Skip to main content

Blog number 2263. ಮೀನು ಮೊಟ್ಟೆ ಇಡುವ ಕಾಲ

#ಮೀನಿನ_ಮೊಟ್ಟೆಕಾಲ_ಮತ್ತು_ಅದರ_ರುಚಿ_ಬಲ್ಲವನೇ_ಬಲ್ಲ

#ಮುಂಗಾರಿನಲ್ಲಿ_ಮೊಟ್ಟೆ_ಮೀನುಗಳು_ಮರಿ_ಮಾಡುವ_ಕಾಲ

#ಹರಿಯುವ_ನೀರಿನ_ವಿರುದ್ದ_ಸಾಗುವ_ಕಾಲ

#ತಾನಿರುವ_ಜಾಗದಿಂದ_ಹೊಸಜಾಗದತ್ತ_ಸಾಗುವ_ಮೀನು

#ಇದಕ್ಕೆ_ಹತ್ತಮೀನು_ಎಂದು_ಗ್ರಾಮೀಣ_ಜನ_ಕರೆಯುತ್ತಾರೆ

#ತನ್ನ_ಬೀಜ_ಪ್ರಸಾರದ_ಸ್ಥಳ_ವಿಸ್ತರಿಸುವ_ಪ್ರಕೃತಿ_ನಿಯಮ

#ಈ_ಕಾಲದಲ್ಲಿಯೇ_ತತ್ತಿ_ಮೀನು_ಶಿಕಾರಿಗೆ_ಮೀನು_ಪ್ರಿಯರು_ರಾತ್ರಿ_ಹಗಲು_ಕಾದು_ಕುಳಿತಿರುತ್ತಾರೆ.

https://youtube.com/shorts/Jhg0ViMaowo?si=s4DIf4jfB0dy5skk


    ಮುಂಗಾರಿನ ಈ ದಿನಗಳೇ ಮೀನಿನ ಸಂತಾನೋತ್ಪತಿಯ ಕಾಲ,ಸಮುದ್ರ ಮತ್ತು ಒಳನಾಡಿನ ಎಲ್ಲಾ ಜಾತಿಯ ಮೀನುಗಳು ತತ್ತಿ ಹೊತ್ತ ಮೀನುಗಳು.
  ಆದ್ದರಿಂದಲೇ ಈ ತಿಂಗಳು ಮೀನು ಬಲೆ ಹಾಕಿ ಹಿಡಿಯಲು ಮೀನುಗಾರಿಕೆ ಇಲಾಖೆ ನಿಶೇದ ಇರುತ್ತದೆ, ಸಮುದ್ರದಲ್ಲೂ ದೋಣಿ ಯಾಂತ್ರಿಕ ಬೋಟಿನ ಮೀನುಗಾರಿಕೆಗೆ ಅವಕಾಶ ಇರುವುದಿಲ್ಲ.
   ಪಂಜಾಬಿನಲ್ಲಿ ಸಿಖ್ಖರಲ್ಲಿ ಒಂದು ಪದ್ದತಿ ಇದೆ ಮೀನಿನ ಮೊಟ್ಟೆ ಕಾಲದಲ್ಲಿ ಅವರಾರು ಮೀನು ತಿನ್ನುವ ಹಾಗಿಲ್ಲ ಇದರ ಉದ್ದೇಶ ಮೀನು ಸಂತತಿ ರಕ್ಷಣೆ.
   ಆದರೆ ಮಲೆನಾಡಿನಲ್ಲಿ ತತ್ತಿ ಇರುವ ಮೀನಿನ ಕಾಲದಲ್ಲಿ ಆ ಮೀನುಗಳ ರುಚಿ ಮತ್ತು ಘಮ ಅರಿತಿರುವ ಮತ್ಸ್ಯ ಬೋಜನ ಪ್ರಿಯರು ಮೊಟ್ಟೆ ಮೀನುಗಳ ಶಿಕಾರಿಗಾಗಿ ರಾತ್ರಿ ಹಗಲು ಕೆರೆ ಹಳ್ಳಕ್ಕೆ ಬಂದು ಸೇರುವ ಮಳೆಯ ಹೊಸ ನೀರಿನ ಹರಿವಿನಲ್ಲಿ ಕಾಯುತ್ತಿರುತ್ತಾರೆ.
  ಹರಿದು ಬರುವ ಬೆಚ್ಚಗಿನ ಹೊಸ ನೀರಿನ ಪ್ರವಾಹದ  ವಿರುದ್ದವಾಗಿ ಸಾಗುವ ಮೀನುಗಳು ತಮ್ಮ ದೇಹದಲ್ಲಿನ ಮೊಟ್ಟೆಗಳ ಪ್ರಸವಿಸುವ ಆತುರದಲ್ಲಿ ಒಂದರ ಹಿಂದೆ ಒಂದರಂತೆ ಸಾಲುಗಟ್ಟಿ ಗುಂಪು ಗುಂಪಾಗಿ ನೀರಿನಿಂದ ಮೇಲಕ್ಕೆ ಹತ್ತಲು ಪ್ರಾರಂಬಿಸುತ್ತವೆ.
  ನಿಶ್ಯಬ್ದವಾಗಿ ಕುಳಿತ ಮೀನು ಶಿಕಾರಿಗಾರರು ಇಂತಹ ಮೊಟ್ಟೆ ಮೀನಿನ ಮೆರವಣಿಗೆ ಒಂದು ಜೋಷ್ ನಲ್ಲಿ ಯಾರ ಭಯವಿಲ್ಲದೆ ಮೇಲೆ ಹತ್ತಲು ಶುರುವಾದಾಗ ಒಮ್ಮೆಗೆ ಮುಗಿಬಿದ್ದು ತಮ್ಮ ಚೀಲ ತುಂಬಿಸಿಕೊಳ್ಳುತ್ತಾರೆ.
  ಬಲೆ ಕಂಬಳಿಗಳಿಂದ ಬಾಚಿಕೊಳ್ಳುವ ಅಥವ ಮೀನು ಕಡಿಯುವ ಕತ್ತಿಗಳಲ್ಲಿ ಮೀನಿನ ತಲೆಗೆ ಹೊಡೆದು ಮೀನು ಹಿಡಿಯುವ ಈ ಹತ್ತು ಮೀನು ಶಿಕಾರಿ ಮಲೆನಾಡಿನಲ್ಲಿ ವಿಶೇಷ ಶಿಕಾರಿ.
   ಮೀನಿನ ಖಾದ್ಯ ತಯಾರಿಸುವ ಗೃಹಿಣಿಯರು ಈ ಮೀನಿನ ಮೊಟ್ಟೆಯಿಂದ ತರಹೇವಾರಿ ಖಾದ್ಯ ತಯಾರಿಸುತ್ತಾರೆ ಚಿಕ್ಕ ಮಕ್ಕಳಿಗೆ ಈ ಮೀನಿನ ಮೊಟ್ಟೆ ಅಂದರೆ ತುಂಬಾ ಇಷ್ಟ ಮತ್ತು ಇದರಲ್ಲಿ ಪೌಷ್ಟಿಕಾಂಶ ಕೂಡ ಜಾಸ್ತಿ.
   ದೊಡ್ಡ ದೊಡ್ಡ ಮೀನುಗಳಲ್ಲಿ ಕೇಜಿಗಟ್ಟಲೆ ಮೀನಿನ ತತ್ತಿ ಇರುತ್ತದೆ, ಸಮುದ್ರದ ದೊಡ್ಡ ಶಾಡೆ ಮೀನುಗಳ ಮೊಟ್ಟೆ ಗೋಲಿ ಗಾತ್ರದ್ದಾದರೆ ಸಣ್ಣ ಮೀನುಗಳ ಮೊಟ್ಟೆ ಗಸಗಸೆ ಕಾಳಿನ ಗಾತ್ರದಿಂದ ರಾಗಿ ಕಾಳಿನ ಗಾತ್ರದಷ್ಟಿರುತ್ತದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...