Skip to main content

ಆ ಕಾಲದಲ್ಲಿ ಜನ ಅನಕ್ಷರಸ್ಥರು ಆದರೆ ಆ ಬೂತ ಮನೆಯ ಬಾಗಿಲ ಮೇಲೆ ಬರೆದ ನಾಳೆ - ಬಾ ಎಂಬ ವಾಕ್ಯ ನೋಡ ವಾಪಾಸ್ ಹೋಗುತ್ತಿದ್ದ ಅಕ್ಷರಸ್ಥ ಮುರ್ಖಬೂತ ಗ್ರಾಮೀಣ ಭಾಗದ ಜನರ ನೆಮ್ಮದಿ ಕೆಡಿಸಿತ್ತು.

#ಎಪ್ಪತ್ತರ_ದಶಕದಲ್ಲಿ_ನಾಳೆ_ಬಾ_ಬೂತದ_ಕಾಟ.

#ಆಗ_ಎಲ್ಲರ_ಮನೆ_ಗೋಡೆ_ಬಾಗಿಲ_ಮೇಲೆ_ನಾಳೆ_ಬಾ_ಎಂಬ_ಬರಹ.

#ಮಲೆನಾಡ_ಹಳ್ಳಿಗಳಲ್ಲಿ_ಆತಂಕದ_ರಾತ್ರಿಗಳು

#ಅರವತ್ತರ_ದಶಕದಲ್ಲಿಯೂ_ಇದು_ಪ್ರಚಲಿತವಾಗಿತ್ತು

#ಎಪ್ಪತ್ತರ_ದಶಕದ_ನಂತರ_ತೊಂಬತ್ತರ_ದಶಕದಲ್ಲಿ_ಬೆಂಗಳೂರು_ಸುತ್ತಮುತ್ತ.

#ದೂರದ_ಮಲೇಷಿಯಾದಲ್ಲೂ_ಇಂತಹ_ಪ್ರಕರಣ.

  ಕಾಲ ಬದಲಾದಂತೆ ಆಚಾರ-ವಿಚಾರಗಳೂ ಬದಲಾಗುತ್ತದೆ ಆದರೆ ಮೂಡ ನಂಬಿಕೆಗಳು ಪುನಾರವರ್ತನೆಯಾಗುತ್ತಿರುವುದು ಮಾತ್ರ ವಿಚಿತ್ರ.
  1990 ರಲ್ಲಿ ಬೆಂಗಳೂರು ಸುತ್ತಮುತ್ತ ಇದು ಸಾಮೂಹಿಕ ಸನ್ನಿಯಂತೆ ಎಲ್ಲರೂ ಅವರವರ ಮನೆ ಬಾಗಿಲು ಗೋಡೆ ಮೇಲೆ #ನಾಳೆ_ಬಾ ಅಂತ ಅವರವರ ಮಾತೃ ಬಾಷೆಯಲ್ಲಿ ಬರೆಯುತ್ತಿದ್ದರು ಇದಕ್ಕೆ ಕಾರಣ ಮಧ್ಯರಾತ್ರಿ ಬೂತ ಒಂದು ಬಂದು ಕುಟುಂಬದ ಅಥವ ಪರಿಚಿತರ ಧ್ವನಿಯಲ್ಲಿ ಕರೆಯುತ್ತದೆ ಬಾಗಿಲು ತೆಗೆದರೆ ಬಾಗಿಲು ತೆಗೆದವ ಮಟಾಷ್! ಅಂತೆ ಇದಕ್ಕೆ ಪರಿಹಾರ ಮಾತ್ರ ಒಂದೇ ಒಂದು ಬಾಗಿಲ ಮೇಲೆ #ನಾಳೆ_ಬಾ ಅಂತ ಬರೆಯುವ ಸುಲಭ ಉಪಾಯ.
  ಇದು ವಿಶ್ವದಲ್ಲಿ ಮೊದಲು ಗಮನಕ್ಕೆ ಬಂದದ್ದು ಮಲೇಷಿಯಾದಲ್ಲಿ.
  1960 ರಲ್ಲಿ ನಮ್ಮ ಭಾಗದಲ್ಲಿ ಕಂಡು ಬಂದಿದ್ದು 1972-73ರಲ್ಲಿ ನಮ್ಮ ಊರುಗಳಲ್ಲಿ ಜನ ಭಯ ಪಡುವಂತೆ ಪಸರಿತ್ತು, ಆಗೆಲ್ಲ ಇದ್ದಿಲಲ್ಲಿ ಬಾಗಿಲ ಮೇಲೆ ಬರೆಯುತ್ತಿದ್ದರು ಆದರೆ ಬೂತದ ಪರಿಣಿತಿ ಹೊಂದಿದ ಯಾರೋ ಕತ್ತಲಲ್ಲಿ ಕಪ್ಪು ಇದ್ದಿಲಲ್ಲಿ ಬರೆದದ್ದು ಬೂತಕ್ಕೆ ಕಾಣುವುದಾದರೂ ಹೇಗೆ? ಎಂಬ ತಕ೯ ತೆಗೆದಿದ್ದರಿಂದ ಇದ್ದಿಲಲ್ಲಿ ಬರೆದದ್ದು ಒರೆಸಿ ಸುಣ್ಣದಲ್ಲಿ, ಚಾಕ್ ಪೀಸ್ ಲ್ಲಿ ಬರೆಯುತ್ತಿದ್ದರು.
  ತುಂಟಾಟ ಮಾಡುವ ಮಕ್ಕಳು ಬೂತಕ್ಕೆ ಹೆದರಿ ಈ ಅಕ್ಷರದ ತಂಟೆಗೆ ಹೋಗುತ್ತಿರಲಿಲ್ಲ.
  ನಿನ್ನೆ ನಮ್ಮ ಮನೆ ಬಾಗಿಲು ಮಧ್ಯರಾತ್ರಿಯಲ್ಲಿ ಬಡಿಯಿತು, ದೂರದ ಊರಲ್ಲಿ ಇರುವ ನಮ್ಮ ದೊಡ್ಡಮ್ಮನ ಧ್ವನಿಯಲ್ಲಿ ನನ್ನ ಹೆಸರು ಕರೆದು ಭಾಗಿಲು ತೆಗೆ ಅಂದಿತು! ಅನ್ನುವ ಅನೇಕರು ಭಯ ನೂರ್ಮುಡಿಗೊಳಿಸಿದ್ದರು ಇದರಿಂದ ಆ ಕಾಲದಲ್ಲಿ ರಾತ್ರಿ ಜಲ ಬಾದೆಗಾಗಿ ಮನೆಯ ಹೊರ ಹೋಗಲೂ ಹೆದರುವ ಕಾಲವಾಗಿತ್ತು.
  ಈ ಬೂತದಿಂದ ಸತ್ತವರು ಯಾರು ಇಲ್ಲ ಮತ್ತು ಬೂತ ನೋಡಿದವರೂ ಇಲ್ಲ ಆದರೆ ಮನೆಯ ಎದರು ಬರೆಯುತ್ತಿದ್ದ  ನಾಳೆ- ಬಾ ಎ೦ಬ ವಾಕ್ಯ ಓದಿ ವಾಪಸ್ ಹೋಗುತ್ತಿದ್ದ ಮೂರ್ಖ ಬೂತ ಮಾತ್ರ ಆ ಕಾಲದಲ್ಲಿ ಅಕ್ಷರಸ್ಥ ಆಗಿತ್ತು! ಆದರೆ ಮನುಷ್ಯರು ಆ ಕಾಲದಲ್ಲಿ ಅನಕ್ಷರಾಗಿದ್ದರೂ ಎಂಬುದು ಅಷ್ಟೇ ಸತ್ಯ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ