Skip to main content

Blog number 2269.ಲಿಂಗನಮಕ್ಕಿ ಜಲಾಶಯದ ಮಾಹಿತಿ

#ಲಿಂಗನಮಕ್ಕಿ_ಜಲಾಶಯದ_ಮಾಹಿತಿ_ಆಸಕ್ತರಿಗಾಗಿ

#ಲಿಂಗನಮಕ್ಕಿ_ಜಲಾಶಯದ_ಕ್ರೆಸ್ಟ್_ಗೇಟ್_ಓಪನ್_ಯಾವಾಗ

#ಜನರಿಗೆ_ಮುಂಜಾಗೃತ_ನೋಟೀಸು_ಯಾವಾಗ_ನೀಡುತ್ತಾರೆ

#ಡ್ಯಾಂ_ಗರಿಷ್ಟ_ಯಾವ_ಮಟ್ಟ_ತಲುಪಿದ_ಮೇಲೆ_ಕ್ರೆಸ್ಟ್_ಗೇಟ್_ತೆರೆಯುತ್ತಾರೆ

#ಶರಾವತಿ_ಜಲ_ವಿದ್ಯುತ್_ಉತ್ಪಾದನಾ_ಕೇಂದ್ರದಿಂದ_ಕೇವಲ_ಒಂದು_ರೂಪಾಯಿಗೆ_ಒಂದು_ಯುನಿಟ್

#ಖರೀದಿಸುವ_ಸರ್ಕಾರ_ಖಾಸಾಗಿಯಿಂದ_ಎಂಟು_ರೂಪಾಯಿಗೆ_ಒಂದು_ಯುನಿಟ್_ಖರೀದಿಸುತ್ತದೆ

#ಈ_ಜಲ_ವಿದ್ಯುತ್_ಸ್ಥಾವರ_1400_ಮೆಗಾವಾಟ್_ವಿದ್ಯುತ್_ಉತ್ಪಾದಿಸುತ್ತದೆ.

#ಉಪಯುಕ್ತ_ಮಾಹಿತಿ_ನೀಡಿದ_ಅಶೋಕ_ಹೆಗಡೆ_ಮಾವಿನಗುಂಡಿ

https://youtu.be/MywkMsx5oHQ?si=Ukr5NFUpSyzwrxd4

    ಸಾಮಾಜಿಕ ಜಾಲತಾಣದಲ್ಲಿ ನಿನ್ನೆ ಲಿಂಗನಮಕ್ಕಿ ಡ್ಯಾಂನ ನೀರು ಸಂಗ್ರಹಣೆ 1800 ಅಡಿ ದಾಟಿದ್ದಕ್ಕಾಗಿ ಪೂಜೆ ಮಾಡಿ ಒಂದು ಕ್ರೆಸ್ಟ್ ಗೇಟ್ ತೆರೆದರೆಂಬ ಸುದ್ದಿ ವೈರಲ್ ಆಗಿ ಲಿಂಗನಮಕ್ಕಿ ತುಂಬಿ ತುಳುಕುತ್ತಿದೆ ಎಂಬಂತೆ ಅನೇಕರು ಬಾವಿಸಿದ್ದರು.
   ಈ ಬಗ್ಗೆ ನಾನು ಜೋಗ ಜಲಪಾತದ ಪಕ್ಕದ ಮಾವಿನಗುಂಡಿಯ ಅಶೋಕ ಹೆಗಡೆ ಅವರನ್ನ ಪೋನಾಯಿಸಿದೆ ಇವರು ಜೋಗ ಜಲಪಾತ ಸೇರಿ ಈ ಭಾಗದ ಎಲ್ಲಾ ಜಲಪಾತಗಳ ಬಗ್ಗೆ, ವಿದ್ಯುತ್ ಉತ್ಪಾದನ ಕೇಂದ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರುವ ಚಿನ್ನದ ಗಣಿ ಇವರು.
  ಇವರ ಜೊತೆ ಮಾತುಕತೆಯಲ್ಲಿ ತಿಳಿದ ಕುತೂಹಲಕಾರಿ ಅಂಶಗಳನ್ನ ಲಿಂಗನಮಕ್ಕಿ ಆಣೆಕಟ್ಟಿನ ಬಗ್ಗೆ ಆಸಕ್ತಿ ಇರುವವರಿಗಾಗಿ ಇಲ್ಲಿ ಹಂಚಿದ್ದೇನೆ.

* ಲಿಂಗನಮಕ್ಕಿ ಡ್ಯಾಂ ಕೆಳಗಡೆಗೆ 80 ಮೆಗಾವಾಟ್ ವಿದ್ಯುತ್ ಉತ್ಪಾದನ ಸ್ಥಾವರ ಇದೆ.
* ಮಹಾತ್ಮಾ ಗಾಂಧಿ ವಿದ್ಯುತ್ ಉತ್ಪಾದನ ಕೇಂದ್ರ 120 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತದೆ.
* ಎಬಿ ಸೈಟ್ 1100 ಮೆಗಾವಾಟ್ ಉತ್ಪಾದಿಸುತ್ತದೆ.
* ಎಬಿ ಸೈಟ್ ಮತ್ತು ಮಹಾತ್ಮಾ ಗಾಂಧಿ ಮಧ್ಯದಲ್ಲಿ ಖಾಸಾಗಿ ಸ್ಥಾವರ ಅಂಬೂ ತೀರ್ಥ ಮಿನಿ ಹೈಡ್ರಾಲ್ 20 ಮೆಗಾವಾಟ್ ಉತ್ಪಾದನೆ ಮಾಡುತ್ತದೆ.
*ಗೇರುಸೊಪ್ಪೆಯ ಶರಾವತಿ ಟೇಲರೇಸ್ ಪ್ರಾಜೆಕ್ಟ್ 240 ಮೆಗಾವಾಟ್ ಉತ್ಪಾದನೆ ಮಾಡುತ್ತಿದೆ.
*1400 ಮೆಗಾವಾಟ್ ಒಟ್ಟು ಉತ್ಪಾದನೆ ಶರಾವತಿ ಜಲವಿದ್ಯುತ್ ಕೇಂದ್ರಗಳಿಂದ ಲಭಿಸುತ್ತಿದೆ.
* ಇಲ್ಲಿ ಉತ್ಪಾದನೆ ಆಗುವ ವಿದ್ಯುತ್ ಯುನಿಟ್ ಒಂದಕ್ಕೆ ಒಂದು ರೂಪಾಯಿಯಂತೆ ಖರೀದಿಸುವ ಸರಕಾರ ಖಾಸಾಗಿ ಯಿಂದ 8 ರೂಪಾಯಿಗೆ ಖರೀದಿಸುತ್ತದೆ.
* ಲಿಂಗನಮಕ್ಕಿ ಜಲಾಶಯಕ್ಕೆ ಚಕ್ರಾ ಮತ್ತು ಸಾವೆ ಹಕ್ಕಲು ಡ್ಯಾಂ ತುಂಬಿದರೆ ಹೆಚ್ಚು ಮಳೆ ಆದರೆ 10 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತದೆ.
* ಈಗ ಬೀಳುತ್ತಿರುವ ಮಳೆ ನಿಂತರೂ ಲಿಂಗನಮಕ್ಕಿ 1810 ಅಡಿ ತಲುಪುತ್ತದೆ.
* ಮುಂದಿನ ಒಂದು ವಾರ ಇದೇ ರೀತಿ ಮಳೆ ಆದರೆ ಆಗಸ್ಟ್ ಮೊದಲ ವಾರದಲ್ಲಿ ಲಿಂಗನಮಕ್ಕಿ ಡ್ಯಾಂನ ಎಲ್ಲಾ ಕ್ರೆಸ್ಟ್ ಗೇಟ್ ತೆರೆಯುವ ಸಂಭವ ಇದೆ.
* 1805 ಅಡಿ ತುಂಬಿದೆ ಅಂದರೆ ಡ್ಯಾಂ ಶೇಕಡಾ 75% ಭಾಗ ತುಂಬಿದೆ
*ಶೇಕಡಾ 25 % ಭಾಗ ತುಂಬಲು ವಿಶಾಲ ಪ್ರದೇಶದ ನೀರಿನ ಸಂಗ್ರಹಣೆ ಆಗ ಬೇಕು ಇದಕ್ಕೆ ಹೆಚ್ಚು ಮಳೆ ಮತ್ತು ಸಮಯ ಬೇಕು.
* ಡ್ಯಾಂ ಮಟ್ಟ 1915 ಅಡಿ ದಾಟದೆ ಯಾವತ್ತೂ ಡ್ಯಾಂನ ಕ್ರೆಸ್ಟ್ ಗೇಟ್ ತೆರೆದಿಲ್ಲ.
* ಬೆಂಗಳೂರಿನ ಕೇಂದ್ರ ಕಛೇರಿ ಲೋಡ್ ಡಿಸ್ಪ್ಯಾಚ್ ಸೆಂಟರ್ ಕ್ಷಣ ಕ್ಷಣದ ವಿದ್ಯುತ್ ಬೇಡಿಕೆ ಲೆಕ್ಕಾಚಾರ ಮಾಡಿ ಇಲ್ಲಿನ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ತಿಳಿಸುತ್ತದೆ ಅದರ ಬೇಡಿಕೆಗೆ ಅನುಗುಣವಾಗಿ ಇಲ್ಲಿನ ವಿದ್ಯುತ್ ಉತ್ಪಾದನಾ ಟರ್ಬೈನ್ ಗಳು ಕಾಯ೯ ನಿರ್ವಹಿಸುತ್ತದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ