Skip to main content

ಹೆರಿಟೇಜ್ ನೈಸರ್ಗಿಕ ಕಲ್ಲಿನ ಕಾಲು ಸಂಕ ಸಂರಕ್ಷಣೆ ಹೆಸರಲ್ಲಿ 25 ಲಕ್ಷ ಹಣದಿಂದ ವಿರೊಪಗೊಳಿಸಿದ ಸರ್ಕಾರದ ಕಾಮಗಾರಿ !? ಜೋಗ್ ಫಾಲ್ಸ್ ಸಮೀಪದ ಮಸವಳ್ಳಿ (ಅಡುಗೋಡಿ ಅಂಚೆ, ಸಿದ್ಧಾಪುರ ತಾ. ಉತ್ತರ ಕನ್ನಡ ಜಿಲ್ಲೆ)

#ಕಲ್ಲಿನ_ನೈಸರ್ಗಿಕ_ಕಾಲು_ಸಂಕ_ವಿರೂಪಗೊ೦ಡಿದೆ.

#ಸಾಗರ_ಸಿದ್ದಾಪುರ_ಗಡಿಯ_ಮಸವಳ್ಳಿಯ_ಈ_ಕಾಲು_ಸಂಕ.

#ಹೆರಿಟೇಜ್_ನೈಸರ್ಗಿಕ_ಕಲ್ಲಿನ_ಕಾಲು_ಸಂಕ_ಈಗ_ಕಾಂಕ್ರಿಟ್_ಸಂಕವಾಗಿದೆ.

#ವಿರೂಪಗೊಳಿಸಿದ್ದು_ಸರ್ಕಾರದ_ಇಂಜಿನಿಯರ್_ಇಲಾಖೆ_ಇದಕ್ಕೆ_25_ಲಕ್ಷ_ಹಣವೂ_ಖಾಲಿ.

#ನಮ್ಮ_ದೇಶದಲ್ಲಿ_ತಿರುಮಲ_ಬೆಟ್ಟದಲ್ಲಿ_ವಿಶಾಖಪಟ್ಟಣದಲ್ಲಿ_ಇಂತಹ_ನೈಸರ್ಗಿಕ_ಸಂಕಗಳಿದೆ.

   ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪದ ಸಿದ್ಧಾಪುರ ತಾಲ್ಲೂಕಿನ ಆಡುಕಟ್ಟಾ ಅಂಚೆ ವ್ಯಾಪ್ತಿಯ ಮಸವಳ್ಳಿಯಲ್ಲಿ ನೈಸರ್ಗಿಕ ಕಲ್ಲಿನ ಕಾಲು ಸಂಕವೊಂದು ವರದಾ ನದಿಗೆ ಸೇರುವ ಹಳ್ಳಕ್ಕೆ ಸಾವಿರಾರು ವರ್ಷಗಳಿಂದ ಇದೆ.
  ಸುಮಾರು 60 ಅಡಿ ಉದ್ದ (20 Mtr) 4 ಅಡಿ ಅಗಲದ 2 ರಿಂದ 3 ಅಡಿ ದಪ್ಪದ ಕಾಲು ಸಂಕ ನೈಸರ್ಗಿಕವಾಗಿ ಪಿಲ್ಲರ್ ಗಳಿಲ್ಲದೆ ಇದೆ ಇದರ ಕೆಳಗೆ 10 ಅಡಿ ಆಳದಲ್ಲಿ ಹಳ್ಳದ ನೀರು ಮಳೆಗಾಲದಲ್ಲಿ ಹರಿಯುತ್ತದೆ.
   ನಮ್ಮ ದೇಶದಲ್ಲಿ ತಿರುಮಲದ ಬೆಟ್ಟದಲ್ಲಿ ಮತ್ತು ವಿಶಾಖಪಟ್ಟಣದಲ್ಲಿ ಕೂಡ ಇಂತಹ ನೈಸರ್ಗಿಕ ಕಾಲು ಸಂಕವಿದೆ.
  ವಿಶ್ವದಾದ್ಯಂತ ಇಂತಹ ಶಿಲಾರಚನೆಯ ಕಮಾನುಗಳು ಹಿಮಗಳ, ಮಳೆ ಮತ್ತು ಗಾಳಿಯ ಸವಕಳಿಯಿಂದ ಲಕ್ಷಾಂತರ ವರ್ಷಗಳಲ್ಲಿ ರೂಪುಗೊಂಡಿರುವ ಕಾರಣದಿಂದ ಇಂತವುಗಳನ್ನು ಸಂರಕ್ಷಿಸುತ್ತಾರೆ ಈ ಬಗ್ಗೆ ಅಧ್ಯಯನ ಮಾಡುವವರು ಇದನ್ನೆಲ್ಲ ಸಂದರ್ಶಿಸುತ್ತಾರೆ.
  ಚೀನಾ ದೇಶದಲ್ಲಿನ ಇಂತಹ ನೈಸರ್ಗಿಕ ಕಮಾನು ಅಥವ ಸಂಕ 400 ಅಡಿ ಉದ್ದವಿದೆ ಇದರ ಹೆಸರು ಪೈರಿ.
  ಆಂದ್ರ ಪ್ರದೇಶದ ಜಿಯೊ-ಹೆರಿಟೇಜ್ ಸಂಸ್ಥೆ ಅಡ್ವೆಸರ್ ಡಾ.ರಾಜಶೇಖರ್ ರೆಡ್ಡಿ ಇಂತಹ ಶಿಲಾರಚನೆಗಳು ಅಪರೂಪದ ಸ್ಮಾರಕಗಳು, ಅಲ್ಲಿ ಸೂಚನಾ ಫಲಕ ಅಳವಡಿಸಬೇಕು, ರಕ್ಷಣಾತ್ಮಕ ದೃಷ್ಟಿಯಿಂದ ಬ್ಯಾರಿಕೇಡ್ ನಿರ್ಮಿಸಿ ಸಂರಕ್ಷಿಸಬೇಕೆಂದು ಬರೆದಿದ್ದಾರೆ ಇವುಗಳೆಲ್ಲ ಐಸ್ ಏಜ್ ನ ಕಾಲದ್ದೆಂದು ಅವರು ಹೇಳುತ್ತಾರೆ.
  1982 - 85 ರ ಕಾಲದಲ್ಲಿ ಸಾಗರದ ನಾವೊಂದಿಷ್ಟು ಯುವ ಗೆಳೆಯರು ವಾರದಲ್ಲಿ ಎರೆಡು ದಿನ ಜೋಗ ಜಲಪಾತದ ಎದುರಿನ ಈಜು ಕೊಳಕ್ಕೆ ಹೋಗುತ್ತಿದ್ದೆವು ಅಲ್ಲಿನ ಡೈವಿಂಗ್ ಬೋರ್ಡ್ ನಿಂದ ಚಿಮ್ಮಿ ತಲೆ ಕೆಳಗಾಗಿ ಡೈವ್ ಮಾಡುವುದು ನಮ್ಮ ಹವ್ಯಾಸ ಆಗಿತ್ತು, ತುತ್ತ ತುದಿಯ (ಎತ್ತರದ) ಡೈವಿಂಗ್ ಪ್ಲೇಟ್ನಿಂದ ಮಾತ್ರ ಡೈವ್ ಮಾಡದೆ ನೇರವಾಗಿ ಹಾರುತ್ತಿದ್ದೆವು ಆಗ ಅಲ್ಲಿನ ಈಜುಕೊಳದ ತರಬೇತಿದಾರರು ಈಗಿನ ಮಾಜಿ ಪುರಪಂಚಾಯಿತಿ ಸದಸ್ಯರಾದ #ರಾಜಕುಮಾರ್ ತಂದೆ ಇದ್ದರು, ಈ ರಾಜಕುಮಾರ್ ಕೂಡ ಒಳ್ಳೆ ಈಜುಗಾರ ಅಷ್ಟು ಸಣ್ಣ ಹುಡುಗ (ಆ ಕಾಲದಲ್ಲಿ) ಈಜು ಕೊಳದಲ್ಲಿ ಕಾಯಿನ್ಸ್ ಹಾಕಿದರೆ ಆಳದಿಂದ ತರುತ್ತಿದ್ದು ನೋಡುವುದೆ ನಮಗೆ ಖುಷಿ.
  ಆಗೆಲ್ಲ ಜೋಗ ಜಲಪಾತ ನೋಡಲು ಅಧ್ಯಯನ ಪ್ರವಾಸವಾಗಿ ದೇಶದ ಬೇರೆ ಬೇರೆ ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಒಮ್ಮೆ ಪೂನಾದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬಸ್ಸಲ್ಲಿ ಬಂದಿದ್ದರು ಆಗ ಅವರ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಜೋಗ ಜಲಪಾತ 40 ಲಕ್ಷ ವರ್ಷದ ಹಿಂದೆ ಸವಕಳಿಯಿಂದ ರಚನೆ ಆಯಿತು ಅಂತ ವಿವರಿಸುತ್ತಿದ್ದನ್ನು ಅವರೊಡನೆ ನಿಂತು ನಾವು ಕೇಳಿಸಿಕೊಂಡು ಆಶ್ಚಯ೯ಪಟ್ಟಿದ್ದೆವು.
  ನಮ್ಮ ತಾಲ್ಲೂಕಿನ ಅಂಚಿನ ಮಸವಳ್ಳಿಯ ಈ ನೈಸರ್ಗಿಕ ಕಾಲು ಸಂಕ ಕಾಲ ಕ್ರಮೇಣ ಅವಸಾನ ಹೊಂದುವ ಸಾಧ್ಯತೆ ಇರುವುದರಿಂದ ಈ ಪ್ರದೇಶದ ಶಾಸಕರೂ ಮತ್ತು ವಿದಾನ ಸೌದದ ಸ್ಪೀಕರ್ ಆಗಿರುವ #ಕಾಗೇರಿ_ವಿಶ್ವೇಶ್ವರ_ಹೆಗ್ಗಡೆ 25 ಲಕ್ಷ ಅನುದಾನ ಮಂಜೂರು ಮಾಡಿಸಿದ್ದು ಅಭಿನಂದನೀಯ ಆಗಿತ್ತು ಆದರೆ ಸಂಬಂದ ಪಟ್ಟ ಇಂಜಿನಿಯರ್ ಇಲಾಖೆ ಮಾತ್ರ ದೊಡ್ಡ ಪ್ರಮಾದ ಮಾಡಿದ್ದಾರೆ.
  ಮಂಜುರಾದ 25 ಲಕ್ಷದಲ್ಲಿ ಈ ನೈಸರ್ಗಿಕ ಕಾಲು ಸಂಕ  ಸಂರಕ್ಷಿಸಿಡಲು  ಅವಶ್ಯ ಕಾಮಗಾರಿ ಮಾಡಬೇಕಿತ್ತು ಆದರೆ ಈ ನೈಸರ್ಗಿಕ ಕಾಲು ಸಂಕದ ಎರೆಡೂ ಕಡೆ ಕಾಂಕ್ರಿಟ್ ಗುಡ್ಡೆ ಹಾಕಿ ಅಲ್ಲಿ ಮಧ್ಯದಲ್ಲಿ ಕೆಲ ಅಡಿ ನೈಸರ್ಗಿಕ ಕಾಲು ಸಂಕದ ಕಲ್ಲು ಮಾತ್ರ ಕಾಣುವಂತೆ ಮಾಡಿದ್ದಾರೆ, ಬಹುಶಃ ಅವರ ತಲೆಯಲ್ಲಿ ಇದರ ಮೇಲೆ ವಾಹನ ಸಾಗಾಣಿಕೆ ಮಾಡುವ ಉದ್ದೇಶ ಇತ್ತೇನೊ?.
   ಈ ಅಪರೂಪದ ನೈಸರ್ಗಿಕ ಕಾಲು ಸಂಕ ಸಂರಕ್ಷಿಸಿಕೊಳ್ಳುವ ಅವಶ್ಯಕತೆ ನಮ್ಮದೆಲ್ಲ ಆಗಿತ್ತು ಆದರೆ ದುರಾದೃಷ್ಟವಶಾತ್ ವಿದ್ಯಾವಂತ ಇಂಜಿನಿಯರ್ ಗಳು ಸರ್ಕಾರ ಸೇರಿ ಸರ್ಕಾರದ 25 ಲಕ್ಷ ಹಣವೂ ಬಳಸಿ ನೈಸರ್ಗಿಕ ರಚನೆಯ ಸಂಶೋದನಾ ಯೋಗ್ಯವಾದ ಕಲ್ಲಿನ ಕಾಲು ಸಂಕದ ಎರೆಡೂ ಬಾಗ ಕಾಂಕ್ರಿಟ್ ನಲ್ಲಿ ಮುಚ್ಚಿ ಅಪಚಾರ ಮಾಡಿದ್ದಾರೆ.
  ಸಮೀಪದ #ಮಾವಿನಗುಂಡಿ_ಅಶೋಕ್_ಹೆಗ್ಗಡೆ ಇದನ್ನು ಸ್ಥಳಿಯ ಲ್ಯಾಟರೇಟ್ ಸ್ಟೋನ್ ಮತ್ತು ಗಂ ಬಳಸಿ ಈ ನೈಸರ್ಗಿಕ ಕಾಲು ಸಂಕವನ್ನು ಭದ್ರಪಡಿಸಬಹುದಾಗಿತ್ತು ಎಂದು ಅಭಿಪ್ರಾಯಿಸಿದ್ದಾರೆ.
  ಹೆರಿಟೇಜ್ ಎಂದರೆ ಏನೆಂದು ನಮ್ಮ ಇಂಜಿನಿಯರ್ ಗಳು ಅರಿತಿಲ್ಲದಿರುವುದು ವಿಷಾದನೀಯ.
  ಪ್ರಾಚೀನವಾದ ಈ ನೈಸರ್ಗಿಕ ಕಾಲು ಸಂಕದ ಹಳೆಯ ಫೋಟೋಗಳೊಂದಿಗೆ ನವಭಾರತದ ಇಂಜಿನಿಯರ್ ಗಳ ಸಂರಕ್ಷಣೆ ಕಾಮಗಾರಿಯ ಈಗಿನ ಪೋಟೋ ಮತ್ತು ದೇಶದ ಇತರ ಭಾಗದ ನೈಸರ್ಗಿಕ ಕಾಲು ಸಂಕದ ಚಿತ್ರ ಆಸಕ್ತರಿಗಾಗಿ ಇಲ್ಲಿ ಬ್ಲಾಗ್ ನಲ್ಲಿದೆ ಕ್ಲಿಕ್ ಮಾಡಿ ನೋಡಬಹುದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...