹೆಚ್ಚು ಎನ್ನುವ ಇಳಿಜಾರು ಮತ್ತು Z ಆಕಾರದ ತಿರುವು ಇಲ್ಲಿತ್ತು ಆ ಕಾಲದಲ್ಲಿ ಸರಕು ಸಾಗಾಣಿಕೆಯ ಎತ್ತಿನಗಾಡಿಗಳನ್ನು ಇಲ್ಲಿ ಲೂಟಿ ಮಾಡುವ ಜನ ಈ ಆಯಾ ಕಟ್ಟಿನ ಜಾಗದಲ್ಲಿ ತಮ್ಮ ಕಾಯಾ೯ಚರಣೆ ಮಾಡುತ್ತಿದ್ದರಿಂದ ಈ ಹೆಸರು.
  ಈಗಿನ ಯುವಕರು ತಮ್ಮ ಈ ಕಳಂಕದ ಹೆಸರನ್ನು #ಕೇಶವಪುರ ಅಂತ ಬದಲಿಸಿದ್ದಾರೆ, ಬ್ರಿಟಿಷರ ಕಾಲದ ಹಳೇ ಸೇತುವೆ ತೆಗೆದು ದೊಡ್ಡ ಸೇತುವೆ ಆಗುವಾಗ ತಿರುವು ತಿದ್ದಿದ್ದಾರೆ ಇಳಿಜಾರು ಗೊತ್ತಾಗುವುದಿಲ್ಲ, ರಸ್ತೆ ಬದಿಯಲ್ಲಿ ಸಾಲು ಮನೆಗಳು, ಬಸ್ ನಿಲ್ದಾಣ ಸಮೀಪದಲ್ಲಿ ರೈತರ ಕಬ್ಬು ಬೆಲ್ಲ ಮಾಡುವ ಕಾರ್ಖಾನೆ ಹೀಗೆ ಅಲ್ಲಿ #ದರೋಡೆಕಾನ್ ಎಂಬುದು ಇತ್ತು ಎನ್ನುವ ಕುರುಹು ಈಗಿಲ್ಲ ಮತ್ತು ಆ ದಿನದ ನೆನಪು ಈಗ ಇಲ್ಲಿರುವ ಹೊಸಬರಿಗೆ ಗೊತ್ತೂ ಇಲ್ಲ.
  ಇಲ್ಲಿಯೇ ರಸ್ತೆ ಬದಿಯಲ್ಲಿ ಮದ್ರಾಸ್ ರಾಜ್ಯದಲ್ಲಿ ಬ್ರಿಟಿಷರ ಭಾರತೀಯ ಸೇನೆಯ ಸೈನಿಕರಾಗಿದ್ದ ಖಾದರ್ ಮೊಯಿದ್ದೀನ್ ಮತ್ತು ಶ್ರೀಮತಿ ಪ್ಯಾರೀಬಿ ದಂಪತಿ ಶಿವಮೊಗ್ಗ ಸಮೀಪದ ಬಿ.ಆರ್.ಪಿ ಡ್ಯಾಂ ಮತ್ತು ಗಾಜನೂರು ಡ್ಯಾಂ ನಿರ್ಮಾಣ ಕಾಮಗಾರಿಗೆ ಬಂದವರು ನಂತರ ಭದ್ರಾವತಿಯ ಪೇಪರ್ ಮಿಲ್ ಗೆ ಬಿದಿರು ಸರಬರಾಜು ಗುತ್ತಿಗೆದಾರರ ಜೊತೆ ಸೇರಿ ಶರಾವತಿ ಡ್ಯಾಂ ಮುಳುಗಡೆ ಪ್ರದೇಶದ ಬಿದಿರು ತೆಗೆಯುವ ಕೆಲಸ ನಂತರ ಈ ಭಾಗದಲ್ಲಿ ಕಾಡು ತೆಗೆಯುವಾಗ ಇದ್ದಿಲು(ಚಾಕೋ೯ಲು) ತಯಾರಿಸಲು ಪ್ರಾರಂಬಿಸುತ್ತಾರೆ ಆಗ ಭದ್ರಾವತಿ ಕಬ್ಬಿಣದ ಕಾಖಾ೯ನೆಯ ಪರ್ನೆಸ್ ಗೆ ಇದ್ದಿಲೇ ಆದಾರ ಆಗಿತ್ತು ಮತ್ತು ಇವರ ಕುಟುಂಬಕ್ಕೆ ಮದ್ರಾಸ್ ರಾಜ್ಯದಲ್ಲಿ ಇದ್ದಿಲು ತಯಾರಿಸುವ ಉದ್ಯೋಗದ ಪರಿಣಿತಿ ಇತ್ತು.
   ಇದೆಲ್ಲದರ ನಂತರ ಈ ಭಾಗದ ಗಾಡಿ ಎತ್ತುಗಳಿಗೆ ಹಲ್ಲೇ ಕಟ್ಟುವ ಕೆಲಸ ಪ್ರಾರಂಬಿಸುತ್ತಾರೆ.
  ಇವರಿಗೆ ದಸ್ತಗೀರ್, ಮುಸ್ತಾಪಾ, ಸೈಯದ್ ಆಲಿ, ಇಬ್ರಾಹಿಂ ಎಂಬ ನಾಲ್ಕು ಗಂಡು ಮಕ್ಕಳು ಮತ್ತು ಜಾನ್ ಬೀ ಎಂಬ ಏಕೈಕ ಪುತ್ರಿ ಇದ್ದಾರೆ ಇವರೆಲ್ಲರ ಕುಟುಂಬ ಈಗ ಅಲ್ಲೇ ನೆಲೆಸಿದೆ ಇವರಲ್ಲಿ ಮುಸ್ತಾಪಾ ನಮ್ಮ ಊರಲ್ಲಿ ನೆಲೆಸಿದ್ದಾರೆ.
  ಇವರ ತಂದೆ ಮಿಲ್ಟ್ರಿ ಖಾದರ್ ಮೊಯಿದೀನ್ ಸಾಹೇಬರನ್ನು ನಾನು ನೋಡಿದ್ದೇನೆ.
  2011ರಲ್ಲಿ ಸಾಗರ ಮತ್ತು ಹೊಸನಗರ ತಾಲ್ಲೂಕಿನಲ್ಲಿ  #ಮಾಹಿತಿಹಕ್ಕು_ಮತ್ತು_ಲೋಕಾಯುಕ್ತ ಜನ ಜಾಗೃತಿ ಮತ್ತು ತರಬೇತಿಯ ಉದ್ದೇಶದ 360 ಕಿ.ಮಿ. ಸಂಚರಿಸುವ  ಆರು ದಿನದ ಎತ್ತಿನಗಾಡಿ ಯಾತ್ರೆ ಹಮ್ಮಿಕೊಂಡಿದ್ದೆ ಈ ಬಗ್ಗೆ #ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪ ಸಲಹೆ  ನೀಡಿದರು ಮತ್ತು ಒಂದು ಕರಾರು ಕೂಡ ಎತ್ತಿನಗಾಡಿಯಲ್ಲಿ ಗಾದಿ ಇತ್ಯಾದಿ ಸುಖಕರ ಅಸನ ವ್ಯವಸ್ಥೆ ಮಾಡುವಂತಿಲ್ಲ ಕಂಬಳಿ ಹಾಸಿ ಕುಳಿತುಕೊಳ್ಳಬಹುದು ಇದರಿಂದ ಕೆಲ ನಾಯಕರು ಹಾಗೆ ಎತ್ತಿನಗಾಡಿಯಲ್ಲಿ ಕುಳಿತುಕೊಳ್ಳಲಾಗದೇ ಯಾತ್ರೆ ಸಮಾರೋಪದಲ್ಲಿ ಭಾಗಿ ಆಗಿ ನನ್ನನ್ನು ಹ್ಯಾಗೆ ಕುಳಿತುಕೊಂಡು ಯಾತ್ರೆ ಮುಗಿಸಿದಿರಿ ಅಂತ ಆಶ್ಚಯ೯ದಿಂದ ಕೇಳುತ್ತಿದ್ದರು.
  ಅವರ ಎಲ್ಲಾ ಸಲಹೆಯಲ್ಲಿ ಯಾತ್ರೆಯ ಜೊತೆಗೆ ಒಬ್ಬ ಹಲ್ಲೇ ಕಟ್ಟುವ ಒಬ್ಬರು ಇರಲೇಬೇಕು ಅಂತ ಯಾಕೆಂದರೆ ಎತ್ತಿನಗಾಡಿ ಡಾಂಬರ್ ರಸ್ತೆ ಪ್ರಯಾಣದಲ್ಲಿ ಎತ್ತಿನ ಕಾಲಿನ ಹಲ್ಲೇ ಕಳಚಿ ಹೋಗುವ ಸಂಭವ ಜಾಸ್ತಿ ಇದರಿಂದ ಎತ್ತಿಗೆ ನಡೆಯಲು ಕಷ್ಟ ಅಂತ.
  ಹಾಗಾಗಿ ನಮ್ಮ ಈ ಎತ್ತಿನಗಾಡಿ ಯಾತ್ರೆ ಜೊತೆ ಹಲ್ಲೇ ಕಟ್ಟುವವರ ತಲಾಷ್ ಮಾಡಿ ಕೊಡಲು ಗೆಳೆಯ #ಮಾಪೀರ್ #ಶೇಖ್_ಆಹಮದ್‌_ಸಾಹೇಬರು ಮತ್ತು #ಹೆಬ್ಬೋಡಿ_ರಾಮಸ್ವಾಮಿಗೆ ವಿನಂತಿಸಿದ್ದೆ.
  ಅವರೆಲ್ಲರ ಒತ್ತಾಯದಿಂದ ಕೇಶವಪುರ ದಸ್ತಗೀರ್ ಸಾಹೇಬರ ಸಂಚಾರಿ ಹಲ್ಲೆಕಟ್ಟುವ (ಅವರದ್ದೇ ಮಾರುತಿ ವ್ಯಾನ್) ನಮ್ಮ ಯಾತ್ರೆಗೆ ಸೇರಿತು ಆಗೆಲ್ಲ ನಮ್ಮ ಎತ್ತಿನಗಾಡಿ ಯಾತ್ರೆ ವಿಫಲಗೊಳಿಸಲು ಅನೇಕ ಗುತ್ತಿಗೆದಾರರು, ಅಧಿಕಾರಿಗಳು ರಾಜಕೀಯ ಪಕ್ಷಗಳ ನೇತಾರರ ಜೊತೆ ಸೇರಿಕೊಂಡಿದ್ದರು ಅವರ ಭಯ ಮಾಹಿತಿ ಹಕ್ಕಿನಲ್ಲಿ ಸರ್ಕಾರದ ಕಾಮಗಾರಿ ಪ್ಲಾನ್ ಎಸ್ಟಿಮೇಟ್ ಸ್ಥಳಿಯರಿಗೆ ಸಿಕ್ಕರೆ ತಮ್ಮ ಕಳಪೆ ಕಾಮಗಾರಿ ಬಯಲಾಗುತ್ತೆ ಮತ್ತು ಆಗಿನ ಲೋಕಾಯುಕ್ತಕ್ಕೆ ದೂರು ನೀಡಿದರೆ ಶಿಕ್ಷೆ ಗ್ಯಾರಂಟಿ (ಆಗಿನ ಲೋಕಾಯುಕ್ತರಾಗಿದ್ದವರು ಸಂತೋಷ್ ಹೆಗ್ಗಡೆಯವರು) ಎಂಬ ಭಯ ಹಾಗಾಗಿ ನಮ್ಮ ಯಾತ್ರೆಯಲ್ಲಿ ದೈಯ೯ ಇಲ್ಲದವರು ಭಾಗವಹಿಸುವುದು ಕಷ್ಟ ಇದೆಲ್ಲ ಗೊತ್ತಿದ್ದು ಭಾಗವಹಿಸಿದ ಕೇಶವಪುರದ ದಸ್ತಗೀರ್ ಸಾಹೇಬರಿಗೆ ನಾನು ಯಾವತ್ತೂ ಆಭಾರಿ.
  ಅವರಿಲ್ಲದಿದ್ದರೆ ಯಾತ್ರೆ ಸರಾಗವಾಗಿ ಆಗುತ್ತಿರಲಿಲ್ಲ, ಪ್ರತಿ ದಿನ ಬೆಳಿಗ್ಗೆ ಯಾತ್ರೆ ಪ್ರಾರಂಭದಲ್ಲಿ, ಮಧ್ಯಾಹ್ನದ ಊಟದ ಬಿಡುವಿನಲ್ಲಿ ಮತ್ತು ರಾತ್ರಿ ಯಾತ್ರೆ ತಂಗುವ ಸ್ಥಳದಲ್ಲಿ ಎಲ್ಲಾ ಎತ್ತುಗಳ ಕಾಲು ದಸ್ತಗೀರ್ ಸಾಹೇಬರ ಪರೀಕ್ಷೆಗೆ ಒಳಪಡುತ್ತಿತ್ತು, ಉದುರಿ ಹೋದ ಮಳೆ, ಹಲ್ಲೆ ಚಕ್ರ, ಕಲ್ಲಿಗೆ ಸಿಕ್ಕಿ ವಕ್ರವಾಗಿ ಎತ್ತಿನ ಕಾಲು ನೋವು ಮಾಡುವ ಹಲ್ಲೆಗಳೆಲ್ಲ ದುರಸ್ತಿ ಅಥವ ಹೊಸ ಹಲ್ಲೆ ಮೂಲಕ ಪರಿಹಾರ ಮಾಡುತ್ತಿದ್ದರು.
  ಹೊಳೆಬಾಗಿಲ ಲಾಂಚ್ ಸಿಬ್ಬಂದಿ ಎತ್ತಿನಗಾಡಿ ಹಾಕಲು ನಿರಾಕರಿಸಿದ್ದು, ಪೋಲಿಸ್ ಅಧಿಕಾರಿಗಳು ಪೆರಿ ಅಧಿಕಾರಿಗಳಿಗೆ ಹೇಳಿ ಅನುಮತಿ ನೀಡಿಸಿದ್ದು, ಸಾಗರ ಪಟ್ಟಣದಲ್ಲಿ ಎತ್ತಿನಗಾಡಿ ಯಾತ್ರೆಯಿಂದ ರೋಡ್ ಬ್ಲಾಕ್ ಆಗಿದ್ದು, ತುಮರಿ -ಬ್ಯಾಕೋಡು - ನಿಟ್ಟೂರು ಭಾಗದಲ್ಲಿ ಎತ್ತಿನಗಾಡಿಯನ್ನೇ ನೋಡದ ಈಗಿನ ಶಾಲಾ ಮಕ್ಕಳು, ನಾವು ತಂಗುತ್ತಿದ್ದ ಮಠ ದೇವಸ್ಥಾನಗಳ ಸಿಬ್ಬಂದಿಗಳು ಎತ್ತಿನ  ಸಗಣಿ - ಉಚ್ಚೆ - ಮತ್ತು ಅದರ ಆಹಾರದ ಹುಲ್ಲುಗಳು ಕಂಡು ಮೂಗು ಮುರಿಯುವುದು, ತಿರಸ್ಕಾರ ಮಾಡುವುದು, ನಮ್ಮ ಮಾರ್ಗ ಮಧ್ಯದ ಸಭೆಗೆ ಆಸಕ್ತಿಯಿಂದ ಭಾಗವಹಿಸುವ ಯುವ ಸಮುದಾಯ, ಅಪಹಾಸ್ಯ ಮಾಡುತ್ತಿದ್ದ ಕಳಪೆ ಗುತ್ತಿಗೆದಾರರು ಮತ್ತು ಪಸೆ೯೦ಟೇಜ್ ಜನಪ್ರತಿನಿಧಿಗಳು, ಯಾತ್ರೆಯ ಎತ್ತಿಗೆ ಹುಲ್ಲು ತಂದು ಕೊಡುತ್ತಿದ್ದ ಗೋಪ್ರೇಮಿಗಳು, ವರದಳ್ಳಿ ಶ್ರೀದರ ಸ್ವಾಮಿ ಆಶ್ರಮದಲ್ಲಿ ಆಗಿನ ಸಮಿತಿ ಅಧ್ಯಕ್ಷರಾಗಿದ್ದ #ಎಂ_ಜಿ_ಕೃಷ್ಣಮೂರ್ತಿ ಮತ್ತು ಅವರ ಜೊತೆಗಾರರು ನನ್ನ ಯಾತ್ರೆಯ ಸರ್ವ ಧರ್ಮಿಗಳು ಮತ್ತು ದಲಿತರ ಜೊತೆ ಸಹಪಂಕ್ತಿ ಬೋಜನ ಮಾಡಿದ್ದು ಹೀಗೆ ನೂರೆಂಟು ನೆನಪುಗಳು ಮೊನ್ನೆ ಹಲ್ಲೆ ಕಟ್ಟುವ ಕೇಶವಪುರದ ದಸ್ತಗೀರ್ ಸಾಹೇಬರ ನೋಡಿದಾಗ ನೆನಪಾಯಿತು ಅವರ ಊರಿನ ಆಲೇಮನೆಯಿಂದ ಬೆಲ್ಲ ಖರೀದಿಸಿ ಅವರ ವ್ಯಾನಿನಲ್ಲಿ ತಂದಿದ್ದರು ನನಗಾಗಿ.
  ಅಂತಿಮ ದಿನ ರಿಪ್ಪನ್ ಪೇಟೆಯ ಹೋರಟಗಾರ #ಟಿ_ಆರ್_ಕೃಷ್ಣಪ್ಪ ಹೊಸನಗರದ ಸಭೆಯಲ್ಲಿ ಭಾಗವಹಿಸಿ ಬೆಂಬಲಿಸಿ ನಡೆದುಕೊಂಡೇ ರಿಪ್ಪನ್ ಪೇಟೆಯ ಸಮಾರೋಪ ಸಮಾರಂಭದ ಸ್ಥಳಕ್ಕೆ ಬಂದಿದ್ದು ವಿಶೇಷ.
  ಸಾಹೇಬರು ಈಗ ಹಲ್ಲೇ ಕಟ್ಟುವ ಉದ್ಯೋಗ ಬಿಟ್ಟಿದ್ದಾರೆ, ಕೃಷಿಕರು ಎತ್ತು ತೊರೆದು ಯಂತ್ರಗಳನ್ನು ಅವಲಂಬಿಸಿದ್ದಾರೆ ಆದ್ದರಿಂದ ಅವರ ಕಾಯಕ ನಡೆಯುತ್ತಿಲ್ಲ, ಮನೆ ಹತ್ತಿರ ಅಡಿಕೆ ತೋಟ ಮಾಡಿಕೊಂಡಿದ್ದಾರೆ ಮಾರುತಿ ವ್ಯಾನ್ ಒಂದನ್ನು ಸ್ಥಳಿಯರ ಬೇಡಿಕೆ ಮೇಲೆ ಟ್ಯಾಕ್ಸಿ ಆಗಿ ನಡೆಸುತ್ತಿದ್ದಾರೆ.
  ಅವರ ಊರಿನವರೂ ಹೇಳುವುದು ಇವರ ಹತ್ತಿರ ಎಷ್ಟು ಲಕ್ಷ ರೂಪಾಯಿ ಕೊಟ್ಟರು ಲೋಪವಿಲ್ಲದೆ ಮುಟ್ಟಿಸುತ್ತಾರೆ, ದೂರದಿಂದ ಏನೇ ಖರೀದಿ ಮಾಡಿ ತರಲು ಹೇಳಿದರೂ ಒಂದು ಪೈಸೆ ಜಾಸ್ತಿ ಪಡೆಯುವುದಿಲ್ಲ, ಆಸ್ಪತ್ರೆ ಇತ್ಯಾದಿ ಅನಿವಾಯ೯ ಸಂದರ್ಭದಲ್ಲಿ ತಕ್ಷಣ ಬರುತ್ತಾರೆ ಕೆಲದಿನದ ನಂತರ ನಾವೇ ಹುಡುಕಿಕೊಂಡು ಹೋಗಿ ಬಾಡಿಗೆ ನೀಡಬೇಕು, ಎಲ್ಲಾ ವಯಸ್ಸಿನವರಲ್ಲೂ ಸದಾ ನಗುತ್ತಾ ಹಾಸ್ಯ ಮಾಡುತ್ತಾ ಬೆರೆಯುವ ಕೇಶವಪುರದ ದಸ್ತಗೀರ್ ಸಾಹೇಬರು ನನ್ನ ಅತ್ಯಾಪ್ತ ಸ್ನೇಹಿತರು ಎನ್ನಲು ಹೆಮ್ಮೆ ನನಗೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ